ದಿನಕ್ಕೊಂದು ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ರೇಣುಕಾಸ್ವಾಮಿ ಹತ್ಯೆ ಕೇಸ್
ಸತತ 5 ಗಂಟೆಗಳ ಕಾಲ ರೇಣುಕಾಸ್ವಾಮಿಗೆ ಹಿಂಸೆ ನೀಡಿದ್ರಾ ಡಿ ಗ್ಯಾಂಗ್
3-4 ಸೆಕೆಂಡ್ ರೆಕಾರ್ಡ್ ಆದ ಬಳಿಕ ದರ್ಶನ್ ಗ್ಯಾಂಗ್ ಮಾಡಿದ್ದೇನು?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಒಂದು ತಾರ್ಕಿಕ ಹಂತವನ್ನು ತಲುಪಿದ್ದಾರೆ. ಪೋಸ್ಟ್ಮಾರ್ಟಮ್ ವರದಿ ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿದ್ದು, ದರ್ಶನ್ ಟೀಂಗೆ ಇನ್ನಷ್ಟು ಕಂಟಕವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಪೊಲೀಸರ ತನಿಖೆಯಲ್ಲಿ ಆರೋಪಿ ಪ್ರದೂಷ್ ಮತ್ತೊಂದು ಆಘಾತಕಾರಿ ವಿಷ್ಯವನ್ನು ಬಾಯ್ಬಿಟ್ಟಿದ್ದಾರೆ. ದರ್ಶನ್ ಹಲ್ಲೆ ನಡೆಸಿದ್ದ 3 ಸೆಕೆಂಡ್ಗಳ ವಿಡಿಯೋ ರೆಕಾರ್ಡ್ ಆಗಿದ್ದು, ಇದನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ಗೆ ಹೊಸ ಟ್ವಿಸ್ಟ್.. ಶೆಡ್ನಲ್ಲಿ ಆರೋಪಿಗಳು ಶವ ಎಳೆದೊಯ್ಯೋ ದೃಶ್ಯ ಸೆರೆ!
ಇದೀಗ ಈ ಪ್ರಕರಣ ಮತ್ತೊಂದು ದೊಡ್ಡ ತಿರುವು ಪಡೆದುಕೊಂಡಿದೆ. ರೇಣುಕಾಸ್ವಾಮಿಯ ಮೃತದೇಹದ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ, ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿದೆ. ಇದರಲ್ಲಿ ರೇಣುಕಾಸ್ವಾಮಿಗೆ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವ ರಹಸ್ಯ ಬೆಳಕಿಗೆ ಬಂದಿದೆ. ಒಂದಲ್ಲ, ಎರಡಲ್ಲ ಸತತ 5 ಗಂಟೆಗಳ ಕಾಲ ರೇಣುಕಾಸ್ವಾಮಿಗೆ ಹಿಂಸೆ ನೀಡಿ ಆರೋಪಿಗಳು ಕೊಲೆ ಮಾಡಿದ್ದಾರೆ. ಈ ಬಗ್ಗೆ ಅಂತಿಮ ಮರಣೋತ್ತರ ಪರೀಕ್ಷಾ ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದಾರೆ.
ಬಲವಾದ ಹೊಡೆತದಿಂದ ನೋವನ್ನು ತಡೆದುಕೊಳ್ಳಲಾಗದೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ. ಆತನ ದೇಹದ ಹಲವು ಅಂಗಾಂಗಗಳಿಗೆ ಗಂಭೀರವಾಗಿ ಗಾಯವಾಗಿರೋದು ಅಂತಿಮ ಮರಣೋತ್ತರ ಪರೀಕ್ಷಾ ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾದಲ್ಲಿ ನಡೆದಿತ್ತು. ಆದ್ರೆ ಆಸ್ಪತ್ರೆಯ ವೈದ್ಯ ಎ-1 ಆರೋಪಿ ಪವಿತ್ರಾಗೌಡ ಅವರ ಸ್ನೇಹಿತೆಯ ಪತಿ ಅನ್ನೋದು ಅನುಮಾನ ಹುಟ್ಟಿತ್ತು. ಈ ಅನುಮಾನದ ಬಳಿಕ ಆಸ್ಪತ್ರೆ ಸ್ಪಷ್ಟನೆ ನೀಡಿದೆ. ಆ ದಿನ ಪವಿತ್ರಾಗೌಡರ ಸ್ನೇಹಿತೆಯ ಪತಿ ರಜೆಯಲ್ಲಿದ್ರು ಅಂತ ಹೇಳಿದೆ. ವಿಕ್ಟೋರಿಯಾದಲ್ಲಿ ಪವಿತ್ರಾ ಸ್ನೇಹಿತೆಯ ಪತಿಯ ಕಾಲ್ ಡಿಟೇಲ್ಸ್ನ್ನ ಪೊಲೀಸರು ಕಲೆಹಾಕಿ ಪರಿಶೀಲನೆಗೆ ಮುಂದಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿ ತಿಂಗಳೂಗಳೇ ಕಳೆದರೂ ಕರಾಳ ಸತ್ಯಗಳು ಬಗೆದಷ್ಟು ಹೊರ ಬರ್ತಿವೆ.
