ಭಾರತದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಇನ್ನಿಲ್ಲ
52 ವರ್ಷಕ್ಕೆ ಇಹಲೋಕ ತ್ಯಜಿಸಿದ ಕರುನಾಡ ಕಣ್ಮಣಿ
ನಿಧನಕ್ಕೆ ಕಂಬನಿ ಮಿಡಿದ ಮಾಜಿ-ಹಾಲಿ ಕ್ರಿಕೆಟಿಗರು
ಒಂದೆಡೆ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯಗಳ ಫೀವರ್ ಹೆಚ್ಚಾಗಿದೆ. ಆದ್ರೆ, ಇನ್ನೊಂದೆಡೆ ಕರ್ನಾಟಕದ ಕ್ರಿಕೆಟ್ ಲೋಕವನ್ನ ನೀರವ ಮೌನ ಆವರಿಸಿದೆ. ಕರ್ನಾಟಕ ಕ್ರಿಕೆಟ್ ಕಂಡ ಪೇಸ್ ಸೆನ್ಸೇಷನ್, ಲೆಜೆಂಡ್ ಡೇವಿಡ್ ಜಾನ್ಸನ್ ಜೀವನದ ಇನ್ನಿಂಗ್ಸ್ ಅಂತ್ಯಗೊಳಿಸಿದ್ದಾರೆ. ಕೇವಲ 52 ವರ್ಷಕ್ಕೆ ಡೇವಿಡ್ ಜಾನ್ಸನ್ ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಕರ್ನಾಟಕ ಫ್ಯಾನ್ಸ್ಗೆ ಬರಸಿಡಿಲು ಬಡಿದಂತಾಗಿದೆ.
ಭಾರತ ವರ್ಸಸ್ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ನ ಸೂಪರ್-8 ಕಾದಾಟಕ್ಕೆ ವೇದಿಕೆ ಸಜ್ಜಾಗಿತ್ತು. ಕ್ರಿಕೆಟ್ ಪ್ರೇಮಿಗಳು ಫುಲ್ ಎಕ್ಸೈಟ್ನಿಂದ ಕಾಯ್ತಿದ್ರು. ಇಂತಹ ಹೊತ್ತಲ್ಲೆ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳ ಕಿವಿಗೆ ಒಂದು ಬರಸಿಡಿಲಿನ ಸುದ್ದಿ ಅಪ್ಪಳಿಸಿತು. 90ರ ದಶಕದಲ್ಲೇ ವೇಗದ ಬೌಲಿಂಗ್ ಮಾಡೋದು ಹೇಗೆ ಅಂತಾ ಬಿಗ್ ಸ್ಟೇಜ್ನಲ್ಲಿ ತೋರಿಸಿದ್ದ ಹೆಮ್ಮಯ ಕನ್ನಡಿಗ ಅಷ್ಟೇ ವೇಗವಾಗಿ ಜೀವನದ ಇನ್ನಿಂಗ್ಸ್ ಕೂಡ ಮುಗಿಸಿಬಿಟ್ಟಿದ್ದಾರೆ. ಕೇವಲ 52 ವರ್ಷಕ್ಕೆ ಕರ್ನಾಟಕ ಕ್ರಿಕೆಟ್ ಕಂಡ ಲೆಂಜೆಡರಿ ಫಾಸ್ಟ್ ಬೌಲರ್, ಡೇವಿಡ್ ಜಾನ್ಸನ್ ಇಹಲೋಕ ತ್ಯಜಿಸಿದ್ದಾರೆ.
