ಕನ್ವರ್ ಯಾತ್ರೆಗೆ ನೂರೆಂಟು ವಿಘ್ನಗಳನ್ನು ತಂದಿಟ್ಟ ಯೋಗಿ ಆದೇಶ
ಯೋಗಿ ಆದಿತ್ಯನಾಥ್ ಆದೇಶದ ವಿರುದ್ಧ ವಿಪಕ್ಷಗಳು ಕೆಂಡಾಮಂಡಲ
ಏನಿದು ಕನ್ವರ್ ಯಾತ್ರೆ..? ಯಾಕಿಷ್ಟು ವಿವಾದ..? ಆದೇಶದಲ್ಲಿ ಏನಿದೆ..?
ಲಖನೌ: ಇದೇ ತಿಂಗಳು 22 ರಿಂದ ಉತ್ತರಪ್ರದೇಶದ ಕನ್ವರ್ ಯಾತ್ರೆಗೆ ಹೊರಡಲು ಭಕ್ತರು ತಯಾರಾಗಿದ್ದಾರೆ. ಪವಿತ್ರ ಶ್ರಾವಣ ಆರಂಭವಾಗಿದ್ದು ಇದೇ ಸಮಯದಲ್ಲಿಯೇ ಶಿವ ಭಕ್ತರು ಕನ್ವರ್ ಯಾತ್ರೆಯನ್ನು ಆರಂಭಿಸುತ್ತಾರೆ. ಸುಮಾರು 240 ಕಿಲೋಮೀಟರ್ನ ಈ ಸುದೀರ್ಘ ಯಾತ್ರೆಯನ್ನು ಬದುಕಿನ ಅತ್ಯಂತ ಶ್ರೇಷ್ಠ ಯಾತ್ರೆ ಎಂದು ನಂಬುತ್ತಾರೆ ಶಿವ ಭಕ್ತರು. ಆದ್ರೆ ಗಣಪನ ಮದುವೆಗೆ ನೂರೆಂಟು ವಿಘ್ನ ಎನ್ನುವ ರೀತಿಯಲ್ಲಿ ಈ ವರ್ಷದ ಕನ್ವರ್ ಯಾತ್ರೆಗೆ ನೂರೆಂಟು ವಿಘ್ನಗಳು ಎದುರಾಗಿವೆ ಹಿಂದೆಂದೂ ಕಾಣದಷ್ಟು ರಾಜಕೀಯ ವಿವಾದಗಳನ್ನು ಈ ಬಾರಿ ಕನ್ವರ್ ಯಾತ್ರೆಗೆ ಎದುರಾಗಿದೆ. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೊರಡಿಸಿರುವ ಒಂದು ಆದೇಶ ಈವಾಗ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಯೋಗಿ ಆದಿತ್ಯನಾಥರನ್ನ ಹಿಟ್ಲರ್ಗೆ ಹೋಲಿಸುವ ಮಟ್ಟಕ್ಕೆ ಈ ವಿವಾದ ಹೋಗಿದೆ. ಹಾಗಾದ್ರೆ ಯೋಗಿ ಹೊರಡಿಸಿರುವ ಆ ಆದೇಶವಾದ್ರೂ ಏನು.? ಆ ಒಂದು ಆದೇಶ ಇಷ್ಟೊಂದು ವಿವಾದ ಎಬ್ಬಿಸಿದ್ದಾದ್ರೂ ಏಕೆ..?
ಹೋಟೆಲ್ ಡಾಬಾಗಳಿಗೆ ಮಾಲೀಕರ ಹೆಸರು ಬರೆದಿರುವ ಬೋರ್ಡ್ ಕಡ್ಡಾಯ
ಇಂಥಹದೊಂದು ಆದೇಶವನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹೊರಡಿಸಿದ್ದಾರೆ. ಸುದೀರ್ಘ ಪ್ರಯಾಣದಲ್ಲಿ ಭಕ್ತರಿಗೆ ಹಾಗೂ ಯಾತ್ರಾರ್ಥಿಗಳಿಗೆ ಅನ್ನ ಆಹಾರ ಒದಗಿಸಲು ಅಂತ ಕನ್ವರ್ ಯಾತ್ರೆ ಸಾಗುವ ಹಾದಿಗುಂಟ ನೂರಾರು ಹೋಟೆಲ್ಗಳು ಡಾಬಾಗಳು ಇನ್ಮುಂದೆ ತಲೆ ಎತ್ತಲಿವೆ. ಹೀಗಾಗಿ ಆ ಎಲ್ಲಾ ಹೋಟೆಲ್ ಮಾಲೀಕರು ಹಾಗೂ ಡಾಬಾ ಮಾಲೀಕರು ತಮ್ಮ ಹೆಸರನ್ನು ಕಡ್ಡಾಯವಾಗಿ ದೊಡ್ಡ ಅಕ್ಷರಗಳಲ್ಲಿ ಬರೆದಿರಬೇಕು ಎಂಬ ಆದೇಶವನ್ನು ಯೋಗಿ ಸರ್ಕಾರ ಹೊರಡಿಸಿದೆ. ಸರ್ಕಾರದ ಆದೇಶವನ್ನು ಅನ್ವಯಗೊಳಿಸಲು ಯುಪಿ ಪೊಲೀಸರು ಕೂಡ ಎಲ್ಲಾ ಹೋಟೆಲ್ ಹಾಗೂ ಡಾಬಾ ಮಾಲೀಕರಿಗೆ ಸೂಚನೆ ನೀಡುತ್ತಿವೆ. ಇದು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡದೊಂದು ಬಿರುಗಾಳಿಯನ್ನು ಎಬ್ಬಿಸಿದೆ. ಇದು ಮುಸ್ಲಿಂ ವ್ಯಾಪಾರಿಗಳಿಗೆ ಮಾಡುವ ದ್ರೋಹ ಹಾಗೂ ಅವರನ್ನು ತುಳಿಯುವ ಕಾರ್ಯ ಎಂದೇ ಪ್ರತಿಪಕ್ಷಗಳು ಸಿಎಂ ಯೋಗಿ ಆದಿತ್ಯನಾಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.
