ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು
ನನ್ನ ಹುಟ್ಟು ಬಾಂಬೆ, ಆದರೆ ದಕ್ಷಿಣ ಭಾರತದ ಕುಟುಂಬ ನಮ್ಮದು
ಬಿಂದಿಯಲ್ಲಿರುವ ‘ಕ’ ಅಕ್ಷರದ ಸೀಕ್ರೆಟ್ ಬಿಚ್ಚಿಟ್ಟ ಉಷಾ ಉತ್ತುಪ್
ಭಾರತದ ಖ್ಯಾತ ಹಾಡುಗಾರ್ತಿ ಉಷಾ ಉತ್ತುಪ್ ತಮ್ಮ ದೊಡ್ಡ ಬಿಂದಿಯ ಹಿಂದಿನ ಕಥೆಯನ್ನು ಎಳೆ ಎಳೆಯಾಗಿ ನ್ಯೂಸ್ ಫಸ್ಟ್ ಜೊತೆಗೆ ಬಿಚ್ಚಿಟ್ಟಿದ್ದಾರೆ. ಈ ವೇಳೆ ಬಿಂದಿಗೂ ಕರ್ನಾಟಕಕ್ಕೂ ಇರುವ ಸಂಬಂಧದ ಬಗ್ಗೆ ತೆರೆದಿಟ್ಟಿದ್ದಾರೆ.
ಹಿರಿಯ ಪತ್ರಕರ್ತೆ ಅರ್ಚನಾ ರವಿಕುಮಾರ್ರವರು ಉಷಾ ಉತ್ತುಪ್ ಅವರ ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ತಮ್ಮ ದೊಡ್ಡ ಬಿಂದಿಯ ಹಿಂದಿರುವ ಕುತೂಹಲಕಾರಿ ವಿಚಾರ ತೆರೆದಿಟ್ಟಿದ್ದಾರೆ. ‘ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ನನ್ನ ತಂದೆ ಪೊಲೀಸ್ ಆಗಿದ್ದರು. ನಾನು ಹುಟ್ಟಿದ್ದು ಬಾಂಬೆಯಲ್ಲಿ. ಆದರೆ ದಕ್ಷಿಣ ಭಾರತದ ಕುಟುಂಬ ನಮ್ಮದು. ಹಾಗಾಗಿ ಎಲ್ಲರೂ ಬಿಂದಿ ಹಾಕುತ್ತಾರೆ. ನನ್ನ ತಾಯಿ ಕೂಡ ಬಿಂದಿ ಹಾಕುತ್ತಿದ್ದರು. ಆಗಿನ ಕಾಲದಲ್ಲಿ ಬಾಟಲಿಯಲ್ಲಿ ಬರುತ್ತಿತ್ತು. ಅದನ್ನು ‘ಚಾಂದ್ ಪುಟ್ಟು’ ಎಂದು ಕರೆಯುತ್ತಿದ್ದರು. ಚಿಕ್ಕ ಗ್ಲಾಸ್ನಲ್ಲಿ ಬರುತ್ತಿತ್ತು. ಅದನ್ನು ನಾನು ಹಣೆಗೆ ಹಚ್ಚುತ್ತಿದ್ದೆ. ಆಮೇಲೆ ನಿಧಾನವಾಗಿ ಬಣ್ಣ ಬಣ್ಣದ ಬಿಂದಿ ಹಾಕಲು ಪ್ರಾರಂಭಿಸಿದೆ. ನಂತರ ಬಿಂದಿ ಗಾತ್ರವನ್ನು ಬದಲಾಯಿಸುತ್ತಾ ಬಂದೆ. ಆದರೆ ಈಗ ನನ್ನದೇ ಸ್ವಂತ ಸ್ಟಿಕ್ಕರ್ಸ್ ಇದೆ. ಈಗ ಬಿಂದಿ ನನ್ನ ಐಕಾನಿಕ್ ಪಾರ್ಟ್ ಆಗಿದೆ.
