ಆರ್ಸಿಬಿಗೆ ಗುಜರಾತ್ ಟೈಟನ್ಸ್ ರಾಯಲ್ ಚಾಲೆಂಜ್
ಚಿನ್ನಸ್ವಾಮಿ ಮೈದಾನದಲ್ಲಿ ಇವತ್ತು ಹೈವೋಲ್ಟೆಜ್ ಕದನ
ಮಾಡು ಇಲ್ಲವೇ ಮಡಿ ಕದನದಲ್ಲಿ ಇವತ್ತು ಗೆಲ್ಲೋದ್ಯಾರು?
ಗುಜರಾತ್ ಟೈಟನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹಣಾಹಣಿಗೆ ಕೌಂಟ್ಡೌನ್ ಶುರುವಾಗಿದೆ. ತವರಿನಂಗಳದಲ್ಲಿ ಗೆದ್ದು ಬೀಗೋ ಲೆಕ್ಕಾಚಾರದಲ್ಲಿ ಆರ್ಸಿಬಿ ಇದ್ರೆ, ಸೋಲಿನ ಸೇಡು ತೀರಿಸಿಕೊಳ್ಳೋ ಲೆಕ್ಕಾಚಾರದಲ್ಲಿ ಗುಜರಾತ್ ತಂಡವಿದೆ. ಉಭಯ ತಂಡಗಳ ಕಾದಾಟ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹೆಚ್ಚಿಸಿದೆ.
ಚಿನ್ನಸ್ವಾಮಿ ಅಂಗಳದಲ್ಲಿಂದು ಹೈವೋಲ್ಟೆಜ್ ಫೈಟ್
ಐಪಿಎಲ್ ಟೂರ್ನಿಯ ಮತ್ತೊಂದು ಮೆಗಾ ಫೈಟ್ಗೆ ವೇದಿಕೆ ಸಜ್ಜಾಗಿದೆ. ಇಂದಿನ ಡು ಆರ್ ಡೈ ಫೈಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಗುಜರಾತ್ ಟೈಟನ್ಸ್ ಮುಖಾಮುಖಿಯಾಗ್ತಿವೆ. ಪ್ಲೇ ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಪಂದ್ಯಕ್ಕೆ ಹೈವೋಲ್ಟೆಜ್ ಟಚ್ ಸಿಕ್ಕಿದೆ.
ಇದನ್ನೂ ಓದಿ:ಮಳೆಯಿಂದ ಭಾರೀ ಪ್ರವಾಹ.. 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ
ಹೋಮ್ಗ್ರೌಂಡ್ನಲ್ಲಿ ಪುಟಿದೇಳುತ್ತಾ ಆರ್ಸಿಬಿ?
ಹೋಮ್ಗ್ರೌಂಡ್ ಚಿನ್ನಸ್ವಾಮಿ ಮೈದಾನದಲ್ಲಿ ಗೆಲ್ಲೋದೆ ಆರ್ಸಿಬಿ ಮುಂದಿರೋ ಟಫ್ ಟಾಸ್ಕ್ ಆಗಿದೆ. ಈ ಹಿಂದಿನ 3 ಪಂದ್ಯಗಳಲ್ಲಿ ಸೋಲಿನ ಮುಖಭಂಗ ಅನುಭವಿಸಿರೋ ಡುಪ್ಲೆಸಿ ಪಡೆ ಇಂದು ಪುಟಿದೇಳುತ್ತಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ತಂಡದ ಬ್ಯಾಟಿಂಗ್ ಸುಧಾರಿಸಿದೆ ನಿಜ.. ಆದ್ರೆ, ಬೌಲಿಂಗ್ ವೀಕ್ನೆಸ್ ಹಾಗೆ ಉಳಿದುಕೊಂಡಿದೆ. ಇಂದಿನ ಪಂದ್ಯಕ್ಕೂ ಮುನ್ನವೂ ಆರ್ಸಿಬಿ ಕ್ಯಾಂಪ್ನಲ್ಲಿ ಬೌಲಿಂಗ್ನದ್ದೇ ದೊಡ್ಡ ತಲೆ ನೋವಾಗಿದೆ.
