ನಿಲ್ಲದ ಮಳೆರಾಯನ ಅಟ್ಟಹಾಸ, ಉತ್ತರ ಕನ್ನಡ ಜಿಲ್ಲೆಗೆ ಗುಡ್ಡದ ಭೂತ
ಸುರಿಯುತ್ತಿರುವ ಮುಸಲಧಾರೆ ಮಾಡಿರುವ ಅವಾಂತರಗಳೇನು?
ನದಿ, ಜಲಪಾತಗಳತ್ತ ಪ್ರವಾಸ ಮುಂದೂಡುವುದು ಒಳಿತು
ಬೆಂಗಳೂರು: ರಾಜ್ಯಾದ್ಯಂತ ವರುಣ ವಿಶ್ರಾಂತಿಯೆಂಬುದನ್ನೇ ಮರೆತು ಒಂದೇ ಸಮನೆ ಸುರಿಯುತ್ತಲೇ ಇದ್ದಾನೆ. ಬಿಸಿಲ ಬೇಗೆಗೆ ಬೆಂದ ರಾಜ್ಯಕ್ಕೆ ವರುಣ ಆಗಮಿಸಿದ್ದು ಆರಂಭದಲ್ಲಿ ದೊಡ್ಡ ಖುಷಿ ನೀಡಿತ್ತು.. ಆದರೆ ವಿರಾಮವಿಲ್ಲದೇ ನಿರಂತರ ಆರ್ಭಟಿಸುತ್ತಿರುವ ವರುಣರಾಯ ಹಲವು ಅವಾಂತರಗಳನ್ನು ಸೃಷ್ಟಿಸಿದ್ದಾನೆ.. ರಾಜ್ಯದಲ್ಲಿ ವರುಣನ ಸೃಷ್ಟಿಸಿರುವ ಅವಾಂತರಗಳನ್ನು ಅನಾಹುತಗಳು ಏನೇನೂ ಅನ್ನೋದರ ಸಂಪೂರ್ಣ ವರದಿಯನ್ನು ಈ ಒಂದು ಸ್ಟೋರಿಯಲ್ಲಿ ನಾವು ನಿಮಗೆ ಕಟ್ಟಿಕೊಡುತ್ತಾ ಹೋಗುತ್ತೇವೆ.
ರಾಜ್ಯದಲ್ಲಿ ಅಬ್ಬರಿಸುತ್ತಿರುವ ವರ್ಷಧಾರೆ ಅತಿ ಹೆಚ್ಚು ಕಾಡುತ್ತಿರೋದು ಉತ್ತರಕನ್ನಡ ಜಿಲ್ಲೆ ಹಾಗೂ ಪಶ್ಚಿಮಘಟ್ಟಗಳ ಸಾಲಿನಲ್ಲಿ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಭೂಮಿ ವರುಣನ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಅದ್ಯಾವ ಹಳೆಯ ಮುನಿಸಿತ್ತೋ ಏನೋ ಅನ್ನುವ ರೀತಿ ಈ ಭಾಗದಲ್ಲಿ ವರುಣರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಳೆಯ ಹೊಡೆತಕ್ಕೆ ಉತ್ತರ ಕನ್ನಡ ಜಿಲ್ಲೆಯ ಬೊಜ್ಜು ಭೂಮಿ ತನ್ನ ತ್ರಾಣವನ್ನೇ ಕಳೆದುಕೊಂಡಿದೆಯೋ ಏನೋ ಅನ್ನೋ ರೀತಿಯಲ್ಲಿ ಕುಸಿ ಕುಸಿದು ಬೀಳುತ್ತಿದೆ.
ಇದನ್ನೂ ಓದಿ: BREAKING: ಜೈಲಲ್ಲಿರುವ ದರ್ಶನ್ಗೆ ಇವತ್ತು ಡಬಲ್ ಶಾಕ್; ಏನಾಯ್ತು?
ಶಿರೂರು ಗುಡ್ಡ ಕುಸಿತ: ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಉತ್ತರ ಕನ್ನಡ ಜಿಲ್ಲೆ ಗುಡ್ಡದ ಭೂತ ಈಗಾಗಲೇ 8 ಮಂದಿಯನ್ನು ಬಲಿ ಪಡೆದಿರುವ ಮಣ್ಣು ಮತ್ತೆ ಮತ್ತೆ ಜರಿದು ಆತಂಕ ಸೃಷ್ಟಿಸಿದೆ. ಮಳೆ ನಡುವೆಯೂ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆಯನ್ನು ಸಿಬ್ಬಂದಿ ಮುಂದುವರೆಸಿದ್ದಾರೆ. 14 ರಿಂದ 15 ಮಂದಿ ಮಣ್ಣಿನಡಿ ಸಿಲುಕಿದ್ದಾರೆಂದ ಪ್ರತ್ಯಕ್ಷದರ್ಶಿಗಳ ಹೇಳಿಕೆ ಬೆಚ್ಚಿ ಬೀಳಿಸಿದೆ. ಈವರೆಗೆ ಒಟ್ಟು ನಾಲ್ಕು ಜನರ ಮೃತದೇಹ ಪತ್ತೆಯಾಗಿದೆ. ಇತ್ತ SDRF, NDRF, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ ಮುಂದುವರೆದಿದೆ.
ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಚರಣ ವೇಳೆ ಲಾರಿ ಜಿಪಿಎಸ್ ಲೋಕೇಷನ್ ಪತ್ತೆಯಾಗಿದೆ. ಜೋಯಿಡಾ ರಾಮನಗರದ ಜಗಳಪೆಟ್ದಿಂದ ಕಟ್ಟಿಗೆ ತುಂಬಿದ್ದ 12 ಚಕ್ರದ ಲಾರಿ ಕೇರಳಕ್ಕೆ ಪ್ರಯಾಣಿಸುತ್ತಿತ್ತು. ಶಿರೂರು ಲಕ್ಷ್ಮಣ ನಾಯ್ಕ್ರ ಹೋಟೆಲ್ನಲ್ಲಿ ಖಾಯಂ ಟೀ ಕುಡಿಯುತ್ತಿದ್ದ ಲಾರಿ ಚಾಲಕ ಅರ್ಜುನ್, ಮಂಗಳವಾರ ಬೆಳಗ್ಗೆ 4 ಗಂಟೆಗೆ ಗುಡ್ಡ ಕುಸಿತದ ಸ್ಥಳದಲ್ಲಿಯೇ ತಂಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಲಾರಿ ಸಮೇತ ಅರ್ಜುನ್ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ವಿಷಯ ತಿಳಿದು ಅರ್ಜುನ್ ಕುಟುಂಬಸ್ಥರು ಕೂಡ ಸ್ಥಳಕ್ಕಾಗಮಿಸಿದ್ದಾರೆ. ತ್ವರಿತ ಕಾರ್ಯಾಚರಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಅರ್ಜುನ್ ಸಹೋದರ ಅಭಿಜಿತ್ ಮನವಿ ಮಾಡಿದ್ದಾರೆ.
ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಕಾಣೆಯಾಗಿದ್ದ ಅವಂತಿಕಾಳ (6)ಮೃತದೇಹ ಪತ್ತೆಯಾಗಿದೆ. ಜುಲೈ 16 ರಂದು ನಡೆದ ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐವರು ಕಣ್ಮರೆಯಾಗಿದ್ದರು. ಐವರ ಪೈಕಿ ಮೂವರ ಮೃತದೇಹ ಪತ್ತೆಯಾಗಿತ್ತು. ಲಕ್ಷ್ಮಣ ನಾಯ್ಕ, ಪತ್ನಿ ಶಾಂತಿ ನಾಯ್ಕ, ಮಗ ರೋಶನ್ ನಾಯ್ಕ ಮೃತದೇಹ ಪತ್ತೆಯಾಗಿತ್ತು. ಇದೀಗ ಬಾಲಕಿ ಅವಂತಿಕಾ ಮೃತದೇಹ ಕೂಡ ಪತ್ತೆಯಾಗಿದೆ. ಕುಮಟಾ ತಾಲೂಕಿನ ಗಂಗೆಕೊಳ್ಳದ ಸಮುದ್ರ ತೀರದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಮೃತದೇಹವನ್ನು ಗೋಕರ್ಣದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಇದೇ ದುರಂತದಲ್ಲಿ ಒಟ್ಟು 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕುಮಟಾ ತಾಲೂಕಿನ ಗೋಕರ್ಣದ ದೇವರಬಾವಿಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ದೇವರ ಬಾವಿಯ ಬಳಿ ಸುಮಾರು 200 ಮೀಟರ್ವರೆಗೆ ಗುಡ್ಡ ಬಾಯಿ ತೆಗೆದುಕೊಂಡು ನಿಂತಿದೆ.. ಬಿರುಕು ಬಿಟ್ಟಿರುವ ಗುಡ್ಡದ ಭೀಕರತೆ ಎದೆ ಝಲ್ ಎನ್ನಿಸುವಂತಿದೆ. ಗುಡ್ಡದ ಕೆಳಭಾಗದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿವೆ. ವ್ಯಾಪಕ ಮಳೆಯಿಂದಾಗಿ ಹಾಗೂ ಶಿರೂರು ಗುಡ್ಡ ಕುಸಿತದ ಸುದ್ದಿ ಕೇಳಿರುವ ಅಲ್ಲಿನ ನಿವಾಸಿಗಳು ಭಯಗೊಂಡು ಮನೆಯನ್ನು ಖಾಲಿ ಮಾಡಿದ್ದಾರೆ. ಸುಮಾರು 50 ಅಡಿ ಅಗಲ ಹಾಗೂ 200 ಅಡಿ ಉದ್ದವಾದಲ್ಲಿ ಬಾಯಿ ತೆರೆದುಕೊಂಡಿರುವ ಗುಡ್ಡ ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಭಯವನ್ನು ಸೃಷ್ಟಿಸಿದೆ.
