newsfirstkannada.com

BBK10: ‘ನನಗೆ ದೇವರು ಕೊಟ್ಟಿರೋ ಮಾಣಿಕ್ಯನೇ ವರ್ತೂರು ಅಣ್ಣ’- ತುಕಾಲಿ ಸಂತು ಭಾವುಕ

Share :

Published February 4, 2024 at 7:42pm

    ಸ್ನೇಹ ಮತ್ತು ಪ್ರೀತಿಯಲ್ಲಿ ನಾವಿಬ್ಬರು ಗೆದ್ದಿದ್ದೇವೆ- ತುಕಾಲಿ ಸಂತೋಷ್​

    ಬಿಗ್​ಬಾಸ್ 10ರ​ ಬಳಿಕ ಮತ್ತೆ ಒಂದಾದ ಕುಚುಕು ಸ್ನೇಹಿತರು

    ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್​ಶಿಪ್ ಎಂದ ಕಿಚ್ಚ ಸುದೀಪ್​

ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಪ್ರೇಕ್ಷಕರ ಮನ ಗೆದ್ದಿರುವ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಕಾರ್ಯಕ್ರಮ ಮುಕ್ತಾಯಗೊಂಡಿದೆ. ಬಿಗ್​​ಬಾಸ್​ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ತುಕಾಲಿ ಸಂತೋಷ್​, ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್​ ನಡುವೆ ಚೆಂದದ ಸ್ನೇಹ ಬೆಳೆಯುತ್ತೆ. ದಿನ ಕಳೆದಂತೆ ಆ ಸ್ನೇಹ ಗಟ್ಟಿಯಾಗಿದೆ. ಬಿಗ್​ಬಾಸ್​ ಮನೆಯಲ್ಲಿದ್ದಾಗ ಬೆಳೆದಿದ್ದ ಈ ಸ್ನೇಹ ಇಂದಿಗೂ ಕೂಡ ಗಟ್ಟಿಯಾಗಿದೆ. ಈ ಇಬ್ಬರ ಸ್ನೇಹವನ್ನು ನೋಡಿದ್ದ ಕಿಚ್ಚ ಸುದೀಪ್​ ಕೂಡ ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್​ಶಿಪ್ ಅಂತಾ ಹೇಳಿದ್ದರು.

ಇದನ್ನು ಓದಿ: BBK10: ಕಣ್ಣೀರು ಸುರಿಸಿದ ಸಂತು-ಪಂತು! ಸ್ನೇಹಿತನನ್ನು ಬಿಟ್ಟು ಹೋಗಲಾರದಂತ ಸಂಬಂಧ ಬೆಸೆದ ಬಿಗ್​ ಬಾಸ್​

ಇದೀಗ ವರ್ತೂರು ಸಂತೋಷ್ ಅವರ ಮನೆಗೆ ತುಕಾಲಿ ಸಂತೋಷ್​ ಆಗಮನವಾಗಿದೆ. ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಅಕ್ಕನ ಮಗಳ ನಾಮಕರಣ ಸಮಾರಂಭವಿತ್ತು. ಈ ಹಿನ್ನೆಲೆಯಲ್ಲಿ ವರ್ತೂರು ಬಳಿಯ ಗುಂಜೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಿಗ್‌ಬಾಸ್‌ ಸ್ಪರ್ಧಿಗಳು ಆಗಮಿಸಿದ್ದರು. ಇದೇ ವೇಳೆ ಗೆಳೆಯ ತುಕಾಲಿ ಸಂತೋಷ್​ಗೆ, ವರ್ತೂರು ಸಂತೋಷ್ ಭರ್ಜರಿ ಗಿಫ್ಟ್​ವೊಂದನ್ನು ಕೊಟ್ಟಿದ್ದಾರೆ. ತುಕಾಲಿ ಸಂತೋಷ್​ಗೆ ‘ಸಂತು ಹಾರ್ಟ್‌ ಪಂತು’ ಹೆಸರಿನ ಪೆಂಡೆಂಟ್ ಅನ್ನು ಗಿಫ್ಟ್​ ಆಗಿ ನೀಡಿದ್ದಾರೆ.

ಇದೇ ವಿಚಾರವಾಗಿ ಮಾತಾಡಿದ ತುಕಾಲಿ ಸಂತೋಷ್​, ಇಡೀ ಕರ್ನಾಟಕದ ಜನರು ಕಾತುರದಿಂದ ಕಾಯುತ್ತಿದ್ದರು. ಸಂತು ಪಂತು ಯಾವಾಗ ಭೇಟಿ ನೀಡುತ್ತಾರೆ ಅಂತಾ ಕಾಯುತ್ತಿದ್ದರು. ಇದೀಗ ನಾವಿಬ್ಬರೂ ಒಂದಾಗಿದ್ದೇವೆ. ಸ್ನೇಹ ಮತ್ತು ಪ್ರೀತಿಯಲ್ಲಿ ನಾವಿಬ್ಬರು ಗೆದ್ದಿದ್ದೇವೆ. ಒಂದು ಮಾಣಿಕ್ಯವನ್ನು ಆ ದೇವರು ನನಗೆ ಕೊಟ್ಟಿದ್ದಾರೆ. ಅದನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತೇನೆ. ಇಂತಹ ಸ್ನೇಹ ಪಡೆಯುವುದಕ್ಕೆ ಏಳೇಳು ಜನ್ಮದ ಪುಣ್ಯ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ‘ನನಗೆ ದೇವರು ಕೊಟ್ಟಿರೋ ಮಾಣಿಕ್ಯನೇ ವರ್ತೂರು ಅಣ್ಣ’- ತುಕಾಲಿ ಸಂತು ಭಾವುಕ

