ಕೇರಳ ವಯನಾಡ್ನಲ್ಲಿ ಕುಸಿದ ಗುಡ್ಡದ ಜಾಗದ ಪ್ರಮಾಣವೆಷ್ಟು ಗೊತ್ತಾ?
ಗುಡ್ಡ ಕುಸಿದ ಜಾಗದಲ್ಲಿ 13 ಫುಟ್ಬಾಲ್ ಸ್ಟೇಡಿಯಂ ನಿರ್ಮಿಸಬಹುದು
ಇಸ್ರೋ ಬಿಡುಗಡೆ ಮಾಡಿದ ಸ್ಯಾಟ್ಲೈಟ್ ಫೋಟೋದಲ್ಲಿ ಸತ್ಯ ಬಯಲು
ವಯನಾಡ್: ದೇಶ ಹಿಂದೆಂದೂ ಕಂಡು ಕೇಳರಿಯದ ದುರಂತವೊಂದು ಕೇರಳದ ವಯನಾಡ್ನಲ್ಲಿ ನಡೆದು ಹೋಗಿದೆ. ಇಷ್ಟು ದಿನ ಈ ಭೀಕರತೆಯನ್ನ ಸಾವಿನ ಅಂಕಿ ಅಂಶಗಳೊಂದಿಗೆ ತಾಳೆ ಹಾಕಿ ನೋಡಲಾಗುತ್ತಿತ್ತು. ಆದ್ರೆ ಈಗ ಇಸ್ರೋ ಬಿಡುಗಡೆ ಮಾಡಿರುವ ಸ್ಯಾಟ್ಲೈಟ್ ಪೋಟೋಗಳು ಹಾಗೂ ಗುಡ್ಡ ಕುಸಿದ ಪ್ರಮಾಣವನ್ನು ಬಿಚ್ಚಿಟ್ಟಿದೆ.
ಇಸ್ರೋ ನೀಡಿದ ವರದಿಗಳನ್ನು ನೋಡಿದ್ರೆ ಎದೆ ಝಲ್ ಅನ್ನೋದು ಪಕ್ಕಾ, ಯಾಕಂದ್ರೆ ಗುಡ್ಡ ಕುಸಿದ ಪರಿಯೇ ಅಂತಹದ್ದಿದೆ. ಒಂದಲ್ಲ ಎರಡಲ್ಲ ಒಟ್ಟು 13 ಫುಟ್ಬಾಲ್ ಸ್ಟೇಡಿಯಂಗಳನ್ನ ಗುಡ್ಡ ಕುಸಿದ ಜಾಗದಲ್ಲಿ ನಿರ್ಮಿಸಬಹುದು ಅಂತ ಇಸ್ರೋ ತನ್ನ ವರದಿಯಲ್ಲಿ ಹೇಳಿದೆ. ಅಂದ್ರೆ ಅಂತಾರಾಷ್ಟ್ರೀಯ ಫುಟ್ಬಾಲ್ನ ಒಂದು ಕ್ರೀಡಾಂಗಣ ನಿರ್ಮಿಸಲು ಎಷ್ಟು ಜಾಗ ಬೇಕೋ ಅಂತಹ 13 ಕ್ರೀಡಾಂಗಣ ನಿರ್ಮಿಸುವಷ್ಟು ಜಾಗದ ವಿಸ್ತಾರವಾದ ಗುಡ್ಡ ಕುಸಿದು ಬಿದ್ದಿದೆ ಎಂದು ಇಸ್ರೋ ಹೇಳಿದೆ. ಅಂದ್ರೆ ನೀವೇ ಊಹಿಸಿಕೊಳ್ಳಿ ಗುಡ್ಡು ಕುಸಿದ ಭೀಕರತೆ ಅದ್ಯಾವ ಮಟ್ಟಕ್ಕೆ ಇದೆ ಅನ್ನೋದು.
