/newsfirstlive-kannada/media/post_attachments/wp-content/uploads/2024/04/200-2.jpg)
ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಮಹಿಳೆಯೊಬ್ಬಳು ತನ್ನ ಇಬ್ಬರು ಮುಗ್ಧ ಮಕ್ಕಳೊಂದಿಗೆ ಬಾವಿಗೆ ಹಾರಿದ ಘಟನೆ ನಡೆದಿದೆ. ತಾಯಿ ಮಾಡಿದ ದುಡುಕಿನ ನಿರ್ಧಾರದಿಂದ ಮೂವರೂ ಸಾವನ್ನಪ್ಪಿದ್ದಾರೆ.
ಬಾವಿಗೆ ಹಾರಿದ ಪತಿ ತನ್ನ ತಾಯಿಗೆ 200 ರೂಪಾಯಿ ಕೊಟ್ಟಿದ್ದಕ್ಕೆ ಕೋಪಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಹಣದ ವಿಚಾರಕ್ಕೆ ಪತಿ ಮತ್ತು ಪತ್ನಿ ನಡುವೆ ಜಗಳ ತಾರಕಕ್ಕೇರಿ ಸಾವಿನಲ್ಲಿ ಅಂತ್ಯವಾಗಿದೆ ಎಂದು ವರದಿಯಾಗಿದೆ. ಒಂದೇ ಮನೆಯ ಮೂವರು ಸಾವಿಗೀಡಾದ ಪ್ರಕರಣವು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಪೊಲೀಸರು ಕೇಸ್ ದಾಖಲಿಸಿಕೊಂಡು ಬಾವಿಯಲ್ಲಿ ಬಿದ್ದಿದ್ದ ಮೂವರ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/04/200.jpg)
ನಿನ್ನೆ ಪತಿಯೊಂದಿಗೆ ಜಗಳವಾಡಿ ಬಾವಿಗೆ ಹಾರಿದ್ದಾಳೆ. ಆಕೆಯ ಹೆಸರು ಅಂಜು (22) ಎಂದು ತಿಳಿದುಬಂದಿದೆ. ಚಿತ್ರಕೂಟದ ಎಸ್​ಪಿ ಅರುಣ್ ಕುಮಾರ್ ಸಿಂಗ್ ಪ್ರಕರಣದ ಬಗ್ಗೆ ಮಾತನಾಡಿ.. ಗ್ರಾಮದಲ್ಲಿ ವಾಸವಿರುವ ಸಬಿತ್ ಬೆಳಗ್ಗೆ ತವರು ಮನೆಗೆ ಹೋಗುತ್ತಿದ್ದ ತಾಯಿಗೆ ಖರ್ಚಿಗೆ ಎಂದು 200 ರೂಪಾಯಿ ಕೊಟ್ಟಿದ್ದ. ಇದಕ್ಕೆ ಅಂಜು ಕೋಪಿಸಿಕೊಂಡಿದ್ದಳು. ಕೊನೆಗೆ ಸಬಿತ್ ಯಾವುದೋ ಚಿಕಿತ್ಸೆ ಹಿನ್ನೆಯಲ್ಲಿ ಆಸ್ಪತ್ರೆಗೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಹೆಂಡತಿ ಹಾಗೂ ಇಬ್ಬರು ಮಕ್ಕಳು ಕಾಣಲಿಲ್ಲ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್​ ಬಳಕೆದಾರರಿಗೆ ಬಿಗ್ ಶಾಕ್.. ನೀವು ಓದಲೇಬೇಕಾದ ಶಾಕಿಂಗ್ ನ್ಯೂಸ್..!
/newsfirstlive-kannada/media/post_attachments/wp-content/uploads/2024/04/200-1.jpg)
ಹೆಂಡತಿ ಮತ್ತು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅಕ್ಕ-ಪಕ್ಕದ ಮನೆಯವರನ್ನು ಕೇಳಿದ್ದಾರೆ. ನಂತರ ಸಂಬಂಧಿಕರ ಬಳಿ ವಿಚಾರಿಸಲು ಪ್ರಾರಂಭಿಸಿದ್ದ. ಸುಮಾರು 2 ಗಂಟೆಗಳ ಬಳಿಕ ದಾರಿಯಲ್ಲಿನ ಬಾವಿಯಲ್ಲಿ ಮಹಿಳೆಯ ಶವ ಬಿದ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹೋಗಿ ನೋಡಿದಾಗ ಆಘಾತ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us