newsfirstkannada.com

VIDEO: ನಿದ್ದೆಗಣ್ಣಿನಲ್ಲಿ ಡಿವೈಡರ್​ ​ಎಗರಿ ಟ್ರಕ್​ಗೆ ಡಿಕ್ಕಿ ಹೊಡೆದ ಕಾರು.. 6 ಜನರ ಸಾವನ್ನ ಕಣ್ಣಾರೆ ಕಂಡ ಲಾರಿ ಚಾಲಕ

Share :

Published May 26, 2024 at 10:41am

Update May 26, 2024 at 10:43am

    ಬೆಳಗ್ಗಿನ ಜಾವ 5:30ರ ವೇಳೆಗೆ ನಡೆದ ಭೀಕರ ಅಪಘಾತ

    ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜು, ಸ್ಥಳದಲ್ಲೇ ಎಲ್ಲರ ಸಾವು

    ಮೃತದೇಹವನ್ನು ಹೊರ ತೆಗೆಯಲು ಹರಸಾಹಸ ಪಟ್ಟ ಪೊಲೀಸರು

ಹಾಸನ: ಕಾರು ಮತ್ತು ಟ್ರಕ್​ ಭೀಕರ ಅಪಘಾತವಾದ ಘಟನೆ ಹಾಸನ ಹೊರವಲಯದ ಈಚನಹಳ್ಳಿ ಬಳಿ ನಡೆದಿದೆ. ಕಾರು ಡ್ರೈವರ್​ ನಿದ್ದೆಗಣ್ಣಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರ ಮೃತದೇಹ ಛಿದ್ರ ಛಿಧ್ರವಾಗಿದೆ.

ಬೆಳಗ್ಗಿನ ಜಾವ 5:30ರ ವೇಳೆ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಬಂದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಎಗರಿದೆ. ಎಗರಿದ ರಭಸಕ್ಕೆ ಟ್ರಕ್​ಗೆ ಹೋಗಿ ಗುದ್ದಿದೆ. ಮೃತರನ್ನ ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ (ಬಾಲಕ), ರಾಕೇಶ್ (ಡ್ರೈವರ್) ಎಂದು ಗುರುತಿಸಲಾಗಿದೆ.

ಮೃತರು ಹೊಸಕೋಟೆ ತಾಲ್ಲೂಕಿನ ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು ಎಂದು ಪತ್ತೆಹಚ್ಚಲಾಗಿದೆ. ಇನ್ನು ಕಾರಿನಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರಗೆ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಇದನ್ನೂ ಓದಿ: ಮೇಕೆ ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ.. ವ್ಯಾಘ್ರ ತಿಂದು ತೇಗಿದ ಮೃತದೇಹಕ್ಕಾಗಿ ಹುಡುಕಾಟ 

ಪೊಲಿಸರು ಮತ್ತು ಜೆಸಿಬಿ ಸಹಾಯದ ಮೂಲಕ ಕಾರಿನಲ್ಲಿದ್ದ ಮೃತದೇಹ ಹೊರ ತೆಗೆಯಲಾಗಿದೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

VIDEO: ನಿದ್ದೆಗಣ್ಣಿನಲ್ಲಿ ಡಿವೈಡರ್​ ​ಎಗರಿ ಟ್ರಕ್​ಗೆ ಡಿಕ್ಕಿ ಹೊಡೆದ ಕಾರು.. 6 ಜನರ ಸಾವನ್ನ ಕಣ್ಣಾರೆ ಕಂಡ ಲಾರಿ ಚಾಲಕ

https://newsfirstlive.com/wp-content/uploads/2024/05/Hassan-1-1.jpg

    ಬೆಳಗ್ಗಿನ ಜಾವ 5:30ರ ವೇಳೆಗೆ ನಡೆದ ಭೀಕರ ಅಪಘಾತ

    ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜು, ಸ್ಥಳದಲ್ಲೇ ಎಲ್ಲರ ಸಾವು

    ಮೃತದೇಹವನ್ನು ಹೊರ ತೆಗೆಯಲು ಹರಸಾಹಸ ಪಟ್ಟ ಪೊಲೀಸರು

ಹಾಸನ: ಕಾರು ಮತ್ತು ಟ್ರಕ್​ ಭೀಕರ ಅಪಘಾತವಾದ ಘಟನೆ ಹಾಸನ ಹೊರವಲಯದ ಈಚನಹಳ್ಳಿ ಬಳಿ ನಡೆದಿದೆ. ಕಾರು ಡ್ರೈವರ್​ ನಿದ್ದೆಗಣ್ಣಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರ ಮೃತದೇಹ ಛಿದ್ರ ಛಿಧ್ರವಾಗಿದೆ.

ಬೆಳಗ್ಗಿನ ಜಾವ 5:30ರ ವೇಳೆ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಬಂದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಎಗರಿದೆ. ಎಗರಿದ ರಭಸಕ್ಕೆ ಟ್ರಕ್​ಗೆ ಹೋಗಿ ಗುದ್ದಿದೆ. ಮೃತರನ್ನ ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ (ಬಾಲಕ), ರಾಕೇಶ್ (ಡ್ರೈವರ್) ಎಂದು ಗುರುತಿಸಲಾಗಿದೆ.

ಮೃತರು ಹೊಸಕೋಟೆ ತಾಲ್ಲೂಕಿನ ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು ಎಂದು ಪತ್ತೆಹಚ್ಚಲಾಗಿದೆ. ಇನ್ನು ಕಾರಿನಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರಗೆ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಇದನ್ನೂ ಓದಿ: ಮೇಕೆ ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ.. ವ್ಯಾಘ್ರ ತಿಂದು ತೇಗಿದ ಮೃತದೇಹಕ್ಕಾಗಿ ಹುಡುಕಾಟ 

ಪೊಲಿಸರು ಮತ್ತು ಜೆಸಿಬಿ ಸಹಾಯದ ಮೂಲಕ ಕಾರಿನಲ್ಲಿದ್ದ ಮೃತದೇಹ ಹೊರ ತೆಗೆಯಲಾಗಿದೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

Load More