ಬಹುಕಾಲದಿಂದ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲ್ತಿದ್ದ ಡೇವಿಡ್ ಜಾನ್ಸನ್ ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಅಸುನೀಗಿದ್ದಾರೆ. ಕಾಲು ಜಾರಿ ಬಿದ್ದ ಪರಿಣಾಮ ಪ್ರಾಣ ಪಕ್ಷಿ ಹಾರಿ ಹೋಯ್ತು ಎಂಬ ಸುದ್ದಿ ಒಂದು ಮೂಲದ್ದಾಗಿದ್ರೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಲವಾದ ಗಾಸಿಪ್ ಕೂಡ ಹಬ್ಬಿದೆ. ಕುಟುಂಬದವರು ಮಾತ್ರ ಈ ವಿಚಾರದಲ್ಲಿ ಮೌನಕ್ಕೆ ಜಾರಿದ್ದಾರೆ. ಸಾವು ಹೇಗೆ ಸಂಭವಿಸಿರಲಿ. ಕ್ರಿಕೆಟ್ ಲೋಕ ಮಾತ್ರ ಡೇವಿಡ್ ಜಾನ್ಸನ್ ನಿಧನದಿಂದ ಬಡವಾಗಿರೋದಂತೂ ಸತ್ಯ. ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ, ಗೌತಮ್ ಗಂಭೀರ್ ಸೇರಿದಂತೆ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟರ್ಸ್ ಡೇವಿಡ್ ಜಾನ್ಸನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
‘ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ’
‘ನನ್ನ ಮಾಜಿ ಸಹ ಆಟಗಾರ ಡೇವಿಡ್ ಜಾನ್ಸನ್ ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಜೀವನದಲ್ಲಿ ತುಂಬಾ ಉತ್ಸುಕರಾಗಿದ್ದ ಜಾನ್ಸನ್, ಆನ್ ಫೀಲ್ಡ್ನಲ್ಲಿ ಹೋರಾಟಗಾರನಾಗಿದ್ದರು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ದುಖಃದಲ್ಲಿ ನಾನೂ ಭಾಗಿ’-ಸಚಿನ್ ತೆಂಡುಲ್ಕರ್, ಮಾಜಿ ಕ್ರಿಕೆಟಿಗ
ಇದನ್ನೂ ಓದಿ:ಅಗಲಿದ ಕನ್ನಡಿಗನ ಮರೆಯದ ಟೀಂ ಇಂಡಿಯಾ.. ಅಫ್ಘಾನ್ ವಿರುದ್ಧ ಕಪ್ಪು ಪಟ್ಟಿ ಕಟ್ಟಿ ಆಡಿದ ರೋಹಿತ್ ಪಡೆ..
90ರ ದಶಕದಲ್ಲಿ ಕರ್ನಾಟಕ ಕ್ರಿಕೆಟ್ ತಂಡ ಭಾರತೀಯ ಕ್ರಿಕೆಟ್ ಲೋಕದಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು. ಆಗ ಕರ್ನಾಟಕದ ಒನ್ ಆಫ್ ಲೀಡಿಂಗ್ ಪೇಸ್ ಬೌಲರ್ ಆಗಿದ್ರು ಡೇವಿಡ್ ಜಾನ್ಸನ್. ಡೇವಿಡ್ರ ಪೇಸ್ ಆಡೋದಕ್ಕೆ ಎಷ್ಟೋ ಬ್ಯಾಟ್ಸ್ಮನ್ಗಳು ಹೆದರ್ತಾ ಇದ್ರು. ಆ ಮಟ್ಟಿಗಿತ್ತು ಹವಾ. ಡೇವಿಡ್ ಜಾನ್ಸನ್ ರಗಡ್ ಆ್ಯಟಿಟ್ಯೂಡ್ನೊಂದಿಗೆ ರನ್ ಅಪ್ ತಗೊಂಡ್ರೆ ಸಾಕು ಬ್ಯಾಟ್ಸ್ಮನ್ಗಳಿಗೆ ನಡುಕ ಹುಟ್ತಿತ್ತು. ಗಂಟೆಗೆ 150 ಕಿ.ಮೀ ವೇಗದಲ್ಲಿ ಬರ್ತಿದ್ದ ಎಸೆತಗಳನ್ನ ಎದುರಿಸಲು ಬ್ಯಾಟ್ಸ್ಮನ್ಗಳು ತಿಣುಕಾಡ್ತಿದ್ರು. ಬ್ಯಾಟ್ಸ್ಮನ್ ಕ್ಲೀನ್ಬೋಲ್ಡ್ ಆದ್ರೆ ಬೆಲ್ಸ್ ಬೌಂಡರಿ ಲೈನ್ನಲ್ಲಿ ಇರ್ತಾ ಇತ್ತು.