ಇದನ್ನೂ ಓದಿ: ಸ್ಯಾಮ್ ಕರ್ರಾನ್ ಅರ್ಧ ಶತಕದಾಟ.. 4 ವಿಕೆಟ್ಗಳ ಮೊದಲ ಜಯ ಪಡೆದ ಪಂಜಾಬ್ ಕಿಂಗ್ಸ್
‘ಕ’ ಅಂದ್ರೆ ಕರ್ನಾಟಕ
ನಾನೇ ನನ್ನ ಬಿಂದಿಯನ್ನು ಹಾಕುತ್ತೇನೆ ಮತ್ತು ಅದರಲ್ಲಿ ‘ಕ’ ಅಕ್ಷರವನ್ನು ಬಿಡಿಸುತ್ತೇನೆ. ಇದರ ನಿಜಾರ್ಥವೆಂದರೆ ಕೋಲ್ಕತ್ತಾ ಅದರ ಜೊತೆಗೆ ಕರ್ನಾಟಕ ಕೂಡ ಎಂದು ಹೇಳುತ್ತೇನೆ.
ಮಕ್ಕಳಿಗೂ ಇಷ್ಟ ನನ್ನ ಬಿಂದಿ
ಒಂದು ಬಾರಿ ನಾನು ಬಾಂಬೆಯ ಬೆಂಜಾಗೆ ಶಾಪಿಂಗ್ ಹೋಗಿದ್ದೆ. ಅವಾಗ ಅದರ ಮಾಲೀಕ ಬಂದು ಹೇಳಿದ್ರು ನಿನ್ನ ಬಿಂದಿಯನ್ನು ಮಕ್ಕಳು ಕೇಳುತ್ತಿದ್ದಾರೆ ಎಂದು. ಆದರೆ ನನ್ನ ಬಿಂದಿಯನ್ನು ನಾನೇ ರಚಿಸುತ್ತೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು
ನನ್ನ ಹುಟ್ಟು ಬಾಂಬೆ, ಆದರೆ ದಕ್ಷಿಣ ಭಾರತದ ಕುಟುಂಬ ನಮ್ಮದು
ಬಿಂದಿಯಲ್ಲಿರುವ ‘ಕ’ ಅಕ್ಷರದ ಸೀಕ್ರೆಟ್ ಬಿಚ್ಚಿಟ್ಟ ಉಷಾ ಉತ್ತುಪ್
ಭಾರತದ ಖ್ಯಾತ ಹಾಡುಗಾರ್ತಿ ಉಷಾ ಉತ್ತುಪ್ ತಮ್ಮ ದೊಡ್ಡ ಬಿಂದಿಯ ಹಿಂದಿನ ಕಥೆಯನ್ನು ಎಳೆ ಎಳೆಯಾಗಿ ನ್ಯೂಸ್ ಫಸ್ಟ್ ಜೊತೆಗೆ ಬಿಚ್ಚಿಟ್ಟಿದ್ದಾರೆ. ಈ ವೇಳೆ ಬಿಂದಿಗೂ ಕರ್ನಾಟಕಕ್ಕೂ ಇರುವ ಸಂಬಂಧದ ಬಗ್ಗೆ ತೆರೆದಿಟ್ಟಿದ್ದಾರೆ.