ಇದನ್ನೂ ಓದಿ: ಭೂಕುಸಿತದಲ್ಲಿ ತಂದೆ-ತಾಯಿ ಸಾವು.. ಕಷ್ಟಪಟ್ಟು ಓದಿಸಿ ವಿದೇಶಕ್ಕೆ ಕಳುಹಿಸಿರುವ ಮಗಳ ನೋವು ಯಾರತ್ರ ಹೇಳೋದು?
ಒಂದು ಫುಟ್ ಬಾಲ್ ನಿರ್ಮಾಣಕ್ಕೆ ಕನಿಷ್ಠ ಅಂದ್ರು 6400 ಸ್ಕ್ವೇರ್ ಮೀಟರ್ನಷ್ಟು ಜಾಗ ಬೇಕು ಅಂದ್ರೆ ಹೆಚ್ಚು ಕಡಿಮೆ ಒಂದೂವರೆ ಎಕರೆಯಷ್ಟು ಜಾಗ ಬೇಕು. ಅದ್ರೆ ವಯನಾಡ್ನಲ್ಲಿ ಕುಸಿದ ಗುಡ್ಡದ ಪ್ರಮಾಣ ಇದರ ಹತ್ತುಪಟ್ಟಿಗಿಂತ ಜಾಸ್ತಿ ಇದೆ. ಸುಮಾರು 86,000 ಸ್ಕ್ವೇರ್ ಮೀಟರ್ನಷ್ಟು ಜಾಗದಷ್ಟು ಕುಸಿದಿದೆ. ಅಂದ್ರೆ ಬರೋಬ್ಬರಿ 21 ಎಕರೆ ಪ್ರಮಾಣದಷ್ಟು ಜಾಗ ಕುಸಿದು ಬಿದ್ದದೆ ಎಂಬ ಬೆಚ್ಚಿ ಬೀಳಿಸುವ ವರದಿಯನ್ನು ಇಸ್ರೋ ನೀಡಿದೆ.
ಇದನ್ನೂ ಓದಿ: ಕೇರಳದಲ್ಲಿ ಮಂಡ್ಯ ಅಜ್ಜಿ, ಮೊಮ್ಮಗನ ದುರಂತ ಅಂತ್ಯ.. ಕುಟುಂಬದವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ
ಜುಲೈ 30ರ ನಸುಕಿನ ಜಾವದಲ್ಲಿ ವಯನಾಡ್ ಜಿಲ್ಲೆಯ ಮುಂಡಕ್ಕಿ, ಚೂರಲ್ಮಾಲಾ ಮತ್ತು ಅತ್ತಮಾಲಾ ಎಂಬಲ್ಲಿ ಗುಡ್ಡ ಕುಸಿದ ಸಂಭವಿಸಿ ಹಿಂದೆಂದೂ ಕಾಣದ ಮಹಾದುರಂತವೊಂದಕ್ಕೆ ಮುನ್ನುಡಿ ಬರೆದಿತ್ತು. ಈ ಮಹಾ ದುರಂತವನ್ನು ಇಸ್ರೋ ನಿರ್ಮಿತ ರಿಸ್ಯಾಟ್-2ಬಿ (RISAT -2B) ಎನ್ನುವ ಉಪಗ್ರಹ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿತ್ತು. ಇದರ ಮೂಲಕ ಈ ಮೂರು ಪ್ರದೇಶಗಳಲ್ಲಿ ಕುಸಿದ ಗುಡ್ಡದ ಪ್ರಮಾಣದ ಅಂದಾಜು ಸಿಕ್ಕಿದೆ. ಜುಲೈ 31 ರಂದು ಇಸ್ರೋಗೆ ದೊರಕಿದ ಸ್ಯಾಟ್ಲೈಟ್ ಮ್ಯಾಪ್ ಫೋಟೋಗಳ ಪ್ರಕಾರ, ಗುಡ್ಡ ಕುಸಿತದ ವೇಳೆ ಗುಡ್ಡದ ಮೇಲಿದ್ದ ಸಾವಿರಾರು ಮರಗಳು ಸುಮಾರು 8 ಕಿಲೋಮೀಟರ್ವರೆಗೂ ಕೊಚ್ಚಿಕೊಂಡು ಬಂದಿವೆ ಎಂದು ಹೇಳಲಾಗುತ್ತಿದೆ.