‘ಯೋಗಿ ದೇಹದಲ್ಲಿ ನಾಜಿ ಹಿಟ್ಲರ್ ಆತ್ಮ ಸೇರಿಕೊಂಡಿದೆ‘: ಅಸಾದುದ್ದೀನ್ ಓವೈಸಿ
ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಅಸಾದುದ್ದೀನ್ ಓವೈಸಿ ಕೆಂಡ ಕಾರಿದ್ದಾರೆ. ಇದು ಯುಪಿಯಲ್ಲಿ ಮುಸ್ಲಿಮರನ್ನು ಹತ್ತಿಕ್ಕುವ ಅವರ ವ್ಯಾಪಾರಕ್ಕೆ ಅಡ್ಡಿ ಮಾಡುವ ಒಂದು ವ್ಯವಸ್ಥಿತ ಯೋಜನೆ ಎಂದು ಓವೈಸಿ ಕಿಡಿಕಾರಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿರುವ ಹೈದ್ರಾಬಾದ್ ಸಂಸದ ಓವೈಸಿ, ಯೋಗಿ ಆದಿತ್ಯನಾಥ್ ದೇಹದಲ್ಲಿ ಹಿಟ್ಲರ್ನ ಆತ್ಮ ಸೇರಿಕೊಂಡಿದೆ. ಹೀಗಾಗಿಯೇ ಯೋಗಿ ಆದಿತ್ಯನಾಥ್ ಇಂತಹ ಆದೇಶಗಳನ್ನು ಹೊರಡಿಸುತ್ತಿದ್ದಾರೆ ಮತ್ತು ಅದನ್ನು ಕಾರ್ಯಗತಗೊಳಿಸಲು ಯುಪಿ ಪೊಲೀಸರು ಸಜ್ಜಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದ್ರೆ ಯುಪಿ ಪೊಲೀಸರು ಹೇಳುವ ಪ್ರಕಾರ ಈ ಹಿಂದೆ ನಡೆದ ಕನ್ವರ್ ಯಾತ್ರೆಯ ವೇಳೆ ಊಟದ ವಿಚಾರದಲ್ಲಿ ಅನೇಕ ಸಂಘರ್ಷಗಳನ್ನು ನಾವು ಎದುರಿಸಿದ್ದೇವೆ ಹೀಗಾಗಿಯೇ ಸರ್ಕಾರ ಹೊರಡಿಸಿರುವ ಆದೇಶ ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.
#WATCH | On UP police in Muzaffarnagar asking eateries, including roadside carts, on the Kanwar Yatra route to display the names of owners, AIMIM chief Asaduddin Owaisi says, “We condemn it because it is a violation of Article 17 of the Constitution, which talks about… pic.twitter.com/4b3FND3cXI
— ANI (@ANI) July 18, 2024
ಇದನ್ನೂ ಓದಿ: ಅಲ್ಲಿ ಕೋರ್ಟ್ ಆದೇಶ ನೀಡಿತ್ತು.. ಇಲ್ಲಿ ತಾಯಿ ಅಂತ್ಯಕ್ರಿಯೆ ಮುಗಿದಿತ್ತು; ಅಮ್ಮನ ನೋಡೋ ಭಾಗ್ಯ ರಘುಗೆ ಇರಲಿಲ್ವಾ?
ಯೋಗಿ ಆದೇಶಕ್ಕೆ ಮೈತ್ರಿ ಪಕ್ಷಗಳ ಆಕ್ಷೇಪ: ಇದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಲ್ಲವೆಂದ ಜೆಡಿಯು
ಇನ್ನು ಸಿಎಂ ಯೋಗಿ ಆದಿತ್ಯನಾಥ್ ಹೊರಡಿಸಿರುವ ಕನ್ವರ್ ಯಾತ್ರೆಯ ಬಗೆಗಿನ ಆದೇಶಕ್ಕೆ ಬಿಜೆಪಿಯ ಮೈತ್ರಿ ಪಕ್ಷಗಳೇ ಅಪಸ್ವರ ಎತ್ತಿವೆ. ಈ ಬಗ್ಗೆ ಮಾತನಾಡಿರುವ ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಇದು ಮೋದಿಯವರೇ ಹೇಳಿರುವ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯ ವಿರುದ್ಧವಿದೆ. ಇದನ್ನು ನಾವು ಒಪ್ಪಿಗೆಯಿಲ್ಲ ಎಂದು ಹೇಳಿದ್ದಾರೆ.