ಇದನ್ನೂ ಓದಿ: ಪಂಚೆ ತೊಟ್ಟ ರೈತನಿಗೆ G T ಮಾಲ್ ಅಪಮಾನ; ತಕ್ಕಪಾಠ ಕಲಿಸಿದ BBMP; 7 ದಿನಗಳ ಕಾಲ ಬಂದ್!
ಮನೆ ಗೋಡೆ ಕುಸಿತ, ಕ್ಷಣಾರ್ಧದಲ್ಲಿ ಬಚಾವ್ ಆದ ಕುಟುಂಬ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿನ ಗೋಲಿಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದಿದೆ. ಗೋಲಿಹಳ್ಳಿ ಗ್ರಾಮದ ಶಿವಪ್ಪಾ ನಿಂಗಪ್ಪಾ ಕಮತಗಿ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿತಕೊಂಡು, ಮನೆಯಲ್ಲಿ ಮಲಗಿದ್ದ ಕುಟುಂಬಸ್ಥರು ತಕ್ಷಣವೇ ಮನೆಯಿಂದ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ.ಮಳೆಯ ರಣಾರ್ಭಟದಿಂದ ಅಂಕೋಲಾದ ಶಿರೂರು ಬಳಿ ಗುಡ್ಡ ಘಟನೆಯ ಬೆನ್ನಲ್ಲೇ ಶಿರಾಡಿ ಘಾಟ್ ರಸ್ತೆಯಲ್ಲಿ ಇಂತಹದೇ ದುರ್ಘಟನೆ ನಡೆದಿದೆ. ಏಕಾಏಕಿ ಮಣ್ಣು ಗುಡ್ಡ ಕುಸಿದಿದೆ. ಪರಿಣಾಮ ಮಾರುತಿ ಸುಜುಕಿ ಕಂಪನಿಯ ಓಮಿನಿ ಕಾರು ಮಣ್ಣಿನಲ್ಲಿ ಸಿಲುಕಿಕೊಂಡಿದೆ.ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆದಿದೆ. ಸಕಲೇಶಪುರ ತಾಲ್ಲೂಕಿನ, ಎತ್ತಿನಹಳ್ಳ ಬಳಿ ಮಳೆಯ ಅಬ್ಬರದಿಂದ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮಣ್ಣು ಕುಸಿದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.KA-17 M 5003 ನಂಬರ್ನ ಓಮ್ನಿ ಕಾರು ಮಣ್ಣಿನಡಿ ಸಿಲುಕಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಂದಾಯ ಇಲಾಖೆ ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಳೆಯ ಅಬ್ಬರ, 5 ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜಿಗೆ ರಜೆ
ಉತ್ತರ ಕನ್ನಡದಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ಜಿಲ್ಲೆಯ ಹತ್ತು ತಾಲೂಕಿನ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹಾಗೆ ದಕ್ಷಿಣ ಕನ್ನಡದಲ್ಲೂ ರೆಡ್ ಅಲರ್ಟ್ ಇರುವ ಕಾರಣ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ಸೇರಿ 5 ತಾಲೂಕಿನ ವಿದ್ಯಾರ್ಥಿಗಳಿಗೆ ರಜೆಯನ್ನ ಸೂಚಿಸಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಸೇರಿ 5 ತಾಲೂಕಿನ ಶಿಕ್ಷಣ ಸಂಸ್ಥೆಗೆ ರಜೆ ಆದೇಶ ಹೊರಡಿಸಲಾಗಿದೆ. ಕೊಡಗಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನ ಹೊರತು ಪಡಿಸಿ, ಮಿಕ್ಕ ಎಲ್ಲಾ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ಡಿಡಿಪಿಐ ಆದೇಶಿಸಿದ್ದಾರೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನದ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್.. ಇರಾನ್ ಕಡೆಗೆ ದೃಷ್ಟಿ ಸರಿದಿದ್ದು ಏಕೆ?