ಆರ್ಸಿಬಿಗೆ ಮ್ಯಾಕ್ಸ್ವೆಲ್ ಕಮ್ಬ್ಯಾಕ್ನ ಬಲ
ಕಳೆದ ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್ವೆಲ್ ಪ್ಲೇಯಿಂಗ್ ಇಲೆವೆನ್ಗೆ ಕಮ್ಬ್ಯಾಕ್ ಮಾಡಿದ್ರು. ಮ್ಯಾಕ್ಸಿ ಕಮ್ಬ್ಯಾಕ್ ಆರ್ಸಿಬಿ ಬ್ಯಾಟಿಂಗ್ ಬಲವನ್ನ ಹೆಚ್ಚಿಸಿತ್ತು. ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗದಲ್ಲಿ ತಂಡ ಬ್ಯಾಲೆನ್ಸ್ಡ್ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಸೇಮ್ ಇಲೆವೆನ್ನೊಂದಿಗೆ ಆರ್ಸಿಬಿ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ:Breaking News: ರಾಯಚೂರಲ್ಲಿ ಹೃದಯ ವಿದ್ರಾವಕ ಘಟನೆ.. ಇಬ್ಬರ ಬಲಿ ಪಡೆದ ರಣ ಬಿಸಿಲು
ಸೇಡು ತೀರಿಸಿಕೊಳ್ಳೋ ತವಕದಲ್ಲಿ ಗುಜರಾತ್ ಟೈಟನ್ಸ್
ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ತಂಡಕ್ಕೆ ಅವರದೇ ಹೋಮ್ಗ್ರೌಂಡ್ನಲ್ಲಿ ಆರ್ಸಿಬಿ ಸೋಲಿನ ದರ್ಶನ ಮಾಡಿಸಿತ್ತು. ನಮೋ ಅಂಗಳದಲ್ಲಿ ಭರ್ಜರಿ ಆಟವಾಡಿದ್ದ ಆರ್ಸಿಬಿ, ಗುಜರಾತ್ ಎದುರು ಗೆದ್ದು ಬೀಗಿತ್ತು. ಇದೀಗ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಆ ಸೋಲಿನ ಸೇಡನ್ನ ಚಿನ್ನಸ್ವಾಮಿ ಅಂಗಳದಲ್ಲಿ ತೀರಿಸಿಕೊಳ್ಳೋ ಲೆಕ್ಕಾಚಾರದಲ್ಲಿದೆ.
ಪಂದ್ಯಕ್ಕೆ ಮಳೆ ಕಾಟ..! ನುಚ್ಚು ನೂರಾಗುತ್ತಾ RCB ಕನಸು..?
ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 7 ಪಂದ್ಯ ಸೋತಿರೋ ಆರ್ಸಿಬಿ ಎಲ್ಲಾ ಪಂದ್ಯಗಳನ್ನ ಗೆದ್ದರೂ, ಪ್ಲೇ ಆಫ್ ಎಂಟ್ರಿಗೆ ಅದೃಷ್ಟ ಕೈ ಹಿಡಯಬೇಕಿದೆ. ಬೆಂಗಳೂರಿನಲ್ಲಿ ಸದ್ಯ ಮಳೆಯ ವಾತಾರವಣವಿದ್ದು, ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದ್ರೆ, ಆರ್ಸಿಬಿಯ ಪ್ಲೇ ಆಫ್ ಕನಸು ನುಚ್ಚು ನೂರಾಗಲಿದೆ. 10ರಲ್ಲಿ 4 ಪಂದ್ಯ ಗೆದ್ದಿರೋ ಗುಜರಾತ್ ಪಾಲಿಗೆ ಎಂಟ್ರಿ ಡೋರ್ ಬಹುತೇಕ ಮುಚ್ಚಲಿದೆ. ಎರಡೂ ತಂಡಗಳು ತಲಾ ಒಂದೊಂದು ಅಂಕವನ್ನು ಹಂಚಿಕೊಳ್ಳಲಿವೆ.
ಇದನ್ನೂ ಓದಿ:ಮೊದಲ ಮಳೆ ಮಾಡಿದ ಅನಾಹುತ.. ನೆಲ ಕಚ್ಚಿದ ಟೊಮ್ಯಾಟೋ ಬೆಳೆ.. ರಾಜ್ಯದಲ್ಲಿ ಎಲ್ಲಿ ಏನಾಯ್ತು..?
ಹೋಮ್ಗ್ರೌಂಡ್ನಲ್ಲಿ ಆರ್ಸಿಬಿಗೆ ಚಿಯರ್ ಮಾಡಲು ಬಂದ ಲಾಯಲ್ ಫ್ಯಾನ್ಸ್ ಕಳೆದ 3 ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದಾರೆ. ಸದ್ಯ ಸತತ 2 ಪಂದ್ಯ ಗೆದ್ದು ಗೆಲುವಿನ ಹಳಿಗೆ ಮರಳಿರುವ ಆರ್ಸಿಬಿ ಚಿನ್ನಸ್ವಾಮಿ ಚಾಲೆಂಜ್ನಲ್ಲೂ ಗೆದ್ದು ಬೀಗುತ್ತಾ? ಅಭಿಮಾನಿಗಳಿಗೆ ಭರ್ಜರಿ ಪರ್ಫಾಮೆನ್ಸ್ನ ಸ್ಪೆಷಲ್ ಟ್ರೀಟ್ ನೀಡುತ್ತಾ? ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಆರ್ಸಿಬಿಗೆ ಗುಜರಾತ್ ಟೈಟನ್ಸ್ ರಾಯಲ್ ಚಾಲೆಂಜ್
ಚಿನ್ನಸ್ವಾಮಿ ಮೈದಾನದಲ್ಲಿ ಇವತ್ತು ಹೈವೋಲ್ಟೆಜ್ ಕದನ
ಮಾಡು ಇಲ್ಲವೇ ಮಡಿ ಕದನದಲ್ಲಿ ಇವತ್ತು ಗೆಲ್ಲೋದ್ಯಾರು?