ಇದನ್ನೂ ಓದಿ:ಕುಡಿಯಲು ನೀರು ತುಂಬಿಸಿಕೊಳ್ತಿದ್ದಾಗ.. ಟ್ಯಾಂಕರ್ ಒಳಗೆ 25 ವರ್ಷದ ಮಹಿಳೆಯ ಶವ ಪತ್ತೆ..
ಕರ್ನಾಟಕ ತಂಡ 2 ಬಾರಿ ರಣಜಿ ಟ್ರೋಫಿ ಗೆದ್ದಾಗಲೂ ಡೇವಿಡ್ ಜಾನ್ಸನ್ ಸಾಲಿಡ್ ಪರ್ಫಾಮೆನ್ಸ್ ನೀಡಿದ್ರು. ಈ ಪರ್ಫಾಮೆನ್ಸ್ ಫಲವಾಗೇ ಟೀಮ್ ಇಂಡಿಯಾಗೂ ಎಂಟ್ರಿ ಕೊಟ್ಟಿದ್ರು. ಆದ್ರೆ ಟೀಮ್ ಇಂಡಿಯಾದ ಜರ್ನಿ ಕೇವಲ 2 ಟೆಸ್ಟ್ಗಳಿಗೆ ಅಂತ್ಯವಾಯ್ತು. ಒಂದರ್ಥದಲ್ಲಿ ಇದಕ್ಕೆ ಪರೋಕ್ಷ ಕಾರಣ ಕನ್ನಡಿಗರೇ ಆಗಿದ್ದು ವಿಪಾರ್ಯಾಸ. ಆಗ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ಸುನಿಲ್ ಜೋಷಿ, ದೊಡ್ಡ ಗಣೇಶ್ ಟೀಮ್ ಇಂಡಿಯಾದಲ್ಲಿದ್ರು. ಭಾರತದಲ್ಲಿ ಕನ್ನಡಿಗರ ಪಾರುಪತ್ಯ ನಡೀತಾ ಇದ್ದಿದ್ದು ಡೇವಿಡ್ ಜಾನ್ಸನ್ ಸ್ಥಾನಕ್ಕೆ ಕುತ್ತು ತಂತು.
2 ಟೆಸ್ಟ್ಗೆ ಟೀಮ್ ಇಂಡಿಯಾ ಜರ್ನಿ ಅಂತ್ಯವಾಯ್ತು ಅಂತಾ ಡೇವಿಡ್ ಎದೆಗುಂದಲಿಲ್ಲ. ಮತ್ತೆ ಕರ್ನಾಟಕ ಪರ ಆಡಿದ್ರು. ನೀವು ನಂಬಲ್ಲ.. ಇವ್ರಿಗೆ ಕ್ರಿಕೆಟ್ ಕ್ರೇಜ್ ಎಷ್ಟಿತ್ತು ಅಂದ್ರೆ ನಿವೃತ್ತಿ ಆದ ಮೇಲೂ ಯುವ ಬೌಲರ್ಗಳಿಗೆ ಸೆಡ್ಡು ಹೊಡೆದು 2 ವರ್ಷ ಕೆಪಿಎಲ್ ಟೂರ್ನಿ ಆಡಿದ್ರು. ಕ್ರಿಕೆಟ್ ಮೇಲಿನ ಪ್ರೀತಿಯಿಂದ ಬಳಿಕ ಕೋಚ್ ಆದ ಡೇವಿಡ್ ಜಾನ್ಸನ್, ಕ್ರಿಕೆಟ್ ಅಕಾಡೆಮಿ ನಡೆಸ್ತಿದ್ರು. ಆ ಅಕಾಡೆಮಿಯಲ್ಲಿ ಬಡ ಮಕ್ಕಳಿಗೆ ಫ್ರಿ ಟ್ರೈನಿಂಗ್ ನೀಡ್ತಾ ಇದ್ರು. ವುಮೆನ್ಸ್ ಕ್ರಿಕೆಟರ್ಸ್ಗೆ ಕಡಿಮೆ ಫೀಸ್ ತೆಗೆದುಕೊಂಡು ಕೋಚಿಂಗ್ ಕೊಡ್ತಿದ್ರು.
