ವಾಲ್ಮೀಕಿ ಹಗರಣ ಸದ್ದು ಮಾಡುತ್ತಿರುವಾಗಲೇ ಛಲವಾದಿಗೆ ಬಿಜೆಪಿ ಮಣೆ
ಸಿ.ಟಿ.ರವಿ, ಎನ್. ರವಿಕುಮಾರ್ ಬಿಟ್ಟು ಪರಿಶಿಷ್ಟ ನಾಯಕ ವಿಪಕ್ಷ ನಾಯಕ
ನಾರಾಯಣ ಸ್ವಾಮಿ ಮೂಲ ಬಿಜೆಪಿಗರು ಕೂಡ ಅಲ್ಲ ಆದರೂ ಅವಕಾಶ
ಬೆಂಗಳೂರು: ವಿಧಾನಪರಿಷತ್ ಕಲಾಪ ಆರಂಭವಾಗಿ ಈಗಾಗಲೇ ಒಂದು ವಾರವೇ ಕಳೆದಿದೆ. ಆದ್ರೆ ಬಿಜೆಪಿ ಮಾತ್ರ ವಿಧಾನಪರಿಷತ್ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿರಲಿಲ್ಲ. ಈಗ ಏಕಾಏಕಿ ಅಚ್ಚರಿಯ ಆಯ್ಕೆಯನ್ನು ಮಾಡಿ ಎಲ್ಲರಿಗೂ ಶಾಕ್ ನೀಡಿದೆ. ವಿಪಕ್ಷ ನಾಯಕ ಸ್ಥಾನದ ಮೇಲೆ ಸಿ.ಟಿ.ರವಿ ಹಾಗೂ ಎನ್ ರವಿಕುಮಾರ್ ಕಣ್ಣಿಟ್ಟಿದ್ದರು. ಇಬ್ಬರಲ್ಲಿ ಒಬ್ಬರಿಗೆ ಮಣೆ ಹಾಕುತ್ತಾರೆ ಎಂದೇ ಎಲ್ಲರೂ ನಂಬಿದ್ದರು. ಆದ್ರೆ ಅಂತಿಮವಾಗಿ ದಲಿತ ನಾಯಕ ಛಲವಾದಿ ನಾರಾಯಣ ಸ್ವಾಮಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ಇದನ್ನೂ ಓದಿ: Breaking: ಬೆಂಗಳೂರು 5 ಭಾಗ ಮಾಡಲು ಸರ್ಕಾರ ನಿರ್ಧಾರ.. ಸಿಎಂ ಸಂಪುಟ ಸಭೆಯಲ್ಲಿ ಅಸ್ತು!
ದಲಿತ ಟ್ರಂಪ್ ಕಾರ್ಡ್ ಯೂಸ್ ಮಾಡಿದ ಬಿಜೆಪಿ ಹೈಕಮಾಂಡ್
ಬಿಜೆಪಿ ಹೈಕಮಾಂಡ್ ಸಂಪೂರ್ಣ ಅಳೆದು ತೂಗಿ ನಾರಾಯಣಸ್ವಾಮಿಯವರನ್ನ ಆಯ್ಕೆ ಮಾಡಿದೆ. ಈಗಾಗಲೇ ವಾಲ್ಮಿಕಿ ನಿಗಮದ ಭ್ರಷ್ಟಾಚಾರದ ಆರೋಪ ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ದಲಿತ ವಿರೋದಿ ಎಂಬ ಆರೋಪಕ್ಕೆ ಕಾಂಗ್ರೆಸ್ ಒಳಗಾಗಿದೆ. ಅದರ ಜೊತೆಗೆ ಬಿಜೆಪಿ ದಲಿತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದ ಅಂತಲೂ ಕೂಡ ಆಪಾದಿಸುತ್ತಿದೆ. ಇದೇ ಸಂದರ್ಭದಲ್ಲಿ ದಲಿತ ನಾಯಕನಿಗೆ ವಿಪಕ್ಷ ಸ್ಥಾನಮಾನ ನೀಡಿ, ನಾವು ದಲಿತರ ಪರವಾಗಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಿದೆ ಬಿಜೆಪಿ.