ಏನಿದು ಕನ್ವರ್ ಯಾತ್ರೆ.? ಯಾತ್ರೆಯ ಮಹತ್ವವೇನು.?
ಇಷ್ಟೆಲ್ಲಾ ವಿವಾದ ಎಬ್ಬಿಸಿರುವ ಕನ್ವರ್ ಯಾತ್ರೆ ಅಂದ್ರೆ ಏನಿದು ಹಾಗಿದ್ರೆ. ಕನ್ವರ್ ಯಾತ್ರೆ ಅಂದ್ರೆ ಶಿವಭಕ್ತರು ಶ್ರೇಷ್ಠ ಶ್ರಾವಣ ಮಾಸದಂದು ಕೈಗೊಳ್ಳುತ್ತಾರೆ. ಈ ಒಂದು ಯಾತ್ರೆಯೂ ಉತ್ತರಾಖಂಡ್ನ ಹರಿದ್ವಾರದಿಂದ ಶುರುವಾಗುತ್ತದೆ. ಗಂಗೆಯ ಪವಿತ್ರ ನೀರನ್ನು ಹೂಜಿಯಲ್ಲಿ ತುಂಬಿಕೊಂಡು ಒಂದು ಕಟ್ಟಿಗೆ ತುಂಡಿಗೆ ಎರಡು ಬದಿ ಕಟ್ಟಿಕೊಂಡು ಶಿವಭಕ್ತರು ತಮ್ಮ ಹೆಗಲ ಮೇಲೆ ಶ್ರವಣಕುಮಾರ್ ತನ್ನ ತಂದೆ ತಾಯಿಯನ್ನು ಹೊತ್ತುಕೊಂಡು ಹೋದಂತೆ ಈ ಹೂಜಿಗಳನ್ನು ಭುಜದ ಮೇಲೆ ಹೊತ್ತುಕೊಂಡು ಸಾಗುತ್ತಾರೆ. ದಾರಿಯುದ್ದಕ್ಕೂ ಸಿಗುವ ಶಿವನ ದೇವಸ್ಥಾನಗಳಿಗೆ ಈ ಗಂಗಾಜಲದಿಂದ ಅಭಿಷೇಕ ಮಾಡುತ್ತಾರೆ.
ಕನ್ವರ್ ಯಾತ್ರೆಯ ಮಾರ್ಗ ಎಲ್ಲಿಂದ ಎಲ್ಲಿಗೆ?
ಉತ್ತರಾಖಂಡ್ನ ಹರಿದ್ವಾರದಿಂದ ಶುರುವಾಗುವ ಈ ಯಾತ್ರೆ ಗೋಮುಖ ಗಂಗೋತ್ರಿಯನ್ನು ತಲುಪುತ್ತದೆ ಬಿಹಾರದಲ್ಲಿ ಅಸಜಗೈಬಿನಾಥ್, ಸುಲ್ತಾನಗಂಜ್ ಭಗ್ಲಾಪುರ್ನೆಡೆಗೆ ಸಾಗುತ್ತದೆ. ಹೆಗಲ ಮೇಲೆ ಹೊತ್ತಿರುವ ಗಂಗಾಜಲವನ್ನು ಕಾಶಿ ವಿಶ್ವನಾಥನಿಗೆ ಸೇರಿದಂತೆ ಹಲವು ಶಿವನ ದೇವಸ್ಥಾನಗಳಲ್ಲಿ ಶಿವಲಿಂಗಕ್ಕೆ ಅರ್ಪಿಸಿ ಬರುತ್ತಾರೆ. ಈ ರೀತಿ ಯಾತ್ರೆಯನ್ನು ಮಾಡುವ ಭಕ್ತರನ್ನು ಕನ್ವರಿಯಾಸ್ ಅಥವಾ ಭೋಲೆ ಎಂದು ಕರೆಯುತ್ತಾರೆ. 1980ಕ್ಕೂ ಮೊದಲು ಈ ಯಾತ್ರೆಯನ್ನು ಕೆಲವೇ ಕೆಲವು ಸನ್ಯಾಸಿಗಳು ಹಾಗೂ ವೃದ್ಧ ಶಿವಭಕ್ತರು ಮಾತ್ರ ಮಾಡುತ್ತಿದ್ದರು. ಇದರ ಮಹತ್ವ ಹಾಗೂ ಶಕ್ತಿಯ ಪರಿಚಯ ದೇಶದ ತುಂಬಾ ಹರಡಿದ ಮೇಲೆ 80ರ ದಶಕದ ಬಳಿಕ ಸಾಮಾನ್ಯ ಜನರು ಕೂಡ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆರಂಭಿಸಿದರು. ಪ್ರತಿ ವರ್ಷ ಹರಿದ್ವಾರದಲ್ಲಿ ಲಕ್ಷಾಂತರ ಭಕ್ತರು ಈ ಯಾತ್ರೆಗಾಗಿ ಸೇರಿಕೊಳ್ಳುತ್ತಾರೆ. ಭಾರತದಲ್ಲಿಯೇ ಅತಿಹೆಚ್ಚು ಭಕ್ತರು ಸೇರಿಕೊಳ್ಳುವ ವರ್ಷಾಚರಣೆಯಾಗಿ ಕನ್ವರ್ ಯಾತ್ರೆಯನ್ನು ಗುರುತಿಸಲಾಗುತ್ತದೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಸುಮಾರು 1 ಕೋಟಿ 20 ಲಕ್ಷ ಶಿಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಅತಿಹೆಚ್ಚು ಭಕ್ತರು ಸಮೀಪದ ರಾಜ್ಯಗಳಾದ ಉತ್ತರಪ್ರದೇಶ, ಹರಿಯಾಣ ರಾಜಸ್ಥಾನ ಪಂಜಾಭ್, ಬಿಹಾರ್ ಜಾರ್ಖಂಡ್ ಛತ್ತಿಸಗಢ ಹಾಗೂ ದೆಹಲಿಯಿಂದ ಆಗಮಿಸುತ್ತಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ.. 1000 ಭಾರತೀಯ ವಿದ್ಯಾರ್ಥಿಗಳ ರಕ್ಷಣೆಯೇ ರೋಚಕ
ಕನ್ವರ್ ಯಾತ್ರೆಯನ್ನು ಮೊದಲು ಶುರು ಮಾಡಿದ್ದು ಮಹಾಶಿವಭಕ್ತ ರಾವಣ
ಇನ್ನೂ ಪುರಾಣಗಳ ಪ್ರಕಾರ ಈ ಕನ್ವರ್ ಯಾತ್ರೆಯನ್ನು ಮೊದಲು ಆರಂಭಿಸಿದ್ದು ಮಹಾಶಿವಭಕ್ತ ರಾವಣ. ಸಮುದ್ರ ಮಂಥನದ ವೇಳೆ ಅಮೃತಕ್ಕೂ ಮೊದಲು ಆಚೆ ಬಂದಿದ್ದು ಕಾರ್ಕೋಟಕ ವಿಷ. ಆ ವಿಷದಿಂದ ವಿಶ್ವವನ್ನು ರಕ್ಷಿಸಲು ತ್ರೇತಾಯುಗದಲ್ಲಿ ಶಿವನು ಆ ವಿಷವನ್ನು ಕುಡಿಯುತ್ತಾನೆ ಇದರಿಂದ ಶಿವನಲ್ಲಿ ಋಣಾತ್ಮಕ ಶಕ್ತಿಯೊಂದು ಆವರಿಸಲು ಶುರುವಾಗುತ್ತದೆ. ಇದನ್ನು ಕಂಡ ಶಿವಭಕ್ತ ರಾವಣ ಕನ್ವರ್ನಲ್ಲಿ ಅಂದ್ರೆ ಹೂಜಿಯಲ್ಲಿ ಪವಿತ್ರ ಗಂಗಾಜಲವನ್ನು ತಂದು ಪುರಮಹಾದೇವ ದೇಗುಲದಲ್ಲಿನ ಶಿವಲಿಂಗದ ಮೇಲೆ ಸುರಿಯುತ್ತಾನೆ. ಆಗ ಶಿವನಲ್ಲಿ ಆವರಿಸಿಕೊಳ್ಳುತ್ತಿದ್ದ ಋಣಾತ್ಮಕ ಶಕ್ತಿಯು ಬಿಡುಗಡೆ ಹೊಂದುತ್ತಿದೆ. ತ್ರೇತಾಯುಗದಿಂದಲೂ ಸಾಧು ಸನ್ಯಾಸಿಗಳು ಪ್ರತಿ ಶ್ರಾವಣ ಮಾಸದಲ್ಲಿ ಈ ಕನ್ವರ್ ಯಾತ್ರೆಯನ್ನು ಕೈಗೊಳ್ಳುತ್ತಾರೆ. 1980ರ ಬಳಿಕ ಈ ಯಾತ್ರೆ ಪ್ರಸಿದ್ಧಿ ಪಡೆದ ಕಾರಣ ಪ್ರತಿವರ್ಷ ಶ್ರಾವಣ ಮಾಸದ ವೇಳೆ ಈ ಯಾತ್ರೆಯನ್ನು ಆರಂಭಿಸುತ್ತಾರೆ ಶಿವಭಕ್ತರು. ಈ ಬಾರಿ ಜುಲೈ 22 ರಿಂದ ಆರಂಭವಾಗುವ ಯಾತ್ರೆ ಆಗಸ್ಟ್ 6ರಂದು ಮುಕ್ತಾಯಗೊಳ್ಳಲಿದೆ. ಈ ವರ್ಷ ಸುಮಾರು 3 ಕೋಟಿಗೂ ಅಧಿಕ ಕನ್ವರ್ ಯಾತ್ರಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕನ್ವರ್ ಯಾತ್ರೆಗೆ ನೂರೆಂಟು ವಿಘ್ನಗಳನ್ನು ತಂದಿಟ್ಟ ಯೋಗಿ ಆದೇಶ
ಯೋಗಿ ಆದಿತ್ಯನಾಥ್ ಆದೇಶದ ವಿರುದ್ಧ ವಿಪಕ್ಷಗಳು ಕೆಂಡಾಮಂಡಲ
ಏನಿದು ಕನ್ವರ್ ಯಾತ್ರೆ..? ಯಾಕಿಷ್ಟು ವಿವಾದ..? ಆದೇಶದಲ್ಲಿ ಏನಿದೆ..?