ಇದನ್ನೂ ಓದಿ:ದರ್ಶನ್ ಕೇಸ್ನಲ್ಲಿ ಯಾರ ಮಾತಿಗೂ CM ಡೋಂಟ್ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!
ಏನೇ ಹೇಳಿ ಸ್ಪೀಡ್ ಸೆನ್ಷೆಷನ್ ಡೇವಿಡ್ ಜಾನ್ಸನ್ ನಿಧನ ತುಂಬಲಾರದ ನಷ್ಟ. ಈ ಕ್ರಿಕೆಟ್ ಪ್ರೇಮಿ ಇನ್ನಷ್ಟು ವರ್ಷ ಬದುಕಿದ್ರೆ ಭಾರತೀಯ ಕ್ರಿಕೆಟ್ಗೆ ಮತ್ತಷ್ಟು ಪ್ರತಿಭಾನ್ವಿತ ಕ್ರಿಕೆಟಿಗರ ಕೊಡುಗೆ ಸಿಗ್ತಿತ್ತು. ಸದ್ಯ ಡೇವಿಡ್ ಜಾನ್ಸನ್ ಅವರ ಇನ್ನಿಂಗ್ಸ್ ಅಂತ್ಯದೊಂದಿಗೆ ಆ ಆಶಾಭಾವವು ಕೊನೆಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಭಾರತದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಇನ್ನಿಲ್ಲ
52 ವರ್ಷಕ್ಕೆ ಇಹಲೋಕ ತ್ಯಜಿಸಿದ ಕರುನಾಡ ಕಣ್ಮಣಿ
ನಿಧನಕ್ಕೆ ಕಂಬನಿ ಮಿಡಿದ ಮಾಜಿ-ಹಾಲಿ ಕ್ರಿಕೆಟಿಗರು
ಒಂದೆಡೆ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯಗಳ ಫೀವರ್ ಹೆಚ್ಚಾಗಿದೆ. ಆದ್ರೆ, ಇನ್ನೊಂದೆಡೆ ಕರ್ನಾಟಕದ ಕ್ರಿಕೆಟ್ ಲೋಕವನ್ನ ನೀರವ ಮೌನ ಆವರಿಸಿದೆ. ಕರ್ನಾಟಕ ಕ್ರಿಕೆಟ್ ಕಂಡ ಪೇಸ್ ಸೆನ್ಸೇಷನ್, ಲೆಜೆಂಡ್ ಡೇವಿಡ್ ಜಾನ್ಸನ್ ಜೀವನದ ಇನ್ನಿಂಗ್ಸ್ ಅಂತ್ಯಗೊಳಿಸಿದ್ದಾರೆ. ಕೇವಲ 52 ವರ್ಷಕ್ಕೆ ಡೇವಿಡ್ ಜಾನ್ಸನ್ ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಕರ್ನಾಟಕ ಫ್ಯಾನ್ಸ್ಗೆ ಬರಸಿಡಿಲು ಬಡಿದಂತಾಗಿದೆ.
