Advertisment

ಕೌಟುಂಬಿಕ ಕಲಹ : ಸ್ವಂತ ಮಗನಿಗೆ ತಂದೆಯಿಂದ ಗುಂಡೇಟು..!

ಕೌಟುಂಬಿಕ ಕಲಹಕ್ಕೆ ತಂದೆಯೇ ಮಗನ ಮೇಲೆ ಗುಂಡು ಹಾರಿಸಿದ್ದಾನೆ . ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿಯಲ್ಲಿ ನಡೆದಿದೆ. ಗಾಯಾಳು ಹರೀಶ್​ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

author-image
Ganesh Kerekuli
son father firing

ಮಗ ಹರೀಶ್ -ತಂದೆ ಸುರೇಶ್‌

Advertisment
  • ಕೌಟುಂಬಿಕ ಕಲಹದಿಂದ ಮಗನ ಮೇಲೆ ಗುಂಡು ಹಾರಿಸಿದ ತಂದೆ
  • ಗುಂಡೇಟಿನಿಂದ ಮಗ ಹರೀಶ್‌ಗೆ ಗಂಭೀರ ಗಾಯ
  • ಬೆಂಗಳೂರಿನ ಆಸ್ಪತ್ರೆಯಲ್ಲಿ ಗಾಯಾಳು ಹರೀಶ್‌ಗೆ ಚಿಕಿತ್ಸೆ

ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹಕ್ಕೆ ತಂದೆಯೇ ಮಗನ ಮೇಲೆ ಗುಂಡು ಹಾರಿಸಿದ್ದಾನೆ. ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿಯಲ್ಲಿ ನಡೆದಿದೆ. ಗಾಯಾಳು ಹರೀಶ್ ನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

Advertisment

ಕೌಟುಂಬಿಕ ವಿಚಾರವಾಗಿ ತಂದೆ- ಮಗನ ನಡುವೆ ಪದೇ ಪದೇ ಜಗಳವಾಗುತ್ತಿತ್ತು. 59 ವರ್ಷದ ಸುರೇಶ್​ ಹಾಗೂ 28 ವರ್ಷದ ಪುತ್ರ ಹರೀಶ್​ ಇಬ್ಬರ ನಡುವೆ ಪದೇ ಪದೇ ಜಗಳವಾಗ್ತಿತ್ತು..ನಿನ್ನೆ ರಾತ್ರಿ ಮತ್ತೆ ಇಬ್ಬರ ಜಗಳ ತಾರಕ್ಕೇರಿದೆ.

ತಂದೆ ಸುರೇಶ್​ ಸಿಟ್ಟಿಗೆದ್ದು, ತನ್ನ ಮಗನ ಮೇಲೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾನೆ. ಗುಂಡಿನ ದಾಳಿಯಿಂದ ಹರೀಶ್ ತಲೆ ಹಾಗೂ ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ.ಸದ್ಯ ಗಾಯಾಳುವನ್ನು ಹೆಚ್ಚಿನ  ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಆರೋಪಿ ಸುರೇಶನನ್ನ ವಶಕ್ಕೆ ಪಡೆದಿದ್ದಾರೆ. 


son father firing
ತಂದೆ- ಮಗ

ಇದನ್ನೂ ಓದಿ: ದಿವ್ಯಾ ಸುರೇಶ್ ಹಿಟ್​ ಆ್ಯಂಡ್ ರನ್​ ಕೇಸ್​; ಆಸ್ಪತ್ರೆಯಲ್ಲಿ 2 ಲಕ್ಷ ರೂ ಖರ್ಚು, ನಮ್ಮನ್ನು ಬಂದು ನೋಡೇ ಇಲ್ಲ- ಕಿರಣ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore father firing
Advertisment
Advertisment
Advertisment