ಚೇರ್ಗೆ ಕಟ್ಟಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
ಕಳಪೆ ರಸ್ತೆ ನಮಗೆ ಬೇಡವೇ ಬೇಡ ಎಂದು ಆಕ್ರೋಶ
ಕಾರ್ಪೊರೇಟರ್ ಬದಲು ಆಕೆಯ ಪತಿಯನ್ನು ಕಟ್ಟಿ ಹಾಕಿದ ಜನರು
ಕಾರ್ಪೊರೇಟರ್ ಪತಿಯನ್ನ ಚೇರ್ಗೆ ಕಟ್ಟಿಹಾಕಿದ ಘಟನೆ ಯುಪಿಯ ಕಾನ್ಪುರದಲ್ಲಿ ನಡೆದಿದೆ. ಅಭಿವೃದ್ಧಿ ನಿರ್ಲಕ್ಷ್ಯದಿಂದಾಗಿ ಕಾರ್ಪೊರೇಟರ್ ಪತಿಯನ್ನ ನೀರು ತುಂಬಿದ್ದ ರಸ್ತೆಯಲ್ಲಿ ಚೇರ್ನಲ್ಲಿ ಕೂರಿಸಿ ಕಟ್ಟಿ ಹಾಕಿದ್ದಾರೆ.
ಊರಿನ ರಸ್ತೆಗಳು ಮಳೆಯಿಂದ ಸಂಪೂರ್ಣ ಹಾಳಾಗಿದ್ದರಿಂದ ಗ್ರಾಮಸ್ಥರು ಕಾರ್ಪೋರೇಟರ್ ಮೇಲೆ ಕೋಪಗೊಂಡಿದ್ದರು. ಇದಕ್ಕೂ ಮೊದಲು ಪತ್ನಿಯ ಪರವಾಗಿ ವಾರ್ಡ್ನಲ್ಲಿ ಓಡಾಡುತ್ತಿದ್ದನು. ಆದರೆ ಸಮಸ್ಯೆಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ನೊಂದ ಜನರು ಪ್ರತಿಭಟನೆ ಇಳಿಯುವ ಮೂಲಕ ಕಾರ್ಪೊರೇಟರ್ ಪತಿಯನ್ನ ಚೇರ್ ಕಟ್ಟಿಹಾಕಿ ಆಕ್ರೋಶ ಮೆರೆದಿದ್ದಾರೆ.ಸದ್ಯ ಈ ದೃಶ್ಯ ವೈರಲ್ ಆಗುತ್ತಿದೆ.
ಇನ್ನು ಊರಿನ ಸಮಸ್ಯೆಗೆ ಸರಿಯಾಗಿ ಸ್ಪಂದಿಸದೆ ಕಳಪೆ ಮಟ್ಟದ ರಸ್ತೆ ಮತ್ತು ಇನ್ನಿತರ ಕಳಪೆ ಸೇವೆ ಒದಗಿಸಿ ಮಂಕು ಬೂದಿ ಎರಚಿದ ಕಾರ್ಪೋರೇಟರ್ಗೆ ಏನು ಮಾಡಬೇಕೆಂದು ತಿಳಿಯದೆ ಕೋಪಗೊಂಡ ಜನರು ಆಕೆಯ ಪತಿಯನ್ನು ಹಿಡಿದು ಚೇರ್ಗೆ ಕಟ್ಟಿಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಘಟನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚೇರ್ಗೆ ಕಟ್ಟಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು
ಕಳಪೆ ರಸ್ತೆ ನಮಗೆ ಬೇಡವೇ ಬೇಡ ಎಂದು ಆಕ್ರೋಶ
ಕಾರ್ಪೊರೇಟರ್ ಬದಲು ಆಕೆಯ ಪತಿಯನ್ನು ಕಟ್ಟಿ ಹಾಕಿದ ಜನರು
ಕಾರ್ಪೊರೇಟರ್ ಪತಿಯನ್ನ ಚೇರ್ಗೆ ಕಟ್ಟಿಹಾಕಿದ ಘಟನೆ ಯುಪಿಯ ಕಾನ್ಪುರದಲ್ಲಿ ನಡೆದಿದೆ. ಅಭಿವೃದ್ಧಿ ನಿರ್ಲಕ್ಷ್ಯದಿಂದಾಗಿ ಕಾರ್ಪೊರೇಟರ್ ಪತಿಯನ್ನ ನೀರು ತುಂಬಿದ್ದ ರಸ್ತೆಯಲ್ಲಿ ಚೇರ್ನಲ್ಲಿ ಕೂರಿಸಿ ಕಟ್ಟಿ ಹಾಕಿದ್ದಾರೆ.
ಊರಿನ ರಸ್ತೆಗಳು ಮಳೆಯಿಂದ ಸಂಪೂರ್ಣ ಹಾಳಾಗಿದ್ದರಿಂದ ಗ್ರಾಮಸ್ಥರು ಕಾರ್ಪೋರೇಟರ್ ಮೇಲೆ ಕೋಪಗೊಂಡಿದ್ದರು. ಇದಕ್ಕೂ ಮೊದಲು ಪತ್ನಿಯ ಪರವಾಗಿ ವಾರ್ಡ್ನಲ್ಲಿ ಓಡಾಡುತ್ತಿದ್ದನು. ಆದರೆ ಸಮಸ್ಯೆಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ನೊಂದ ಜನರು ಪ್ರತಿಭಟನೆ ಇಳಿಯುವ ಮೂಲಕ ಕಾರ್ಪೊರೇಟರ್ ಪತಿಯನ್ನ ಚೇರ್ ಕಟ್ಟಿಹಾಕಿ ಆಕ್ರೋಶ ಮೆರೆದಿದ್ದಾರೆ.ಸದ್ಯ ಈ ದೃಶ್ಯ ವೈರಲ್ ಆಗುತ್ತಿದೆ.
ಇನ್ನು ಊರಿನ ಸಮಸ್ಯೆಗೆ ಸರಿಯಾಗಿ ಸ್ಪಂದಿಸದೆ ಕಳಪೆ ಮಟ್ಟದ ರಸ್ತೆ ಮತ್ತು ಇನ್ನಿತರ ಕಳಪೆ ಸೇವೆ ಒದಗಿಸಿ ಮಂಕು ಬೂದಿ ಎರಚಿದ ಕಾರ್ಪೋರೇಟರ್ಗೆ ಏನು ಮಾಡಬೇಕೆಂದು ತಿಳಿಯದೆ ಕೋಪಗೊಂಡ ಜನರು ಆಕೆಯ ಪತಿಯನ್ನು ಹಿಡಿದು ಚೇರ್ಗೆ ಕಟ್ಟಿಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಘಟನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