ಗುಡ್ಡ ಕುಸಿತದ ಭೀಕರತೆ ಆ ಮಟ್ಟಿಗೆ ಇತ್ತು ಎಂದು ಇಸ್ರೋ ವರದಿಯಲ್ಲಿ ಇದೆ. 21 ಎಕರೆಯ ಪ್ರದೇಶದ ಗುಡ್ಡವೇ ನೆಲಕ್ಕೆ ಕುಸಿದು ಬಿದ್ದಿದೆ ಅಂದ್ರೆ ಅದು ಉಂಟು ಮಾಡಬಹುದಾದ ಪರಿಣಾಮ ಏನು ಅನ್ನೋದು ನಮಗೆ ಈಗಾಗಲೇ ವಯನಾಡ್ ಸಾಕ್ಷಿಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಪ್ರಕೃತಿಯ ಶೋಷಣೆಗೆ ಈಗ ನಾವೇ ಬೆಲೆ ತೆರಬೇಕಾಗಿದೆ. ಅಮಾಯಕ ಜೀವಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿವೆ. ಪ್ರಕೃತಿಗೆ ಮನುಷ್ಯನ ಅವಶ್ಯಕತೆಯಿಲ್ಲ, ಮನುಷ್ಯರಿಗೆ ಪ್ರಕೃತಿಯ ಅವಶ್ಯಕತೆ ಇದೆ ಅನ್ನೋ ಮಾತು ಮತ್ತೆ ಮತ್ತೆ ಸಾಬೀತು ಆಗುತ್ತಲೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೇರಳ ವಯನಾಡ್ನಲ್ಲಿ ಕುಸಿದ ಗುಡ್ಡದ ಜಾಗದ ಪ್ರಮಾಣವೆಷ್ಟು ಗೊತ್ತಾ?
ಗುಡ್ಡ ಕುಸಿದ ಜಾಗದಲ್ಲಿ 13 ಫುಟ್ಬಾಲ್ ಸ್ಟೇಡಿಯಂ ನಿರ್ಮಿಸಬಹುದು
ಇಸ್ರೋ ಬಿಡುಗಡೆ ಮಾಡಿದ ಸ್ಯಾಟ್ಲೈಟ್ ಫೋಟೋದಲ್ಲಿ ಸತ್ಯ ಬಯಲು
ವಯನಾಡ್: ದೇಶ ಹಿಂದೆಂದೂ ಕಂಡು ಕೇಳರಿಯದ ದುರಂತವೊಂದು ಕೇರಳದ ವಯನಾಡ್ನಲ್ಲಿ ನಡೆದು ಹೋಗಿದೆ. ಇಷ್ಟು ದಿನ ಈ ಭೀಕರತೆಯನ್ನ ಸಾವಿನ ಅಂಕಿ ಅಂಶಗಳೊಂದಿಗೆ ತಾಳೆ ಹಾಕಿ ನೋಡಲಾಗುತ್ತಿತ್ತು. ಆದ್ರೆ ಈಗ ಇಸ್ರೋ ಬಿಡುಗಡೆ ಮಾಡಿರುವ ಸ್ಯಾಟ್ಲೈಟ್ ಪೋಟೋಗಳು ಹಾಗೂ ಗುಡ್ಡ ಕುಸಿದ ಪ್ರಮಾಣವನ್ನು ಬಿಚ್ಚಿಟ್ಟಿದೆ.