ಲಖನೌ: ಇದೇ ತಿಂಗಳು 22 ರಿಂದ ಉತ್ತರಪ್ರದೇಶದ ಕನ್ವರ್ ಯಾತ್ರೆಗೆ ಹೊರಡಲು ಭಕ್ತರು ತಯಾರಾಗಿದ್ದಾರೆ. ಪವಿತ್ರ ಶ್ರಾವಣ ಆರಂಭವಾಗಿದ್ದು ಇದೇ ಸಮಯದಲ್ಲಿಯೇ ಶಿವ ಭಕ್ತರು ಕನ್ವರ್ ಯಾತ್ರೆಯನ್ನು ಆರಂಭಿಸುತ್ತಾರೆ. ಸುಮಾರು 240 ಕಿಲೋಮೀಟರ್ನ ಈ ಸುದೀರ್ಘ ಯಾತ್ರೆಯನ್ನು ಬದುಕಿನ ಅತ್ಯಂತ ಶ್ರೇಷ್ಠ ಯಾತ್ರೆ ಎಂದು ನಂಬುತ್ತಾರೆ ಶಿವ ಭಕ್ತರು. ಆದ್ರೆ ಗಣಪನ ಮದುವೆಗೆ ನೂರೆಂಟು ವಿಘ್ನ ಎನ್ನುವ ರೀತಿಯಲ್ಲಿ ಈ ವರ್ಷದ ಕನ್ವರ್ ಯಾತ್ರೆಗೆ ನೂರೆಂಟು ವಿಘ್ನಗಳು ಎದುರಾಗಿವೆ ಹಿಂದೆಂದೂ ಕಾಣದಷ್ಟು ರಾಜಕೀಯ ವಿವಾದಗಳನ್ನು ಈ ಬಾರಿ ಕನ್ವರ್ ಯಾತ್ರೆಗೆ ಎದುರಾಗಿದೆ. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೊರಡಿಸಿರುವ ಒಂದು ಆದೇಶ ಈವಾಗ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಯೋಗಿ ಆದಿತ್ಯನಾಥರನ್ನ ಹಿಟ್ಲರ್ಗೆ ಹೋಲಿಸುವ ಮಟ್ಟಕ್ಕೆ ಈ ವಿವಾದ ಹೋಗಿದೆ. ಹಾಗಾದ್ರೆ ಯೋಗಿ ಹೊರಡಿಸಿರುವ ಆ ಆದೇಶವಾದ್ರೂ ಏನು.? ಆ ಒಂದು ಆದೇಶ ಇಷ್ಟೊಂದು ವಿವಾದ ಎಬ್ಬಿಸಿದ್ದಾದ್ರೂ ಏಕೆ..?
ಹೋಟೆಲ್ ಡಾಬಾಗಳಿಗೆ ಮಾಲೀಕರ ಹೆಸರು ಬರೆದಿರುವ ಬೋರ್ಡ್ ಕಡ್ಡಾಯ
ಇಂಥಹದೊಂದು ಆದೇಶವನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹೊರಡಿಸಿದ್ದಾರೆ. ಸುದೀರ್ಘ ಪ್ರಯಾಣದಲ್ಲಿ ಭಕ್ತರಿಗೆ ಹಾಗೂ ಯಾತ್ರಾರ್ಥಿಗಳಿಗೆ ಅನ್ನ ಆಹಾರ ಒದಗಿಸಲು ಅಂತ ಕನ್ವರ್ ಯಾತ್ರೆ ಸಾಗುವ ಹಾದಿಗುಂಟ ನೂರಾರು ಹೋಟೆಲ್ಗಳು ಡಾಬಾಗಳು ಇನ್ಮುಂದೆ ತಲೆ ಎತ್ತಲಿವೆ. ಹೀಗಾಗಿ ಆ ಎಲ್ಲಾ ಹೋಟೆಲ್ ಮಾಲೀಕರು ಹಾಗೂ ಡಾಬಾ ಮಾಲೀಕರು ತಮ್ಮ ಹೆಸರನ್ನು ಕಡ್ಡಾಯವಾಗಿ ದೊಡ್ಡ ಅಕ್ಷರಗಳಲ್ಲಿ ಬರೆದಿರಬೇಕು ಎಂಬ ಆದೇಶವನ್ನು ಯೋಗಿ ಸರ್ಕಾರ ಹೊರಡಿಸಿದೆ. ಸರ್ಕಾರದ ಆದೇಶವನ್ನು ಅನ್ವಯಗೊಳಿಸಲು ಯುಪಿ ಪೊಲೀಸರು ಕೂಡ ಎಲ್ಲಾ ಹೋಟೆಲ್ ಹಾಗೂ ಡಾಬಾ ಮಾಲೀಕರಿಗೆ ಸೂಚನೆ ನೀಡುತ್ತಿವೆ. ಇದು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡದೊಂದು ಬಿರುಗಾಳಿಯನ್ನು ಎಬ್ಬಿಸಿದೆ. ಇದು ಮುಸ್ಲಿಂ ವ್ಯಾಪಾರಿಗಳಿಗೆ ಮಾಡುವ ದ್ರೋಹ ಹಾಗೂ ಅವರನ್ನು ತುಳಿಯುವ ಕಾರ್ಯ ಎಂದೇ ಪ್ರತಿಪಕ್ಷಗಳು ಸಿಎಂ ಯೋಗಿ ಆದಿತ್ಯನಾಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.