3-4 ಸೆಕೆಂಡ್ ದೃಶ್ಯದ ಸತ್ಯ!
ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವ ವಿಡಿಯೋವನ್ನು ಆರೋಪಿ ಪ್ರದೂಷ್ ರೆಕಾರ್ಡ್ ಮಾಡಿರುವ ವಿಚಾರ ಬಯಲಾಗಿದೆ. 3-4 ಸೆಕೆಂಡ್ ರೆಕಾರ್ಡ್ ಆದ ಬಳಿಕ ವಿಡಿಯೋ ರೆಕಾರ್ಡಿಂಗ್ ಸ್ಟಾಪ್ ಮಾಡಿ, ಹಲ್ಲೆ ವಿಡಿಯೋವನ್ನು ಪ್ರದೂಷ್ ಡಿಲೀಟ್ ಮಾಡಿದ್ನಂತೆ. ಇನ್ನು, ವಿಡಿಯೋ ರೆಕಾರ್ಡ್ ಮಾಡಲು ಹೇಳಿದ್ದೆ ದರ್ಶನ್ ಅಂತ ತನಿಖೆ ವೇಳೆ ಪ್ರದೂಷ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಸದ್ಯ ಡಿಲೀಟ್ ಆಗಿರೋ ವಿಡಿಯೋವನ್ನ ಪೊಲೀಸರು ರಿಟ್ರಿವ್ ಮಾಡಿದ್ದಾರೆ. 3 ಸೆಕೆಂಡ್ನ ವಿಡಿಯೋದಲ್ಲಿ ದರ್ಶನ್ ಕರಾಳತೆ ಸೆರೆಯಾಗಿದ್ದು, ರಿಟ್ರಿವ್ ಆಗಿರುವ ವಿಡಿಯೋ ಸದ್ಯ ಕೇಸ್ಗೆ ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: 40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ
ಸಿಸಿಟಿವಿಯಲ್ಲಿ ಸೆರೆಯಾಗಿದ್ಯಂತೆ ಮೃತದೇಹದ ಎಳೆದಾಟ!
ಇನ್ನು, ಪೊಲೀಸರು ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಮತ್ತಷ್ಟು ಟೆಕ್ನಿಕಲ್ ಎವಿಡೆನ್ಸ್ಗಳನ್ನು ಸಂಗ್ರಹಿಸಿದ್ದಾರೆ. ಪಟ್ಟಣಗೆರೆ ಶೆಡ್ನ ಸಿಸಿಟಿವಿಯಲ್ಲಿ ಮೃತದೇಹ ಎಳೆದೊಯ್ಯುವ ದೃಶ್ಯ ಸೆರೆಯಾಗಿದೆ. ಒಂದು ರೂಮ್ನಿಂದ ಮತ್ತೊಂದು ರೂಮ್ಗೆ ಶವವನ್ನು ಎಳೆದಾಡಿದ್ದಾರೆ. ಆದ್ರೆ ಆರೋಪಿ ರಾಘವೇಂದ್ರ ಸಿಸಿಟಿವಿಯ ದೃಶ್ಯವನ್ನು ಡಿಲೀಟ್ ಮಾಡಿದ್ದಾನೆ. ಸದ್ಯ ಪೊಲೀಸರು ಶೆಡ್ನಲ್ಲಿನ ಸಿಸಿಟಿವಿ ಡಿವಿಆರ್ಅನ್ನು ರಿಟ್ರೀವ್ಗಾಗಿ ಎಫ್ಎಸ್ಎಲ್ಗೆ ರವಾನೆ ಮಾಡಿದ್ದಾರೆ. ನಟ ದರ್ಶನ್ರ ಆರ್ಆರ್ ನಗರದ ಮನೆಯಲ್ಲೂ ತನಿಖೆಗೆ ಪೂರಕವಾದ ಟೆಕ್ನಿಕಲ್ ಎವಿಡೆನ್ಸ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ, ರೇಣುಕಾಸ್ವಾಮಿ ಕೊಲೆ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಮರಣೋತ್ತ ಪರೀಕ್ಷಾ ವರದಿಯಲ್ಲಿ ಅಂಶಗಳು ಮತ್ತು ಮೂರು ಸೆಕೆಂಡ್ಗಳ ಆ ವಿಡಿಯೋ ನಟ ದರ್ಶನ್ಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದಿನಕ್ಕೊಂದು ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ರೇಣುಕಾಸ್ವಾಮಿ ಹತ್ಯೆ ಕೇಸ್
ಸತತ 5 ಗಂಟೆಗಳ ಕಾಲ ರೇಣುಕಾಸ್ವಾಮಿಗೆ ಹಿಂಸೆ ನೀಡಿದ್ರಾ ಡಿ ಗ್ಯಾಂಗ್
