ಇಂದು ಶ್ರೀಲಂಕಾ, ಟೀಮ್ ಇಂಡಿಯಾ ಮಧ್ಯೆ ಮೊದಲ ಏಕದಿನ ಪಂದ್ಯ
ಮೊದಲ ಪಂದ್ಯಕ್ಕೂ ಮುನ್ನವೇ ಟೂರ್ನಿಯಿಂದ ಹೊರಬಿದ್ದ ಸ್ಟಾರ್ ಪ್ಲೇಯರ್ಸ್
ಫೀಲ್ಡಿಂಗ್ ಪ್ರಾಕ್ಟೀಸ್ ಮಾಡುವಾಗ ಗಾಯಗೊಂಡಿದ್ದ ಇಬ್ಬರು ಆಟಗಾರರು!
ಕೊಲಂಬೋದಾ ಆರ್. ಪ್ರೇಮದಾಸ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ, ಶ್ರೀಲಂಕಾ ಮುಖಾಮುಖಿ ಆಗಿವೆ. ಟಾಸ್ ಗೆದ್ದ ಶ್ರೀಲಂಕಾ ಕ್ಯಾಪ್ಟನ್ ಚರಿತ್ ಅಸಲಂಕ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಟೀಮ್ ಇಂಡಿಯಾ ಬೌಲಿಂಗ್ ಮಾಡುತ್ತಿದೆ.
2023ರ ಏಕದಿನ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ 50 ಓವರ್ಗಳ ಫಾರ್ಮೇಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಂತ್ ಅವರನ್ನು ಬೆಂಚ್ ಕಾಯಿಸಿದ್ದು, ಸ್ಟಾರ್ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಕೂಡ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಈ ಮಧ್ಯೆ ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್ ಕಾದಿದೆ.
ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್
ಹೌದು, ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಸಂಭ್ರಮ ಕೊಂಚ ತಗ್ಗಿದೆ. ಕಾರಣ ಇಬ್ಬರು ಸ್ಟಾರ್ ವೇಗಿಗಳು ಗಾಯದಿಂದಾಗಿ ಸರಣಿಯಿಂದ ಸಂಪೂರ್ಣ ಹೊರಬಿದ್ದಿದ್ದಾರೆ. ಶ್ರೀಲಂಕಾ ತಂಡದ ಸ್ಟಾರ್ ವೇಗಿಗಳಾದ ದಿಲ್ಶನ್ ಮಧುಶಂಕ ಮತ್ತು ಮಥಿಸಾ ಪತಿರಾನಾ ಗಾಯದ ಸಮಸ್ಯೆಯಿಂದ ಆಡಲು ಸಾಧ್ಯವಾಗುವುದಿಲ್ಲ ಎಂದು ಟೂರ್ನಿಯಿಂದಲೇ ಔಟ್ ಆಗಿದ್ದಾರೆ.
ಫೀಲ್ಡಿಂಗ್ ಪ್ರಾಕ್ಟೀಸ್ ವೇಳೆ ಮಧುಶಂಕ ಎಡ ಮಂಡಿಗೆ ಗಾಯ ಆಗಿತ್ತು. ಪತಿರಾನ ಬಲ ಭುಜಕ್ಕೂ ತೀವ್ರ ಗಾಯವಾಗಿದೆ. ಭಾರತ ವಿರುದ್ಧ ಕೊನೆ ಟಿ20 ಪಂದ್ಯ ಆಡುವಾಗ ಇಬ್ಬರು ಗಾಯಗೊಂಡಿದ್ದು, ಸುಧಾರಿಸಲು ಕನಿಷ್ಠ 1 ವಾರ ರೆಸ್ಟ್ ಬೇಕಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ‘ನೀನು ಮಾಡಿದ ಕರ್ಮ ಸುಮ್ಮನೆ ಬಿಡುತ್ತಾ?’- ಸ್ಟಾರ್ ಕ್ರಿಕೆಟರ್ ಪಂತ್ ವಿರುದ್ಧ ಬಹಿರಂಗ ಆಕ್ರೋಶ!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಇಂದು ಶ್ರೀಲಂಕಾ, ಟೀಮ್ ಇಂಡಿಯಾ ಮಧ್ಯೆ ಮೊದಲ ಏಕದಿನ ಪಂದ್ಯ
ಮೊದಲ ಪಂದ್ಯಕ್ಕೂ ಮುನ್ನವೇ ಟೂರ್ನಿಯಿಂದ ಹೊರಬಿದ್ದ ಸ್ಟಾರ್ ಪ್ಲೇಯರ್ಸ್
ಫೀಲ್ಡಿಂಗ್ ಪ್ರಾಕ್ಟೀಸ್ ಮಾಡುವಾಗ ಗಾಯಗೊಂಡಿದ್ದ ಇಬ್ಬರು ಆಟಗಾರರು!
