/newsfirstlive-kannada/media/media_files/2025/08/01/jasprit_bumrah-2025-08-01-20-06-58.jpg)
ಇಂಡೋ, ಇಂಗ್ಲೆಂಡ್ ನಡುವಿನ ಅಂತಿನ ಟೆಸ್ಟ್ ಭರದಿಂದ ಸಾಗ್ತಿದೆ. ಈ ಕೊನೆ ಮ್ಯಾಚ್ ಗೆದ್ದು ಸರಣಿ ಸಮಬಲ ಸಾಧಿಸೋ ಯತ್ನದಲ್ಲಿದೆ. ಆದ್ರೆ, ಈ ನಡುವೆ ಜಸ್ಪ್ರಿತ್ ಬೂಮ್ರಾ ವಿಚಾರವಾಗಿಯೇ ಬಿಸಿಸಿಐ ಅಸಮಾಧಾನಗೊಂಡಿದೆ. ಬೂಮ್ರಾರ ವರ್ಕ್ಲೋಡ್ ಹೊಸ ವಿವಾದಕ್ಕೆ ನಾಂದಿಯಾಡಿದೆ. ಇದು ಬಿಸಿಸಿಐ ವರ್ಸಸ್ ಟೀಮ್ ಮ್ಯಾನೇಜ್ಮೆಂಟ್ ಕಿತ್ತಾಟಕ್ಕೆ ಕಾರಣವಾಗಿದೆ.
ಒಂದೂವರೆ ತಿಂಗಳ ಇಂಗ್ಲೆಂಡ್ ಪ್ರವಾಸದ ಅಂತ್ಯಕ್ಕೆ ಬಂದಾಗಿದೆ. ಟೆಸ್ಟ್ ಸರಣಿ ಇಂಗ್ಲೆಂಡ್ ಪಾಲಾಗುತ್ತಾ..? ಸಮಬಲವಾಗುತ್ತಾ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಹೊರಬರಬೇಕಿದೆ. ಆದ್ರೆ, ಈ ಪ್ರಶ್ನೆಯ ಹುಡುಕಾಟದ ನಡುವೆ ವೇಗಿ ಜಸ್ಪ್ರೀತ್ ಬೂಮ್ರಾ ವಿಚಾರವಾಗಿ ಬಿಗ್ಬಾಸ್ಗಳು ಫುಲ್ ಗರಂ ಆಗಿದ್ದಾರೆ.
ಇಂಗ್ಲೆಂಡ್ ಪ್ರವಾಸದ ಆರಂಭದಿಂದಲೂ ಬೂಮ್ರಾ, ವರ್ಕ್ಲೋಡ್ನದ್ದೇ ಚರ್ಚೆಯಾಗ್ತಿದೆ. ಪ್ರತಿ ಪಂದ್ಯದ ಆರಂಭಕ್ಕೂ ಮುನ್ನ, ಪಂದ್ಯ ಮುಕ್ತಾಯದ ನಂತರ ಬೂಮ್ರಾ ಆಡ್ತಾರಾ ಇಲ್ವಾ ಅನ್ನೋದೇ ಗೊಂದಲದ ಗೂಡಾಗ್ತಿದೆ. ಇದೀಗ ಇದೇ ಜಸ್ಪ್ರೀತ್ ಬೂಮ್ರಾ ವಿಚಾರವಾಗಿ ಬಿಸಿಸಿಐ ಬಾಸ್ಗಳು ಗರಂ ಆಗಿದ್ದಾರೆ.
ವರ್ಕ್ಲೋಡ್ ಅನುಗುಣವಾಗಿ ಬೌಲಿಂಗ್ ಮಾಡಿದ್ರು ಬೇಸರ.!
ಆಸ್ಟ್ರೇಲಿಯಾ ಪ್ರವಾಸದ ಅಂತಿಮ ಟೆಸ್ಟ್ನಲ್ಲಿ ಇಂಜುರಿಯಾಗಿದ್ದ ಬೂಮ್ರಾ, ಸಿಡ್ನಿ ಟೆಸ್ಟ್ನ 2ನೇ ಇನ್ನಿಂಗ್ಸ್ ಪೂರ್ತಿ ರೆಸ್ಟ್ ಪಡೆದಿದ್ದರು. ಅಷ್ಟೇ ಅಲ್ಲ, ನಂತರದ ಚಾಂಪಿಯನ್ಸ್ ಟ್ರೋಫಿಯಿಂದಲೂ ದೂರ ಉಳಿದಿದ್ರು. ನಂತರ ಕಮ್ಬ್ಯಾಕ್ ಮಾಡಿದ್ದ ಬೂಮ್ರಾಗೆ ಟೆಸ್ಟ್ ಪಂದ್ಯವೊಂದರಲ್ಲಿ ಕೇವಲ 45ರಿಂದ 50 ಓವರ್ ಬೌಲಿಂಗ್ ಮಾಡಲಷ್ಟೇ ಬಿಸಿಸಿಐ ಮೆಡಿಕಲ್ ಟೀಮ್ ಸೂಚಿಸಿತ್ತು. ಅದರಂತೆಯೇ ಇಂಗ್ಲೆಂಡ್ ಸರಣಿಯಲ್ಲಿ ಜಸ್ಪ್ರೀತ್ ಬೂಮ್ರಾ ಬೌಲಿಂಗ್ ಮಾಡಿದ್ದಾರೆ.
ಬೂಮ್ರಾ ಬೌಲಿಂಗ್ ಮಾಡಿದ್ದೆಷ್ಟು ಓವರ್?
