ಸ್ನೇಹ ಮತ್ತು ಪ್ರೀತಿಯಲ್ಲಿ ನಾವಿಬ್ಬರು ಗೆದ್ದಿದ್ದೇವೆ- ತುಕಾಲಿ ಸಂತೋಷ್
ಬಿಗ್ಬಾಸ್ 10ರ ಬಳಿಕ ಮತ್ತೆ ಒಂದಾದ ಕುಚುಕು ಸ್ನೇಹಿತರು
ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್ಶಿಪ್ ಎಂದ ಕಿಚ್ಚ ಸುದೀಪ್
ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಪ್ರೇಕ್ಷಕರ ಮನ ಗೆದ್ದಿರುವ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಕಾರ್ಯಕ್ರಮ ಮುಕ್ತಾಯಗೊಂಡಿದೆ. ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ತುಕಾಲಿ ಸಂತೋಷ್, ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್ ನಡುವೆ ಚೆಂದದ ಸ್ನೇಹ ಬೆಳೆಯುತ್ತೆ. ದಿನ ಕಳೆದಂತೆ ಆ ಸ್ನೇಹ ಗಟ್ಟಿಯಾಗಿದೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಬೆಳೆದಿದ್ದ ಈ ಸ್ನೇಹ ಇಂದಿಗೂ ಕೂಡ ಗಟ್ಟಿಯಾಗಿದೆ. ಈ ಇಬ್ಬರ ಸ್ನೇಹವನ್ನು ನೋಡಿದ್ದ ಕಿಚ್ಚ ಸುದೀಪ್ ಕೂಡ ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್ಶಿಪ್ ಅಂತಾ ಹೇಳಿದ್ದರು.
ಇದನ್ನು ಓದಿ: BBK10: ಕಣ್ಣೀರು ಸುರಿಸಿದ ಸಂತು-ಪಂತು! ಸ್ನೇಹಿತನನ್ನು ಬಿಟ್ಟು ಹೋಗಲಾರದಂತ ಸಂಬಂಧ ಬೆಸೆದ ಬಿಗ್ ಬಾಸ್
ಇದೀಗ ವರ್ತೂರು ಸಂತೋಷ್ ಅವರ ಮನೆಗೆ ತುಕಾಲಿ ಸಂತೋಷ್ ಆಗಮನವಾಗಿದೆ. ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಅಕ್ಕನ ಮಗಳ ನಾಮಕರಣ ಸಮಾರಂಭವಿತ್ತು. ಈ ಹಿನ್ನೆಲೆಯಲ್ಲಿ ವರ್ತೂರು ಬಳಿಯ ಗುಂಜೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಿಗ್ಬಾಸ್ ಸ್ಪರ್ಧಿಗಳು ಆಗಮಿಸಿದ್ದರು. ಇದೇ ವೇಳೆ ಗೆಳೆಯ ತುಕಾಲಿ ಸಂತೋಷ್ಗೆ, ವರ್ತೂರು ಸಂತೋಷ್ ಭರ್ಜರಿ ಗಿಫ್ಟ್ವೊಂದನ್ನು ಕೊಟ್ಟಿದ್ದಾರೆ. ತುಕಾಲಿ ಸಂತೋಷ್ಗೆ ‘ಸಂತು ಹಾರ್ಟ್ ಪಂತು’ ಹೆಸರಿನ ಪೆಂಡೆಂಟ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಇದೇ ವಿಚಾರವಾಗಿ ಮಾತಾಡಿದ ತುಕಾಲಿ ಸಂತೋಷ್, ಇಡೀ ಕರ್ನಾಟಕದ ಜನರು ಕಾತುರದಿಂದ ಕಾಯುತ್ತಿದ್ದರು. ಸಂತು ಪಂತು ಯಾವಾಗ ಭೇಟಿ ನೀಡುತ್ತಾರೆ ಅಂತಾ ಕಾಯುತ್ತಿದ್ದರು. ಇದೀಗ ನಾವಿಬ್ಬರೂ ಒಂದಾಗಿದ್ದೇವೆ. ಸ್ನೇಹ ಮತ್ತು ಪ್ರೀತಿಯಲ್ಲಿ ನಾವಿಬ್ಬರು ಗೆದ್ದಿದ್ದೇವೆ. ಒಂದು ಮಾಣಿಕ್ಯವನ್ನು ಆ ದೇವರು ನನಗೆ ಕೊಟ್ಟಿದ್ದಾರೆ. ಅದನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತೇನೆ. ಇಂತಹ ಸ್ನೇಹ ಪಡೆಯುವುದಕ್ಕೆ ಏಳೇಳು ಜನ್ಮದ ಪುಣ್ಯ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸ್ನೇಹ ಮತ್ತು ಪ್ರೀತಿಯಲ್ಲಿ ನಾವಿಬ್ಬರು ಗೆದ್ದಿದ್ದೇವೆ- ತುಕಾಲಿ ಸಂತೋಷ್