ಭಾರತ ವರ್ಸಸ್ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ನ ಸೂಪರ್-8 ಕಾದಾಟಕ್ಕೆ ವೇದಿಕೆ ಸಜ್ಜಾಗಿತ್ತು. ಕ್ರಿಕೆಟ್ ಪ್ರೇಮಿಗಳು ಫುಲ್ ಎಕ್ಸೈಟ್ನಿಂದ ಕಾಯ್ತಿದ್ರು. ಇಂತಹ ಹೊತ್ತಲ್ಲೆ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳ ಕಿವಿಗೆ ಒಂದು ಬರಸಿಡಿಲಿನ ಸುದ್ದಿ ಅಪ್ಪಳಿಸಿತು. 90ರ ದಶಕದಲ್ಲೇ ವೇಗದ ಬೌಲಿಂಗ್ ಮಾಡೋದು ಹೇಗೆ ಅಂತಾ ಬಿಗ್ ಸ್ಟೇಜ್ನಲ್ಲಿ ತೋರಿಸಿದ್ದ ಹೆಮ್ಮಯ ಕನ್ನಡಿಗ ಅಷ್ಟೇ ವೇಗವಾಗಿ ಜೀವನದ ಇನ್ನಿಂಗ್ಸ್ ಕೂಡ ಮುಗಿಸಿಬಿಟ್ಟಿದ್ದಾರೆ. ಕೇವಲ 52 ವರ್ಷಕ್ಕೆ ಕರ್ನಾಟಕ ಕ್ರಿಕೆಟ್ ಕಂಡ ಲೆಂಜೆಡರಿ ಫಾಸ್ಟ್ ಬೌಲರ್, ಡೇವಿಡ್ ಜಾನ್ಸನ್ ಇಹಲೋಕ ತ್ಯಜಿಸಿದ್ದಾರೆ.
ಬಹುಕಾಲದಿಂದ ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲ್ತಿದ್ದ ಡೇವಿಡ್ ಜಾನ್ಸನ್ ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಅಸುನೀಗಿದ್ದಾರೆ. ಕಾಲು ಜಾರಿ ಬಿದ್ದ ಪರಿಣಾಮ ಪ್ರಾಣ ಪಕ್ಷಿ ಹಾರಿ ಹೋಯ್ತು ಎಂಬ ಸುದ್ದಿ ಒಂದು ಮೂಲದ್ದಾಗಿದ್ರೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಲವಾದ ಗಾಸಿಪ್ ಕೂಡ ಹಬ್ಬಿದೆ. ಕುಟುಂಬದವರು ಮಾತ್ರ ಈ ವಿಚಾರದಲ್ಲಿ ಮೌನಕ್ಕೆ ಜಾರಿದ್ದಾರೆ. ಸಾವು ಹೇಗೆ ಸಂಭವಿಸಿರಲಿ. ಕ್ರಿಕೆಟ್ ಲೋಕ ಮಾತ್ರ ಡೇವಿಡ್ ಜಾನ್ಸನ್ ನಿಧನದಿಂದ ಬಡವಾಗಿರೋದಂತೂ ಸತ್ಯ. ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ, ಗೌತಮ್ ಗಂಭೀರ್ ಸೇರಿದಂತೆ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟರ್ಸ್ ಡೇವಿಡ್ ಜಾನ್ಸನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
‘ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ’
‘ನನ್ನ ಮಾಜಿ ಸಹ ಆಟಗಾರ ಡೇವಿಡ್ ಜಾನ್ಸನ್ ನಿಧನದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಜೀವನದಲ್ಲಿ ತುಂಬಾ ಉತ್ಸುಕರಾಗಿದ್ದ ಜಾನ್ಸನ್, ಆನ್ ಫೀಲ್ಡ್ನಲ್ಲಿ ಹೋರಾಟಗಾರನಾಗಿದ್ದರು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ದುಖಃದಲ್ಲಿ ನಾನೂ ಭಾಗಿ’-ಸಚಿನ್ ತೆಂಡುಲ್ಕರ್, ಮಾಜಿ ಕ್ರಿಕೆಟಿಗ
ಇದನ್ನೂ ಓದಿ:ಅಗಲಿದ ಕನ್ನಡಿಗನ ಮರೆಯದ ಟೀಂ ಇಂಡಿಯಾ.. ಅಫ್ಘಾನ್ ವಿರುದ್ಧ ಕಪ್ಪು ಪಟ್ಟಿ ಕಟ್ಟಿ ಆಡಿದ ರೋಹಿತ್ ಪಡೆ..