ಇಬ್ಬರ ನಡುವೆ ಮೂರನೇ ವ್ಯಕ್ತಿಗೆ ಮಣೆ ಹಾಕಿದ ಬಿಜೆಪಿ
ಸಿಟಿ ರವಿ ಹಾಗೂ ಎನ್ ರವಿಕುಮಾರ್ ಇಬ್ಬರೂ ಕೂಡ ವಿಧಾನಪರಿಷತ್ ವಿಪಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ರು. ಸಿಟಿ ರವಿ ಹಾಗೂ ರವಿಕುಮಾರ್ ಇಬ್ಬರು ಕೂಡ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ರು. ಸಿಟಿ ರವಿ ಈಗಾಗಲೇ ಸಂಘಟನೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿಭಾಯಿಸಿದ್ದಾರೆ. ಜೊತೆಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿಯೂ ಕೂಡ ಕಾರ್ಯನಿರ್ವಹಣೆ ಮಾಡಿದ್ದಾರೆ. ಪ್ರಬಲ ಒಕ್ಕಲಿಗ ನಾಯಕರು ಎಂದು ಗುರುತಿಸಿಕೊಂಡಿರುವ ರವಿಗೆ ವಿಪಕ್ಷ ನಾಯಕ ಸ್ಥಾನ ಸಿಗುವ ನಿರೀಕ್ಷೆ ಹುಸಿಯಾಗಿದೆ. ಎನ್.ರವಿಕುಮಾರ್ ಕೂಡ ರೇಸ್ನಲ್ಲಿದ್ರು. ಎನ್.ರವಿಕುಮಾರ್ ಕೂಡ ಎಬಿವಿಪಿಯಿಂದ ಗುರುತಿಸಿಕೊಂಡು, ಸಂಘಟನಾತ್ಮಕವಾಗಿ ಬೆಳೆದು ಬಂದವರು.ಈವರೆಗೂ ನೇರವಾಗಿ ಚುನಾವಣೆಯನ್ನು ಎದುರಿಸದೇ, ಎರಡನೇ ಬಾರಿಗೆ ವಿಧಾನಪರಿಷತ್ಗೆ ಆಯ್ಕೆಯಾದವರು.ಹಿಂದುಳಿದ ವರ್ಗಕ್ಕೆ ಸೇರಿದ ರವಿಕುಮಾರ್, ಬಿ.ಎಸ್. ಯಡಿಯೂರಪ್ಪರ ಬಣದಲ್ಲಿ ಗುರಿತಿಸಿಕೊಂಡವರು.ವಿಧಾನಸಭೆಯಲ್ಲಿ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿ, ವಿಪಕ್ಷ ನಾಯಕನ ಸ್ಥಾನ ನೀಡಿದ ಬಿಜೆಪಿಗೆ, ಇಲ್ಲಿ ಅದೇ ಸಮುದಾಯಕ್ಕಿಂತ ಬೇರೆ ಸಮುದಾಯಕ್ಕೆ ಪ್ರಾತಿನಿಧ್ಯತೆ ನೀಡುವ ಗುರಿಯಿತ್ತು.
ಇದನ್ನೂ ಓದಿ: BREAKING: ಛಲವಾದಿ ನಾರಾಯಣಸ್ವಾಮಿಗೆ ವಿಧಾನ ಪರಿಷತ್ ವಿಪಕ್ಷ ನಾಯಕನ ಪಟ್ಟ; ಏನಿದರ ಗುಟ್ಟು?
ಜೊತೆಗೆ ಸಿ.ಟಿ.ರವಿ ಹಾಗೂ ಎನ್. ರವಿಕುಮಾರ್ ಇಬ್ಬರು ಕೂಡ ಮೂಲ ಬಿಜೆಪಿಗರ ಪಟ್ಟಿಯಲ್ಲಿದ್ದು, ಮುಂದಿನ ರಾಜಕೀಯ ಗೇಮ್ಪ್ಲಾನ್ನಿಂದ ವಲಸೆ ಬಂದವರಿಗೂ ಅವಕಾಶ ಕಲ್ಪಿಸಿದ್ದೇವೆ ಎಂಬ ಸಂದೇಶ ರವಾನೆ ಮಾಡುವ ಆಲೋಚನೆಯಿತ್ತು. ಛಲವಾದಿ ನಾರಾಯಣಸ್ವಾಮಿ, ಸಿ. ಟಿ.ರವಿ ಹಾಗೂ ಎನ್.