ಭಾರತ, ಶ್ರೀಲಂಕಾ ತಂಡಗಳ ಮಧ್ಯೆ ಟಿ20 ಮತ್ತು ಏಕದಿನ ಸರಣಿ
ಜುಲೈ 27ನೇ ತಾರೀಕು ಮೊದಲು ಅಂತರಾಷ್ಟ್ರೀಯ ಟಿ20 ಪಂದ್ಯ!
ಟೀಮ್ ಇಂಡಿಯಾ ಕೋಚ್ ಗಂಭೀರ್ಗೆ ಇದು ಮೊದಲ ಸೀರೀಸ್
ಬಹುನಿರೀಕ್ಷಿತ ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಶುರುವಾಗಲು ಇನ್ನೇನು 5 ದಿನಗಳು ಮಾತ್ರ ಬಾಕಿ ಇವೆ. ಇದೇ ತಿಂಗಳು ಜುಲೈ 27ನೇ ತಾರೀಕಿನಿಂದ ನಡೆಯಲಿರೋ ಶ್ರೀಲಂಕಾ ವಿರುದ್ಧದ ಸರಣಿಗೆ ಈಗಾಗಲೇ ಬಲಿಷ್ಠ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಇಷ್ಟೇ ಅಲ್ಲ ಇಂದು ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಸೇರಿದಂತೆ ಭಾರತ ತಂಡದ ಕ್ರಿಕೆಟಿಗರು ಶ್ರೀಲಂಕಾ ಪ್ರವಾಸ ಬೆಳೆಸಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ರು. ಜತೆಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ರೆಸ್ಟ್ ನೀಡುವಂತೆ ಕೊಹ್ಲಿ ಮನವಿ ಮಾಡಿದ್ರು. ಆದರೆ, ಕೋಚ್ ಆಗಿ ಗೌತಮ್ ಗಂಭೀರ್ಗೆ ಇದು ಮೊದಲ ಸರಣಿಯಾದ ಕಾರಣ ಕೊಹ್ಲಿಗೆ ಆಡಿ ಎಂದು ಕೇಳಿಕೊಂಡಿದ್ದರು. ಗಂಭೀರ್ ಮನವಿಗೆ ಸ್ಪಂದಿಸಿದ ಕೊಹ್ಲಿ ಶ್ರೀಲಂಕಾ ವಿರುದ್ಧ ಸರಣಿಗೆ ಲಭ್ಯರಾಗಿದ್ದಾರೆ.
ಬಿಸಿಸಿಐಗೆ ಖಡಕ್ ಮಸೇಜ್..!
ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗಂಭೀರ್ ನೇಮಕ ಆಗುತ್ತಿದ್ದಂತೆ ವಿರಾಟ್ ಕೊಹ್ಲಿ ಈ ಬಗ್ಗೆ ಬಿಸಿಸಿಐಗೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಗಂಭೀರ್ ಮತ್ತು ನನ್ನ ನಡುವೆ ಏನೇ ಭಿನ್ನಾಭಿಪ್ರಾಯ ಇದ್ರೂ ನಾವು ಭಾರತಕ್ಕಾಗಿ ಆಡುತ್ತಿದ್ದೇವೆ. ಈ ಮೊದಲು ಏನೇ ಆಗಿದ್ರೂ ಭಾರತ ತಂಡಕ್ಕೆ ಆಡುವಾಗ ಇಬ್ಬರ ಉದ್ದೇಶ ಒಂದೇ ಆಗಿದೆ. ಭಾರತ ತಂಡದ ಗೆಲುವಿಗಾಗಿ ಕೆಲಸ ಮಾಡುತ್ತೇವೆ ಎಂದಿದ್ದರು ಕೊಹ್ಲಿ.
ಇದನ್ನೂ ಓದಿ: ಆರ್ಸಿಬಿ ಕ್ಯಾಪ್ಟನ್ಸಿಗಾಗಿ ರಾಹುಲ್, ಸೂರ್ಯ ಮಧ್ಯೆ ಪೈಪೋಟಿ.. ಮುಂದಿನ ಕ್ಯಾಪ್ಟನ್ ಯಾರು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಭಾರತ, ಶ್ರೀಲಂಕಾ ತಂಡಗಳ ಮಧ್ಯೆ ಟಿ20 ಮತ್ತು ಏಕದಿನ ಸರಣಿ
ಜುಲೈ 27ನೇ ತಾರೀಕು ಮೊದಲು ಅಂತರಾಷ್ಟ್ರೀಯ ಟಿ20 ಪಂದ್ಯ!
