ಲೆಟರ್ ಬರೆಯುವ ಮೂಲಕ ಮನಸ್ಸಿನಲ್ಲಿದ್ದ ಭಾವನೆ ಹಂಚಿಕೊಂಡ ಸ್ಫರ್ಧಿಗಳು
ಬಿಗ್ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆಗೆ ಇನ್ನೂ ಎರಡು ದಿನ ಬಾಕಿಯಷ್ಟೇ
ಆಟದ ವೈಖರಿಯಲ್ಲಿ ತಪ್ಪಿದ್ದರೆ, ಮಾತಲ್ಲಿ ತಪ್ಪಿದ್ದರೆ ನನನ್ನು ಕ್ಷಮಿಸಿ- ವಿನಯ್ ಗೌಡ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆಗೆ ಇನ್ನೂ ಎರಡು ದಿನ ಬಾಕಿ ಉಳಿದಿವೆ. ಸದ್ಯ ಬಿಗ್ ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲಿ ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಉಳಿದುಕೊಂಡಿದ್ದಾರೆ.
ಇದನ್ನು ಓದಿ: BBK10: ‘ನೀವಿಲ್ಲದೆ ನಾನಿಲ್ಲ.. ನಾನಿಲ್ಲದೆ ನೀವಿಲ್ಲ‘.. ಸಂಗೀತಾ ಈ ಮುತ್ತಿನಂಥ ಮಾತು ಹೇಳಿದ್ದು ಯಾರಿಗೆ?
ಸದ್ಯ ಬಿಗ್ಬಾಸ್ ಮನೆಯಲ್ಲಿ ಸಂಭ್ರಮದ ಜೊತೆ ಭಾವುಕತೆ ಮನೆ ಮಾಡಿದೆ. ನಿನ್ನೆ ಎಲ್ಲಾ ಫೈನಲಿಸ್ಟ್ಗಳು ತಮ್ಮ ಸಹ ಸ್ಪರ್ಧಿಗಳಿಗೆ ಲೆಟರ್ ಬರೆಯಬೇಕಿತ್ತು. ಬರೆದು ಅವರು ತಮ್ಮ ಈ ಬಿಗ್ಬಾಸ್ ಜರ್ನಿಯಲ್ಲಿ ಯಾಕೆ ಮುಖ್ಯ ಎಂದು ಹೇಳಬೇಕಿರುತ್ತೆ. ಎಲ್ಲಾ ಮನೆಯ ಸ್ಪರ್ಧಿಗಳು ಲೆಟರ್ ಬರೆದು ಸಂಭ್ರಮಿಸಿದ್ದಾರೆ.
ಇನ್ನೂ, ವಿನಯ್ ಕೂಡ ನಿನ್ನೆ ಈ ಚಟುವಟಿಕೆಯ ನಂತದಲ್ಲಿ ತುಂಬಾ ಭಾವುಕರಾಗಿದ್ದಾರೆ. ಅವರು ಆಡಿದ ಕೆಲವೊಂದು ಮಾತುಗಳು ಹಾಗೂ ಸನ್ನಿವೇಶಗಳನ್ನು ನೆನಪಿಸಿಕೊಂಡಿದ್ದಾರೆ. ಆಗ ತಮ್ಮ ತಪ್ಪಿನ ಅರಿವು ಮಾಡಿಕೊಂಡು ನಿನ್ನೆ ಇಡೀ ಕರುನಾಡ ಜನತೆಗೆ ಕ್ಷಮೆ ಯಾಚಿಸಿದ್ದಾರೆ. ಆಟದ ವೈಖರಿಯಲ್ಲಿ ತಪ್ಪಿದ್ದರೆ, ಮಾತಲ್ಲಿ ತಪ್ಪಿದ್ದರೆ, ನಾನು ಕ್ಷಮೆ ಕೇಳ್ತೀನಿ ಎಂದು ವಿನಯ್ ಕರುನಾಡ ಜನತೆ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಲೆಟರ್ ಬರೆಯುವ ಮೂಲಕ ಮನಸ್ಸಿನಲ್ಲಿದ್ದ ಭಾವನೆ ಹಂಚಿಕೊಂಡ ಸ್ಫರ್ಧಿಗಳು
ಬಿಗ್ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆಗೆ ಇನ್ನೂ ಎರಡು ದಿನ ಬಾಕಿಯಷ್ಟೇ
ಆಟದ ವೈಖರಿಯಲ್ಲಿ ತಪ್ಪಿದ್ದರೆ, ಮಾತಲ್ಲಿ ತಪ್ಪಿದ್ದರೆ ನನನ್ನು ಕ್ಷಮಿಸಿ- ವಿನಯ್ ಗೌಡ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಗ್ರ್ಯಾಂಡ್ ಫಿನಾಲೆಗೆ ಇನ್ನೂ ಎರಡು ದಿನ ಬಾಕಿ ಉಳಿದಿವೆ. ಸದ್ಯ ಬಿಗ್ ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲಿ ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಉಳಿದುಕೊಂಡಿದ್ದಾರೆ.