90ರ ದಶಕದಲ್ಲಿ ಕರ್ನಾಟಕ ಕ್ರಿಕೆಟ್ ತಂಡ ಭಾರತೀಯ ಕ್ರಿಕೆಟ್ ಲೋಕದಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು. ಆಗ ಕರ್ನಾಟಕದ ಒನ್ ಆಫ್ ಲೀಡಿಂಗ್ ಪೇಸ್ ಬೌಲರ್ ಆಗಿದ್ರು ಡೇವಿಡ್ ಜಾನ್ಸನ್. ಡೇವಿಡ್ರ ಪೇಸ್ ಆಡೋದಕ್ಕೆ ಎಷ್ಟೋ ಬ್ಯಾಟ್ಸ್ಮನ್ಗಳು ಹೆದರ್ತಾ ಇದ್ರು. ಆ ಮಟ್ಟಿಗಿತ್ತು ಹವಾ. ಡೇವಿಡ್ ಜಾನ್ಸನ್ ರಗಡ್ ಆ್ಯಟಿಟ್ಯೂಡ್ನೊಂದಿಗೆ ರನ್ ಅಪ್ ತಗೊಂಡ್ರೆ ಸಾಕು ಬ್ಯಾಟ್ಸ್ಮನ್ಗಳಿಗೆ ನಡುಕ ಹುಟ್ತಿತ್ತು. ಗಂಟೆಗೆ 150 ಕಿ.ಮೀ ವೇಗದಲ್ಲಿ ಬರ್ತಿದ್ದ ಎಸೆತಗಳನ್ನ ಎದುರಿಸಲು ಬ್ಯಾಟ್ಸ್ಮನ್ಗಳು ತಿಣುಕಾಡ್ತಿದ್ರು. ಬ್ಯಾಟ್ಸ್ಮನ್ ಕ್ಲೀನ್ಬೋಲ್ಡ್ ಆದ್ರೆ ಬೆಲ್ಸ್ ಬೌಂಡರಿ ಲೈನ್ನಲ್ಲಿ ಇರ್ತಾ ಇತ್ತು.
ಇದನ್ನೂ ಓದಿ:ಕುಡಿಯಲು ನೀರು ತುಂಬಿಸಿಕೊಳ್ತಿದ್ದಾಗ.. ಟ್ಯಾಂಕರ್ ಒಳಗೆ 25 ವರ್ಷದ ಮಹಿಳೆಯ ಶವ ಪತ್ತೆ..
ಕರ್ನಾಟಕ ತಂಡ 2 ಬಾರಿ ರಣಜಿ ಟ್ರೋಫಿ ಗೆದ್ದಾಗಲೂ ಡೇವಿಡ್ ಜಾನ್ಸನ್ ಸಾಲಿಡ್ ಪರ್ಫಾಮೆನ್ಸ್ ನೀಡಿದ್ರು. ಈ ಪರ್ಫಾಮೆನ್ಸ್ ಫಲವಾಗೇ ಟೀಮ್ ಇಂಡಿಯಾಗೂ ಎಂಟ್ರಿ ಕೊಟ್ಟಿದ್ರು. ಆದ್ರೆ ಟೀಮ್ ಇಂಡಿಯಾದ ಜರ್ನಿ ಕೇವಲ 2 ಟೆಸ್ಟ್ಗಳಿಗೆ ಅಂತ್ಯವಾಯ್ತು. ಒಂದರ್ಥದಲ್ಲಿ ಇದಕ್ಕೆ ಪರೋಕ್ಷ ಕಾರಣ ಕನ್ನಡಿಗರೇ ಆಗಿದ್ದು ವಿಪಾರ್ಯಾಸ. ಆಗ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ಸುನಿಲ್ ಜೋಷಿ, ದೊಡ್ಡ ಗಣೇಶ್ ಟೀಮ್ ಇಂಡಿಯಾದಲ್ಲಿದ್ರು. ಭಾರತದಲ್ಲಿ ಕನ್ನಡಿಗರ ಪಾರುಪತ್ಯ ನಡೀತಾ ಇದ್ದಿದ್ದು ಡೇವಿಡ್ ಜಾನ್ಸನ್ ಸ್ಥಾನಕ್ಕೆ ಕುತ್ತು ತಂತು.