ಗುಜರಾತ್ ಟೈಟನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹಣಾಹಣಿಗೆ ಕೌಂಟ್ಡೌನ್ ಶುರುವಾಗಿದೆ. ತವರಿನಂಗಳದಲ್ಲಿ ಗೆದ್ದು ಬೀಗೋ ಲೆಕ್ಕಾಚಾರದಲ್ಲಿ ಆರ್ಸಿಬಿ ಇದ್ರೆ, ಸೋಲಿನ ಸೇಡು ತೀರಿಸಿಕೊಳ್ಳೋ ಲೆಕ್ಕಾಚಾರದಲ್ಲಿ ಗುಜರಾತ್ ತಂಡವಿದೆ. ಉಭಯ ತಂಡಗಳ ಕಾದಾಟ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹೆಚ್ಚಿಸಿದೆ.
ಚಿನ್ನಸ್ವಾಮಿ ಅಂಗಳದಲ್ಲಿಂದು ಹೈವೋಲ್ಟೆಜ್ ಫೈಟ್
ಐಪಿಎಲ್ ಟೂರ್ನಿಯ ಮತ್ತೊಂದು ಮೆಗಾ ಫೈಟ್ಗೆ ವೇದಿಕೆ ಸಜ್ಜಾಗಿದೆ. ಇಂದಿನ ಡು ಆರ್ ಡೈ ಫೈಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಗುಜರಾತ್ ಟೈಟನ್ಸ್ ಮುಖಾಮುಖಿಯಾಗ್ತಿವೆ. ಪ್ಲೇ ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಪಂದ್ಯಕ್ಕೆ ಹೈವೋಲ್ಟೆಜ್ ಟಚ್ ಸಿಕ್ಕಿದೆ.
ಇದನ್ನೂ ಓದಿ:ಮಳೆಯಿಂದ ಭಾರೀ ಪ್ರವಾಹ.. 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ
ಹೋಮ್ಗ್ರೌಂಡ್ನಲ್ಲಿ ಪುಟಿದೇಳುತ್ತಾ ಆರ್ಸಿಬಿ?
ಹೋಮ್ಗ್ರೌಂಡ್ ಚಿನ್ನಸ್ವಾಮಿ ಮೈದಾನದಲ್ಲಿ ಗೆಲ್ಲೋದೆ ಆರ್ಸಿಬಿ ಮುಂದಿರೋ ಟಫ್ ಟಾಸ್ಕ್ ಆಗಿದೆ. ಈ ಹಿಂದಿನ 3 ಪಂದ್ಯಗಳಲ್ಲಿ ಸೋಲಿನ ಮುಖಭಂಗ ಅನುಭವಿಸಿರೋ ಡುಪ್ಲೆಸಿ ಪಡೆ ಇಂದು ಪುಟಿದೇಳುತ್ತಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ತಂಡದ ಬ್ಯಾಟಿಂಗ್ ಸುಧಾರಿಸಿದೆ ನಿಜ.. ಆದ್ರೆ, ಬೌಲಿಂಗ್ ವೀಕ್ನೆಸ್ ಹಾಗೆ ಉಳಿದುಕೊಂಡಿದೆ. ಇಂದಿನ ಪಂದ್ಯಕ್ಕೂ ಮುನ್ನವೂ ಆರ್ಸಿಬಿ ಕ್ಯಾಂಪ್ನಲ್ಲಿ ಬೌಲಿಂಗ್ನದ್ದೇ ದೊಡ್ಡ ತಲೆ ನೋವಾಗಿದೆ.
