/newsfirstlive-kannada/media/media_files/2025/08/02/prasiddh_krishna_new-2025-08-02-15-20-13.jpg)
ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಿನ್ನೆ ಕರ್ನಾಟಕದ ವೇಗಿ ಪರಾಕ್ರಮ ಜೋರಾಗಿತ್ತು. ನಮ್ಮ ಹೆಮ್ಮೆಯ ಕನ್ನಡಿಗ ಪ್ರಸಿದ್ಧ್ ಕೃಷ್ಣರ ಬಿರುಗಾಳಿಯಂತಾ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಕಂಗಾಲ್ ಆದ್ರು. ಈವರೆಗೆ ಟೀಕಿಸಿದವರಿಗೆ, ಸಾಮರ್ಥ್ಯ ಪ್ರಶ್ನಿಸಿದವರಿಗೆ ಪ್ರಸಿದ್ಧ್, ಪರ್ಫಾಮೆನ್ಸ್ನಿಂದಲೇ ಪವರ್ಫುಲ್ ಆನ್ಸರ್ ಕೊಟ್ರು. ಪ್ರಸಿದ್ಧ್ ಪರಾಕ್ರಮ.
ಇಂಡೋ-ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ 2ನೇ ದಿನ ನಡೆದಿದ್ದು ಕನ್ನಡಿಗನ ದರ್ಬಾರ್. ಕೆನ್ನಿಂಗ್ಟನ್ ಓವಲ್ನಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಘರ್ಜನೆಯ ಮುಂದೆ ಇಂಗ್ಲೆಂಡ್ ಲಯನ್ಸ್ ಕಂಗಾಲ್ ಆದ್ರು. ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದೆ ಟೀಕೆಗಳ ಮೇಲೆ ಟೀಕೆಗಳನ್ನ ಎದುರಿಸಿದ್ದ ಪ್ರಸಿದ್ಧ್, ನಿನ್ನೆಯ ದಿನದಾಟ ಫಸ್ಟ್ ಸ್ಪೆಲ್ನಲ್ಲೂ ರನ್ ನೀಡಿ ದುಬಾರಿಯಾಗಿದ್ರು. 5 ಓವರ್ಗಳಲ್ಲೇ 31 ರನ್ ಬಿಟ್ಟು ಕೊಟ್ಟಿದ್ರು.
ಸತತ ವೈಫಲ್ಯ, ಮೇಲಿಂದ ಮೇಲೆ ಟೀಕೆ.. ಇದೆಲ್ಲದರಿಂದ ಗಾಯಗೊಂಡಿದ್ದ ಪ್ರಸಿದ್ಧ್ ಕೃಷ್ಣ ಕೆರಳಿದ ಸಿಂಹದಂತೆ ಹೋರಾಡಿದ್ರು. ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿತ್ತೆ ಅನ್ನೋ ಮಾತು ನಿನ್ನೆ ನಮ್ಮ ಕರ್ನಾಟಕದ ವೇಗಿಯ ವಿಚಾರದಲ್ಲಿ ನಿಜವಾಯ್ತು.
ಪ್ರಸಿದ್ಧ್ ಪ್ಲಾನ್ಗೆ ಬಲಿಯಾದ ಕ್ರಾವ್ಲಿ.!
ಇಂಗ್ಲೆಂಡ್ ಓಪನರ್ ಜಾಕ್ ಕ್ರಾವ್ಲಿ ಟೆಸ್ಟ್ನಲ್ಲಿ ಟಿ20 ಸ್ಟೈಲ್ ಆಫ್ ಬ್ಯಾಟಿಂಗ್ ನಡೆಸ್ತಾ ಇದ್ರು. 14 ಬೌಂಡರಿ ಚಚ್ಚಿದ್ದ ಕ್ರಾವ್ಲಿ 57 ಎಸೆತಕ್ಕೆ 64 ರನ್ಗಳಿಸಿ ಶತಕದ ಕನವರಿಕೆಯಲ್ಲಿದ್ರು. ಆದ್ರೆ, ಈ ಕನಸನ್ನ ಪ್ರಸಿದ್ಧ್ ಕೃಷ್ಣ ನುಚ್ಚು ನೂರು ಮಾಡಿದ್ರು. ಪಕ್ಕಾ ಪ್ಲಾನ್ ಮಾಡಿ ಆಫ್ ಸ್ಟಂಪ್ ಲೈನ್ನಲ್ಲಿ ಹಾಕಿದ ಎಸೆತಕ್ಕೆ ಕ್ರಾವ್ಲಿ ಬಲಿಯಾದ್ರು.
ಕನ್ನಡಿಗರ ಟ್ರ್ಯಾಪ್ಗೆ ಬಿದ್ದ ಜೇಮಿ ಸ್ಮಿತ್.!