ಇಸ್ರೋ ನೀಡಿದ ವರದಿಗಳನ್ನು ನೋಡಿದ್ರೆ ಎದೆ ಝಲ್ ಅನ್ನೋದು ಪಕ್ಕಾ, ಯಾಕಂದ್ರೆ ಗುಡ್ಡ ಕುಸಿದ ಪರಿಯೇ ಅಂತಹದ್ದಿದೆ. ಒಂದಲ್ಲ ಎರಡಲ್ಲ ಒಟ್ಟು 13 ಫುಟ್ಬಾಲ್ ಸ್ಟೇಡಿಯಂಗಳನ್ನ ಗುಡ್ಡ ಕುಸಿದ ಜಾಗದಲ್ಲಿ ನಿರ್ಮಿಸಬಹುದು ಅಂತ ಇಸ್ರೋ ತನ್ನ ವರದಿಯಲ್ಲಿ ಹೇಳಿದೆ. ಅಂದ್ರೆ ಅಂತಾರಾಷ್ಟ್ರೀಯ ಫುಟ್ಬಾಲ್ನ ಒಂದು ಕ್ರೀಡಾಂಗಣ ನಿರ್ಮಿಸಲು ಎಷ್ಟು ಜಾಗ ಬೇಕೋ ಅಂತಹ 13 ಕ್ರೀಡಾಂಗಣ ನಿರ್ಮಿಸುವಷ್ಟು ಜಾಗದ ವಿಸ್ತಾರವಾದ ಗುಡ್ಡ ಕುಸಿದು ಬಿದ್ದಿದೆ ಎಂದು ಇಸ್ರೋ ಹೇಳಿದೆ. ಅಂದ್ರೆ ನೀವೇ ಊಹಿಸಿಕೊಳ್ಳಿ ಗುಡ್ಡು ಕುಸಿದ ಭೀಕರತೆ ಅದ್ಯಾವ ಮಟ್ಟಕ್ಕೆ ಇದೆ ಅನ್ನೋದು.
ಇದನ್ನೂ ಓದಿ: ಭೂಕುಸಿತದಲ್ಲಿ ತಂದೆ-ತಾಯಿ ಸಾವು.. ಕಷ್ಟಪಟ್ಟು ಓದಿಸಿ ವಿದೇಶಕ್ಕೆ ಕಳುಹಿಸಿರುವ ಮಗಳ ನೋವು ಯಾರತ್ರ ಹೇಳೋದು?
ಒಂದು ಫುಟ್ ಬಾಲ್ ನಿರ್ಮಾಣಕ್ಕೆ ಕನಿಷ್ಠ ಅಂದ್ರು 6400 ಸ್ಕ್ವೇರ್ ಮೀಟರ್ನಷ್ಟು ಜಾಗ ಬೇಕು ಅಂದ್ರೆ ಹೆಚ್ಚು ಕಡಿಮೆ ಒಂದೂವರೆ ಎಕರೆಯಷ್ಟು ಜಾಗ ಬೇಕು. ಅದ್ರೆ ವಯನಾಡ್ನಲ್ಲಿ ಕುಸಿದ ಗುಡ್ಡದ ಪ್ರಮಾಣ ಇದರ ಹತ್ತುಪಟ್ಟಿಗಿಂತ ಜಾಸ್ತಿ ಇದೆ. ಸುಮಾರು 86,000 ಸ್ಕ್ವೇರ್ ಮೀಟರ್ನಷ್ಟು ಜಾಗದಷ್ಟು ಕುಸಿದಿದೆ. ಅಂದ್ರೆ ಬರೋಬ್ಬರಿ 21 ಎಕರೆ ಪ್ರಮಾಣದಷ್ಟು ಜಾಗ ಕುಸಿದು ಬಿದ್ದದೆ ಎಂಬ ಬೆಚ್ಚಿ ಬೀಳಿಸುವ ವರದಿಯನ್ನು ಇಸ್ರೋ ನೀಡಿದೆ.