ರವಿಕುಮಾರ್ ಅವರ ರೀತಿಯಲ್ಲಿ ಸಂಘಟನೆ ಮಾಡಿಲ್ಲ. ನಾರಾಯಣ ಸ್ವಾಮಿ ಮೂಲ ಬಿಜೆಪಿಗರು ಕೂಡ ಅಲ್ಲ. ಕಾಂಗ್ರೆಸ್ಗೆ ಗುಡ್ ಬೈ ಹೇಳಿ ನಂತರ ಬಿಜೆಪಿಗೆ ಬಂದವರು. ಆದರೂ ಕೂಡ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಅತಿ ದೊಡ್ಡ ಹಗರಣದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂದರೆ ದಲಿತ ಸಮುದಾಯಕ್ಕೆ ಪ್ರಾತಿನಿಧ್ಯತೆ ನೀಡಲೇಬೇಕಿತ್ತು. ಹೀಗಾಗಿ ಛಲವಾದಿ ನಾರಾಯಣ ಸ್ವಾಮಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಾಲ್ಮೀಕಿ ಹಗರಣ ಸದ್ದು ಮಾಡುತ್ತಿರುವಾಗಲೇ ಛಲವಾದಿಗೆ ಬಿಜೆಪಿ ಮಣೆ
ಸಿ.ಟಿ.ರವಿ, ಎನ್. ರವಿಕುಮಾರ್ ಬಿಟ್ಟು ಪರಿಶಿಷ್ಟ ನಾಯಕ ವಿಪಕ್ಷ ನಾಯಕ
ನಾರಾಯಣ ಸ್ವಾಮಿ ಮೂಲ ಬಿಜೆಪಿಗರು ಕೂಡ ಅಲ್ಲ ಆದರೂ ಅವಕಾಶ
ಬೆಂಗಳೂರು: ವಿಧಾನಪರಿಷತ್ ಕಲಾಪ ಆರಂಭವಾಗಿ ಈಗಾಗಲೇ ಒಂದು ವಾರವೇ ಕಳೆದಿದೆ. ಆದ್ರೆ ಬಿಜೆಪಿ ಮಾತ್ರ ವಿಧಾನಪರಿಷತ್ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿರಲಿಲ್ಲ. ಈಗ ಏಕಾಏಕಿ ಅಚ್ಚರಿಯ ಆಯ್ಕೆಯನ್ನು ಮಾಡಿ ಎಲ್ಲರಿಗೂ ಶಾಕ್ ನೀಡಿದೆ. ವಿಪಕ್ಷ ನಾಯಕ ಸ್ಥಾನದ ಮೇಲೆ ಸಿ.ಟಿ.ರವಿ ಹಾಗೂ ಎನ್ ರವಿಕುಮಾರ್ ಕಣ್ಣಿಟ್ಟಿದ್ದರು. ಇಬ್ಬರಲ್ಲಿ ಒಬ್ಬರಿಗೆ ಮಣೆ ಹಾಕುತ್ತಾರೆ ಎಂದೇ ಎಲ್ಲರೂ ನಂಬಿದ್ದರು. ಆದ್ರೆ ಅಂತಿಮವಾಗಿ ದಲಿತ ನಾಯಕ ಛಲವಾದಿ ನಾರಾಯಣ ಸ್ವಾಮಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.
ಇದನ್ನೂ ಓದಿ: Breaking: ಬೆಂಗಳೂರು 5 ಭಾಗ ಮಾಡಲು ಸರ್ಕಾರ ನಿರ್ಧಾರ.. ಸಿಎಂ ಸಂಪುಟ ಸಭೆಯಲ್ಲಿ ಅಸ್ತು!
ದಲಿತ ಟ್ರಂಪ್ ಕಾರ್ಡ್ ಯೂಸ್ ಮಾಡಿದ ಬಿಜೆಪಿ ಹೈಕಮಾಂಡ್
ಬಿಜೆಪಿ ಹೈಕಮಾಂಡ್ ಸಂಪೂರ್ಣ ಅಳೆದು ತೂಗಿ ನಾರಾಯಣಸ್ವಾಮಿಯವರನ್ನ ಆಯ್ಕೆ ಮಾಡಿದೆ. ಈಗಾಗಲೇ ವಾಲ್ಮಿಕಿ ನಿಗಮದ ಭ್ರಷ್ಟಾಚಾರದ ಆರೋಪ ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ದಲಿತ ವಿರೋದಿ ಎಂಬ ಆರೋಪಕ್ಕೆ ಕಾಂಗ್ರೆಸ್ ಒಳಗಾಗಿದೆ. ಅದರ ಜೊತೆಗೆ ಬಿಜೆಪಿ ದಲಿತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದ ಅಂತಲೂ ಕೂಡ ಆಪಾದಿಸುತ್ತಿದೆ. ಇದೇ ಸಂದರ್ಭದಲ್ಲಿ ದಲಿತ ನಾಯಕನಿಗೆ ವಿಪಕ್ಷ ಸ್ಥಾನಮಾನ ನೀಡಿ, ನಾವು ದಲಿತರ ಪರವಾಗಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಿದೆ ಬಿಜೆಪಿ.
ಇಬ್ಬರ ನಡುವೆ ಮೂರನೇ ವ್ಯಕ್ತಿಗೆ ಮಣೆ ಹಾಕಿದ ಬಿಜೆಪಿ
ಸಿಟಿ ರವಿ ಹಾಗೂ ಎನ್ ರವಿಕುಮಾರ್ ಇಬ್ಬರೂ ಕೂಡ ವಿಧಾನಪರಿಷತ್ ವಿಪಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ರು. ಸಿಟಿ ರವಿ ಹಾಗೂ ರವಿಕುಮಾರ್ ಇಬ್ಬರು ಕೂಡ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ರು. ಸಿಟಿ ರವಿ ಈಗಾಗಲೇ ಸಂಘಟನೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿಭಾಯಿಸಿದ್ದಾರೆ. ಜೊತೆಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿಯೂ ಕೂಡ ಕಾರ್ಯನಿರ್ವಹಣೆ ಮಾಡಿದ್ದಾರೆ. ಪ್ರಬಲ ಒಕ್ಕಲಿಗ ನಾಯಕರು ಎಂದು ಗುರುತಿಸಿಕೊಂಡಿರುವ ರವಿಗೆ ವಿಪಕ್ಷ ನಾಯಕ ಸ್ಥಾನ ಸಿಗುವ ನಿರೀಕ್ಷೆ ಹುಸಿಯಾಗಿದೆ. ಎನ್.ರವಿಕುಮಾರ್ ಕೂಡ ರೇಸ್ನಲ್ಲಿದ್ರು. ಎನ್.ರವಿಕುಮಾರ್ ಕೂಡ ಎಬಿವಿಪಿಯಿಂದ ಗುರುತಿಸಿಕೊಂಡು, ಸಂಘಟನಾತ್ಮಕವಾಗಿ ಬೆಳೆದು ಬಂದವರು.ಈವರೆಗೂ ನೇರವಾಗಿ ಚುನಾವಣೆಯನ್ನು ಎದುರಿಸದೇ, ಎರಡನೇ ಬಾರಿಗೆ ವಿಧಾನಪರಿಷತ್ಗೆ ಆಯ್ಕೆಯಾದವರು.ಹಿಂದುಳಿದ ವರ್ಗಕ್ಕೆ ಸೇರಿದ ರವಿಕುಮಾರ್, ಬಿ.ಎಸ್. ಯಡಿಯೂರಪ್ಪರ ಬಣದಲ್ಲಿ ಗುರಿತಿಸಿಕೊಂಡವರು.ವಿಧಾನಸಭೆಯಲ್ಲಿ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿ, ವಿಪಕ್ಷ ನಾಯಕನ ಸ್ಥಾನ ನೀಡಿದ ಬಿಜೆಪಿಗೆ, ಇಲ್ಲಿ ಅದೇ ಸಮುದಾಯಕ್ಕಿಂತ ಬೇರೆ ಸಮುದಾಯಕ್ಕೆ ಪ್ರಾತಿನಿಧ್ಯತೆ ನೀಡುವ ಗುರಿಯಿತ್ತು.
ಇದನ್ನೂ ಓದಿ: BREAKING: ಛಲವಾದಿ ನಾರಾಯಣಸ್ವಾಮಿಗೆ ವಿಧಾನ ಪರಿಷತ್ ವಿಪಕ್ಷ ನಾಯಕನ ಪಟ್ಟ; ಏನಿದರ ಗುಟ್ಟು?
ಜೊತೆಗೆ ಸಿ.ಟಿ.ರವಿ ಹಾಗೂ ಎನ್. ರವಿಕುಮಾರ್ ಇಬ್ಬರು ಕೂಡ ಮೂಲ ಬಿಜೆಪಿಗರ ಪಟ್ಟಿಯಲ್ಲಿದ್ದು, ಮುಂದಿನ ರಾಜಕೀಯ ಗೇಮ್ಪ್ಲಾನ್ನಿಂದ ವಲಸೆ ಬಂದವರಿಗೂ ಅವಕಾಶ ಕಲ್ಪಿಸಿದ್ದೇವೆ ಎಂಬ ಸಂದೇಶ ರವಾನೆ ಮಾಡುವ ಆಲೋಚನೆಯಿತ್ತು. ಛಲವಾದಿ ನಾರಾಯಣಸ್ವಾಮಿ, ಸಿ. ಟಿ.ರವಿ ಹಾಗೂ ಎನ್.ರವಿಕುಮಾರ್ ಅವರ ರೀತಿಯಲ್ಲಿ ಸಂಘಟನೆ ಮಾಡಿಲ್ಲ. ನಾರಾಯಣ ಸ್ವಾಮಿ ಮೂಲ ಬಿಜೆಪಿಗರು ಕೂಡ ಅಲ್ಲ. ಕಾಂಗ್ರೆಸ್ಗೆ ಗುಡ್ ಬೈ ಹೇಳಿ ನಂತರ ಬಿಜೆಪಿಗೆ ಬಂದವರು. ಆದರೂ ಕೂಡ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಅತಿ ದೊಡ್ಡ ಹಗರಣದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂದರೆ ದಲಿತ ಸಮುದಾಯಕ್ಕೆ ಪ್ರಾತಿನಿಧ್ಯತೆ ನೀಡಲೇಬೇಕಿತ್ತು. ಹೀಗಾಗಿ ಛಲವಾದಿ ನಾರಾಯಣ ಸ್ವಾಮಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