https://newsfirstlive.com/wp-content/uploads/2024/02/varthuru-6.jpg

    ಸ್ನೇಹ ಮತ್ತು ಪ್ರೀತಿಯಲ್ಲಿ ನಾವಿಬ್ಬರು ಗೆದ್ದಿದ್ದೇವೆ- ತುಕಾಲಿ ಸಂತೋಷ್​

    ಬಿಗ್​ಬಾಸ್ 10ರ​ ಬಳಿಕ ಮತ್ತೆ ಒಂದಾದ ಕುಚುಕು ಸ್ನೇಹಿತರು

    ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್​ಶಿಪ್ ಎಂದ ಕಿಚ್ಚ ಸುದೀಪ್​

ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಪ್ರೇಕ್ಷಕರ ಮನ ಗೆದ್ದಿರುವ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಕಾರ್ಯಕ್ರಮ ಮುಕ್ತಾಯಗೊಂಡಿದೆ. ಬಿಗ್​​ಬಾಸ್​ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ತುಕಾಲಿ ಸಂತೋಷ್​, ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್​ ನಡುವೆ ಚೆಂದದ ಸ್ನೇಹ ಬೆಳೆಯುತ್ತೆ. ದಿನ ಕಳೆದಂತೆ ಆ ಸ್ನೇಹ ಗಟ್ಟಿಯಾಗಿದೆ. ಬಿಗ್​ಬಾಸ್​ ಮನೆಯಲ್ಲಿದ್ದಾಗ ಬೆಳೆದಿದ್ದ ಈ ಸ್ನೇಹ ಇಂದಿಗೂ ಕೂಡ ಗಟ್ಟಿಯಾಗಿದೆ. ಈ ಇಬ್ಬರ ಸ್ನೇಹವನ್ನು ನೋಡಿದ್ದ ಕಿಚ್ಚ ಸುದೀಪ್​ ಕೂಡ ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್​ಶಿಪ್ ಅಂತಾ ಹೇಳಿದ್ದರು.

ಇದನ್ನು ಓದಿ: BBK10: ಕಣ್ಣೀರು ಸುರಿಸಿದ ಸಂತು-ಪಂತು! ಸ್ನೇಹಿತನನ್ನು ಬಿಟ್ಟು ಹೋಗಲಾರದಂತ ಸಂಬಂಧ ಬೆಸೆದ ಬಿಗ್​ ಬಾಸ್​

ಇದೀಗ ವರ್ತೂರು ಸಂತೋಷ್ ಅವರ ಮನೆಗೆ ತುಕಾಲಿ ಸಂತೋಷ್​ ಆಗಮನವಾಗಿದೆ. ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಅಕ್ಕನ ಮಗಳ ನಾಮಕರಣ ಸಮಾರಂಭವಿತ್ತು. ಈ ಹಿನ್ನೆಲೆಯಲ್ಲಿ ವರ್ತೂರು ಬಳಿಯ ಗುಂಜೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಿಗ್‌ಬಾಸ್‌ ಸ್ಪರ್ಧಿಗಳು ಆಗಮಿಸಿದ್ದರು. ಇದೇ ವೇಳೆ ಗೆಳೆಯ ತುಕಾಲಿ ಸಂತೋಷ್​ಗೆ, ವರ್ತೂರು ಸಂತೋಷ್ ಭರ್ಜರಿ ಗಿಫ್ಟ್​ವೊಂದನ್ನು ಕೊಟ್ಟಿದ್ದಾರೆ. ತುಕಾಲಿ ಸಂತೋಷ್​ಗೆ ‘ಸಂತು ಹಾರ್ಟ್‌ ಪಂತು’ ಹೆಸರಿನ ಪೆಂಡೆಂಟ್ ಅನ್ನು ಗಿಫ್ಟ್​ ಆಗಿ ನೀಡಿದ್ದಾರೆ.

ಇದೇ ವಿಚಾರವಾಗಿ ಮಾತಾಡಿದ ತುಕಾಲಿ ಸಂತೋಷ್​, ಇಡೀ ಕರ್ನಾಟಕದ ಜನರು ಕಾತುರದಿಂದ ಕಾಯುತ್ತಿದ್ದರು. ಸಂತು ಪಂತು ಯಾವಾಗ ಭೇಟಿ ನೀಡುತ್ತಾರೆ ಅಂತಾ ಕಾಯುತ್ತಿದ್ದರು. ಇದೀಗ ನಾವಿಬ್ಬರೂ ಒಂದಾಗಿದ್ದೇವೆ. ಸ್ನೇಹ ಮತ್ತು ಪ್ರೀತಿಯಲ್ಲಿ ನಾವಿಬ್ಬರು ಗೆದ್ದಿದ್ದೇವೆ. ಒಂದು ಮಾಣಿಕ್ಯವನ್ನು ಆ ದೇವರು ನನಗೆ ಕೊಟ್ಟಿದ್ದಾರೆ. ಅದನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತೇನೆ. ಇಂತಹ ಸ್ನೇಹ ಪಡೆಯುವುದಕ್ಕೆ ಏಳೇಳು ಜನ್ಮದ ಪುಣ್ಯ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More