ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ವಿನೋದ್ ದೋಂಡಳೆ
20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ದೇಶಕ ವಿನೋದ್
ನಾಳೆ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೋಂಡಳೆ ಅವರ ಅಂತ್ಯಕ್ರಿಯೆ
ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೋಂಡಾಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ದೇಶಕ ವಿನೋದ್ ದೋಂಡಾಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನೋದ್ ಆತ್ಮಹತ್ಯೆ ವಿಚಾರ ಕೇಳಿ ನಿವಾಸದ ಕಡೆಗೆ ಆಪ್ತರು, ಕುಟುಂಬಸ್ಥರು ದೌಡಾಯಿಸಿದ್ದಾರೆ.
ಇದನ್ನೂ ಓದಿ: ಕರಿಮಣಿ ನಿರ್ದೇಶಕ ವಿನೋದ್ ದೋಂಡಳೆ ಕೊನೆಯ ದಿನಗಳು ಹೇಗಿತ್ತು; ಪತ್ನಿ ಗೀತಾ ಹೇಳಿದ್ದೇನು?
ಇನ್ನು, ನಿರ್ದೇಶಕ ವಿನೋದ್ ದೋಂಡಾಳೆ ಸಾವಿನ ಬಗ್ಗೆ ಕೆಲವೊಂದು ವಿಚಾರಗಳ ಬಗ್ಗೆ ಸ್ನೇಹಿತ, ನಿರ್ದೇಶಕ ಪಿ ಶೇಷಾದ್ರಿ ಅವರು ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ್ದಾರೆ. ಈ ಬಗ್ಗೆ ಮಾತಾಡಿದ ಪಿ ಶೇಷಾದ್ರಿ ಅವರು, ವಿನೋದ್ ಪತ್ನಿಗೆ ಹೇಳುತ್ತಿದ್ದರಂತೆ, ನಮ್ಮ ಗುರುಗಳು ಸಿನಿಮಾವನ್ನು ಮಾಡಿದ್ರು, ಯಾವ ಸಿನಿಮಾ ಕೂಡ ನಷ್ಟ ಆಗಲಿಲ್ಲ. ಆ ರೀತಿ ನಾನು ಮಾಡಬೇಕಾಗಿತ್ತು. ನಾನು ತಪ್ಪು ಮಾಡಿಬಿಟ್ಟೆ. ಅವರಿಂದ ಎಲ್ಲ ಕಲಿತೆ ಆದರೆ ಕಡಿಮೆ ಬಜೆಟ್ನಲ್ಲಿ ಸಿನಿಮಾ ಮಾಡೋದನ್ನು ಕಲಿಯಲಿಲ್ಲ ಅಂತ ಹೇಳಿದ್ದರಂತೆ. ಅವರ ಸಾವಿಗೆ ಪರೋಕ್ಷವಾಗಿ ತುಂಬಾ ಜನ ಕಾರಣರಾಗಿದ್ದಾರೆ. ಆದರೆ ಯಾವ ಕೋರ್ಟ್ ಕೂಡ ಅವರಿಗೆ ಶಿಕ್ಷೆ ನೀಡುವುದಿಲ್ಲ.
ಹೀಗೆ ಮಾತನ್ನು ಮುಂದುವರೆಸಿದ ಅವರು, ಸ್ವಲ್ಪ ಯೋಚನೆ ಮಾಡಬೇಕಾಗಿತ್ತು. ಎಲ್ಲಿ ದಾರಿ ತಪ್ಪುತ್ತಿದ್ದೇವೆ ಅಂತ ಯೋಚನೆ ಮಾಡಬೇಕು. ಸಿನಿಮಾಗೆ ಹಾಕಿದ ಹಣವನ್ನು ಹೇಗೆ ಹೊರಗಡೆ ತರಬೇಕು ಅಂತ. ನೆಲ ಮಟ್ಟದಿಂದ ಬಂದ ಇವರು ಕೋಟಿ ಕೋಟಿ ಹಾಕಿ ಸಿನಿಮಾ ಮಾಡುತ್ತಾರೆ ಅಂದ್ರೆ ಸಾಮಾನ್ಯವಲ್ಲ. ಸರ್ಕಾರಕ್ಕೆ ಸಿನಿಮಾಗೆ ಕೆಳಮಟ್ಟದ ಆದ್ಯತೆ ನೀಡುತ್ತಿದೆ. ಯಾವ ನಂಬಿಕೆಯ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಮಾಡುವುದು ತಪ್ಪು ಅಂತಾ ನಾನು ಹೇಳುವುದಿಲ್ಲ. ಈ ಕ್ಷೇತಾ ತುಂಬಾ ಒಳ್ಳೆಯ ಕ್ಷೇತ್ರಾ. ಈ ಬಗ್ಗೆ ನಾನು ದೂರುವುದಿಲ್ಲ. ನಾನು 30 ವರ್ಷಗಳಿಂದ ಇದೇ ಸಿನಿಮಾ ಕ್ಷೇತ್ರದಲ್ಲಿ ನಾನು ಕೆಲಸ ಮಾಡಿದ್ದೇನೆ. ನಾವು ಇಡೋ ಪ್ರತಿ ಹೆಜ್ಜೆಯನ್ನು ಯೋಚನೆ ಮಾಡಿ ಇಡಬೇಕು ಅಂತ ನಾನು ಹೇಳುತ್ತೇನೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ವಿನೋದ್ ದೋಂಡಳೆ
20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ದೇಶಕ ವಿನೋದ್
ನಾಳೆ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೋಂಡಳೆ ಅವರ ಅಂತ್ಯಕ್ರಿಯೆ
ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೋಂಡಾಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ದೇಶಕ ವಿನೋದ್ ದೋಂಡಾಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನೋದ್ ಆತ್ಮಹತ್ಯೆ ವಿಚಾರ ಕೇಳಿ ನಿವಾಸದ ಕಡೆಗೆ ಆಪ್ತರು, ಕುಟುಂಬಸ್ಥರು ದೌಡಾಯಿಸಿದ್ದಾರೆ.
