/newsfirstlive-kannada/media/post_attachments/wp-content/uploads/2024/09/Team-India-Test.jpg)
ಇದೇ ತಿಂಗಳು 19ನೇ ತಾರೀಕಿನಿಂದ ಟೀಮ್​ ಇಂಡಿಯಾ, ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸಿರೀಸ್​​ ಶುರುವಾಗಲಿದೆ. ಈಗಾಗಲೇ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಸೀರೀಸ್​​​ ಮೊದಲ ಟೆಸ್ಟ್​ ಪಂದ್ಯ 19 ರಿಂದ 23 ರವರೆಗೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ.
ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಇನ್ನೂ 7 ದಿನ ಬಾಕಿ ಇದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾದ ಇಬ್ಬರು ಸ್ಟಾರ್​ ಆಟಗಾರರಿಗೆ ಬಿಗ್​ ಶಾಕ್​ ನೀಡಲಾಗಿದೆ. ಮೊದಲ ಪಂದ್ಯದ ಪ್ಲೇಯಿಂಗ್​​ ಎಲೆವೆನ್​ನಲ್ಲಿ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್​​ಗೆ ಸ್ಥಾನ ಸಿಗೋದು ಡೌಟ್​ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದೇನು?
ಇಬ್ಬರು ಸ್ಟಾರ್​ ಆಟಗಾರರು ಮೊದಲ ಪಂದ್ಯದಿಂದ ಹೊರಬೀಳುವ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​ ಕೃಷ್ಣಮಾಚಾರಿ ಶ್ರೀಕಾಂತ್ ಮಾತಾಡಿದ್ದಾರೆ. ಸ್ಟಾರ್​ ಆಟಗಾರರು ಟೀಮ್​ಗೆ ಬಂದ ಕೂಡಲೇ ಯುವ ಆಟಗಾರರನ್ನು ತಂಡದಿಂದ ಕೈ ಬಿಡಲಾಗುತ್ತಿದೆ. ಎಷ್ಟೋ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಸರ್ಫರಾಜ್ ಖಾನ್ ಹೊರಗುಳಿದಿರುವ ಬಗ್ಗೆ ನನಗೆ ಬೇಸರವಿದೆ. ರಿಷಭ್ ಪಂತ್ ಕೂಡ ಕಮ್​ಬ್ಯಾಕ್​ ಮಾಡಿದ್ದು, ಧೃವ ಜುರೆಲ್​ಗೆ ಅವಕಾಶ ಸಿಗಲ್ಲ ಅನ್ನೋ ಮಾಹಿತಿ ಸಿಕ್ಕಿದೆ ಎಂದರು.
ಬಾಂಗ್ಲಾ ವಿರುದ್ಧದ ಟೆಸ್ಟ್​ಗೆ ಟೀಮ್​ ಇಂಡಿಯಾ ಹೀಗಿದೆ!
ರೋಹಿತ್​ ಶರ್ಮಾ (ಕ್ಯಾಪ್ಟನ್​​), ಯಶಸ್ವಿ ಜೈಸ್ವಾಲ್​​, ಶುಭ್ಮನ್​ ಗಿಲ್​​, ವಿರಾಟ್​​ ಕೊಹ್ಲಿ, ಕೆ.ಎಲ್​ ರಾಹುಲ್​​, ಸರ್ಫರಾಜ್​ ಖಾನ್​​, ರಿಷಭ್​ ಪಂತ್​​, ಧೃವ್​ ಜುರೇಲ್​​, ಆರ್​. ಅಶ್ವಿನ್​, ರವೀಂದ್ರ ಜಡೇಜಾ, ಅಕ್ಷರ್​​ ಪಟೇಲ್​​, ಕುಲ್ದೀಪ್​ ಯಾದವ್​​, ಮೊಹಮ್ಮದ್​ ಸಿರಾಜ್​​, ಆಕಾಶ್​ ದೀಪ್​​, ಜಸ್​ಪ್ರೀತ್​ ಬುಮ್ರಾ, ಯಶ್​ ದಯಾಳ್​​.
ಇದನ್ನೂ ಓದಿ: ಟೀಂ ಇಂಡಿಯಾಗೆ ಟೆನ್ಷನ್, ಟೆನ್ಷನ್; ಎದುರಾಯ್ತು 4 ಬಿಗ್ಗೆಸ್ಟ್ ಚಾಲೆಂಜ್
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us