newsfirstkannada.com

‘ಯಾರು ಗುರುತೇ ಹಿಡಿಯದ ಜಾಗದಲ್ಲಿ ಇದ್ದೆವು’- 2 ತಿಂಗಳ ಬ್ರೇಕ್‌ ಬಗ್ಗೆ ಕೊಹ್ಲಿ ಹೇಳಿದ್ದೇನು..?

Share :

Published March 26, 2024 at 9:17pm

    ಇಂಗ್ಲೆಂಡ್​ಗೆ ಹೋಗಿದ್ದೇಕೆ ಎಂಬುದನ್ನ ಮಾಹಿತಿ ಬಿಚ್ಚಿಟ್ಟ ಕಿಂಗ್ ಕೊಹ್ಲಿ

    ತಮ್ಮ ಮುದ್ದು ಮಕ್ಕಳಾದ ಅಕಾಯ್, ವಮಿಕಾ ಬಗ್ಗೆ ಕೊಹ್ಲಿ ಏನಂದ್ರು..?

    ಕೆಲ ಅಮೂಲ್ಯ ಕ್ಷಣಗಳ ಸ್ಪೆಂಡ್ ಮಾಡಿರುವುದು ನನಗೆ ಖುಷಿ ನೀಡಿದೆ

ವಿರಾಟ್​ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಅಮೋಘ ಗೆಲುವನ್ನು ತಂದುಕೊಟ್ಟರು. ಅದರಂತೆ ಆರ್​​ಸಿಬಿ ಅಭಿಮಾನಿಗಳ ಆಸೆ ನಿರಾಸೆ ಮಾಡಲಿಲ್ಲ. ಪಂಜಾಬ್​ ವಿರುದ್ಧದ ಪಂದ್ಯದ ಬಳಿಕ ಕಿಂಗ್​ ಕೊಹ್ಲಿ ತಾವು ಇಂಗ್ಲೆಂಡ್​ಗೆ ಹೋಗಿರುವುದು ಯಾಕೆ ಎಂಬುದನ್ನು ಪಂದ್ಯದ ಬಳಿಕ ಬಹಿರಂಗ ಪಡಿಸಿದ್ದಾರೆ.

ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5​ ಟೆಸ್ಟ್ ಪಂದ್ಯಗಳ ಸರಣಿಗೆ ಕೊಹ್ಲಿ ಲಭ್ಯ ಇರಲಿಲ್ಲ. ಸದ್ಯ ಈ ಬಗ್ಗೆ ಮಾತನಾಡಿರುವ ಕಿಂಗ್ ಕೊಹ್ಲಿ, ಎರಡನೇ ಮಗುವಿಗೆ (ಅಕಾಯ್​) ಅನುಷ್ಕಾ ಶರ್ಮಾ ಜನ್ಮ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಎರಡು ತಿಂಗಳು ವಿದೇಶದಲ್ಲಿ ಕಳೆಯಬೇಕಾಯಿತು. ಇದಕ್ಕಾಗಿಯೇ ನಾನು ಟೆಸ್ಟ್​ನಿಂದ ವಿರಾಮ ಪಡೆದು ಇಂಗ್ಲೆಂಡ್​ಗೆ ತೆರಳಬೇಕಾಯಿತು. ಎರಡು ಮಕ್ಕಳು ಹಾಗೂ ಕುಟುಂಬದ ಜೊತೆ ಸಮಯ ಕಳೆದಿದ್ದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎರಡು ತಿಂಗಳಗಳ ಕಾಲ ನಾವು ಭಾರತದಲ್ಲಿ ಇರಲಿಲ್ಲ. ಇದು ಎಲ್ಲರನ್ನು ಕುತೂಹಲ ಮೂಡಿಸಿತ್ತು. ಆದರೆ ನಾವು ಯಾರಿಗೂ ಗೊತ್ತಿರದ ಸ್ಥಳಕ್ಕೆ ಹೋಗಿ ಅಲ್ಲಿ ಫ್ಯಾಮಿಲಿ ಜೊತೆ ಕೆಲ ಅಮೂಲ್ಯ ಕ್ಷಣಗಳನ್ನು ಸ್ಪೆಂಡ್ ಮಾಡಿರುವುದು ಖುಷಿ ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: RCB vs PBKS; ಪಂಜಾಬ್​ ಸೋಲಿಗೆ ವಿರಾಟ್​ ಕೊಹ್ಲಿ ಕಾರಣನಾ.. ಸತ್ಯ ಬಾಯ್ಬಿಟ್ಟ ಗಬ್ಬರ್ ಶಿಖರ್ ಧವನ್​ -Video