3-4 ಸೆಕೆಂಡ್ ರೆಕಾರ್ಡ್ ಆದ ಬಳಿಕ ದರ್ಶನ್ ಗ್ಯಾಂಗ್ ಮಾಡಿದ್ದೇನು?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಒಂದು ತಾರ್ಕಿಕ ಹಂತವನ್ನು ತಲುಪಿದ್ದಾರೆ. ಪೋಸ್ಟ್ಮಾರ್ಟಮ್ ವರದಿ ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿದ್ದು, ದರ್ಶನ್ ಟೀಂಗೆ ಇನ್ನಷ್ಟು ಕಂಟಕವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಪೊಲೀಸರ ತನಿಖೆಯಲ್ಲಿ ಆರೋಪಿ ಪ್ರದೂಷ್ ಮತ್ತೊಂದು ಆಘಾತಕಾರಿ ವಿಷ್ಯವನ್ನು ಬಾಯ್ಬಿಟ್ಟಿದ್ದಾರೆ. ದರ್ಶನ್ ಹಲ್ಲೆ ನಡೆಸಿದ್ದ 3 ಸೆಕೆಂಡ್ಗಳ ವಿಡಿಯೋ ರೆಕಾರ್ಡ್ ಆಗಿದ್ದು, ಇದನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ಗೆ ಹೊಸ ಟ್ವಿಸ್ಟ್.. ಶೆಡ್ನಲ್ಲಿ ಆರೋಪಿಗಳು ಶವ ಎಳೆದೊಯ್ಯೋ ದೃಶ್ಯ ಸೆರೆ!
ಇದೀಗ ಈ ಪ್ರಕರಣ ಮತ್ತೊಂದು ದೊಡ್ಡ ತಿರುವು ಪಡೆದುಕೊಂಡಿದೆ. ರೇಣುಕಾಸ್ವಾಮಿಯ ಮೃತದೇಹದ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ, ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಿದೆ. ಇದರಲ್ಲಿ ರೇಣುಕಾಸ್ವಾಮಿಗೆ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವ ರಹಸ್ಯ ಬೆಳಕಿಗೆ ಬಂದಿದೆ. ಒಂದಲ್ಲ, ಎರಡಲ್ಲ ಸತತ 5 ಗಂಟೆಗಳ ಕಾಲ ರೇಣುಕಾಸ್ವಾಮಿಗೆ ಹಿಂಸೆ ನೀಡಿ ಆರೋಪಿಗಳು ಕೊಲೆ ಮಾಡಿದ್ದಾರೆ. ಈ ಬಗ್ಗೆ ಅಂತಿಮ ಮರಣೋತ್ತರ ಪರೀಕ್ಷಾ ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದಾರೆ.
ಬಲವಾದ ಹೊಡೆತದಿಂದ ನೋವನ್ನು ತಡೆದುಕೊಳ್ಳಲಾಗದೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ. ಆತನ ದೇಹದ ಹಲವು ಅಂಗಾಂಗಗಳಿಗೆ ಗಂಭೀರವಾಗಿ ಗಾಯವಾಗಿರೋದು ಅಂತಿಮ ಮರಣೋತ್ತರ ಪರೀಕ್ಷಾ ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾದಲ್ಲಿ ನಡೆದಿತ್ತು. ಆದ್ರೆ ಆಸ್ಪತ್ರೆಯ ವೈದ್ಯ ಎ-1 ಆರೋಪಿ ಪವಿತ್ರಾಗೌಡ ಅವರ ಸ್ನೇಹಿತೆಯ ಪತಿ ಅನ್ನೋದು ಅನುಮಾನ ಹುಟ್ಟಿತ್ತು. ಈ ಅನುಮಾನದ ಬಳಿಕ ಆಸ್ಪತ್ರೆ ಸ್ಪಷ್ಟನೆ ನೀಡಿದೆ. ಆ ದಿನ ಪವಿತ್ರಾಗೌಡರ ಸ್ನೇಹಿತೆಯ ಪತಿ ರಜೆಯಲ್ಲಿದ್ರು ಅಂತ ಹೇಳಿದೆ. ವಿಕ್ಟೋರಿಯಾದಲ್ಲಿ ಪವಿತ್ರಾ ಸ್ನೇಹಿತೆಯ ಪತಿಯ ಕಾಲ್ ಡಿಟೇಲ್ಸ್ನ್ನ ಪೊಲೀಸರು ಕಲೆಹಾಕಿ ಪರಿಶೀಲನೆಗೆ ಮುಂದಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿ ತಿಂಗಳೂಗಳೇ ಕಳೆದರೂ ಕರಾಳ ಸತ್ಯಗಳು ಬಗೆದಷ್ಟು ಹೊರ ಬರ್ತಿವೆ.