ನಿಲ್ಲದ ಮುಸಲಧಾರೆ: ತುಂಬಿ ಹರಿಯುತ್ತಿರುವ ರಾಜ್ಯದ ಪ್ರಮುಖ ನದಿಗಳು
ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಅಘನಾಶಿನಿ, ವರದಾ ಹಾಗೂ ಬೇಡ್ತಿ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಪಾತಗಳಿಗೆ ನಿರ್ಬಂಧ ವಿಧಿಸಿ ಅರಣ್ಯ ಇಲಾಖೆ ಆದೇಶಿಸಿದೆ. ಯಲ್ಲಾಪುರದ ಮಾಗೋಡು, ಸಾತೋಡ್ಡಿ, ಶಿರಸಿಯ ಮುರೇಗಾರ, ಶಿವಗಂಗಾ, ಬೆಣ್ಣೆಹೊಳೆ ಜಲಪಾತ, ಸಿದ್ದಾಪುರದ ಉಂಚಳ್ಳಿ, ಬುರುಡೆ ಜಲಪಾತ ಸೇರಿದಂತೆ ಹಲವು ಜಲಪಾತಗಳಿಗೆ ನಿರ್ಬಂಧ ಹೇರಲಾಗಿದೆ
ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ಕಬಿನಿ ಜಲಾಶಯ ಭರ್ತಿಯಾಗಿದ್ದು, ನಂಜನಗೂಡಿನ ಪರಶುರಾಮ ದೇವಸ್ಥಾನ ಮುಳುಗಡೆಯಾಗಿದೆ.ಮಳೆಯಿಂದಾಗಿ ಕಬಿನಿ ಜಲಾಶಯ ತುಂಬಿ ಹರಿಯುತ್ತಿದೆ. ಹೀಗಾಗಿ 36 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಮಳೆಯಿಂದಾಗಿ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ನಂಜನಗೂಡಿನ ಪರಶುರಾಮ ದೇವಸ್ಥಾನ ಮುಳುಗಡೆಯಾಗಿದೆ.ಕಪಿಲಾ ನದಿಗೆ ನೀರು ಬಿಡುಗಡೆ ಹಿನ್ನೆಲೆ, ನದಿ ದಡದ ನಿವಾಸಿಗಳು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಕಬಿನಿ ಡ್ಯಾಂ ಉಕ್ಕಿ ಹರಿಯುತ್ತಿದ್ದು, ಅಲ್ಲಿನ ನಿವಾಸಿಗಳು ಮನೆ ಖಾಲಿ ಮಾಡುತ್ತಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಮುಂದುವರೆದಿದ್ದು, ಕೆಆರ್ಎಸ್ ಡ್ಯಾಂಗೆ ಜೀವಕಳೆ ತುಂಬಿದೆ.ಇಂದು ಕೆಆರ್ಎಸ್ಗೆ 36,772 ಕ್ಯೂಸೆಕ್ ಒಳಹರಿವು ಹರಿದುಬಂದಿದೆ. ಮಳೆಯಿಂದಾಗಿ ಕೆಆರ್ಎಸ್ ನೀರಿನ ಮಟ್ಟ ದಿನೇದಿನೇ ಹೆಚ್ಚಾಗುತ್ತಿದೆ. ಈಗಾಗಲೇ 113.40 ಅಡಿಗೆ ನೀರಿನ ಮಟ್ಟ ತಲುಪಿದೆ.ಒಂದು ವಾರದಲ್ಲಿ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ 11 ಅಡಿಯಷ್ಟು ಭರ್ತಿಯಾಗಿದೆ. ಕಳೆದ ವಾರ ಕೆಆರ್ಎಸ್ನಲ್ಲಿ 104.30 ಅಡಿ ನೀರಿತ್ತು. ಆದರೀಗ ಮಳೆಯಿಂದಾಗಿ ಡ್ಯಾಂನ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇನ್ನು ಕೆಆರ್ಎಸ್ ಭರ್ತಿಗೆ 11 ಅಡಿ ಮಾತ್ರ ಬಾಕಿ ಇದೆ. ನೀರಿನ ಸಾಮರ್ಥ್ಯದಲ್ಲೂ ಸಹ ಗಣನೀಯ ಏರಿಕೆ ಕಂಡಿದ್ದು, ಒಂದು ವಾರದಲ್ಲಿ 9 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವಾರ 26.372 ಟಿಎಂಸಿಯಷ್ಟು ಶೇಖರಣೆಯಾಗಿತ್ತು. ಇಂದು 35.282 ಟಿಎಂಸಿ ನೀರು ಶೇಖರಣೆಯಾಗಿದೆ.
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 113.40 ಅಡಿ.
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ.
ಇಂದಿನ ಸಾಮರ್ಥ್ಯ – 35.282 ಟಿಎಂಸಿ
ಒಳ ಹರಿವು – 36,772 ಕ್ಯೂಸೆಕ್
ಹೊರ ಹರಿವು – 2,448 ಕ್ಯೂಸೆಕ್
ಒಟ್ಟಾರೆ, ರಾಜ್ಯದಲ್ಲಿ ಮಳೆ ಮತ್ತೆ ಅಬ್ಬರಿಸುವ ಸಾಧ್ಯತೆ ಇದೆ. ಹೀಗಾಗಿ ಜನರೇ ಬಿ. ಅಲರ್ಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಲ್ಲದ ಮಳೆರಾಯನ ಅಟ್ಟಹಾಸ, ಉತ್ತರ ಕನ್ನಡ ಜಿಲ್ಲೆಗೆ ಗುಡ್ಡದ ಭೂತ
ಸುರಿಯುತ್ತಿರುವ ಮುಸಲಧಾರೆ ಮಾಡಿರುವ ಅವಾಂತರಗಳೇನು?