ಆರ್ಸಿಬಿಗೆ ಮ್ಯಾಕ್ಸ್ವೆಲ್ ಕಮ್ಬ್ಯಾಕ್ನ ಬಲ
ಕಳೆದ ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್ವೆಲ್ ಪ್ಲೇಯಿಂಗ್ ಇಲೆವೆನ್ಗೆ ಕಮ್ಬ್ಯಾಕ್ ಮಾಡಿದ್ರು. ಮ್ಯಾಕ್ಸಿ ಕಮ್ಬ್ಯಾಕ್ ಆರ್ಸಿಬಿ ಬ್ಯಾಟಿಂಗ್ ಬಲವನ್ನ ಹೆಚ್ಚಿಸಿತ್ತು. ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗದಲ್ಲಿ ತಂಡ ಬ್ಯಾಲೆನ್ಸ್ಡ್ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಸೇಮ್ ಇಲೆವೆನ್ನೊಂದಿಗೆ ಆರ್ಸಿಬಿ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ:Breaking News: ರಾಯಚೂರಲ್ಲಿ ಹೃದಯ ವಿದ್ರಾವಕ ಘಟನೆ.. ಇಬ್ಬರ ಬಲಿ ಪಡೆದ ರಣ ಬಿಸಿಲು
ಸೇಡು ತೀರಿಸಿಕೊಳ್ಳೋ ತವಕದಲ್ಲಿ ಗುಜರಾತ್ ಟೈಟನ್ಸ್
ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ತಂಡಕ್ಕೆ ಅವರದೇ ಹೋಮ್ಗ್ರೌಂಡ್ನಲ್ಲಿ ಆರ್ಸಿಬಿ ಸೋಲಿನ ದರ್ಶನ ಮಾಡಿಸಿತ್ತು. ನಮೋ ಅಂಗಳದಲ್ಲಿ ಭರ್ಜರಿ ಆಟವಾಡಿದ್ದ ಆರ್ಸಿಬಿ, ಗುಜರಾತ್ ಎದುರು ಗೆದ್ದು ಬೀಗಿತ್ತು. ಇದೀಗ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಆ ಸೋಲಿನ ಸೇಡನ್ನ ಚಿನ್ನಸ್ವಾಮಿ ಅಂಗಳದಲ್ಲಿ ತೀರಿಸಿಕೊಳ್ಳೋ ಲೆಕ್ಕಾಚಾರದಲ್ಲಿದೆ.
ಪಂದ್ಯಕ್ಕೆ ಮಳೆ ಕಾಟ..! ನುಚ್ಚು ನೂರಾಗುತ್ತಾ RCB ಕನಸು..?
ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 7 ಪಂದ್ಯ ಸೋತಿರೋ ಆರ್ಸಿಬಿ ಎಲ್ಲಾ ಪಂದ್ಯಗಳನ್ನ ಗೆದ್ದರೂ, ಪ್ಲೇ ಆಫ್ ಎಂಟ್ರಿಗೆ ಅದೃಷ್ಟ ಕೈ ಹಿಡಯಬೇಕಿದೆ. ಬೆಂಗಳೂರಿನಲ್ಲಿ ಸದ್ಯ ಮಳೆಯ ವಾತಾರವಣವಿದ್ದು, ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದ್ರೆ, ಆರ್ಸಿಬಿಯ ಪ್ಲೇ ಆಫ್ ಕನಸು ನುಚ್ಚು ನೂರಾಗಲಿದೆ. 10ರಲ್ಲಿ 4 ಪಂದ್ಯ ಗೆದ್ದಿರೋ ಗುಜರಾತ್ ಪಾಲಿಗೆ ಎಂಟ್ರಿ ಡೋರ್ ಬಹುತೇಕ ಮುಚ್ಚಲಿದೆ. ಎರಡೂ ತಂಡಗಳು ತಲಾ ಒಂದೊಂದು ಅಂಕವನ್ನು ಹಂಚಿಕೊಳ್ಳಲಿವೆ.
ಇದನ್ನೂ ಓದಿ:ಮೊದಲ ಮಳೆ ಮಾಡಿದ ಅನಾಹುತ.. ನೆಲ ಕಚ್ಚಿದ ಟೊಮ್ಯಾಟೋ ಬೆಳೆ.. ರಾಜ್ಯದಲ್ಲಿ ಎಲ್ಲಿ ಏನಾಯ್ತು..?
ಹೋಮ್ಗ್ರೌಂಡ್ನಲ್ಲಿ ಆರ್ಸಿಬಿಗೆ ಚಿಯರ್ ಮಾಡಲು ಬಂದ ಲಾಯಲ್ ಫ್ಯಾನ್ಸ್ ಕಳೆದ 3 ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದಾರೆ. ಸದ್ಯ ಸತತ 2 ಪಂದ್ಯ ಗೆದ್ದು ಗೆಲುವಿನ ಹಳಿಗೆ ಮರಳಿರುವ ಆರ್ಸಿಬಿ ಚಿನ್ನಸ್ವಾಮಿ ಚಾಲೆಂಜ್ನಲ್ಲೂ ಗೆದ್ದು ಬೀಗುತ್ತಾ? ಅಭಿಮಾನಿಗಳಿಗೆ ಭರ್ಜರಿ ಪರ್ಫಾಮೆನ್ಸ್ನ ಸ್ಪೆಷಲ್ ಟ್ರೀಟ್ ನೀಡುತ್ತಾ? ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್