ವ್ಯಕ್ತಿ ಕಲ್ಲು ಎಸೆಯುತ್ತಿದ್ದಂತೆ ಪ್ರಯಾಣಿಕರು ಮಾಡಿದ್ದೇನು? ಓರ್ವ ಎಸ್ಕೇಪ್
ಮಹಾರಾಜನನ್ನ ವಿಚಾರಣೆ ಮಾಡುತ್ತಿರುವ ಎಸ್.ಜೆ ಪಾರ್ಕ್ ಪೊಲೀಸರು
ಪೊಲೀಸ್ ಠಾಣೆ ಮುಂದೆ ಗಂಟೆಗೂ ಅಧಿಕ ಕಾಲ ಕಾದ ಪ್ರಯಾಣಿಕರು
ಬೆಂಗಳೂರು: ಬಸ್ ನಿಲ್ಲಿಸಿಲ್ಲವೆಂದು ತಮಿಳುನಾಡು ಸಾರಿಗೆ ಬಸ್ಗೆ ಕಲ್ಲು ಎಸೆದಿರುವ ಇಬ್ಬರ ಪೈಕಿ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉದ್ಯಾನನಗರಿಯ ಟೌನ್ಹಾಲ್ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕನ್ವರ್ ಯಾತ್ರೆಗೆ ಯೋಗಿ ಸರ್ಕಾರದ ರೂಲ್ಸ್ ಏನು..? ಬಿಟೌನ್ ಬ್ಯೂಟಿ ಕಂಗನಾ- ಸೋನ್ ಸೂದ್ ಮಧ್ಯ ವಾರ್
ಬೆಂಗಳೂರಿನಿಂದ ತಿರುವಣ್ಣಮಲೈಗೆ ಹೋಗುತ್ತಿದ್ದ ತಮಿಳುನಾಡು ಸಾರಿಗೆ ಬಸ್ ಸ್ಯಾಟ್ಲೈಟ್ನಲ್ಲೇ ಫುಲ್ ರಶ್ ಅಗಿತ್ತು. ಹೀಗಾಗಿ ಟೌನ್ಹಾಲ್ ಬಸ್ ನಿಲ್ದಾಣದ ಬಳಿ ನಿಲ್ಲಿಸಿಲ್ಲ. ಇದರಿಂದ ಕೋಪಗೊಂಡು ಇಬ್ಬರು ವ್ಯಕ್ತಿಗಳು ಬಸ್ನ ಹಿಂಬದಿ ಗಾಜಿಗೆ ಕಲ್ಲುಗಳನ್ನು ಎಸೆದಿದ್ದಾರೆ. ಇದರಿಂದ ಬಸ್ನ ಹಿಂಬದಿ ಗ್ಲಾಸ್ ಎಲ್ಲ ಹೊಡೆದು ಹೋಗಿದೆ.
ಇದನ್ನೂ ಓದಿ: KRS ಒಳಹರಿವು ಭಾರೀ ಹೆಚ್ಚಳ.. ಅಪಾಯದ ಮಟ್ಟ ಮೀರಿದ ಕಾವೇರಿಯಲ್ಲಿ ಕೊಚ್ಚಿ ಹೋದ ಯುವಕ
ಈ ಸಂಬಂಧ ಮಹಾರಾಜ ಎನ್ನುವ ವ್ಯಕ್ತಿಯನ್ನು ಬಸ್ನ ಪ್ರಯಾಣಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ಲಾಸ್ ಒಡೆದು ಹೋಗಿದ್ದರಿಂದ ಪ್ರಯಾಣಿಕರ ಸಮೇತ ಬಸ್ ಅನ್ನು ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಗೆ ಡ್ರೈವರ್ ಚಲಾಯಿಸಿಕೊಂಡು ಬಂದಿದ್ದಾರೆ. ಹೀಗಾಗಿ ಠಾಣೆ ಮುಂದೆಯೇ ಗಂಟೆಗೂ ಹೆಚ್ಚು ಸಮಯ ಪ್ರಯಾಣಿಕರು ಕಾದಿದ್ದಾರೆ. ಇಂದು ಬೆಳಗ್ಗೆ 4:30ರ ಸುಮಾರಿಗೆ ತಿರುವಣ್ಣಮಲೈ ತಲುಪ ಬೇಕಿದ್ದ ಬಸ್ ತಡವಾಗಿ ತಲುಪಲಿದೆ. ಸದ್ಯ ಮಹಾರಾಜನನ್ನ ಎಸ್ಜೆ ಪಾರ್ಕ್ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವ್ಯಕ್ತಿ ಕಲ್ಲು ಎಸೆಯುತ್ತಿದ್ದಂತೆ ಪ್ರಯಾಣಿಕರು ಮಾಡಿದ್ದೇನು? ಓರ್ವ ಎಸ್ಕೇಪ್