ನದಿ, ಜಲಪಾತಗಳತ್ತ ಪ್ರವಾಸ ಮುಂದೂಡುವುದು ಒಳಿತು
ಬೆಂಗಳೂರು: ರಾಜ್ಯಾದ್ಯಂತ ವರುಣ ವಿಶ್ರಾಂತಿಯೆಂಬುದನ್ನೇ ಮರೆತು ಒಂದೇ ಸಮನೆ ಸುರಿಯುತ್ತಲೇ ಇದ್ದಾನೆ. ಬಿಸಿಲ ಬೇಗೆಗೆ ಬೆಂದ ರಾಜ್ಯಕ್ಕೆ ವರುಣ ಆಗಮಿಸಿದ್ದು ಆರಂಭದಲ್ಲಿ ದೊಡ್ಡ ಖುಷಿ ನೀಡಿತ್ತು.. ಆದರೆ ವಿರಾಮವಿಲ್ಲದೇ ನಿರಂತರ ಆರ್ಭಟಿಸುತ್ತಿರುವ ವರುಣರಾಯ ಹಲವು ಅವಾಂತರಗಳನ್ನು ಸೃಷ್ಟಿಸಿದ್ದಾನೆ.. ರಾಜ್ಯದಲ್ಲಿ ವರುಣನ ಸೃಷ್ಟಿಸಿರುವ ಅವಾಂತರಗಳನ್ನು ಅನಾಹುತಗಳು ಏನೇನೂ ಅನ್ನೋದರ ಸಂಪೂರ್ಣ ವರದಿಯನ್ನು ಈ ಒಂದು ಸ್ಟೋರಿಯಲ್ಲಿ ನಾವು ನಿಮಗೆ ಕಟ್ಟಿಕೊಡುತ್ತಾ ಹೋಗುತ್ತೇವೆ.
ರಾಜ್ಯದಲ್ಲಿ ಅಬ್ಬರಿಸುತ್ತಿರುವ ವರ್ಷಧಾರೆ ಅತಿ ಹೆಚ್ಚು ಕಾಡುತ್ತಿರೋದು ಉತ್ತರಕನ್ನಡ ಜಿಲ್ಲೆ ಹಾಗೂ ಪಶ್ಚಿಮಘಟ್ಟಗಳ ಸಾಲಿನಲ್ಲಿ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಭೂಮಿ ವರುಣನ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಅದ್ಯಾವ ಹಳೆಯ ಮುನಿಸಿತ್ತೋ ಏನೋ ಅನ್ನುವ ರೀತಿ ಈ ಭಾಗದಲ್ಲಿ ವರುಣರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮಳೆಯ ಹೊಡೆತಕ್ಕೆ ಉತ್ತರ ಕನ್ನಡ ಜಿಲ್ಲೆಯ ಬೊಜ್ಜು ಭೂಮಿ ತನ್ನ ತ್ರಾಣವನ್ನೇ ಕಳೆದುಕೊಂಡಿದೆಯೋ ಏನೋ ಅನ್ನೋ ರೀತಿಯಲ್ಲಿ ಕುಸಿ ಕುಸಿದು ಬೀಳುತ್ತಿದೆ.
ಇದನ್ನೂ ಓದಿ: BREAKING: ಜೈಲಲ್ಲಿರುವ ದರ್ಶನ್ಗೆ ಇವತ್ತು ಡಬಲ್ ಶಾಕ್; ಏನಾಯ್ತು?
ಶಿರೂರು ಗುಡ್ಡ ಕುಸಿತ: ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಉತ್ತರ ಕನ್ನಡ ಜಿಲ್ಲೆ ಗುಡ್ಡದ ಭೂತ ಈಗಾಗಲೇ 8 ಮಂದಿಯನ್ನು ಬಲಿ ಪಡೆದಿರುವ ಮಣ್ಣು ಮತ್ತೆ ಮತ್ತೆ ಜರಿದು ಆತಂಕ ಸೃಷ್ಟಿಸಿದೆ. ಮಳೆ ನಡುವೆಯೂ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆಯನ್ನು ಸಿಬ್ಬಂದಿ ಮುಂದುವರೆಸಿದ್ದಾರೆ. 14 ರಿಂದ 15 ಮಂದಿ ಮಣ್ಣಿನಡಿ ಸಿಲುಕಿದ್ದಾರೆಂದ ಪ್ರತ್ಯಕ್ಷದರ್ಶಿಗಳ ಹೇಳಿಕೆ ಬೆಚ್ಚಿ ಬೀಳಿಸಿದೆ. ಈವರೆಗೆ ಒಟ್ಟು ನಾಲ್ಕು ಜನರ ಮೃತದೇಹ ಪತ್ತೆಯಾಗಿದೆ. ಇತ್ತ SDRF, NDRF, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ ಮುಂದುವರೆದಿದೆ.
ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಚರಣ ವೇಳೆ ಲಾರಿ ಜಿಪಿಎಸ್ ಲೋಕೇಷನ್ ಪತ್ತೆಯಾಗಿದೆ. ಜೋಯಿಡಾ ರಾಮನಗರದ ಜಗಳಪೆಟ್ದಿಂದ ಕಟ್ಟಿಗೆ ತುಂಬಿದ್ದ 12 ಚಕ್ರದ ಲಾರಿ ಕೇರಳಕ್ಕೆ ಪ್ರಯಾಣಿಸುತ್ತಿತ್ತು. ಶಿರೂರು ಲಕ್ಷ್ಮಣ ನಾಯ್ಕ್ರ ಹೋಟೆಲ್ನಲ್ಲಿ ಖಾಯಂ ಟೀ ಕುಡಿಯುತ್ತಿದ್ದ ಲಾರಿ ಚಾಲಕ ಅರ್ಜುನ್, ಮಂಗಳವಾರ ಬೆಳಗ್ಗೆ 4 ಗಂಟೆಗೆ ಗುಡ್ಡ ಕುಸಿತದ ಸ್ಥಳದಲ್ಲಿಯೇ ತಂಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಲಾರಿ ಸಮೇತ ಅರ್ಜುನ್ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ವಿಷಯ ತಿಳಿದು ಅರ್ಜುನ್ ಕುಟುಂಬಸ್ಥರು ಕೂಡ ಸ್ಥಳಕ್ಕಾಗಮಿಸಿದ್ದಾರೆ. ತ್ವರಿತ ಕಾರ್ಯಾಚರಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಅರ್ಜುನ್ ಸಹೋದರ ಅಭಿಜಿತ್ ಮನವಿ ಮಾಡಿದ್ದಾರೆ.
ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಕಾಣೆಯಾಗಿದ್ದ ಅವಂತಿಕಾಳ (6)ಮೃತದೇಹ ಪತ್ತೆಯಾಗಿದೆ. ಜುಲೈ 16 ರಂದು ನಡೆದ ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐವರು ಕಣ್ಮರೆಯಾಗಿದ್ದರು. ಐವರ ಪೈಕಿ ಮೂವರ ಮೃತದೇಹ ಪತ್ತೆಯಾಗಿತ್ತು. ಲಕ್ಷ್ಮಣ ನಾಯ್ಕ, ಪತ್ನಿ ಶಾಂತಿ ನಾಯ್ಕ, ಮಗ ರೋಶನ್ ನಾಯ್ಕ ಮೃತದೇಹ ಪತ್ತೆಯಾಗಿತ್ತು. ಇದೀಗ ಬಾಲಕಿ ಅವಂತಿಕಾ ಮೃತದೇಹ ಕೂಡ ಪತ್ತೆಯಾಗಿದೆ. ಕುಮಟಾ ತಾಲೂಕಿನ ಗಂಗೆಕೊಳ್ಳದ ಸಮುದ್ರ ತೀರದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಮೃತದೇಹವನ್ನು ಗೋಕರ್ಣದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಇದೇ ದುರಂತದಲ್ಲಿ ಒಟ್ಟು 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕುಮಟಾ ತಾಲೂಕಿನ ಗೋಕರ್ಣದ ದೇವರಬಾವಿಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ದೇವರ ಬಾವಿಯ ಬಳಿ ಸುಮಾರು 200 ಮೀಟರ್ವರೆಗೆ ಗುಡ್ಡ ಬಾಯಿ ತೆಗೆದುಕೊಂಡು ನಿಂತಿದೆ.. ಬಿರುಕು ಬಿಟ್ಟಿರುವ ಗುಡ್ಡದ ಭೀಕರತೆ ಎದೆ ಝಲ್ ಎನ್ನಿಸುವಂತಿದೆ. ಗುಡ್ಡದ ಕೆಳಭಾಗದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿವೆ. ವ್ಯಾಪಕ ಮಳೆಯಿಂದಾಗಿ ಹಾಗೂ ಶಿರೂರು ಗುಡ್ಡ ಕುಸಿತದ ಸುದ್ದಿ ಕೇಳಿರುವ ಅಲ್ಲಿನ ನಿವಾಸಿಗಳು ಭಯಗೊಂಡು ಮನೆಯನ್ನು ಖಾಲಿ ಮಾಡಿದ್ದಾರೆ. ಸುಮಾರು 50 ಅಡಿ ಅಗಲ ಹಾಗೂ 200 ಅಡಿ ಉದ್ದವಾದಲ್ಲಿ ಬಾಯಿ ತೆರೆದುಕೊಂಡಿರುವ ಗುಡ್ಡ ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಭಯವನ್ನು ಸೃಷ್ಟಿಸಿದೆ.