ಮ್ಯಾಂಚೆಸ್ಟರ್ ಟೆಸ್ಟ್ | 33 ಓವರ್ |
ಲಾರ್ಡ್ಸ್ ಟೆಸ್ಟ್ | 43 ಓವರ್ |
ಲೀಡ್ಸ್ ಟೆಸ್ಟ್ | 43.4 ಓವರ್ |
ಟೀಮ್ ಮ್ಯಾನೇಜ್ಮೆಂಟ್ ಜೊತೆ ಬಿಸಿಸಿಐ ಮನಸ್ತಾಪ..!..!
ಬಿಸಿಸಿಐ ಬೇಸರಕ್ಕೆ ಕಾರಣ ವೇಗಿ ಜಸ್ಪ್ರೀತ್ ಬೂಮ್ರಾ ಸೆಲೆಕ್ಷನ್, ಯಾಕಂದ್ರೆ, ಜಸ್ಪ್ರೀತ್ ಬೂಮ್ರಾ ಕುರಿತು ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಸಂಪೂರ್ಣ ಅರಿಯದೇ ಸರಣಿಗೆ ಆಯ್ಕೆ ಮಾಡ್ತಾ ಪ್ರಶ್ನೆ ಎದ್ದಿದೆ. ಇದೇ ವಿಚಾರವಾಗಿ ಗರಂ ಆಗಿರುವ ಬಿಸಿಸಿಐ ಬಾಸ್ಗಳು, ಟೀಮ್ ಮ್ಯಾನೇಜ್ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿ ಜೊತೆ ಚರ್ಚೆ ನಡೆಸಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿ ಮುಂದೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಸೆಲೆಕ್ಷನ್ ಕಮಿಟಿಗೆ ಬಿಸಿಸಿಐ ಪ್ರಶ್ನೆ
ಸೆಲೆಕ್ಟರ್ಸ್ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ. ಜಸ್ಪ್ರೀತ್ ಬೂಮ್ರಾ ಸರಣಿಯುದ್ದಕ್ಕೂ ಲಭ್ಯರಿರುವ ಬಗ್ಗೆ ತಿಳಿದು ಟೆಸ್ಟ್ ಸರಣಿಗೆ ಆಯ್ಕೆ ಮಾಡಿದ್ರಾ..? ಇಲ್ವಾ..?
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಗೆ ಇಬ್ಬರು ಕೈಕೊಟ್ಟು ಹೋದ್ರೂ.. ಈಗ ಆಲ್ರೌಂಡರ್ಗೆ ಇವರೇ ಪ್ರಪಂಚ..!
ಬಿಸಿಸಿಐ ಮೂಲಗಳು
ಬೂಮ್ರಾ ಇಡೀ ಸರಣಿಗೆ ಲಭ್ಯರಿರಬೇಕು. ಕೆಲ ಪಂದ್ಯಗಳಲ್ಲಿ ಮಾತ್ರ ಆಡಿ, ಕೆಲ ಪಂದ್ಯಗಳು ರೆಸ್ಟ್ ಪಡೆಯುವಂತಾಗಬಾರದು ಎಂದಿರುವ ಬಿಸಿಸಿಐ, ಕಂಪ್ಲೀಟ್ ಸರಣಿಯಿಂದಲೇ ರೆಸ್ಟ್ ಪಡೆಯುವಂತಾಗಲಿ ಎಂದಿದೆ. ಟೀಮ್ ಮ್ಯಾನೇಜ್ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿ ಅರ್ಥಮಾಡಿಕೊಳ್ಳುವಂತೆ ಬಿಗ್ಬಾಸ್ಗಳು ಸೂಚಿಸಿದ್ದಾರೆ. ಆದ್ರೆ, ಇದು ಈಗ ಮತ್ತೊಂದು ಪ್ರಶ್ನೆಗೆ ನಾಂದಿಯಾಡಿದೆ.
ಗೆಲುವಿಗಾಗಿ ಬೂಮ್ರಾರನ್ನೇ ನಂಬಿಕೊಂಡಿತ್ತಾ ಮ್ಯಾನೇಜ್ಮೆಂಟ್..?
ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾದಲೇ ಚೀಫ್ ಸೆಲೆಕ್ಟರ್ ಬೂಮ್ರಾ, ಕೇವಲ ಮೂರು ಮ್ಯಾಚ್ ಆಡ್ತಾರೆ ಅನ್ನೋದನ್ನ ತಿಳಿಸಿತ್ತು. ಆದ್ರೆ, ಈ ಮೂರು ಮ್ಯಾಚ್ ಆಡಿದ್ರೆ. ಟೀಮ್ ಇಂಡಿಯಾ ಗೆಲುವು ಸುಲಭ ಅನ್ನೋದು ಟೀಮ್ ಮ್ಯಾನೇಜ್ಮೆಂಟ್ & ಸೆಲೆಕ್ಟರ್ಗಳ ನಂಬಿಕೆಯಾಗಿತ್ತಾ ಎಂಬ ಪ್ರಶ್ನೆ ಉದ್ಬವಿಸಿದೆ. ಆದ್ರೆ, ಬೂಮ್ರಾ ಆಡಿರುವ ಮ್ಯಾಚ್ಗಳಲ್ಲೇ ಟೀಮ್ ಇಂಡಿಯಾ ಸೋತಿದೆ. ಮತೊಂದ್ಕಡೆ ಪಂದ್ಯದಿಂದ ಪಂದ್ಯಕ್ಕೆ ಬೌಲಿಂಗ್ ಸ್ಪೀಡ್ ಕುಸಿತವಾಗ್ತಿದೆ. ಇದು ಸಹಜವಾಗೇ ಮಾಜಿ ಕ್ರಿಕೆಟಿಗರನ್ನು ಮಾತ್ರವಲ್ಲ. ಬಿಸಿಸಿಐಗೂ ಮುಜುಗರಕ್ಕೀಡು ಮಾಡುವಂತೆ ಮಾಡಿದೆ..
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