newsfirstkannada.com

ಅಕ್ಕನನ್ನು ಕಾಲೇಜಿಗೆ ಬಿಟ್ಟು ಬರಲು ಹೋಗಿದ್ದ ತಮ್ಮ; ಟ್ಯಾಂಕರ್ ಹರಿದು ಸ್ಥಳದಲ್ಲೇ ಇಬ್ಬರು ಸಾವು

Share :

Published June 7, 2024 at 7:02pm

Update June 7, 2024 at 7:04pm

    ಯಮನಂತೆ ಬಂದ ವಾಟರ್​ ಟ್ಯಾಂಕರ್​ ಏಕಾಏಕಿ ಬೈಕ್​ಗೆ ಡಿಕ್ಕಿ, ಸ್ಥಳದಲ್ಲೇ ಇಬ್ಬರು ಸಾವು

    ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ನಡೆದ ದಾರುಣ ಘಟನೆ ಇದು

    ಇಬ್ಬರು ಮಕ್ಕಳ ಕಳೆದುಕೊಂಡ ದುಃಖದಲ್ಲಿ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಬೆಂಗಳೂರು: ಯಾರಿಗೆ ಯಾವಾಗ ಏನ್​ ಆಗುತ್ತೆ ಹೇಳೋದು ಕಷ್ಟ. ಅದರಲ್ಲೂ ಸಿಲಿಕಾನ್​ ಸಿಟಿಯಲ್ಲಿ ಜೀವಿಸುವವ ಜೀವಕಂತೂ ಗ್ಯಾರಂಟಿ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ದಾರುಣ ಘಟನೆಯೊಂದು ನಡೆದು ಹೋಗಿದೆ. ಕಿಲ್ಲರ್ ವಾಟರ್ ಟ್ಯಾಂಕರ್‌ಗೆ ಅಕ್ಕ-ತಮ್ಮ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಭಯಾನಕ ಅಪಘಾತ.. ಅಕ್ಕ-ತಮ್ಮನ ತಲೆ ಮೇಲೆ ಹರಿದ ವಾಟರ್ ಟ್ಯಾಂಕರ್‌ ಚಕ್ರ; ಇಬ್ಬರು ಸಾವು

ಹೌದು, ಅತಿಯಾದ ವೇಗದಲ್ಲಿ ಬರುತ್ತಿದ್ದ ವಾಟರ್ ಟ್ಯಾಂಕರ್ ಗುದ್ದಿದ್ದಕ್ಕೆ ಬೈಕ್‌ನಲ್ಲಿದ್ದ ಅಕ್ಕ-ತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಧುಮಿತ (20), ರಂಜನ್ (18) ಮೃತ ಅಕ್ಕ-ತಮ್ಮರಾಗಿದ್ದಾರೆ. ಈ ಇವರಿಬ್ಬರು ದೊಡ್ಡ ನಾಗಮಂಗಲದ ಕೆಂಪೇಗೌಡ ಬಡಾವಣೆ ನಿವಾಸಿಗಳು. ಇಂದು ಬೆಳಗ್ಗೆ ಬೈಕ್‌ನಲ್ಲಿ ಅಕ್ಕನಿಗೆ ಕಾಲೇಜಿಗೆ ಡ್ರಾಪ್​ ಮಾಡಲು ತಮ್ಮ ಹೊರಟಿದ್ದನಂತೆ. ಆದರೆ ಇದೇ ವೇಳೆ ಯಮನಂತೆ ಬಂದ ವಾಟರ್​ ಟ್ಯಾಂಕರ್​ ಏಕಾಏಕಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿದ್ದವರು ಇಬ್ಬರು ಕೆಳಗೆ ಬಿದ್ದಿದ್ದಾರೆ. ಬೈಕ್ ಕೆಳಗೆ ಬೀಳುತ್ತಿದ್ದಂತೆ ಇಬ್ಬರ ತಲೆ ಮೇಲೆ ಹಿಂಬದಿಯ ಚಕ್ರ ಹರಿದಿದೆ.

ಇನ್ನು, ಮೃತಪಟ್ಟ ಮಧುಮಿತ ಬೆಂಗಳೂರಿನ SSMRV ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಮೊದಲ ದಿನ ಅಕ್ಕನನ್ನು ಕಾಲೇಜಿಗೆ ಬಿಟ್ಟು ಬರಲು ತಮ್ಮ ಬೈಕ್‌ನಲ್ಲಿ ಹೋಗಿದ್ದ. ಕಾಲೇಜಿಗೆ ಹೋಗುವ ಮೊದಲ ದಿನವೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದ ಭಯಾನಕ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರು ಮುದ್ದಾದ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಪೋಷಕರು, ಅಕ್ಕನ ಬಸ್​ ನಿಲ್ದಾಣದ ಬಳಿ ಬಿಟ್ಟು ಬರಲು ಹೋಗಿದ್ದ. ನಮಗೆ ಇದ್ದಿದ್ದು ಇಬ್ಬರು ಮಕ್ಕಳು. ಅಪಘಾತ ಆದ ಕೂಡಲೇ ನನಗೆ ಫೋನ್​ ಬಂತು ಬೇಗ ಬನ್ನಿ ತುಂಬಾ ಸೀರಿಯಸ್ ಆಗಿದೆ ಅಂತ. ಆದರೆ ನಮ್ಮ ಮಕ್ಕಳು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅಂತ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಕನನ್ನು ಕಾಲೇಜಿಗೆ ಬಿಟ್ಟು ಬರಲು ಹೋಗಿದ್ದ ತಮ್ಮ; ಟ್ಯಾಂಕರ್ ಹರಿದು ಸ್ಥಳದಲ್ಲೇ ಇಬ್ಬರು ಸಾವು