ಇದನ್ನೂ ಓದಿ: ಪಂಚೆ ತೊಟ್ಟ ರೈತನಿಗೆ G T ಮಾಲ್ ಅಪಮಾನ; ತಕ್ಕಪಾಠ ಕಲಿಸಿದ BBMP; 7 ದಿನಗಳ ಕಾಲ ಬಂದ್!
ಮನೆ ಗೋಡೆ ಕುಸಿತ, ಕ್ಷಣಾರ್ಧದಲ್ಲಿ ಬಚಾವ್ ಆದ ಕುಟುಂಬ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿನ ಗೋಲಿಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದಿದೆ. ಗೋಲಿಹಳ್ಳಿ ಗ್ರಾಮದ ಶಿವಪ್ಪಾ ನಿಂಗಪ್ಪಾ ಕಮತಗಿ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿತಕೊಂಡು, ಮನೆಯಲ್ಲಿ ಮಲಗಿದ್ದ ಕುಟುಂಬಸ್ಥರು ತಕ್ಷಣವೇ ಮನೆಯಿಂದ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ.ಮಳೆಯ ರಣಾರ್ಭಟದಿಂದ ಅಂಕೋಲಾದ ಶಿರೂರು ಬಳಿ ಗುಡ್ಡ ಘಟನೆಯ ಬೆನ್ನಲ್ಲೇ ಶಿರಾಡಿ ಘಾಟ್ ರಸ್ತೆಯಲ್ಲಿ ಇಂತಹದೇ ದುರ್ಘಟನೆ ನಡೆದಿದೆ. ಏಕಾಏಕಿ ಮಣ್ಣು ಗುಡ್ಡ ಕುಸಿದಿದೆ. ಪರಿಣಾಮ ಮಾರುತಿ ಸುಜುಕಿ ಕಂಪನಿಯ ಓಮಿನಿ ಕಾರು ಮಣ್ಣಿನಲ್ಲಿ ಸಿಲುಕಿಕೊಂಡಿದೆ.ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆದಿದೆ. ಸಕಲೇಶಪುರ ತಾಲ್ಲೂಕಿನ, ಎತ್ತಿನಹಳ್ಳ ಬಳಿ ಮಳೆಯ ಅಬ್ಬರದಿಂದ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮಣ್ಣು ಕುಸಿದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.KA-17 M 5003 ನಂಬರ್ನ ಓಮ್ನಿ ಕಾರು ಮಣ್ಣಿನಡಿ ಸಿಲುಕಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಂದಾಯ ಇಲಾಖೆ ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಳೆಯ ಅಬ್ಬರ, 5 ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜಿಗೆ ರಜೆ
ಉತ್ತರ ಕನ್ನಡದಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ಜಿಲ್ಲೆಯ ಹತ್ತು ತಾಲೂಕಿನ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹಾಗೆ ದಕ್ಷಿಣ ಕನ್ನಡದಲ್ಲೂ ರೆಡ್ ಅಲರ್ಟ್ ಇರುವ ಕಾರಣ ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ ಸೇರಿ 5 ತಾಲೂಕಿನ ವಿದ್ಯಾರ್ಥಿಗಳಿಗೆ ರಜೆಯನ್ನ ಸೂಚಿಸಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಸೇರಿ 5 ತಾಲೂಕಿನ ಶಿಕ್ಷಣ ಸಂಸ್ಥೆಗೆ ರಜೆ ಆದೇಶ ಹೊರಡಿಸಲಾಗಿದೆ. ಕೊಡಗಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನ ಹೊರತು ಪಡಿಸಿ, ಮಿಕ್ಕ ಎಲ್ಲಾ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ಡಿಡಿಪಿಐ ಆದೇಶಿಸಿದ್ದಾರೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನದ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್.. ಇರಾನ್ ಕಡೆಗೆ ದೃಷ್ಟಿ ಸರಿದಿದ್ದು ಏಕೆ?
