ಬರೀ 450 ರೂಪಾಯಿಗೆ ನಡೆಯಿತು ಚಿಂದಿ ಆಯುವವನ ಕೊಲೆ
ಕದ್ದ ವಸ್ತುವಿನ ಹಣ ಹಂಚಿಕೆ ವಿಚಾರದಲ್ಲಿ ನಾಲ್ವರ ನಡುವೆ ಗಲಾಟೆ
ಸಿಸಿಟಿವಿಯಲ್ಲಿ ಸೆರೆಸಿಕ್ಕ ದೃಶ್ಯದಿಂದ ಕೊಲೆಘಾತುಕರನ್ನು ಪತ್ತೆಹಚ್ಚಿದ ಪೊಲೀಸರು
ಬೆಂಗಳೂರು: ಜುಲೈ 8 ರಂದು ಮಲ್ಲೇಶ್ವರಂನಲ್ಲಿ ಕೊಲೆ ನಡೆದಿತ್ತು, ಈ ಕೊಲೆ ಕೇಸ್ ಅನ್ನು ಪೊಲೀಸರು ಅಪರಿಚಿತನ ಕೊಲೆ ಎಂದು ದಾಖಲು ಮಾಡ್ಕೊಂಡಿದ್ದರು. ಆದರೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ.
ಇದೀಗ ಪೊಲೀಸರಿಗೆ ತನಿಖೆ ವೇಳೆ ಸಿಸಿಟಿವಿ ಸಾಕ್ಷಿ ಲಭ್ಯವಾಗಿದೆ. ಮೃತನನ್ನ ಗುರುಮೂರ್ತಿ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ ವ್ಯಕ್ತಿ ಚಿಂದಿ ಆಯೋದರ ಜೊತೆಗೆ ಕಳ್ಳತನ ಕೂಡ ಮಾಡ್ತಿದ್ದ. ಈತನ ಸಹಚರರು ಮೂವರು ಕೂಡ ಈತನ ಹಾಗೆಯೇ ಚಿಂದಿ ಆಯುವ ಕೆಲಸ ಮಾಡ್ತಿದ್ದರು.
ಅಂದು ಕೇವಲ 450 ರೂಪಾಯಿಗೆ ಈ ನಾಲ್ವರ ನಡುವೆ ಜಗಳವಾಗಿತ್ತು. ಇದೇ ವೇಳೆ ಪ್ರಭು ಎಂಬಾತ ಗುರುಮೂರ್ತಿ ಮೇಲೆ ಕಲ್ಲು ಎತ್ತಿಹಾಕಿ ಅಲ್ಲಿಂದ ಗಾಬರಿಯಿಂದ ಎಸ್ಕೇಪ್ ಆಗಿದ್ದಾನೆ. ಬಳಿಕ ಆರೋಪಿ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬರೀ 450 ರೂಪಾಯಿಗೆ ನಡೆಯಿತು ಚಿಂದಿ ಆಯುವವನ ಕೊಲೆ
ಕದ್ದ ವಸ್ತುವಿನ ಹಣ ಹಂಚಿಕೆ ವಿಚಾರದಲ್ಲಿ ನಾಲ್ವರ ನಡುವೆ ಗಲಾಟೆ
ಸಿಸಿಟಿವಿಯಲ್ಲಿ ಸೆರೆಸಿಕ್ಕ ದೃಶ್ಯದಿಂದ ಕೊಲೆಘಾತುಕರನ್ನು ಪತ್ತೆಹಚ್ಚಿದ ಪೊಲೀಸರು
ಬೆಂಗಳೂರು: ಜುಲೈ 8 ರಂದು ಮಲ್ಲೇಶ್ವರಂನಲ್ಲಿ ಕೊಲೆ ನಡೆದಿತ್ತು, ಈ ಕೊಲೆ ಕೇಸ್ ಅನ್ನು ಪೊಲೀಸರು ಅಪರಿಚಿತನ ಕೊಲೆ ಎಂದು ದಾಖಲು ಮಾಡ್ಕೊಂಡಿದ್ದರು. ಆದರೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ.
ಇದೀಗ ಪೊಲೀಸರಿಗೆ ತನಿಖೆ ವೇಳೆ ಸಿಸಿಟಿವಿ ಸಾಕ್ಷಿ ಲಭ್ಯವಾಗಿದೆ. ಮೃತನನ್ನ ಗುರುಮೂರ್ತಿ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ ವ್ಯಕ್ತಿ ಚಿಂದಿ ಆಯೋದರ ಜೊತೆಗೆ ಕಳ್ಳತನ ಕೂಡ ಮಾಡ್ತಿದ್ದ. ಈತನ ಸಹಚರರು ಮೂವರು ಕೂಡ ಈತನ ಹಾಗೆಯೇ ಚಿಂದಿ ಆಯುವ ಕೆಲಸ ಮಾಡ್ತಿದ್ದರು.
ಅಂದು ಕೇವಲ 450 ರೂಪಾಯಿಗೆ ಈ ನಾಲ್ವರ ನಡುವೆ ಜಗಳವಾಗಿತ್ತು. ಇದೇ ವೇಳೆ ಪ್ರಭು ಎಂಬಾತ ಗುರುಮೂರ್ತಿ ಮೇಲೆ ಕಲ್ಲು ಎತ್ತಿಹಾಕಿ ಅಲ್ಲಿಂದ ಗಾಬರಿಯಿಂದ ಎಸ್ಕೇಪ್ ಆಗಿದ್ದಾನೆ. ಬಳಿಕ ಆರೋಪಿ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