2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಆರಂಭಕ್ಕೆ ದಿನಗಣನೆ
ಈ ಬಾರಿ ಐಪಿಎಲ್ ಬೆಂಗಳೂರಲ್ಲಿ ನಡೆಯೋದು ಡೌಟ್ ಅನ್ನೋ ಚರ್ಚೆ!
ಎಲ್ಲಾ ಚರ್ಚೆಗೂ ಕೊನೆಗೂ ತೆರೆ ಎಳೆದ ಕೆಎಸ್ಸಿಎ ಹೇಳಿದ್ದೇನು ಗೊತ್ತಾ?
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಶುರುವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್ 22ನೇ ತಾರೀಕು ಆರ್ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಐಪಿಎಲ್ ಪಂದ್ಯ ನಡೆಯಲಿದೆ. ಈ ಮಧ್ಯೆ ಆರ್ಸಿಬಿ ಫ್ಯಾನ್ಸ್ಗೆ ಕಹಿಸುದ್ದಿ ಒಂದು ಇತ್ತು.
ಹೌದು, ಇತ್ತೀಚೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಜನ ಟ್ಯಾಂಕರ್ ನೀರಿನ ಮೇಲೆ ಡಿಪೆಂಡ್ ಆಗಿದ್ದಾರೆ. ಹಾಗಾಗಿ ನೀರಿನ ಸಮಸ್ಯೆ ಇರೋ ಕಾರಣ ಬೆಂಗಳೂರಿನಲ್ಲಿ ನಡೆಯಬೇಕಾದ ಎಲ್ಲಾ ಐಪಿಎಲ್ ಪಂದ್ಯಗಳನ್ನು ರದ್ದು ಮಾಡೋ ಬಗ್ಗೆ ಚರ್ಚೆ ಆಗುತ್ತಿತ್ತು.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಾಟರ್ ಕ್ರೈಸಿಸ್ ಇರೋ ಕಾರಣ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಾದ ಎಲ್ಲಾ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸಿ ಎಂದು ಟ್ರೆಂಡ್ ಮಾಡಲಾಗುತ್ತಿದೆ. ಎಲ್ಲರೂ #CancelIPL ಟ್ರೆಂಡ್ ಮಾಡುತ್ತಿದ್ದಾರೆ. ಐಪಿಎಲ್ ಪಂದ್ಯಗಳ ಸಮಯದಲ್ಲಿ ಭಾರೀ ಪ್ರಮಾಣದ ನೀರಿನ ಬಳಕೆ ಮಾಡಲಾಗುತ್ತದೆ. ಹೀಗಾಗಿ ರದ್ದು ಅಥವಾ ಸ್ಥಳಾಂತರ ಮಾಡಿ ಅನ್ನೋ ಕೂಗು ಕೇಳಿ ಬಂದಿತ್ತು.
ಕೆಎಸ್ಸಿಎ ಹೇಳಿದ್ದೇನು?
ಸದ್ಯ ನಮಗೆ ಯಾವುದೇ ವಾಟರ್ ಕ್ರೈಸಿಸ್ ಇಲ್ಲ. ಪಂದ್ಯಕ್ಕೆ ಬೇಕಾಗಿರೋದು 10-15 ಸಾವಿರ ಲೀಟರ್, ಅಷ್ಟು ನಾವು ಎಸ್ಟಿಪಿ ಪ್ಲಾಂಟ್ನಿಂದ ಜನರೇಟ್ ಮಾಡುತ್ತೇವೆ. ನಾವು ಗ್ರೌಂಡ್ ಲೆವೆಲ್ ವಾಟರ್ ಬಳಸಲ್ಲ. ನಮಗೆ ಸ್ಟೇಟ್ ಗವರ್ನಮೆಂಟ್ನಿಂದ ಗೈಡ್ಲೈನ್ಸ್ ಕೂಡ ಬಂದಿದೆ ಎಂದು ಕೆಎಸ್ಸಿಎ ಹೇಳಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಆರಂಭಕ್ಕೆ ದಿನಗಣನೆ
ಈ ಬಾರಿ ಐಪಿಎಲ್ ಬೆಂಗಳೂರಲ್ಲಿ ನಡೆಯೋದು ಡೌಟ್ ಅನ್ನೋ ಚರ್ಚೆ!
