2-3 ದಿನದಲ್ಲಿ ಬೆಂಬಲಿಗರ ಸಭೆ ನಡೆಸಲಿರುವ ವೀಣಾ
ವೀಣಾ ಕಾಶಪ್ಪನವರ್ ಮನವೊಲಿಕೆಗೆ ಸಂಯುಕ್ತಾ ಯತ್ನ
ಬೆಂಗಳೂರಿನಲ್ಲಿ ಎರಡೂ ಬಣದ ಮಧ್ಯೆ ಸಂಧಾನ ಸಭೆ
ಬಾಗಲಕೋಟೆ ಮತ್ತು ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಅನೌನ್ಸ್ ಆದ್ರೂ, ಬಂಡಾಯದ ಕಿಡಿ ಇನ್ನೂ ಹೊಗೆಯಾಡುತ್ತಲೇ ಇದೆ. ಬೆಂಗಳೂರಿಗೆ ಬಂದು ಸಿಎಂ ಬಳಿ ಟಿಕೆಟ್ ಬದಲಾವಣೆಗೆ ಬೇಡಿಕೆ ಇಟ್ಟಿದ್ದ ವೀಣಾ ಕಾಶಪ್ಪನವರ್ ನಿರಾಶೆಯಲ್ಲೇ ಹಿಂದಿರಿಗಿದ್ರು. ಇದೀಗ ಬೆಂಬಲಗರ ಸಭೆ ಕರೆದಿರೋದು ಕಾಂಗ್ರೆಸ್ಗೆ ಮತ್ತೆ ತಲೆನೋವು ತರಿಸಿದೆ. ಮತ್ತೊಂದೆಡೆ ಕೋಲಾರದಲ್ಲಿ ರಮೇಶ್ಕುಮಾರ್, ಮುನಿಯಪ್ಪ ಬಣದ ಮಧ್ಯೆ ರಾಜೀ ಸಂಧಾನ ಯಶಸ್ವಿಯಾಗಿದೆ.
ಮುಂದಿನ ರಾಜಕೀಯ ನಡೆ ಬಗ್ಗೆ ಸಭೆಯಲ್ಲಿ ಘೋಷಣೆ ಸಾಧ್ಯತೆ
ಬಾಗಲಕೋಟೆ ವಿಧಾನಸಭಾ ಟಿಕೆಟ್ ಕೈತಪ್ಪಿದ್ರೂ, ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರ್ ಮಾತ್ರ, ತಮ್ಮ ಟಿಕೆಟ್ ಪಡೆಯುವ ಪ್ರಯತ್ನವನ್ನು ಮಾತ್ರ ಕೈ ಬಿಟ್ಟಿಲ್ಲ. ಸಿಎಂ ಆಹ್ವಾನದ ಮೇರೆಗೆ ಬೆಂಗಳೂರಿಗೆ ಆಗಮಿಸಿ, ಟಿಕೆಟ್ ಬದಲಾವಣೆ ಮಾಡುವಂತೆ ಬೇಡಿಕೆ ಇಟ್ಟಿದ್ರು. ಆದ್ರೆ ಸಿಎಂ ಟಿಕೆಟ್ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ವೀಣಾ ಕಾಶಪ್ಪನವರ್ಗೆ ಕಡ್ಡಿ ಮುರಿದಂತೆ ತಿಳಿಸಿದ್ದಾರೆ. ಇದರಿಂದ ನಿರಾಶೆಯಿಂದ ಬರಿಗೈಯಲ್ಲೇ ಕ್ಷೇತ್ರಕ್ಕೆ ವಾಪಸ್ ಆದ ವೀಣಾ ಕಾಶಪ್ಪನವರ್, ತಮ್ಮ ಬೆಂಬಲಿಗರ ಜೊತೆ ಸಭೆ ನಡೆಯಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಎಂಟ್ರಿ? HDK ಭೇಟಿ ಬಳಿ ಸುಮಲತಾ ಬಿಚ್ಚಿಟ್ಟ ಸತ್ಯವೇನು?
ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಇನ್ನೆರಡು ದಿನದಲ್ಲಿ ವೀಣಾ ಕಾಶಪ್ಪನವರ್ ಬೆಂಬಲಿಗರ ಸಭೆ ನಡೆಸುವ ಸಾಧ್ಯತೆ ಇದೆ. ಜಿಲ್ಲೆಯ ಶಾಸಕರನ್ನ ಹೊರತುಪಡಿಸಿ, ಕೇವಲ ತಾಲೂಕ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಜೊತೆ ಸಭೆ ನಡೆಸಲು ನಿರ್ಧಾರಿಸಿದ್ದಾರೆ. ಸಿಎಂ ಮಾತಿನಿಂದ ಬೇಸರಗೊಂಡಿರುವ ವೀಣಾ ಕಾಶಪ್ಪನವರ್, ಈಗಾಗಲೇ ಪ್ರಚಾರದಿಂದ ತಟಸ್ಥ ಉಳಿಯುವ ನಿರ್ಧಾರ ಕೈಗೊಂಡಿದ್ದ ವೀಣಾ, ಮುಂದಿನ ರಾಜಕೀಯ ನಡೆ ಬಗ್ಗೆ ಬೆಂಬಲಿಗರ ಚರ್ಚಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್, ಹಿರಿಯ ಮುಖಂಡರೊಂದಿಗೆ ವೀಣಾ ಕಾಶಪ್ಪನವರ್ರನ್ನು ಭೇಟಿಯಾಗಿ ಮನವೊಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುನಿಯಪ್ಪ ಭೇಟಿಯಾಗಿ ಆಶೀರ್ವಾದ ಪಡೆದ ಗೌತಮ್
ಬಾಗಲಕೋಟೆ ಮಾತ್ರವಲ್ಲ. ಇತ್ತ ಕೋಲಾರದಲ್ಲೂ ಕಾಂಗ್ರೆಸ್ನಲ್ಲಿ ಟಿಕೆಟ್ ಗೊಂದಲ ಬಗೆಹರಿದರು ಅಸಮಾಧಾನದ ಕಿಡಿ ಇನ್ನೂ ಹೊಗೆಯಾಡುತ್ತಲೇ ಇದೆ. ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ ಆದಂತೆ, ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ರಮೇಶ್ಕುಮಾರ್ ಬಣ ಬಡಿದಾಟದಲ್ಲಿ ಗೌತಮ್ ಕೈಗೆ ಟಿಕೆಟ್ ಸಿಕ್ಕಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಎರಡೂ ಬಣದ ಬೆಂಬಲ ಪಡೆಯಲು ಮುಂದಾಗಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಮುನಿಯಪ್ಪ ಮತ್ತು ರಮೇಶ್ಕುಮಾರ್ ಬಣದ ನಡುವೆ ಶಾಂತಿ ಸಂಧಾನ ಸಭೆ ನಡೆಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಸಚಿವ ಮುನಿಯಪ್ಪರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು, ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ. ಕರ್ನಾಟಕದಲ್ಲಿ 20 ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿಕೊಂಡಿರುವ ಕಾಂಗ್ರೆಸ್ಗೆ, ಪ್ರತಿಷ್ಟೆ ಮತ್ತು ಬಣ ರಾಜಕೀಯ ತಲೆನೋವಾಗಿ ಪರಿಣಮಿಸಿದೆ. ಕೋಲಾರದಲ್ಲಿ ಒಂದು ಹಂತಕ್ಕೆ ಬಂಡಾಯ ಶಮನವಾದಂತೆ ಕಾಣ್ತಿದೆ. ಆದ್ರೆ ವೀಣಾ ಕಾಶಪ್ಪನವರ್ ಮನವೊಲಿಕೆಗೆ ಕಾಂಗ್ರೆಸ್ ಹರಸಾಹಸ ಪಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
2-3 ದಿನದಲ್ಲಿ ಬೆಂಬಲಿಗರ ಸಭೆ ನಡೆಸಲಿರುವ ವೀಣಾ
ವೀಣಾ ಕಾಶಪ್ಪನವರ್ ಮನವೊಲಿಕೆಗೆ ಸಂಯುಕ್ತಾ ಯತ್ನ
ಬೆಂಗಳೂರಿನಲ್ಲಿ ಎರಡೂ ಬಣದ ಮಧ್ಯೆ ಸಂಧಾನ ಸಭೆ
ಬಾಗಲಕೋಟೆ ಮತ್ತು ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಅನೌನ್ಸ್ ಆದ್ರೂ, ಬಂಡಾಯದ ಕಿಡಿ ಇನ್ನೂ ಹೊಗೆಯಾಡುತ್ತಲೇ ಇದೆ. ಬೆಂಗಳೂರಿಗೆ ಬಂದು ಸಿಎಂ ಬಳಿ ಟಿಕೆಟ್ ಬದಲಾವಣೆಗೆ ಬೇಡಿಕೆ ಇಟ್ಟಿದ್ದ ವೀಣಾ ಕಾಶಪ್ಪನವರ್ ನಿರಾಶೆಯಲ್ಲೇ ಹಿಂದಿರಿಗಿದ್ರು. ಇದೀಗ ಬೆಂಬಲಗರ ಸಭೆ ಕರೆದಿರೋದು ಕಾಂಗ್ರೆಸ್ಗೆ ಮತ್ತೆ ತಲೆನೋವು ತರಿಸಿದೆ. ಮತ್ತೊಂದೆಡೆ ಕೋಲಾರದಲ್ಲಿ ರಮೇಶ್ಕುಮಾರ್, ಮುನಿಯಪ್ಪ ಬಣದ ಮಧ್ಯೆ ರಾಜೀ ಸಂಧಾನ ಯಶಸ್ವಿಯಾಗಿದೆ.
ಮುಂದಿನ ರಾಜಕೀಯ ನಡೆ ಬಗ್ಗೆ ಸಭೆಯಲ್ಲಿ ಘೋಷಣೆ ಸಾಧ್ಯತೆ
ಬಾಗಲಕೋಟೆ ವಿಧಾನಸಭಾ ಟಿಕೆಟ್ ಕೈತಪ್ಪಿದ್ರೂ, ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರ್ ಮಾತ್ರ, ತಮ್ಮ ಟಿಕೆಟ್ ಪಡೆಯುವ ಪ್ರಯತ್ನವನ್ನು ಮಾತ್ರ ಕೈ ಬಿಟ್ಟಿಲ್ಲ. ಸಿಎಂ ಆಹ್ವಾನದ ಮೇರೆಗೆ ಬೆಂಗಳೂರಿಗೆ ಆಗಮಿಸಿ, ಟಿಕೆಟ್ ಬದಲಾವಣೆ ಮಾಡುವಂತೆ ಬೇಡಿಕೆ ಇಟ್ಟಿದ್ರು. ಆದ್ರೆ ಸಿಎಂ ಟಿಕೆಟ್ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ವೀಣಾ ಕಾಶಪ್ಪನವರ್ಗೆ ಕಡ್ಡಿ ಮುರಿದಂತೆ ತಿಳಿಸಿದ್ದಾರೆ. ಇದರಿಂದ ನಿರಾಶೆಯಿಂದ ಬರಿಗೈಯಲ್ಲೇ ಕ್ಷೇತ್ರಕ್ಕೆ ವಾಪಸ್ ಆದ ವೀಣಾ ಕಾಶಪ್ಪನವರ್, ತಮ್ಮ ಬೆಂಬಲಿಗರ ಜೊತೆ ಸಭೆ ನಡೆಯಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಎಂಟ್ರಿ? HDK ಭೇಟಿ ಬಳಿ ಸುಮಲತಾ ಬಿಚ್ಚಿಟ್ಟ ಸತ್ಯವೇನು?
ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಇನ್ನೆರಡು ದಿನದಲ್ಲಿ ವೀಣಾ ಕಾಶಪ್ಪನವರ್ ಬೆಂಬಲಿಗರ ಸಭೆ ನಡೆಸುವ ಸಾಧ್ಯತೆ ಇದೆ. ಜಿಲ್ಲೆಯ ಶಾಸಕರನ್ನ ಹೊರತುಪಡಿಸಿ, ಕೇವಲ ತಾಲೂಕ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಜೊತೆ ಸಭೆ ನಡೆಸಲು ನಿರ್ಧಾರಿಸಿದ್ದಾರೆ. ಸಿಎಂ ಮಾತಿನಿಂದ ಬೇಸರಗೊಂಡಿರುವ ವೀಣಾ ಕಾಶಪ್ಪನವರ್, ಈಗಾಗಲೇ ಪ್ರಚಾರದಿಂದ ತಟಸ್ಥ ಉಳಿಯುವ ನಿರ್ಧಾರ ಕೈಗೊಂಡಿದ್ದ ವೀಣಾ, ಮುಂದಿನ ರಾಜಕೀಯ ನಡೆ ಬಗ್ಗೆ ಬೆಂಬಲಿಗರ ಚರ್ಚಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್, ಹಿರಿಯ ಮುಖಂಡರೊಂದಿಗೆ ವೀಣಾ ಕಾಶಪ್ಪನವರ್ರನ್ನು ಭೇಟಿಯಾಗಿ ಮನವೊಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುನಿಯಪ್ಪ ಭೇಟಿಯಾಗಿ ಆಶೀರ್ವಾದ ಪಡೆದ ಗೌತಮ್
ಬಾಗಲಕೋಟೆ ಮಾತ್ರವಲ್ಲ. ಇತ್ತ ಕೋಲಾರದಲ್ಲೂ ಕಾಂಗ್ರೆಸ್ನಲ್ಲಿ ಟಿಕೆಟ್ ಗೊಂದಲ ಬಗೆಹರಿದರು ಅಸಮಾಧಾನದ ಕಿಡಿ ಇನ್ನೂ ಹೊಗೆಯಾಡುತ್ತಲೇ ಇದೆ. ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ ಆದಂತೆ, ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ರಮೇಶ್ಕುಮಾರ್ ಬಣ ಬಡಿದಾಟದಲ್ಲಿ ಗೌತಮ್ ಕೈಗೆ ಟಿಕೆಟ್ ಸಿಕ್ಕಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಎರಡೂ ಬಣದ ಬೆಂಬಲ ಪಡೆಯಲು ಮುಂದಾಗಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಮುನಿಯಪ್ಪ ಮತ್ತು ರಮೇಶ್ಕುಮಾರ್ ಬಣದ ನಡುವೆ ಶಾಂತಿ ಸಂಧಾನ ಸಭೆ ನಡೆಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಸಚಿವ ಮುನಿಯಪ್ಪರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು, ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ. ಕರ್ನಾಟಕದಲ್ಲಿ 20 ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿಕೊಂಡಿರುವ ಕಾಂಗ್ರೆಸ್ಗೆ, ಪ್ರತಿಷ್ಟೆ ಮತ್ತು ಬಣ ರಾಜಕೀಯ ತಲೆನೋವಾಗಿ ಪರಿಣಮಿಸಿದೆ. ಕೋಲಾರದಲ್ಲಿ ಒಂದು ಹಂತಕ್ಕೆ ಬಂಡಾಯ ಶಮನವಾದಂತೆ ಕಾಣ್ತಿದೆ. ಆದ್ರೆ ವೀಣಾ ಕಾಶಪ್ಪನವರ್ ಮನವೊಲಿಕೆಗೆ ಕಾಂಗ್ರೆಸ್ ಹರಸಾಹಸ ಪಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