ಹಿರಿಯ ಪತ್ರಕರ್ತೆ ಅರ್ಚನಾ ರವಿಕುಮಾರ್ರವರು ಉಷಾ ಉತ್ತುಪ್ ಅವರ ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ತಮ್ಮ ದೊಡ್ಡ ಬಿಂದಿಯ ಹಿಂದಿರುವ ಕುತೂಹಲಕಾರಿ ವಿಚಾರ ತೆರೆದಿಟ್ಟಿದ್ದಾರೆ. ‘ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ನನ್ನ ತಂದೆ ಪೊಲೀಸ್ ಆಗಿದ್ದರು. ನಾನು ಹುಟ್ಟಿದ್ದು ಬಾಂಬೆಯಲ್ಲಿ. ಆದರೆ ದಕ್ಷಿಣ ಭಾರತದ ಕುಟುಂಬ ನಮ್ಮದು. ಹಾಗಾಗಿ ಎಲ್ಲರೂ ಬಿಂದಿ ಹಾಕುತ್ತಾರೆ. ನನ್ನ ತಾಯಿ ಕೂಡ ಬಿಂದಿ ಹಾಕುತ್ತಿದ್ದರು. ಆಗಿನ ಕಾಲದಲ್ಲಿ ಬಾಟಲಿಯಲ್ಲಿ ಬರುತ್ತಿತ್ತು. ಅದನ್ನು ‘ಚಾಂದ್ ಪುಟ್ಟು’ ಎಂದು ಕರೆಯುತ್ತಿದ್ದರು. ಚಿಕ್ಕ ಗ್ಲಾಸ್ನಲ್ಲಿ ಬರುತ್ತಿತ್ತು. ಅದನ್ನು ನಾನು ಹಣೆಗೆ ಹಚ್ಚುತ್ತಿದ್ದೆ. ಆಮೇಲೆ ನಿಧಾನವಾಗಿ ಬಣ್ಣ ಬಣ್ಣದ ಬಿಂದಿ ಹಾಕಲು ಪ್ರಾರಂಭಿಸಿದೆ. ನಂತರ ಬಿಂದಿ ಗಾತ್ರವನ್ನು ಬದಲಾಯಿಸುತ್ತಾ ಬಂದೆ. ಆದರೆ ಈಗ ನನ್ನದೇ ಸ್ವಂತ ಸ್ಟಿಕ್ಕರ್ಸ್ ಇದೆ. ಈಗ ಬಿಂದಿ ನನ್ನ ಐಕಾನಿಕ್ ಪಾರ್ಟ್ ಆಗಿದೆ.
ಇದನ್ನೂ ಓದಿ: ಸ್ಯಾಮ್ ಕರ್ರಾನ್ ಅರ್ಧ ಶತಕದಾಟ.. 4 ವಿಕೆಟ್ಗಳ ಮೊದಲ ಜಯ ಪಡೆದ ಪಂಜಾಬ್ ಕಿಂಗ್ಸ್
‘ಕ’ ಅಂದ್ರೆ ಕರ್ನಾಟಕ
ನಾನೇ ನನ್ನ ಬಿಂದಿಯನ್ನು ಹಾಕುತ್ತೇನೆ ಮತ್ತು ಅದರಲ್ಲಿ ‘ಕ’ ಅಕ್ಷರವನ್ನು ಬಿಡಿಸುತ್ತೇನೆ. ಇದರ ನಿಜಾರ್ಥವೆಂದರೆ ಕೋಲ್ಕತ್ತಾ ಅದರ ಜೊತೆಗೆ ಕರ್ನಾಟಕ ಕೂಡ ಎಂದು ಹೇಳುತ್ತೇನೆ.
ಮಕ್ಕಳಿಗೂ ಇಷ್ಟ ನನ್ನ ಬಿಂದಿ
ಒಂದು ಬಾರಿ ನಾನು ಬಾಂಬೆಯ ಬೆಂಜಾಗೆ ಶಾಪಿಂಗ್ ಹೋಗಿದ್ದೆ. ಅವಾಗ ಅದರ ಮಾಲೀಕ ಬಂದು ಹೇಳಿದ್ರು ನಿನ್ನ ಬಿಂದಿಯನ್ನು ಮಕ್ಕಳು ಕೇಳುತ್ತಿದ್ದಾರೆ ಎಂದು. ಆದರೆ ನನ್ನ ಬಿಂದಿಯನ್ನು ನಾನೇ ರಚಿಸುತ್ತೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