ನಿಲ್ಲದ ಮುಸಲಧಾರೆ: ತುಂಬಿ ಹರಿಯುತ್ತಿರುವ ರಾಜ್ಯದ ಪ್ರಮುಖ ನದಿಗಳು
ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಅಘನಾಶಿನಿ, ವರದಾ ಹಾಗೂ ಬೇಡ್ತಿ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಪಾತಗಳಿಗೆ ನಿರ್ಬಂಧ ವಿಧಿಸಿ ಅರಣ್ಯ ಇಲಾಖೆ ಆದೇಶಿಸಿದೆ. ಯಲ್ಲಾಪುರದ ಮಾಗೋಡು, ಸಾತೋಡ್ಡಿ, ಶಿರಸಿಯ ಮುರೇಗಾರ, ಶಿವಗಂಗಾ, ಬೆಣ್ಣೆಹೊಳೆ ಜಲಪಾತ, ಸಿದ್ದಾಪುರದ ಉಂಚಳ್ಳಿ, ಬುರುಡೆ ಜಲಪಾತ ಸೇರಿದಂತೆ ಹಲವು ಜಲಪಾತಗಳಿಗೆ ನಿರ್ಬಂಧ ಹೇರಲಾಗಿದೆ
ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ಕಬಿನಿ ಜಲಾಶಯ ಭರ್ತಿಯಾಗಿದ್ದು, ನಂಜನಗೂಡಿನ ಪರಶುರಾಮ ದೇವಸ್ಥಾನ ಮುಳುಗಡೆಯಾಗಿದೆ.ಮಳೆಯಿಂದಾಗಿ ಕಬಿನಿ ಜಲಾಶಯ ತುಂಬಿ ಹರಿಯುತ್ತಿದೆ. ಹೀಗಾಗಿ 36 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಮಳೆಯಿಂದಾಗಿ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ನಂಜನಗೂಡಿನ ಪರಶುರಾಮ ದೇವಸ್ಥಾನ ಮುಳುಗಡೆಯಾಗಿದೆ.ಕಪಿಲಾ ನದಿಗೆ ನೀರು ಬಿಡುಗಡೆ ಹಿನ್ನೆಲೆ, ನದಿ ದಡದ ನಿವಾಸಿಗಳು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಕಬಿನಿ ಡ್ಯಾಂ ಉಕ್ಕಿ ಹರಿಯುತ್ತಿದ್ದು, ಅಲ್ಲಿನ ನಿವಾಸಿಗಳು ಮನೆ ಖಾಲಿ ಮಾಡುತ್ತಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಮುಂದುವರೆದಿದ್ದು, ಕೆಆರ್ಎಸ್ ಡ್ಯಾಂಗೆ ಜೀವಕಳೆ ತುಂಬಿದೆ.ಇಂದು ಕೆಆರ್ಎಸ್ಗೆ 36,772 ಕ್ಯೂಸೆಕ್ ಒಳಹರಿವು ಹರಿದುಬಂದಿದೆ. ಮಳೆಯಿಂದಾಗಿ ಕೆಆರ್ಎಸ್ ನೀರಿನ ಮಟ್ಟ ದಿನೇದಿನೇ ಹೆಚ್ಚಾಗುತ್ತಿದೆ. ಈಗಾಗಲೇ 113.40 ಅಡಿಗೆ ನೀರಿನ ಮಟ್ಟ ತಲುಪಿದೆ.ಒಂದು ವಾರದಲ್ಲಿ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ 11 ಅಡಿಯಷ್ಟು ಭರ್ತಿಯಾಗಿದೆ. ಕಳೆದ ವಾರ ಕೆಆರ್ಎಸ್ನಲ್ಲಿ 104.30 ಅಡಿ ನೀರಿತ್ತು. ಆದರೀಗ ಮಳೆಯಿಂದಾಗಿ ಡ್ಯಾಂನ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇನ್ನು ಕೆಆರ್ಎಸ್ ಭರ್ತಿಗೆ 11 ಅಡಿ ಮಾತ್ರ ಬಾಕಿ ಇದೆ. ನೀರಿನ ಸಾಮರ್ಥ್ಯದಲ್ಲೂ ಸಹ ಗಣನೀಯ ಏರಿಕೆ ಕಂಡಿದ್ದು, ಒಂದು ವಾರದಲ್ಲಿ 9 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವಾರ 26.372 ಟಿಎಂಸಿಯಷ್ಟು ಶೇಖರಣೆಯಾಗಿತ್ತು. ಇಂದು 35.282 ಟಿಎಂಸಿ ನೀರು ಶೇಖರಣೆಯಾಗಿದೆ.
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 113.40 ಅಡಿ.
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ.
ಇಂದಿನ ಸಾಮರ್ಥ್ಯ – 35.282 ಟಿಎಂಸಿ
ಒಳ ಹರಿವು – 36,772 ಕ್ಯೂಸೆಕ್
ಹೊರ ಹರಿವು – 2,448 ಕ್ಯೂಸೆಕ್
ಒಟ್ಟಾರೆ, ರಾಜ್ಯದಲ್ಲಿ ಮಳೆ ಮತ್ತೆ ಅಬ್ಬರಿಸುವ ಸಾಧ್ಯತೆ ಇದೆ. ಹೀಗಾಗಿ ಜನರೇ ಬಿ. ಅಲರ್ಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