ಇದನ್ನೂ ಓದಿ: ಕರಿಮಣಿ ನಿರ್ದೇಶಕ ವಿನೋದ್ ದೋಂಡಳೆ ಕೊನೆಯ ದಿನಗಳು ಹೇಗಿತ್ತು; ಪತ್ನಿ ಗೀತಾ ಹೇಳಿದ್ದೇನು?
ಇನ್ನು, ನಿರ್ದೇಶಕ ವಿನೋದ್ ದೋಂಡಾಳೆ ಸಾವಿನ ಬಗ್ಗೆ ಕೆಲವೊಂದು ವಿಚಾರಗಳ ಬಗ್ಗೆ ಸ್ನೇಹಿತ, ನಿರ್ದೇಶಕ ಪಿ ಶೇಷಾದ್ರಿ ಅವರು ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ್ದಾರೆ. ಈ ಬಗ್ಗೆ ಮಾತಾಡಿದ ಪಿ ಶೇಷಾದ್ರಿ ಅವರು, ವಿನೋದ್ ಪತ್ನಿಗೆ ಹೇಳುತ್ತಿದ್ದರಂತೆ, ನಮ್ಮ ಗುರುಗಳು ಸಿನಿಮಾವನ್ನು ಮಾಡಿದ್ರು, ಯಾವ ಸಿನಿಮಾ ಕೂಡ ನಷ್ಟ ಆಗಲಿಲ್ಲ. ಆ ರೀತಿ ನಾನು ಮಾಡಬೇಕಾಗಿತ್ತು. ನಾನು ತಪ್ಪು ಮಾಡಿಬಿಟ್ಟೆ. ಅವರಿಂದ ಎಲ್ಲ ಕಲಿತೆ ಆದರೆ ಕಡಿಮೆ ಬಜೆಟ್ನಲ್ಲಿ ಸಿನಿಮಾ ಮಾಡೋದನ್ನು ಕಲಿಯಲಿಲ್ಲ ಅಂತ ಹೇಳಿದ್ದರಂತೆ. ಅವರ ಸಾವಿಗೆ ಪರೋಕ್ಷವಾಗಿ ತುಂಬಾ ಜನ ಕಾರಣರಾಗಿದ್ದಾರೆ. ಆದರೆ ಯಾವ ಕೋರ್ಟ್ ಕೂಡ ಅವರಿಗೆ ಶಿಕ್ಷೆ ನೀಡುವುದಿಲ್ಲ.
ಹೀಗೆ ಮಾತನ್ನು ಮುಂದುವರೆಸಿದ ಅವರು, ಸ್ವಲ್ಪ ಯೋಚನೆ ಮಾಡಬೇಕಾಗಿತ್ತು. ಎಲ್ಲಿ ದಾರಿ ತಪ್ಪುತ್ತಿದ್ದೇವೆ ಅಂತ ಯೋಚನೆ ಮಾಡಬೇಕು. ಸಿನಿಮಾಗೆ ಹಾಕಿದ ಹಣವನ್ನು ಹೇಗೆ ಹೊರಗಡೆ ತರಬೇಕು ಅಂತ. ನೆಲ ಮಟ್ಟದಿಂದ ಬಂದ ಇವರು ಕೋಟಿ ಕೋಟಿ ಹಾಕಿ ಸಿನಿಮಾ ಮಾಡುತ್ತಾರೆ ಅಂದ್ರೆ ಸಾಮಾನ್ಯವಲ್ಲ. ಸರ್ಕಾರಕ್ಕೆ ಸಿನಿಮಾಗೆ ಕೆಳಮಟ್ಟದ ಆದ್ಯತೆ ನೀಡುತ್ತಿದೆ. ಯಾವ ನಂಬಿಕೆಯ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಮಾಡುವುದು ತಪ್ಪು ಅಂತಾ ನಾನು ಹೇಳುವುದಿಲ್ಲ. ಈ ಕ್ಷೇತಾ ತುಂಬಾ ಒಳ್ಳೆಯ ಕ್ಷೇತ್ರಾ. ಈ ಬಗ್ಗೆ ನಾನು ದೂರುವುದಿಲ್ಲ. ನಾನು 30 ವರ್ಷಗಳಿಂದ ಇದೇ ಸಿನಿಮಾ ಕ್ಷೇತ್ರದಲ್ಲಿ ನಾನು ಕೆಲಸ ಮಾಡಿದ್ದೇನೆ. ನಾವು ಇಡೋ ಪ್ರತಿ ಹೆಜ್ಜೆಯನ್ನು ಯೋಚನೆ ಮಾಡಿ ಇಡಬೇಕು ಅಂತ ನಾನು ಹೇಳುತ್ತೇನೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