ಇದನ್ನು ಓದಿ: BBK10: ‘ನೀವಿಲ್ಲದೆ ನಾನಿಲ್ಲ.. ನಾನಿಲ್ಲದೆ ನೀವಿಲ್ಲ‘.. ಸಂಗೀತಾ ಈ ಮುತ್ತಿನಂಥ ಮಾತು ಹೇಳಿದ್ದು ಯಾರಿಗೆ?
ಸದ್ಯ ಬಿಗ್ಬಾಸ್ ಮನೆಯಲ್ಲಿ ಸಂಭ್ರಮದ ಜೊತೆ ಭಾವುಕತೆ ಮನೆ ಮಾಡಿದೆ. ನಿನ್ನೆ ಎಲ್ಲಾ ಫೈನಲಿಸ್ಟ್ಗಳು ತಮ್ಮ ಸಹ ಸ್ಪರ್ಧಿಗಳಿಗೆ ಲೆಟರ್ ಬರೆಯಬೇಕಿತ್ತು. ಬರೆದು ಅವರು ತಮ್ಮ ಈ ಬಿಗ್ಬಾಸ್ ಜರ್ನಿಯಲ್ಲಿ ಯಾಕೆ ಮುಖ್ಯ ಎಂದು ಹೇಳಬೇಕಿರುತ್ತೆ. ಎಲ್ಲಾ ಮನೆಯ ಸ್ಪರ್ಧಿಗಳು ಲೆಟರ್ ಬರೆದು ಸಂಭ್ರಮಿಸಿದ್ದಾರೆ.
ಇನ್ನೂ, ವಿನಯ್ ಕೂಡ ನಿನ್ನೆ ಈ ಚಟುವಟಿಕೆಯ ನಂತದಲ್ಲಿ ತುಂಬಾ ಭಾವುಕರಾಗಿದ್ದಾರೆ. ಅವರು ಆಡಿದ ಕೆಲವೊಂದು ಮಾತುಗಳು ಹಾಗೂ ಸನ್ನಿವೇಶಗಳನ್ನು ನೆನಪಿಸಿಕೊಂಡಿದ್ದಾರೆ. ಆಗ ತಮ್ಮ ತಪ್ಪಿನ ಅರಿವು ಮಾಡಿಕೊಂಡು ನಿನ್ನೆ ಇಡೀ ಕರುನಾಡ ಜನತೆಗೆ ಕ್ಷಮೆ ಯಾಚಿಸಿದ್ದಾರೆ. ಆಟದ ವೈಖರಿಯಲ್ಲಿ ತಪ್ಪಿದ್ದರೆ, ಮಾತಲ್ಲಿ ತಪ್ಪಿದ್ದರೆ, ನಾನು ಕ್ಷಮೆ ಕೇಳ್ತೀನಿ ಎಂದು ವಿನಯ್ ಕರುನಾಡ ಜನತೆ ಮುಂದೆ ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