‘ಯೋಗಿ ದೇಹದಲ್ಲಿ ನಾಜಿ ಹಿಟ್ಲರ್ ಆತ್ಮ ಸೇರಿಕೊಂಡಿದೆ‘: ಅಸಾದುದ್ದೀನ್ ಓವೈಸಿ
ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಅಸಾದುದ್ದೀನ್ ಓವೈಸಿ ಕೆಂಡ ಕಾರಿದ್ದಾರೆ. ಇದು ಯುಪಿಯಲ್ಲಿ ಮುಸ್ಲಿಮರನ್ನು ಹತ್ತಿಕ್ಕುವ ಅವರ ವ್ಯಾಪಾರಕ್ಕೆ ಅಡ್ಡಿ ಮಾಡುವ ಒಂದು ವ್ಯವಸ್ಥಿತ ಯೋಜನೆ ಎಂದು ಓವೈಸಿ ಕಿಡಿಕಾರಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿರುವ ಹೈದ್ರಾಬಾದ್ ಸಂಸದ ಓವೈಸಿ, ಯೋಗಿ ಆದಿತ್ಯನಾಥ್ ದೇಹದಲ್ಲಿ ಹಿಟ್ಲರ್ನ ಆತ್ಮ ಸೇರಿಕೊಂಡಿದೆ. ಹೀಗಾಗಿಯೇ ಯೋಗಿ ಆದಿತ್ಯನಾಥ್ ಇಂತಹ ಆದೇಶಗಳನ್ನು ಹೊರಡಿಸುತ್ತಿದ್ದಾರೆ ಮತ್ತು ಅದನ್ನು ಕಾರ್ಯಗತಗೊಳಿಸಲು ಯುಪಿ ಪೊಲೀಸರು ಸಜ್ಜಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದ್ರೆ ಯುಪಿ ಪೊಲೀಸರು ಹೇಳುವ ಪ್ರಕಾರ ಈ ಹಿಂದೆ ನಡೆದ ಕನ್ವರ್ ಯಾತ್ರೆಯ ವೇಳೆ ಊಟದ ವಿಚಾರದಲ್ಲಿ ಅನೇಕ ಸಂಘರ್ಷಗಳನ್ನು ನಾವು ಎದುರಿಸಿದ್ದೇವೆ ಹೀಗಾಗಿಯೇ ಸರ್ಕಾರ ಹೊರಡಿಸಿರುವ ಆದೇಶ ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.
#WATCH | On UP police in Muzaffarnagar asking eateries, including roadside carts, on the Kanwar Yatra route to display the names of owners, AIMIM chief Asaduddin Owaisi says, “We condemn it because it is a violation of Article 17 of the Constitution, which talks about… pic.twitter.com/4b3FND3cXI
— ANI (@ANI) July 18, 2024
ಇದನ್ನೂ ಓದಿ: ಅಲ್ಲಿ ಕೋರ್ಟ್ ಆದೇಶ ನೀಡಿತ್ತು.. ಇಲ್ಲಿ ತಾಯಿ ಅಂತ್ಯಕ್ರಿಯೆ ಮುಗಿದಿತ್ತು; ಅಮ್ಮನ ನೋಡೋ ಭಾಗ್ಯ ರಘುಗೆ ಇರಲಿಲ್ವಾ?
ಯೋಗಿ ಆದೇಶಕ್ಕೆ ಮೈತ್ರಿ ಪಕ್ಷಗಳ ಆಕ್ಷೇಪ: ಇದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಲ್ಲವೆಂದ ಜೆಡಿಯು
ಇನ್ನು ಸಿಎಂ ಯೋಗಿ ಆದಿತ್ಯನಾಥ್ ಹೊರಡಿಸಿರುವ ಕನ್ವರ್ ಯಾತ್ರೆಯ ಬಗೆಗಿನ ಆದೇಶಕ್ಕೆ ಬಿಜೆಪಿಯ ಮೈತ್ರಿ ಪಕ್ಷಗಳೇ ಅಪಸ್ವರ ಎತ್ತಿವೆ. ಈ ಬಗ್ಗೆ ಮಾತನಾಡಿರುವ ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಇದು ಮೋದಿಯವರೇ ಹೇಳಿರುವ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯ ವಿರುದ್ಧವಿದೆ. ಇದನ್ನು ನಾವು ಒಪ್ಪಿಗೆಯಿಲ್ಲ ಎಂದು ಹೇಳಿದ್ದಾರೆ.