ಕೊಲಂಬೋದಾ ಆರ್. ಪ್ರೇಮದಾಸ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ, ಶ್ರೀಲಂಕಾ ಮುಖಾಮುಖಿ ಆಗಿವೆ. ಟಾಸ್ ಗೆದ್ದ ಶ್ರೀಲಂಕಾ ಕ್ಯಾಪ್ಟನ್ ಚರಿತ್ ಅಸಲಂಕ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಟೀಮ್ ಇಂಡಿಯಾ ಬೌಲಿಂಗ್ ಮಾಡುತ್ತಿದೆ.
2023ರ ಏಕದಿನ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ 50 ಓವರ್ಗಳ ಫಾರ್ಮೇಟ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪಂತ್ ಅವರನ್ನು ಬೆಂಚ್ ಕಾಯಿಸಿದ್ದು, ಸ್ಟಾರ್ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಕೂಡ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಈ ಮಧ್ಯೆ ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್ ಕಾದಿದೆ.
ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್
ಹೌದು, ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಸಂಭ್ರಮ ಕೊಂಚ ತಗ್ಗಿದೆ. ಕಾರಣ ಇಬ್ಬರು ಸ್ಟಾರ್ ವೇಗಿಗಳು ಗಾಯದಿಂದಾಗಿ ಸರಣಿಯಿಂದ ಸಂಪೂರ್ಣ ಹೊರಬಿದ್ದಿದ್ದಾರೆ. ಶ್ರೀಲಂಕಾ ತಂಡದ ಸ್ಟಾರ್ ವೇಗಿಗಳಾದ ದಿಲ್ಶನ್ ಮಧುಶಂಕ ಮತ್ತು ಮಥಿಸಾ ಪತಿರಾನಾ ಗಾಯದ ಸಮಸ್ಯೆಯಿಂದ ಆಡಲು ಸಾಧ್ಯವಾಗುವುದಿಲ್ಲ ಎಂದು ಟೂರ್ನಿಯಿಂದಲೇ ಔಟ್ ಆಗಿದ್ದಾರೆ.
ಫೀಲ್ಡಿಂಗ್ ಪ್ರಾಕ್ಟೀಸ್ ವೇಳೆ ಮಧುಶಂಕ ಎಡ ಮಂಡಿಗೆ ಗಾಯ ಆಗಿತ್ತು. ಪತಿರಾನ ಬಲ ಭುಜಕ್ಕೂ ತೀವ್ರ ಗಾಯವಾಗಿದೆ. ಭಾರತ ವಿರುದ್ಧ ಕೊನೆ ಟಿ20 ಪಂದ್ಯ ಆಡುವಾಗ ಇಬ್ಬರು ಗಾಯಗೊಂಡಿದ್ದು, ಸುಧಾರಿಸಲು ಕನಿಷ್ಠ 1 ವಾರ ರೆಸ್ಟ್ ಬೇಕಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ‘ನೀನು ಮಾಡಿದ ಕರ್ಮ ಸುಮ್ಮನೆ ಬಿಡುತ್ತಾ?’- ಸ್ಟಾರ್ ಕ್ರಿಕೆಟರ್ ಪಂತ್ ವಿರುದ್ಧ ಬಹಿರಂಗ ಆಕ್ರೋಶ!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