ಬಿಗ್ಬಾಸ್ 10ರ ಬಳಿಕ ಮತ್ತೆ ಒಂದಾದ ಕುಚುಕು ಸ್ನೇಹಿತರು
ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್ಶಿಪ್ ಎಂದ ಕಿಚ್ಚ ಸುದೀಪ್
ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಪ್ರೇಕ್ಷಕರ ಮನ ಗೆದ್ದಿರುವ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಕಾರ್ಯಕ್ರಮ ಮುಕ್ತಾಯಗೊಂಡಿದೆ. ಬಿಗ್ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ತುಕಾಲಿ ಸಂತೋಷ್, ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್ ನಡುವೆ ಚೆಂದದ ಸ್ನೇಹ ಬೆಳೆಯುತ್ತೆ. ದಿನ ಕಳೆದಂತೆ ಆ ಸ್ನೇಹ ಗಟ್ಟಿಯಾಗಿದೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಬೆಳೆದಿದ್ದ ಈ ಸ್ನೇಹ ಇಂದಿಗೂ ಕೂಡ ಗಟ್ಟಿಯಾಗಿದೆ. ಈ ಇಬ್ಬರ ಸ್ನೇಹವನ್ನು ನೋಡಿದ್ದ ಕಿಚ್ಚ ಸುದೀಪ್ ಕೂಡ ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್ಶಿಪ್ ಅಂತಾ ಹೇಳಿದ್ದರು.
ಇದನ್ನು ಓದಿ: BBK10: ಕಣ್ಣೀರು ಸುರಿಸಿದ ಸಂತು-ಪಂತು! ಸ್ನೇಹಿತನನ್ನು ಬಿಟ್ಟು ಹೋಗಲಾರದಂತ ಸಂಬಂಧ ಬೆಸೆದ ಬಿಗ್ ಬಾಸ್
ಇದೀಗ ವರ್ತೂರು ಸಂತೋಷ್ ಅವರ ಮನೆಗೆ ತುಕಾಲಿ ಸಂತೋಷ್ ಆಗಮನವಾಗಿದೆ. ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಅಕ್ಕನ ಮಗಳ ನಾಮಕರಣ ಸಮಾರಂಭವಿತ್ತು. ಈ ಹಿನ್ನೆಲೆಯಲ್ಲಿ ವರ್ತೂರು ಬಳಿಯ ಗುಂಜೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಿಗ್ಬಾಸ್ ಸ್ಪರ್ಧಿಗಳು ಆಗಮಿಸಿದ್ದರು. ಇದೇ ವೇಳೆ ಗೆಳೆಯ ತುಕಾಲಿ ಸಂತೋಷ್ಗೆ, ವರ್ತೂರು ಸಂತೋಷ್ ಭರ್ಜರಿ ಗಿಫ್ಟ್ವೊಂದನ್ನು ಕೊಟ್ಟಿದ್ದಾರೆ. ತುಕಾಲಿ ಸಂತೋಷ್ಗೆ ‘ಸಂತು ಹಾರ್ಟ್ ಪಂತು’ ಹೆಸರಿನ ಪೆಂಡೆಂಟ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಇದೇ ವಿಚಾರವಾಗಿ ಮಾತಾಡಿದ ತುಕಾಲಿ ಸಂತೋಷ್, ಇಡೀ ಕರ್ನಾಟಕದ ಜನರು ಕಾತುರದಿಂದ ಕಾಯುತ್ತಿದ್ದರು. ಸಂತು ಪಂತು ಯಾವಾಗ ಭೇಟಿ ನೀಡುತ್ತಾರೆ ಅಂತಾ ಕಾಯುತ್ತಿದ್ದರು. ಇದೀಗ ನಾವಿಬ್ಬರೂ ಒಂದಾಗಿದ್ದೇವೆ. ಸ್ನೇಹ ಮತ್ತು ಪ್ರೀತಿಯಲ್ಲಿ ನಾವಿಬ್ಬರು ಗೆದ್ದಿದ್ದೇವೆ. ಒಂದು ಮಾಣಿಕ್ಯವನ್ನು ಆ ದೇವರು ನನಗೆ ಕೊಟ್ಟಿದ್ದಾರೆ. ಅದನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳುತ್ತೇನೆ. ಇಂತಹ ಸ್ನೇಹ ಪಡೆಯುವುದಕ್ಕೆ ಏಳೇಳು ಜನ್ಮದ ಪುಣ್ಯ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