ಏನಿದು ಕನ್ವರ್ ಯಾತ್ರೆ.? ಯಾತ್ರೆಯ ಮಹತ್ವವೇನು.?
ಇಷ್ಟೆಲ್ಲಾ ವಿವಾದ ಎಬ್ಬಿಸಿರುವ ಕನ್ವರ್ ಯಾತ್ರೆ ಅಂದ್ರೆ ಏನಿದು ಹಾಗಿದ್ರೆ. ಕನ್ವರ್ ಯಾತ್ರೆ ಅಂದ್ರೆ ಶಿವಭಕ್ತರು ಶ್ರೇಷ್ಠ ಶ್ರಾವಣ ಮಾಸದಂದು ಕೈಗೊಳ್ಳುತ್ತಾರೆ. ಈ ಒಂದು ಯಾತ್ರೆಯೂ ಉತ್ತರಾಖಂಡ್ನ ಹರಿದ್ವಾರದಿಂದ ಶುರುವಾಗುತ್ತದೆ. ಗಂಗೆಯ ಪವಿತ್ರ ನೀರನ್ನು ಹೂಜಿಯಲ್ಲಿ ತುಂಬಿಕೊಂಡು ಒಂದು ಕಟ್ಟಿಗೆ ತುಂಡಿಗೆ ಎರಡು ಬದಿ ಕಟ್ಟಿಕೊಂಡು ಶಿವಭಕ್ತರು ತಮ್ಮ ಹೆಗಲ ಮೇಲೆ ಶ್ರವಣಕುಮಾರ್ ತನ್ನ ತಂದೆ ತಾಯಿಯನ್ನು ಹೊತ್ತುಕೊಂಡು ಹೋದಂತೆ ಈ ಹೂಜಿಗಳನ್ನು ಭುಜದ ಮೇಲೆ ಹೊತ್ತುಕೊಂಡು ಸಾಗುತ್ತಾರೆ. ದಾರಿಯುದ್ದಕ್ಕೂ ಸಿಗುವ ಶಿವನ ದೇವಸ್ಥಾನಗಳಿಗೆ ಈ ಗಂಗಾಜಲದಿಂದ ಅಭಿಷೇಕ ಮಾಡುತ್ತಾರೆ.
ಕನ್ವರ್ ಯಾತ್ರೆಯ ಮಾರ್ಗ ಎಲ್ಲಿಂದ ಎಲ್ಲಿಗೆ?
ಉತ್ತರಾಖಂಡ್ನ ಹರಿದ್ವಾರದಿಂದ ಶುರುವಾಗುವ ಈ ಯಾತ್ರೆ ಗೋಮುಖ ಗಂಗೋತ್ರಿಯನ್ನು ತಲುಪುತ್ತದೆ ಬಿಹಾರದಲ್ಲಿ ಅಸಜಗೈಬಿನಾಥ್, ಸುಲ್ತಾನಗಂಜ್ ಭಗ್ಲಾಪುರ್ನೆಡೆಗೆ ಸಾಗುತ್ತದೆ. ಹೆಗಲ ಮೇಲೆ ಹೊತ್ತಿರುವ ಗಂಗಾಜಲವನ್ನು ಕಾಶಿ ವಿಶ್ವನಾಥನಿಗೆ ಸೇರಿದಂತೆ ಹಲವು ಶಿವನ ದೇವಸ್ಥಾನಗಳಲ್ಲಿ ಶಿವಲಿಂಗಕ್ಕೆ ಅರ್ಪಿಸಿ ಬರುತ್ತಾರೆ. ಈ ರೀತಿ ಯಾತ್ರೆಯನ್ನು ಮಾಡುವ ಭಕ್ತರನ್ನು ಕನ್ವರಿಯಾಸ್ ಅಥವಾ ಭೋಲೆ ಎಂದು ಕರೆಯುತ್ತಾರೆ. 1980ಕ್ಕೂ ಮೊದಲು ಈ ಯಾತ್ರೆಯನ್ನು ಕೆಲವೇ ಕೆಲವು ಸನ್ಯಾಸಿಗಳು ಹಾಗೂ ವೃದ್ಧ ಶಿವಭಕ್ತರು ಮಾತ್ರ ಮಾಡುತ್ತಿದ್ದರು. ಇದರ ಮಹತ್ವ ಹಾಗೂ ಶಕ್ತಿಯ ಪರಿಚಯ ದೇಶದ ತುಂಬಾ ಹರಡಿದ ಮೇಲೆ 80ರ ದಶಕದ ಬಳಿಕ ಸಾಮಾನ್ಯ ಜನರು ಕೂಡ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆರಂಭಿಸಿದರು. ಪ್ರತಿ ವರ್ಷ ಹರಿದ್ವಾರದಲ್ಲಿ ಲಕ್ಷಾಂತರ ಭಕ್ತರು ಈ ಯಾತ್ರೆಗಾಗಿ ಸೇರಿಕೊಳ್ಳುತ್ತಾರೆ. ಭಾರತದಲ್ಲಿಯೇ ಅತಿಹೆಚ್ಚು ಭಕ್ತರು ಸೇರಿಕೊಳ್ಳುವ ವರ್ಷಾಚರಣೆಯಾಗಿ ಕನ್ವರ್ ಯಾತ್ರೆಯನ್ನು ಗುರುತಿಸಲಾಗುತ್ತದೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಸುಮಾರು 1 ಕೋಟಿ 20 ಲಕ್ಷ ಶಿಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಅತಿಹೆಚ್ಚು ಭಕ್ತರು ಸಮೀಪದ ರಾಜ್ಯಗಳಾದ ಉತ್ತರಪ್ರದೇಶ, ಹರಿಯಾಣ ರಾಜಸ್ಥಾನ ಪಂಜಾಭ್, ಬಿಹಾರ್ ಜಾರ್ಖಂಡ್ ಛತ್ತಿಸಗಢ ಹಾಗೂ ದೆಹಲಿಯಿಂದ ಆಗಮಿಸುತ್ತಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ.. 1000 ಭಾರತೀಯ ವಿದ್ಯಾರ್ಥಿಗಳ ರಕ್ಷಣೆಯೇ ರೋಚಕ
ಕನ್ವರ್ ಯಾತ್ರೆಯನ್ನು ಮೊದಲು ಶುರು ಮಾಡಿದ್ದು ಮಹಾಶಿವಭಕ್ತ ರಾವಣ
ಇನ್ನೂ ಪುರಾಣಗಳ ಪ್ರಕಾರ ಈ ಕನ್ವರ್ ಯಾತ್ರೆಯನ್ನು ಮೊದಲು ಆರಂಭಿಸಿದ್ದು ಮಹಾಶಿವಭಕ್ತ ರಾವಣ. ಸಮುದ್ರ ಮಂಥನದ ವೇಳೆ ಅಮೃತಕ್ಕೂ ಮೊದಲು ಆಚೆ ಬಂದಿದ್ದು ಕಾರ್ಕೋಟಕ ವಿಷ. ಆ ವಿಷದಿಂದ ವಿಶ್ವವನ್ನು ರಕ್ಷಿಸಲು ತ್ರೇತಾಯುಗದಲ್ಲಿ ಶಿವನು ಆ ವಿಷವನ್ನು ಕುಡಿಯುತ್ತಾನೆ ಇದರಿಂದ ಶಿವನಲ್ಲಿ ಋಣಾತ್ಮಕ ಶಕ್ತಿಯೊಂದು ಆವರಿಸಲು ಶುರುವಾಗುತ್ತದೆ. ಇದನ್ನು ಕಂಡ ಶಿವಭಕ್ತ ರಾವಣ ಕನ್ವರ್ನಲ್ಲಿ ಅಂದ್ರೆ ಹೂಜಿಯಲ್ಲಿ ಪವಿತ್ರ ಗಂಗಾಜಲವನ್ನು ತಂದು ಪುರಮಹಾದೇವ ದೇಗುಲದಲ್ಲಿನ ಶಿವಲಿಂಗದ ಮೇಲೆ ಸುರಿಯುತ್ತಾನೆ. ಆಗ ಶಿವನಲ್ಲಿ ಆವರಿಸಿಕೊಳ್ಳುತ್ತಿದ್ದ ಋಣಾತ್ಮಕ ಶಕ್ತಿಯು ಬಿಡುಗಡೆ ಹೊಂದುತ್ತಿದೆ. ತ್ರೇತಾಯುಗದಿಂದಲೂ ಸಾಧು ಸನ್ಯಾಸಿಗಳು ಪ್ರತಿ ಶ್ರಾವಣ ಮಾಸದಲ್ಲಿ ಈ ಕನ್ವರ್ ಯಾತ್ರೆಯನ್ನು ಕೈಗೊಳ್ಳುತ್ತಾರೆ. 1980ರ ಬಳಿಕ ಈ ಯಾತ್ರೆ ಪ್ರಸಿದ್ಧಿ ಪಡೆದ ಕಾರಣ ಪ್ರತಿವರ್ಷ ಶ್ರಾವಣ ಮಾಸದ ವೇಳೆ ಈ ಯಾತ್ರೆಯನ್ನು ಆರಂಭಿಸುತ್ತಾರೆ ಶಿವಭಕ್ತರು. ಈ ಬಾರಿ ಜುಲೈ 22 ರಿಂದ ಆರಂಭವಾಗುವ ಯಾತ್ರೆ ಆಗಸ್ಟ್ 6ರಂದು ಮುಕ್ತಾಯಗೊಳ್ಳಲಿದೆ. ಈ ವರ್ಷ ಸುಮಾರು 3 ಕೋಟಿಗೂ ಅಧಿಕ ಕನ್ವರ್ ಯಾತ್ರಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