ಟೀಮ್ ಇಂಡಿಯಾ ಕೋಚ್ ಗಂಭೀರ್ಗೆ ಇದು ಮೊದಲ ಸೀರೀಸ್
ಬಹುನಿರೀಕ್ಷಿತ ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಶುರುವಾಗಲು ಇನ್ನೇನು 5 ದಿನಗಳು ಮಾತ್ರ ಬಾಕಿ ಇವೆ. ಇದೇ ತಿಂಗಳು ಜುಲೈ 27ನೇ ತಾರೀಕಿನಿಂದ ನಡೆಯಲಿರೋ ಶ್ರೀಲಂಕಾ ವಿರುದ್ಧದ ಸರಣಿಗೆ ಈಗಾಗಲೇ ಬಲಿಷ್ಠ ಟೀಮ್ ಇಂಡಿಯಾ ಅನೌನ್ಸ್ ಆಗಿದೆ. ಇಷ್ಟೇ ಅಲ್ಲ ಇಂದು ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಸೇರಿದಂತೆ ಭಾರತ ತಂಡದ ಕ್ರಿಕೆಟಿಗರು ಶ್ರೀಲಂಕಾ ಪ್ರವಾಸ ಬೆಳೆಸಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ರು. ಜತೆಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ರೆಸ್ಟ್ ನೀಡುವಂತೆ ಕೊಹ್ಲಿ ಮನವಿ ಮಾಡಿದ್ರು. ಆದರೆ, ಕೋಚ್ ಆಗಿ ಗೌತಮ್ ಗಂಭೀರ್ಗೆ ಇದು ಮೊದಲ ಸರಣಿಯಾದ ಕಾರಣ ಕೊಹ್ಲಿಗೆ ಆಡಿ ಎಂದು ಕೇಳಿಕೊಂಡಿದ್ದರು. ಗಂಭೀರ್ ಮನವಿಗೆ ಸ್ಪಂದಿಸಿದ ಕೊಹ್ಲಿ ಶ್ರೀಲಂಕಾ ವಿರುದ್ಧ ಸರಣಿಗೆ ಲಭ್ಯರಾಗಿದ್ದಾರೆ.
ಬಿಸಿಸಿಐಗೆ ಖಡಕ್ ಮಸೇಜ್..!
ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗಂಭೀರ್ ನೇಮಕ ಆಗುತ್ತಿದ್ದಂತೆ ವಿರಾಟ್ ಕೊಹ್ಲಿ ಈ ಬಗ್ಗೆ ಬಿಸಿಸಿಐಗೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಗಂಭೀರ್ ಮತ್ತು ನನ್ನ ನಡುವೆ ಏನೇ ಭಿನ್ನಾಭಿಪ್ರಾಯ ಇದ್ರೂ ನಾವು ಭಾರತಕ್ಕಾಗಿ ಆಡುತ್ತಿದ್ದೇವೆ. ಈ ಮೊದಲು ಏನೇ ಆಗಿದ್ರೂ ಭಾರತ ತಂಡಕ್ಕೆ ಆಡುವಾಗ ಇಬ್ಬರ ಉದ್ದೇಶ ಒಂದೇ ಆಗಿದೆ. ಭಾರತ ತಂಡದ ಗೆಲುವಿಗಾಗಿ ಕೆಲಸ ಮಾಡುತ್ತೇವೆ ಎಂದಿದ್ದರು ಕೊಹ್ಲಿ.
ಇದನ್ನೂ ಓದಿ: ಆರ್ಸಿಬಿ ಕ್ಯಾಪ್ಟನ್ಸಿಗಾಗಿ ರಾಹುಲ್, ಸೂರ್ಯ ಮಧ್ಯೆ ಪೈಪೋಟಿ.. ಮುಂದಿನ ಕ್ಯಾಪ್ಟನ್ ಯಾರು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್