ತಮಿಳು ಬಿಗ್​ಬಾಸ್​​ ಇಬ್ಬರು ಸ್ಪರ್ಧಿಗಳಿಗೆ ರೆಡ್​ ಕಾರ್ಡ್​.. ಆಗಿದ್ದೇನು?

ಬಿಗ್​ಬಾಸ್​ ಮನೆಯಲ್ಲಿ ಟಾಸ್ಕ್​ ವೇಳೆ ನೂಕಾಟ- ತಳ್ಳಾಟ ನಡೆಯೋದು ಸಾಮಾನ್ಯ. ಆದ್ರೆ ಟಾಸ್ಕ್​ ವೇಳೆ ನಡೆದ ತಪ್ಪಿನಿಂದಾಗಿ ಒಂದೇ ಬಾರಿಗೆ ಇಬ್ಬರು ಸ್ಪರ್ಧಿಗಳಿಗೆ ರೆಡ್​ ಕಾರ್ಡ್​ ನೀಡಲಾಗಿದೆ. ಬಿಗ್​ಬಾಸ್​ ತಮಿಳು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತಹದೊಂದು ಘಟನೆ ನಡೆದಿದೆ.

author-image
Ganesh Kerekuli
bigg boss tamil
Advertisment

​ ತಮಿಳು ಬಿಗ್​ಬಾಸ್ ಸೀಸನ್​ 9ರಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಟಿಕೆಟ್​​ ಟು ಫಿನಾಲೆ ಟಾಸ್ಕ್​ ಆಡುವ ಸಂದರ್ಭದಲ್ಲಿ ನಡೆದ ಒಂದು ಘಟನೆಯಿಂದಾಗಿ ಬಿಗ್​ಬಾಸ್​ ತಮಿಳು ನಿರೂಪಕ ವಿಜಯ್ ಸೇತುಪತಿ ಇಬ್ಬರು ಸ್ಪರ್ಧಿಗಳಿಗೆ ರೆಡ್​ ಕಾರ್ಡ್​ ನೀಡಿದ್ದಾರೆ. ವಿಜೆ ಪಾರ್ವತಿ ಮತ್ತು ಕಾಮರುದೀನ್​ಗೆ ರೆಡ್​ ಕಾರ್ಡ್ ನೀಡಿ ವಾರ್ನಿಂಗ್​ ಕೊಡಲಾಗಿದೆ.

ಟಿಕೆಟ್​​ ಟು ಫಿನಾಲೆ ಟಾಸ್ಕ್​ನಲ್ಲಿ ವಿಜೆ ಪಾರ್ವತಿ ಮತ್ತು ಕಾಮರುದೀನ್ ಓರ್ವ ಸ್ಪರ್ಧಿಯನ್ನ ಕಾರಿನಿಂದ ಹೊರಗೆ ತಳ್ಳಿ,  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾರಿಂದ ಹೊರಗೆ ತಳ್ಳಿದ ರಭಸಕ್ಕೆ ಸ್ಪರ್ಧಿಗೆ ಉಸಿರಾಟದ ಸಮಸ್ಯೆಯಾಗಿತ್ತು. ಬಳಿಕ ಕೂಡಲೇ ಅವರಿಗೆ ಚಿಕಿತ್ಸೆ ಕೊಡಲಾಗಿದೆ. ಇದೇ ವಿಚಾರ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. 

ಅದರಂತೆ ವೀಕೆಂಡ್​ ಕಾರ್ಯಕ್ರಮದಲ್ಲಿ ತಮಿಳು ಬಿಗ್​ಬಾಸ್​ ನಿರೂಪಕ ವಿಜಯ್ ಸೇತುಪತಿ ಈ ವಿಚಾರದ ಬಗ್ಗೆ ಚರ್ಚೆ ಮಾಡಿದರು. ಜೊತೆಗೆ ಸ್ಪರ್ಧಿಗಳಾದ ಪಾರ್ವತಿ ಮತ್ತು ಕಾಮರುದ್ದೀನ್‌ಗೆ  ರೆಡ್​ ಕಾರ್ಡ್ ನೀಡಿ ವಾರ್ನಿಂಗ್​ ಕೂಡ ನೀಡಲಾಯಿತು. ವಿಜಯ್ ಸೇತುಪತಿ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು.

ಇದನ್ನೂ ಓದಿ:  ಕೇಂದ್ರದ ಬಜೆಟ್ ನಲ್ಲಿ ಮಹಿಳೆಯರಿಗೆ ಹಣಕಾಸಿನ ಶಕ್ತಿ ನೀಡುವ ಯೋಜನೆಗಳ ಘೋಷಣೆ ಸಾಧ್ಯತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg boss bigg boss tamil
Advertisment