ಮಹಾರಾಜನನ್ನ ವಿಚಾರಣೆ ಮಾಡುತ್ತಿರುವ ಎಸ್.ಜೆ ಪಾರ್ಕ್ ಪೊಲೀಸರು
ಪೊಲೀಸ್ ಠಾಣೆ ಮುಂದೆ ಗಂಟೆಗೂ ಅಧಿಕ ಕಾಲ ಕಾದ ಪ್ರಯಾಣಿಕರು
ಬೆಂಗಳೂರು: ಬಸ್ ನಿಲ್ಲಿಸಿಲ್ಲವೆಂದು ತಮಿಳುನಾಡು ಸಾರಿಗೆ ಬಸ್ಗೆ ಕಲ್ಲು ಎಸೆದಿರುವ ಇಬ್ಬರ ಪೈಕಿ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉದ್ಯಾನನಗರಿಯ ಟೌನ್ಹಾಲ್ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕನ್ವರ್ ಯಾತ್ರೆಗೆ ಯೋಗಿ ಸರ್ಕಾರದ ರೂಲ್ಸ್ ಏನು..? ಬಿಟೌನ್ ಬ್ಯೂಟಿ ಕಂಗನಾ- ಸೋನ್ ಸೂದ್ ಮಧ್ಯ ವಾರ್
ಬೆಂಗಳೂರಿನಿಂದ ತಿರುವಣ್ಣಮಲೈಗೆ ಹೋಗುತ್ತಿದ್ದ ತಮಿಳುನಾಡು ಸಾರಿಗೆ ಬಸ್ ಸ್ಯಾಟ್ಲೈಟ್ನಲ್ಲೇ ಫುಲ್ ರಶ್ ಅಗಿತ್ತು. ಹೀಗಾಗಿ ಟೌನ್ಹಾಲ್ ಬಸ್ ನಿಲ್ದಾಣದ ಬಳಿ ನಿಲ್ಲಿಸಿಲ್ಲ. ಇದರಿಂದ ಕೋಪಗೊಂಡು ಇಬ್ಬರು ವ್ಯಕ್ತಿಗಳು ಬಸ್ನ ಹಿಂಬದಿ ಗಾಜಿಗೆ ಕಲ್ಲುಗಳನ್ನು ಎಸೆದಿದ್ದಾರೆ. ಇದರಿಂದ ಬಸ್ನ ಹಿಂಬದಿ ಗ್ಲಾಸ್ ಎಲ್ಲ ಹೊಡೆದು ಹೋಗಿದೆ.
ಇದನ್ನೂ ಓದಿ: KRS ಒಳಹರಿವು ಭಾರೀ ಹೆಚ್ಚಳ.. ಅಪಾಯದ ಮಟ್ಟ ಮೀರಿದ ಕಾವೇರಿಯಲ್ಲಿ ಕೊಚ್ಚಿ ಹೋದ ಯುವಕ
ಈ ಸಂಬಂಧ ಮಹಾರಾಜ ಎನ್ನುವ ವ್ಯಕ್ತಿಯನ್ನು ಬಸ್ನ ಪ್ರಯಾಣಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ಲಾಸ್ ಒಡೆದು ಹೋಗಿದ್ದರಿಂದ ಪ್ರಯಾಣಿಕರ ಸಮೇತ ಬಸ್ ಅನ್ನು ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಗೆ ಡ್ರೈವರ್ ಚಲಾಯಿಸಿಕೊಂಡು ಬಂದಿದ್ದಾರೆ. ಹೀಗಾಗಿ ಠಾಣೆ ಮುಂದೆಯೇ ಗಂಟೆಗೂ ಹೆಚ್ಚು ಸಮಯ ಪ್ರಯಾಣಿಕರು ಕಾದಿದ್ದಾರೆ. ಇಂದು ಬೆಳಗ್ಗೆ 4:30ರ ಸುಮಾರಿಗೆ ತಿರುವಣ್ಣಮಲೈ ತಲುಪ ಬೇಕಿದ್ದ ಬಸ್ ತಡವಾಗಿ ತಲುಪಲಿದೆ. ಸದ್ಯ ಮಹಾರಾಜನನ್ನ ಎಸ್ಜೆ ಪಾರ್ಕ್ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