ಟಿಟಿಇಯನ್ನು ರೈಲಿನಿಂದ ತಳ್ಳಿ ಕೊಲೆ ಮಾಡಿದ ಕುಡುಕ
ಟಿಕೆಟ್ ಪರೀಕ್ಷಿಸಲು ಮುಂದಾಗಿದ್ದಕ್ಕೆ ಕೋಪಗೊಂಡು ಟ್ರೈನ್ನಿಂದ ಹೊರದಬ್ಬಿದ
ಕುಡುಕನ ಅವಾಂತರದಿಂದ ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದು ಸಾವನ್ನಪ್ಪಿದ ಟಿಟಿಇ
ಕುಡುಕನೋರ್ವ ಟಿಕೆಟ್ ಕೇಳಿದ್ದಕ್ಕೆ ಟಿಟಿಇಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಘಟನೆ ಕೇರಳದಲ್ಲಿ ಎರ್ನಾಕುಳಂ-ಪಾಟ್ನಾ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ. ಪರಿಣಾಮ ಟಿಟಿಇ ಇಕೆ ವಿನೋದ್ ಎಂಬವರು ಸಾವನ್ನಪ್ಪಿದ್ದಾರೆ.
ಮಂಗಳವಾರ ಸಂಜೆ ಏಳು ಗಂಟೆಗೆ ಈ ಘಟನೆ ನಡೆದಿದೆ. ಎರ್ನಾಕುಲಂ-ಪಾಟ್ನಾ ಎಕ್ಸ್ಪ್ರೆಸ್ನ ಎಸ್11 ಕೋಚ್ನಲ್ಲಿ ಕುಡುಕನೋರ್ವ ಚಲಿಸುತ್ತಿದ್ದನು. ಟಿಟಿಇ ವಿನೋದ್ ತನ್ನ ಕೆಲಸದಂತೆ ಆತನ ಬಳಿ ಟಿಕೆಟ್ ಚೆಕ್ಕಿಂಗ್ಗೆ ಬಂದಿದ್ದಾನೆ. ಟಿಕೆಟ್ ಕೇಳಿದ್ದಾನೆ. ಇದಕ್ಕೆ ಕುಡುಕ ಆತನನ್ನು ರೈಲಿನಿಂದ ತಳ್ಳಿದ್ದಾನೆ.
ಮುಳಂಗುನ್ನತುಕಾವು ಮತ್ತು ವಡಕ್ಕಂಚೇರಿ ನಿಲ್ದಾಣದ ನಡುವೆ ವೆಲಪ್ಪಯ ಎಂಬಲ್ಲಿ ಕುಡುಕ ತಳ್ಳಿದ್ದರಿಂದ ವಿನೋದ್ ರೈಲಿನಿಂದ ಹೊರಬಿದ್ದಿದ್ದಾನೆ. ಹೊಬಿದ್ದ ಟಿಟಿಇ ಅಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ರಾಮ್ದೇವ್ಗೆ ಪಂಚ್ ಕೊಟ್ಟ ಕೋರ್ಟ್.. ಪತಂಜಲಿ ಸುಳ್ಳು ಜಾಹೀರಾತುಗಳ ವಿರುದ್ಧ ಸುಪ್ರೀಂ ಗರಂ
ಆರೋಪಿಯು ಒಡಿಶಾ ಮೂಲದಿಂದ ಬಂದ ವಲಸೆ ಕಾರ್ಮಿಕ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆ ನಡೆಸಿದಾಗ ಆತ ಕುಡಿದಿರುವುದು ಗೊತ್ತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟಿಟಿಇಯನ್ನು ರೈಲಿನಿಂದ ತಳ್ಳಿ ಕೊಲೆ ಮಾಡಿದ ಕುಡುಕ
ಟಿಕೆಟ್ ಪರೀಕ್ಷಿಸಲು ಮುಂದಾಗಿದ್ದಕ್ಕೆ ಕೋಪಗೊಂಡು ಟ್ರೈನ್ನಿಂದ ಹೊರದಬ್ಬಿದ
ಕುಡುಕನ ಅವಾಂತರದಿಂದ ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದು ಸಾವನ್ನಪ್ಪಿದ ಟಿಟಿಇ
ಕುಡುಕನೋರ್ವ ಟಿಕೆಟ್ ಕೇಳಿದ್ದಕ್ಕೆ ಟಿಟಿಇಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಘಟನೆ ಕೇರಳದಲ್ಲಿ ಎರ್ನಾಕುಳಂ-ಪಾಟ್ನಾ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ. ಪರಿಣಾಮ ಟಿಟಿಇ ಇಕೆ ವಿನೋದ್ ಎಂಬವರು ಸಾವನ್ನಪ್ಪಿದ್ದಾರೆ.
ಮಂಗಳವಾರ ಸಂಜೆ ಏಳು ಗಂಟೆಗೆ ಈ ಘಟನೆ ನಡೆದಿದೆ. ಎರ್ನಾಕುಲಂ-ಪಾಟ್ನಾ ಎಕ್ಸ್ಪ್ರೆಸ್ನ ಎಸ್11 ಕೋಚ್ನಲ್ಲಿ ಕುಡುಕನೋರ್ವ ಚಲಿಸುತ್ತಿದ್ದನು. ಟಿಟಿಇ ವಿನೋದ್ ತನ್ನ ಕೆಲಸದಂತೆ ಆತನ ಬಳಿ ಟಿಕೆಟ್ ಚೆಕ್ಕಿಂಗ್ಗೆ ಬಂದಿದ್ದಾನೆ. ಟಿಕೆಟ್ ಕೇಳಿದ್ದಾನೆ. ಇದಕ್ಕೆ ಕುಡುಕ ಆತನನ್ನು ರೈಲಿನಿಂದ ತಳ್ಳಿದ್ದಾನೆ.
ಮುಳಂಗುನ್ನತುಕಾವು ಮತ್ತು ವಡಕ್ಕಂಚೇರಿ ನಿಲ್ದಾಣದ ನಡುವೆ ವೆಲಪ್ಪಯ ಎಂಬಲ್ಲಿ ಕುಡುಕ ತಳ್ಳಿದ್ದರಿಂದ ವಿನೋದ್ ರೈಲಿನಿಂದ ಹೊರಬಿದ್ದಿದ್ದಾನೆ. ಹೊಬಿದ್ದ ಟಿಟಿಇ ಅಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ರಾಮ್ದೇವ್ಗೆ ಪಂಚ್ ಕೊಟ್ಟ ಕೋರ್ಟ್.. ಪತಂಜಲಿ ಸುಳ್ಳು ಜಾಹೀರಾತುಗಳ ವಿರುದ್ಧ ಸುಪ್ರೀಂ ಗರಂ
ಆರೋಪಿಯು ಒಡಿಶಾ ಮೂಲದಿಂದ ಬಂದ ವಲಸೆ ಕಾರ್ಮಿಕ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆ ನಡೆಸಿದಾಗ ಆತ ಕುಡಿದಿರುವುದು ಗೊತ್ತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