2 ಟೆಸ್ಟ್ಗೆ ಟೀಮ್ ಇಂಡಿಯಾ ಜರ್ನಿ ಅಂತ್ಯವಾಯ್ತು ಅಂತಾ ಡೇವಿಡ್ ಎದೆಗುಂದಲಿಲ್ಲ. ಮತ್ತೆ ಕರ್ನಾಟಕ ಪರ ಆಡಿದ್ರು. ನೀವು ನಂಬಲ್ಲ.. ಇವ್ರಿಗೆ ಕ್ರಿಕೆಟ್ ಕ್ರೇಜ್ ಎಷ್ಟಿತ್ತು ಅಂದ್ರೆ ನಿವೃತ್ತಿ ಆದ ಮೇಲೂ ಯುವ ಬೌಲರ್ಗಳಿಗೆ ಸೆಡ್ಡು ಹೊಡೆದು 2 ವರ್ಷ ಕೆಪಿಎಲ್ ಟೂರ್ನಿ ಆಡಿದ್ರು. ಕ್ರಿಕೆಟ್ ಮೇಲಿನ ಪ್ರೀತಿಯಿಂದ ಬಳಿಕ ಕೋಚ್ ಆದ ಡೇವಿಡ್ ಜಾನ್ಸನ್, ಕ್ರಿಕೆಟ್ ಅಕಾಡೆಮಿ ನಡೆಸ್ತಿದ್ರು. ಆ ಅಕಾಡೆಮಿಯಲ್ಲಿ ಬಡ ಮಕ್ಕಳಿಗೆ ಫ್ರಿ ಟ್ರೈನಿಂಗ್ ನೀಡ್ತಾ ಇದ್ರು. ವುಮೆನ್ಸ್ ಕ್ರಿಕೆಟರ್ಸ್ಗೆ ಕಡಿಮೆ ಫೀಸ್ ತೆಗೆದುಕೊಂಡು ಕೋಚಿಂಗ್ ಕೊಡ್ತಿದ್ರು.
ಇದನ್ನೂ ಓದಿ:ದರ್ಶನ್ ಕೇಸ್ನಲ್ಲಿ ಯಾರ ಮಾತಿಗೂ CM ಡೋಂಟ್ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!
ಏನೇ ಹೇಳಿ ಸ್ಪೀಡ್ ಸೆನ್ಷೆಷನ್ ಡೇವಿಡ್ ಜಾನ್ಸನ್ ನಿಧನ ತುಂಬಲಾರದ ನಷ್ಟ. ಈ ಕ್ರಿಕೆಟ್ ಪ್ರೇಮಿ ಇನ್ನಷ್ಟು ವರ್ಷ ಬದುಕಿದ್ರೆ ಭಾರತೀಯ ಕ್ರಿಕೆಟ್ಗೆ ಮತ್ತಷ್ಟು ಪ್ರತಿಭಾನ್ವಿತ ಕ್ರಿಕೆಟಿಗರ ಕೊಡುಗೆ ಸಿಗ್ತಿತ್ತು. ಸದ್ಯ ಡೇವಿಡ್ ಜಾನ್ಸನ್ ಅವರ ಇನ್ನಿಂಗ್ಸ್ ಅಂತ್ಯದೊಂದಿಗೆ ಆ ಆಶಾಭಾವವು ಕೊನೆಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