3-4 ಸೆಕೆಂಡ್ ದೃಶ್ಯದ ಸತ್ಯ!
ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ನಡೆಸುವ ವಿಡಿಯೋವನ್ನು ಆರೋಪಿ ಪ್ರದೂಷ್ ರೆಕಾರ್ಡ್ ಮಾಡಿರುವ ವಿಚಾರ ಬಯಲಾಗಿದೆ. 3-4 ಸೆಕೆಂಡ್ ರೆಕಾರ್ಡ್ ಆದ ಬಳಿಕ ವಿಡಿಯೋ ರೆಕಾರ್ಡಿಂಗ್ ಸ್ಟಾಪ್ ಮಾಡಿ, ಹಲ್ಲೆ ವಿಡಿಯೋವನ್ನು ಪ್ರದೂಷ್ ಡಿಲೀಟ್ ಮಾಡಿದ್ನಂತೆ. ಇನ್ನು, ವಿಡಿಯೋ ರೆಕಾರ್ಡ್ ಮಾಡಲು ಹೇಳಿದ್ದೆ ದರ್ಶನ್ ಅಂತ ತನಿಖೆ ವೇಳೆ ಪ್ರದೂಷ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಸದ್ಯ ಡಿಲೀಟ್ ಆಗಿರೋ ವಿಡಿಯೋವನ್ನ ಪೊಲೀಸರು ರಿಟ್ರಿವ್ ಮಾಡಿದ್ದಾರೆ. 3 ಸೆಕೆಂಡ್ನ ವಿಡಿಯೋದಲ್ಲಿ ದರ್ಶನ್ ಕರಾಳತೆ ಸೆರೆಯಾಗಿದ್ದು, ರಿಟ್ರಿವ್ ಆಗಿರುವ ವಿಡಿಯೋ ಸದ್ಯ ಕೇಸ್ಗೆ ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: 40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ
ಸಿಸಿಟಿವಿಯಲ್ಲಿ ಸೆರೆಯಾಗಿದ್ಯಂತೆ ಮೃತದೇಹದ ಎಳೆದಾಟ!
ಇನ್ನು, ಪೊಲೀಸರು ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಮತ್ತಷ್ಟು ಟೆಕ್ನಿಕಲ್ ಎವಿಡೆನ್ಸ್ಗಳನ್ನು ಸಂಗ್ರಹಿಸಿದ್ದಾರೆ. ಪಟ್ಟಣಗೆರೆ ಶೆಡ್ನ ಸಿಸಿಟಿವಿಯಲ್ಲಿ ಮೃತದೇಹ ಎಳೆದೊಯ್ಯುವ ದೃಶ್ಯ ಸೆರೆಯಾಗಿದೆ. ಒಂದು ರೂಮ್ನಿಂದ ಮತ್ತೊಂದು ರೂಮ್ಗೆ ಶವವನ್ನು ಎಳೆದಾಡಿದ್ದಾರೆ. ಆದ್ರೆ ಆರೋಪಿ ರಾಘವೇಂದ್ರ ಸಿಸಿಟಿವಿಯ ದೃಶ್ಯವನ್ನು ಡಿಲೀಟ್ ಮಾಡಿದ್ದಾನೆ. ಸದ್ಯ ಪೊಲೀಸರು ಶೆಡ್ನಲ್ಲಿನ ಸಿಸಿಟಿವಿ ಡಿವಿಆರ್ಅನ್ನು ರಿಟ್ರೀವ್ಗಾಗಿ ಎಫ್ಎಸ್ಎಲ್ಗೆ ರವಾನೆ ಮಾಡಿದ್ದಾರೆ. ನಟ ದರ್ಶನ್ರ ಆರ್ಆರ್ ನಗರದ ಮನೆಯಲ್ಲೂ ತನಿಖೆಗೆ ಪೂರಕವಾದ ಟೆಕ್ನಿಕಲ್ ಎವಿಡೆನ್ಸ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ, ರೇಣುಕಾಸ್ವಾಮಿ ಕೊಲೆ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಮರಣೋತ್ತ ಪರೀಕ್ಷಾ ವರದಿಯಲ್ಲಿ ಅಂಶಗಳು ಮತ್ತು ಮೂರು ಸೆಕೆಂಡ್ಗಳ ಆ ವಿಡಿಯೋ ನಟ ದರ್ಶನ್ಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