ಎಲ್ಲಾ ಚರ್ಚೆಗೂ ಕೊನೆಗೂ ತೆರೆ ಎಳೆದ ಕೆಎಸ್ಸಿಎ ಹೇಳಿದ್ದೇನು ಗೊತ್ತಾ?
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಶುರುವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್ 22ನೇ ತಾರೀಕು ಆರ್ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಐಪಿಎಲ್ ಪಂದ್ಯ ನಡೆಯಲಿದೆ. ಈ ಮಧ್ಯೆ ಆರ್ಸಿಬಿ ಫ್ಯಾನ್ಸ್ಗೆ ಕಹಿಸುದ್ದಿ ಒಂದು ಇತ್ತು.
ಹೌದು, ಇತ್ತೀಚೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಜನ ಟ್ಯಾಂಕರ್ ನೀರಿನ ಮೇಲೆ ಡಿಪೆಂಡ್ ಆಗಿದ್ದಾರೆ. ಹಾಗಾಗಿ ನೀರಿನ ಸಮಸ್ಯೆ ಇರೋ ಕಾರಣ ಬೆಂಗಳೂರಿನಲ್ಲಿ ನಡೆಯಬೇಕಾದ ಎಲ್ಲಾ ಐಪಿಎಲ್ ಪಂದ್ಯಗಳನ್ನು ರದ್ದು ಮಾಡೋ ಬಗ್ಗೆ ಚರ್ಚೆ ಆಗುತ್ತಿತ್ತು.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಾಟರ್ ಕ್ರೈಸಿಸ್ ಇರೋ ಕಾರಣ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಾದ ಎಲ್ಲಾ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸಿ ಎಂದು ಟ್ರೆಂಡ್ ಮಾಡಲಾಗುತ್ತಿದೆ. ಎಲ್ಲರೂ #CancelIPL ಟ್ರೆಂಡ್ ಮಾಡುತ್ತಿದ್ದಾರೆ. ಐಪಿಎಲ್ ಪಂದ್ಯಗಳ ಸಮಯದಲ್ಲಿ ಭಾರೀ ಪ್ರಮಾಣದ ನೀರಿನ ಬಳಕೆ ಮಾಡಲಾಗುತ್ತದೆ. ಹೀಗಾಗಿ ರದ್ದು ಅಥವಾ ಸ್ಥಳಾಂತರ ಮಾಡಿ ಅನ್ನೋ ಕೂಗು ಕೇಳಿ ಬಂದಿತ್ತು.
ಕೆಎಸ್ಸಿಎ ಹೇಳಿದ್ದೇನು?
ಸದ್ಯ ನಮಗೆ ಯಾವುದೇ ವಾಟರ್ ಕ್ರೈಸಿಸ್ ಇಲ್ಲ. ಪಂದ್ಯಕ್ಕೆ ಬೇಕಾಗಿರೋದು 10-15 ಸಾವಿರ ಲೀಟರ್, ಅಷ್ಟು ನಾವು ಎಸ್ಟಿಪಿ ಪ್ಲಾಂಟ್ನಿಂದ ಜನರೇಟ್ ಮಾಡುತ್ತೇವೆ. ನಾವು ಗ್ರೌಂಡ್ ಲೆವೆಲ್ ವಾಟರ್ ಬಳಸಲ್ಲ. ನಮಗೆ ಸ್ಟೇಟ್ ಗವರ್ನಮೆಂಟ್ನಿಂದ ಗೈಡ್ಲೈನ್ಸ್ ಕೂಡ ಬಂದಿದೆ ಎಂದು ಕೆಎಸ್ಸಿಎ ಹೇಳಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್