ಸರಣಿಯಲ್ಲಿ ಕನ್ಸಿಸ್ಟೆಂಟ್ ಆಗಿ ಪರ್ಫಾಮ್ ಮಾಡಿದ್ದ ಜೇಮಿ ಸ್ಮಿತ್ ಆಟ ನಿನ್ನೆ ನಡೀಲಿಲ್ಲ. ಪ್ರಸಿದ್ಧ್ ಕೃಷ್ಣ, ಕೆ.ಎಲ್ ರಾಹುಲ್ ಟ್ರ್ಯಾಪ್ಗೆ ಸ್ಮಿತ್ ಸುಲಭಕ್ಕೆ ಬಿದ್ರು. ಪ್ರಸಿದ್ಧ್ ಔಟ್ ಸೈಡ್ ಆಫ್ ಸ್ಟಂಪ್ ಲೈನ್ ಹಾಕಿದ ಬೌನ್ಸರ್ ಹಾಕಿದ್ರು. ಜೇಮಿ ಸ್ಮಿತ್ ಬ್ಯಾಟ್ಗೆ ಸವರಿದ ಚೆಂಡು ಸೀದಾ ಸ್ಲಿಪ್ನಲ್ಲಿದ್ದ ಕೆ.ಎಲ್ ರಾಹುಲ್ ಕೈ ಸೇರ್ತು.
ಪ್ರಸಿದ್ಧ್ ಎಸೆತಕ್ಕೆ ಓವರ್ಟನ್ ಕಕ್ಕಾಬಿಕ್ಕಿ.!
ಜೇಮಿ ಸ್ಮಿತ್ ಪತನದ ಬಳಿಕ ಬ್ಯಾಟಿಂಗ್ಗೆ ಬಂದ ಓವರ್ಟನ್ಗೆ ಸೆಟಲ್ ಆಗೋಕೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವಕಾಶ ನೀಡಲಿಲ್ಲ. 4ನೇ ಎಸೆತದಲ್ಲೇ ಎಲ್ಬಿ ಟ್ರ್ಯಾಪ್ ಕೆಡವಿದ್ರು. ಇದ್ರೊಂದಿಗೆ ಸೆಕೆಂಡ್ ಸೆಷನ್ನಲ್ಲಿ ಟೀಮ್ ಇಂಡಿಯಾಗೆ ಮೇಲುಗೈ ತಂದುಕೊಟ್ರು.
ಇದನ್ನೂ ಓದಿ:BEML Recruitment; ಬೆಂಗಳೂರು, ಕೋಲಾರ, ಮೈಸೂರು ಸೇರಿ ದೇಶದ ಈ
ಪ್ರಸಿದ್ಧ್ಗೆ 4ನೇ ಬಲಿಯಾದ ಅಟ್ಕಿನ್ಸನ್.!
ಟೀ ಬ್ರೇಕ್ ಬಳಿಕವೂ ಪ್ರಸಿದ್ಧ್ ಅಬ್ಬರ ಮುಂದುವರೆಯಿತು. ಶಾರ್ಟ್ ಬಾಲ್ ಟ್ರ್ಯಾಪ್ಗೆ ಬಿದ್ದ ಗಸ್ ಅಟ್ಕಿನ್ಸನ್ ಕರ್ನಾಟಕದ ವೇಗಿಗೆ 4ನೇ ಬಲಿಯಾದರು. ಗಸ್ ಅಟ್ಕಿನ್ಸನ್ ಮಿಸ್ ಹಿಟ್ನ ಮಿಡ್ ಆನ್ನಲ್ಲಿದ್ದ ಆಕಾಶ್ದೀಪ್ ಕ್ಯಾಚ್ ಆಗಿ ಕನ್ವರ್ಟ್ ಮಾಡಿದರು.
ಪ್ರಸಿದ್ಧ್ ಕೃಷ್ಣ ಫಸ್ಟ್ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ತನ್ನ ಮೇಲಿದ್ದ ಎಲ್ಲಾ ಟೀಕೆಗಳಿಗೆ, ಸಾಮರ್ಥ್ಯವನ್ನ ಪ್ರಶ್ನಿಸಿದವರಿಗೆ ಕರ್ನಾಟಕದ ವೇಗಿ ತನ್ನ ಪರ್ಫಾಮೆನ್ಸ್ನಿಂದಲೇ ಆನ್ಸರ್ ಕೊಟ್ಟಿದ್ದಾರೆ. ಇದೇ ಕನ್ಸಿಸ್ಟೆನ್ಸಿಯನ್ನ ಕನ್ನಡಿಗ ಮುಂದೆಯೂ ಕಾಯ್ದುಕೊಂಡ್ರೆ, ತಂಡದಲ್ಲಿ ಖಾಯಂ ಸ್ಥಾನ ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