ವಾರಣಾಸಿಗೆ ತೆರಳಿದ್ದ ಕಲಬುರಗಿ ಮೂಲದ ಒಂದೇ ಕುಟುಂಬ
4 ದಿನಗಳ ಹಿಂದೆ ರೈಲಿನ ಮೂಲಕ ವಾರಣಾಸಿ ಹೊರಟಿದ್ದ ಕುಟುಂಬ
ಒಂದೇ ಕುಟುಂಬದ 22 ಮಂದಿ ಇದ್ದ ಟೆಂಪೋಗೆ ಟ್ರಕ್ ಡಿಕ್ಕಿ, 3 ಸಾವು
ಕಲಬುರಗಿ: ಅಯೋಧ್ಯೆಯ ಪ್ರಯಾಗ್ರಾಜ್ ಹೆದ್ದಾರಿಯಲ್ಲಿ ಕಲಬುರಗಿಯ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಸಾವನ್ನಪ್ಪಿದವರನ್ನು ಕಲಬುರಗಿಯ ಓಂನಗರದವರು ಎಂದು ಗುರುತಿಸಲಾಗಿದೆ.
ಒಂದೇ ಕುಟುಂಬದ 22 ಮಂದಿ ಟೆಂಪೋ ಮೂಲಕ ಅಯೋಧ್ಯೆಗೆ ತೆರಳುತ್ತಿದ್ದರು. ಈ ವೇಳೆ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಮೂರುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 11 ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಇಬ್ಬರನ್ನು ಶಿವರಾಜ್, ತಂಗೆಮ್ಮ ಎಂದು ಗುರುತಿಸಲಾಗಿದೆ. ಮತ್ತೋರ್ವರ ಹೆಸರು ತಿಳಿದುಬಂದಿಲ್ಲ.
ಇದನ್ನೂ ಓದಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ
ಮೃತರ ಸಂಬಂಧಿ ಈ ಬಗ್ಗೆ ಮಾತನಾಡಿದ್ದು, ನಾಲ್ಕು ದಿನಗಳ ಹಿಂದೆ ರೈಲಿನ ಮೂಲಕ ವಾರಣಾಸಿ ತೆರಳಿದ್ದರು. ಅಲ್ಲಿಂದ ಅಯೋಧ್ಯೆಗೆ 30 ಕಿ.ಮೀ ದೂರವಿದ್ದ ಕಾರಣ ಬಾಡಿಗೆ ಟೆಂಪೋ ಬಾಡಿಗೆಗೆ ಪಡೆದರು. ಆದರೆ ತೆರಳುವ ವೇಳೆ ಪ್ರಯಾಗ್ ರಾಜ್ ಹೆದ್ದಾರಿಯಲ್ಲಿ ಟ್ರಕ್ಗೆ ಟೆಂಪೋ ಡಿಕ್ಕಿ ಹೊಡೆದಿದೆ. 3 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಾರಣಾಸಿಗೆ ತೆರಳಿದ್ದ ಕಲಬುರಗಿ ಮೂಲದ ಒಂದೇ ಕುಟುಂಬ
4 ದಿನಗಳ ಹಿಂದೆ ರೈಲಿನ ಮೂಲಕ ವಾರಣಾಸಿ ಹೊರಟಿದ್ದ ಕುಟುಂಬ
ಒಂದೇ ಕುಟುಂಬದ 22 ಮಂದಿ ಇದ್ದ ಟೆಂಪೋಗೆ ಟ್ರಕ್ ಡಿಕ್ಕಿ, 3 ಸಾವು
ಕಲಬುರಗಿ: ಅಯೋಧ್ಯೆಯ ಪ್ರಯಾಗ್ರಾಜ್ ಹೆದ್ದಾರಿಯಲ್ಲಿ ಕಲಬುರಗಿಯ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಸಾವನ್ನಪ್ಪಿದವರನ್ನು ಕಲಬುರಗಿಯ ಓಂನಗರದವರು ಎಂದು ಗುರುತಿಸಲಾಗಿದೆ.
ಒಂದೇ ಕುಟುಂಬದ 22 ಮಂದಿ ಟೆಂಪೋ ಮೂಲಕ ಅಯೋಧ್ಯೆಗೆ ತೆರಳುತ್ತಿದ್ದರು. ಈ ವೇಳೆ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಮೂರುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 11 ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಇಬ್ಬರನ್ನು ಶಿವರಾಜ್, ತಂಗೆಮ್ಮ ಎಂದು ಗುರುತಿಸಲಾಗಿದೆ. ಮತ್ತೋರ್ವರ ಹೆಸರು ತಿಳಿದುಬಂದಿಲ್ಲ.
ಇದನ್ನೂ ಓದಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ
ಮೃತರ ಸಂಬಂಧಿ ಈ ಬಗ್ಗೆ ಮಾತನಾಡಿದ್ದು, ನಾಲ್ಕು ದಿನಗಳ ಹಿಂದೆ ರೈಲಿನ ಮೂಲಕ ವಾರಣಾಸಿ ತೆರಳಿದ್ದರು. ಅಲ್ಲಿಂದ ಅಯೋಧ್ಯೆಗೆ 30 ಕಿ.ಮೀ ದೂರವಿದ್ದ ಕಾರಣ ಬಾಡಿಗೆ ಟೆಂಪೋ ಬಾಡಿಗೆಗೆ ಪಡೆದರು. ಆದರೆ ತೆರಳುವ ವೇಳೆ ಪ್ರಯಾಗ್ ರಾಜ್ ಹೆದ್ದಾರಿಯಲ್ಲಿ ಟ್ರಕ್ಗೆ ಟೆಂಪೋ ಡಿಕ್ಕಿ ಹೊಡೆದಿದೆ. 3 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