Advertisment

ಹುಬ್ಬಳ್ಳಿ ಮೂಲದ ‘ಸೂಪರ್ ಕಾಪ್’, ಈಗ ಹೈದರಾಬಾದ್ ಪೊಲೀಸ್ ಕಮಿಷನರ್..!

2019 ರಲ್ಲಿ ದೇಶಾದ್ಯಂತ ಸುದ್ದಿಯಾಗಿದ್ದ ಹೈದರಾಬಾದ್​ನ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರ ಪ್ರಕರಣದಲ್ಲಿ 4 ಆರೋಪಿಗಳ ಎನ್​ಕೌಂಟರ್ ಮಾಡಿದ್ದ ಸಿಂಗಂ ವಿ.ಸಿ ಸಜ್ಜನರ್, ಇಂದು ಹೈದರಾಬಾದದ್​ನ ಪೊಲೀಸ್ ಕಮಿಷನರ್ ಆಗಿ ಸಿ.ಎಂ ರೇವಂತ್ ರೆಡ್ಡಿ ಆದೇಶ ಹೊರಡಿಸಲಾಗಿದೆ.

author-image
Bhimappa
vs sajjanar
Advertisment

ಹೈದರಾಬಾದ್: ಹುಬ್ಬಳ್ಳಿ ಮೂಲದ ವಿ.ಸಿ ಸಜ್ಜನರ್ ಹೈದರಾಬಾದ್​ನ ಕಮಿಷನರ್ ಆಗಿ ನೇಮಕವಾಗಿದ್ದಾರೆ. ಹೈದರಾಬಾದ್ ಕಮಿಷಿನರ್ ಆಗಿದ್ದ ಸಿ.ವಿ ಆನಂದ್​ರನ್ನು ಗೃಹ ಇಲಾಖೆ ವಿಶೇಷ ಕಾರ್ಯದರ್ಶಿಯನ್ನಾಗಿ ವರ್ಗಾಯಿಸಲಾಗಿದೆ. ಇನ್ಮುಂದೆ ಹೈದರಾಬಾದ್​​ ದೊಡ್ಡ ನಗರಕ್ಕೆ ವಿ.ಸಿ ಸಜ್ಜನರ್ ಪೊಲೀಸ್ ಕಮಿಷನರ್ ಆಗಿ ತಮ್ಮ ಕಾರ್ಯನಿರ್ವಹಿಸಲಿದ್ದಾರೆ.

Advertisment

2019 ರ ನವೆಂಬರ್ 29 ರಂದು ಹೈದರಾಬಾದ್​ನ ಹೊರವಲಯದಲ್ಲಿ, ಪಶುವೈದ್ಯೆ ಪ್ರಿಯಾಂಕ ರೆಡ್ಡಿಯೆಂಬ ಯುವತಿ ಮೇಲೆ ನಾಲ್ವರು ಭೀಕರವಾಗಿ ಹಲ್ಲೆ ನಡೆಸಿ ಅತ್ಯಾಚಾರ ಮಾಡಿದ್ದರು. ಆಗ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿ.ಎಸ್ ಸಜ್ಜನರ್ ನಾಲ್ವರು ಆರೋಪಿಗಳಿಗೆ ಎನ್​ಕೌಂಟರ್ ಮಾಡಿದ್ದರು. ಪ್ರಸ್ತುತ ಹೈದರಾಬಾದ್​ನಲ್ಲಿ ವಿ.ಸಿ ಸಜ್ಜನರ್​ನನ್ನು ‘ಸೂಪರ್ ಕಾಪ್’ ಎಂದೇ ಕರೆಯಲಾಗುತ್ತದೆ. 

ಇದನ್ನೂ ಓದಿ: ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್.. ಏನ್ ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Kannada News hydarabad Bengaluru News V.C SAJJANAR
Advertisment
Advertisment
Advertisment