https://newsfirstlive.com/wp-content/uploads/2024/06/death1.jpg

    ಯಮನಂತೆ ಬಂದ ವಾಟರ್​ ಟ್ಯಾಂಕರ್​ ಏಕಾಏಕಿ ಬೈಕ್​ಗೆ ಡಿಕ್ಕಿ, ಸ್ಥಳದಲ್ಲೇ ಇಬ್ಬರು ಸಾವು

    ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ನಡೆದ ದಾರುಣ ಘಟನೆ ಇದು

    ಇಬ್ಬರು ಮಕ್ಕಳ ಕಳೆದುಕೊಂಡ ದುಃಖದಲ್ಲಿ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಬೆಂಗಳೂರು: ಯಾರಿಗೆ ಯಾವಾಗ ಏನ್​ ಆಗುತ್ತೆ ಹೇಳೋದು ಕಷ್ಟ. ಅದರಲ್ಲೂ ಸಿಲಿಕಾನ್​ ಸಿಟಿಯಲ್ಲಿ ಜೀವಿಸುವವ ಜೀವಕಂತೂ ಗ್ಯಾರಂಟಿ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ದಾರುಣ ಘಟನೆಯೊಂದು ನಡೆದು ಹೋಗಿದೆ. ಕಿಲ್ಲರ್ ವಾಟರ್ ಟ್ಯಾಂಕರ್‌ಗೆ ಅಕ್ಕ-ತಮ್ಮ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಭಯಾನಕ ಅಪಘಾತ.. ಅಕ್ಕ-ತಮ್ಮನ ತಲೆ ಮೇಲೆ ಹರಿದ ವಾಟರ್ ಟ್ಯಾಂಕರ್‌ ಚಕ್ರ; ಇಬ್ಬರು ಸಾವು

ಹೌದು, ಅತಿಯಾದ ವೇಗದಲ್ಲಿ ಬರುತ್ತಿದ್ದ ವಾಟರ್ ಟ್ಯಾಂಕರ್ ಗುದ್ದಿದ್ದಕ್ಕೆ ಬೈಕ್‌ನಲ್ಲಿದ್ದ ಅಕ್ಕ-ತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಧುಮಿತ (20), ರಂಜನ್ (18) ಮೃತ ಅಕ್ಕ-ತಮ್ಮರಾಗಿದ್ದಾರೆ. ಈ ಇವರಿಬ್ಬರು ದೊಡ್ಡ ನಾಗಮಂಗಲದ ಕೆಂಪೇಗೌಡ ಬಡಾವಣೆ ನಿವಾಸಿಗಳು. ಇಂದು ಬೆಳಗ್ಗೆ ಬೈಕ್‌ನಲ್ಲಿ ಅಕ್ಕನಿಗೆ ಕಾಲೇಜಿಗೆ ಡ್ರಾಪ್​ ಮಾಡಲು ತಮ್ಮ ಹೊರಟಿದ್ದನಂತೆ. ಆದರೆ ಇದೇ ವೇಳೆ ಯಮನಂತೆ ಬಂದ ವಾಟರ್​ ಟ್ಯಾಂಕರ್​ ಏಕಾಏಕಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿದ್ದವರು ಇಬ್ಬರು ಕೆಳಗೆ ಬಿದ್ದಿದ್ದಾರೆ. ಬೈಕ್ ಕೆಳಗೆ ಬೀಳುತ್ತಿದ್ದಂತೆ ಇಬ್ಬರ ತಲೆ ಮೇಲೆ ಹಿಂಬದಿಯ ಚಕ್ರ ಹರಿದಿದೆ.

ಇನ್ನು, ಮೃತಪಟ್ಟ ಮಧುಮಿತ ಬೆಂಗಳೂರಿನ SSMRV ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಮೊದಲ ದಿನ ಅಕ್ಕನನ್ನು ಕಾಲೇಜಿಗೆ ಬಿಟ್ಟು ಬರಲು ತಮ್ಮ ಬೈಕ್‌ನಲ್ಲಿ ಹೋಗಿದ್ದ. ಕಾಲೇಜಿಗೆ ಹೋಗುವ ಮೊದಲ ದಿನವೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದ ಭಯಾನಕ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರು ಮುದ್ದಾದ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಪೋಷಕರು, ಅಕ್ಕನ ಬಸ್​ ನಿಲ್ದಾಣದ ಬಳಿ ಬಿಟ್ಟು ಬರಲು ಹೋಗಿದ್ದ. ನಮಗೆ ಇದ್ದಿದ್ದು ಇಬ್ಬರು ಮಕ್ಕಳು. ಅಪಘಾತ ಆದ ಕೂಡಲೇ ನನಗೆ ಫೋನ್​ ಬಂತು ಬೇಗ ಬನ್ನಿ ತುಂಬಾ ಸೀರಿಯಸ್ ಆಗಿದೆ ಅಂತ. ಆದರೆ ನಮ್ಮ ಮಕ್ಕಳು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅಂತ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More