ಯಾರೂ ನನ್ನನ್ನು ಗುರುತಿಸದ ಊರಲ್ಲಿ ಓಡಾಡುವುದು ಎಂದರೆ ನಿಜವಾಗಲೂ ಅದೊಂದು ದೊಡ್ಡ ಅನುಭವವಾಗಿದೆ. ಸಹಜವಾಗಿ ಎರಡು ಮಕ್ಕಳನ್ನು ಹೊಂದಿರುವಾಗ, ಕುಟುಂಬ ದೃಷ್ಟಿಕೋನ ಸಂಪೂರ್ಣ ಭಿನ್ನವಾಗಿರುತ್ತವೆ. ಈ ವೇಳೆ ಮಗಳು ವಮಿಕಾ ಜೊತೆ ಮಾತಾಡಿದ, ಅವಳ ಜೊತೆ ಆಡಿದ ಕ್ಷಣಗಳು ತುಂಬಾ ಅದ್ಭುತವಾಗಿತ್ತು. ಕುಟುಂಬದ ಜೊತೆಗಿದ್ದು ಹಲವಾರು ವಿಷಯಗಳನ್ನು ತಿಳಿದುಕೊಂಡೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಯಾರು ಗುರುತೇ ಹಿಡಿಯದ ಜಾಗದಲ್ಲಿ ಇದ್ದೆವು’- 2 ತಿಂಗಳ ಬ್ರೇಕ್‌ ಬಗ್ಗೆ ಕೊಹ್ಲಿ ಹೇಳಿದ್ದೇನು..?

https://newsfirstlive.com/wp-content/uploads/2024/03/VIRAT_KOHLI-3.jpg

    ಇಂಗ್ಲೆಂಡ್​ಗೆ ಹೋಗಿದ್ದೇಕೆ ಎಂಬುದನ್ನ ಮಾಹಿತಿ ಬಿಚ್ಚಿಟ್ಟ ಕಿಂಗ್ ಕೊಹ್ಲಿ

    ತಮ್ಮ ಮುದ್ದು ಮಕ್ಕಳಾದ ಅಕಾಯ್, ವಮಿಕಾ ಬಗ್ಗೆ ಕೊಹ್ಲಿ ಏನಂದ್ರು..?

    ಕೆಲ ಅಮೂಲ್ಯ ಕ್ಷಣಗಳ ಸ್ಪೆಂಡ್ ಮಾಡಿರುವುದು ನನಗೆ ಖುಷಿ ನೀಡಿದೆ

ವಿರಾಟ್​ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಅಮೋಘ ಗೆಲುವನ್ನು ತಂದುಕೊಟ್ಟರು. ಅದರಂತೆ ಆರ್​​ಸಿಬಿ ಅಭಿಮಾನಿಗಳ ಆಸೆ ನಿರಾಸೆ ಮಾಡಲಿಲ್ಲ. ಪಂಜಾಬ್​ ವಿರುದ್ಧದ ಪಂದ್ಯದ ಬಳಿಕ ಕಿಂಗ್​ ಕೊಹ್ಲಿ ತಾವು ಇಂಗ್ಲೆಂಡ್​ಗೆ ಹೋಗಿರುವುದು ಯಾಕೆ ಎಂಬುದನ್ನು ಪಂದ್ಯದ ಬಳಿಕ ಬಹಿರಂಗ ಪಡಿಸಿದ್ದಾರೆ.

ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5​ ಟೆಸ್ಟ್ ಪಂದ್ಯಗಳ ಸರಣಿಗೆ ಕೊಹ್ಲಿ ಲಭ್ಯ ಇರಲಿಲ್ಲ. ಸದ್ಯ ಈ ಬಗ್ಗೆ ಮಾತನಾಡಿರುವ ಕಿಂಗ್ ಕೊಹ್ಲಿ, ಎರಡನೇ ಮಗುವಿಗೆ (ಅಕಾಯ್​) ಅನುಷ್ಕಾ ಶರ್ಮಾ ಜನ್ಮ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಎರಡು ತಿಂಗಳು ವಿದೇಶದಲ್ಲಿ ಕಳೆಯಬೇಕಾಯಿತು. ಇದಕ್ಕಾಗಿಯೇ ನಾನು ಟೆಸ್ಟ್​ನಿಂದ ವಿರಾಮ ಪಡೆದು ಇಂಗ್ಲೆಂಡ್​ಗೆ ತೆರಳಬೇಕಾಯಿತು. ಎರಡು ಮಕ್ಕಳು ಹಾಗೂ ಕುಟುಂಬದ ಜೊತೆ ಸಮಯ ಕಳೆದಿದ್ದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎರಡು ತಿಂಗಳಗಳ ಕಾಲ ನಾವು ಭಾರತದಲ್ಲಿ ಇರಲಿಲ್ಲ. ಇದು ಎಲ್ಲರನ್ನು ಕುತೂಹಲ ಮೂಡಿಸಿತ್ತು. ಆದರೆ ನಾವು ಯಾರಿಗೂ ಗೊತ್ತಿರದ ಸ್ಥಳಕ್ಕೆ ಹೋಗಿ ಅಲ್ಲಿ ಫ್ಯಾಮಿಲಿ ಜೊತೆ ಕೆಲ ಅಮೂಲ್ಯ ಕ್ಷಣಗಳನ್ನು ಸ್ಪೆಂಡ್ ಮಾಡಿರುವುದು ಖುಷಿ ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: RCB vs PBKS; ಪಂಜಾಬ್​ ಸೋಲಿಗೆ ವಿರಾಟ್​ ಕೊಹ್ಲಿ ಕಾರಣನಾ.. ಸತ್ಯ ಬಾಯ್ಬಿಟ್ಟ ಗಬ್ಬರ್ ಶಿಖರ್ ಧವನ್​ -Video

ಯಾರೂ ನನ್ನನ್ನು ಗುರುತಿಸದ ಊರಲ್ಲಿ ಓಡಾಡುವುದು ಎಂದರೆ ನಿಜವಾಗಲೂ ಅದೊಂದು ದೊಡ್ಡ ಅನುಭವವಾಗಿದೆ. ಸಹಜವಾಗಿ ಎರಡು ಮಕ್ಕಳನ್ನು ಹೊಂದಿರುವಾಗ, ಕುಟುಂಬ ದೃಷ್ಟಿಕೋನ ಸಂಪೂರ್ಣ ಭಿನ್ನವಾಗಿರುತ್ತವೆ. ಈ ವೇಳೆ ಮಗಳು ವಮಿಕಾ ಜೊತೆ ಮಾತಾಡಿದ, ಅವಳ ಜೊತೆ ಆಡಿದ ಕ್ಷಣಗಳು ತುಂಬಾ ಅದ್ಭುತವಾಗಿತ್ತು. ಕುಟುಂಬದ ಜೊತೆಗಿದ್ದು ಹಲವಾರು ವಿಷಯಗಳನ್ನು ತಿಳಿದುಕೊಂಡೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More