ಇದನ್ನೂ ಓದಿ: ಕೇರಳದಲ್ಲಿ ಮಂಡ್ಯ ಅಜ್ಜಿ, ಮೊಮ್ಮಗನ ದುರಂತ ಅಂತ್ಯ.. ಕುಟುಂಬದವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ
ಜುಲೈ 30ರ ನಸುಕಿನ ಜಾವದಲ್ಲಿ ವಯನಾಡ್ ಜಿಲ್ಲೆಯ ಮುಂಡಕ್ಕಿ, ಚೂರಲ್ಮಾಲಾ ಮತ್ತು ಅತ್ತಮಾಲಾ ಎಂಬಲ್ಲಿ ಗುಡ್ಡ ಕುಸಿದ ಸಂಭವಿಸಿ ಹಿಂದೆಂದೂ ಕಾಣದ ಮಹಾದುರಂತವೊಂದಕ್ಕೆ ಮುನ್ನುಡಿ ಬರೆದಿತ್ತು. ಈ ಮಹಾ ದುರಂತವನ್ನು ಇಸ್ರೋ ನಿರ್ಮಿತ ರಿಸ್ಯಾಟ್-2ಬಿ (RISAT -2B) ಎನ್ನುವ ಉಪಗ್ರಹ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿತ್ತು. ಇದರ ಮೂಲಕ ಈ ಮೂರು ಪ್ರದೇಶಗಳಲ್ಲಿ ಕುಸಿದ ಗುಡ್ಡದ ಪ್ರಮಾಣದ ಅಂದಾಜು ಸಿಕ್ಕಿದೆ. ಜುಲೈ 31 ರಂದು ಇಸ್ರೋಗೆ ದೊರಕಿದ ಸ್ಯಾಟ್ಲೈಟ್ ಮ್ಯಾಪ್ ಫೋಟೋಗಳ ಪ್ರಕಾರ, ಗುಡ್ಡ ಕುಸಿತದ ವೇಳೆ ಗುಡ್ಡದ ಮೇಲಿದ್ದ ಸಾವಿರಾರು ಮರಗಳು ಸುಮಾರು 8 ಕಿಲೋಮೀಟರ್ವರೆಗೂ ಕೊಚ್ಚಿಕೊಂಡು ಬಂದಿವೆ ಎಂದು ಹೇಳಲಾಗುತ್ತಿದೆ.
ಗುಡ್ಡ ಕುಸಿತದ ಭೀಕರತೆ ಆ ಮಟ್ಟಿಗೆ ಇತ್ತು ಎಂದು ಇಸ್ರೋ ವರದಿಯಲ್ಲಿ ಇದೆ. 21 ಎಕರೆಯ ಪ್ರದೇಶದ ಗುಡ್ಡವೇ ನೆಲಕ್ಕೆ ಕುಸಿದು ಬಿದ್ದಿದೆ ಅಂದ್ರೆ ಅದು ಉಂಟು ಮಾಡಬಹುದಾದ ಪರಿಣಾಮ ಏನು ಅನ್ನೋದು ನಮಗೆ ಈಗಾಗಲೇ ವಯನಾಡ್ ಸಾಕ್ಷಿಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಪ್ರಕೃತಿಯ ಶೋಷಣೆಗೆ ಈಗ ನಾವೇ ಬೆಲೆ ತೆರಬೇಕಾಗಿದೆ. ಅಮಾಯಕ ಜೀವಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿವೆ. ಪ್ರಕೃತಿಗೆ ಮನುಷ್ಯನ ಅವಶ್ಯಕತೆಯಿಲ್ಲ, ಮನುಷ್ಯರಿಗೆ ಪ್ರಕೃತಿಯ ಅವಶ್ಯಕತೆ ಇದೆ ಅನ್ನೋ ಮಾತು ಮತ್ತೆ ಮತ್ತೆ ಸಾಬೀತು ಆಗುತ್ತಲೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