ಅಮೃತವರ್ಷಿಣಿ ಸೀರಿಯಲ್ ಮೂಲಕ ಫ್ಯಾನ್ಸ್ ಗಳಿಸಿಕೊಂಡ ನಟಿ ಸ್ವಾತಿ
ತಮ್ಮ ಜೀವನದ ಕತ್ತಲೆಯ ಕ್ಷಣಗಳನ್ನ ನೆನೆದು ಗಳಗಳನೇ ಕಣ್ಣೀರಿಟ್ಟ ನಟಿ
ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸ್ವಾತಿಗೆ ಆಸರೆಯಾಗಿದ್ದು ಯಾರು?
ಅಮೃತವರ್ಷಿಣಿ ಸೀರಿಯಲ್ ಮೂಲಕ ನಟಿ ಸ್ವಾತಿ ಅವರು ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಸದ್ಯ ನಟಿ ಸ್ವಾತಿ ಕನ್ನಡ, ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರನ್ನ ಅಮೃತವರ್ಷಿಣಿ ವರ್ಷಾ ಅಂತಲೇ ಜನರು ಗುರುತಿಸುತ್ತಾರೆ. ಸದ್ಯ ಸ್ವಾತಿ ಅಮೃತಧಾರೆ ಸೀರಿಯಲ್ನಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನು ಓದಿ: ಮಾಡಿದ್ರೆ ರಾಜ್ಕುಮಾರ್ ಕುಟುಂಬದ ಜೊತೆ ಸಿನಿಮಾ ಮಾಡ್ಬೇಕು.. ದರ್ಶನ್ ಮಾತಿನ ಬಳಿಕ ಉಮಾಪತಿ ಹೀಗಂದಿದ್ದು ಯಾಕೆ?
ನಟಿ ಸ್ವಾತಿ ಪಕ್ಕದ್ಮನೆಯ ಹುಡುಗ ಅನಿಲ್ ಅವರನ್ನು ಇಷ್ಟಪಟ್ಟಿದ್ದರು. 9ನೇ ಕ್ಲಾಸ್ನಲ್ಲೇ ಅನಿಲ್ ಅವರು ಸ್ವಾತಿಗೆ ಪ್ರಪೋಸ್ ಕೂಡ ಮಾಡಿದ್ದರಂತೆ. ಆದ್ರೇ ಈ ವಿಚಾರ ಸ್ವಾತಿ ಮನೆಯಲ್ಲಿ ಒಪ್ಪಿಗೆ ಇರಲಿಲ್ವಂತೆ. ಪ್ರೀತಿ ವಿಷಯ ಒಂದು ಕಡೆ ಆದ್ರೇ, ಸ್ವಾತಿ ಅವರಿಗೆ ವಿಚಿತ್ರ ಕಾಯಿಲೆ ಶುರುವಾಗಿತ್ತಂತೆ. ನಟಿ ಬುದುಕಿ ಉಳಿದಿದ್ದೇ ಒಂದು ಪವಾಡವಂತೆ. ಈ ವಿಷ್ಯವನ್ನ ಸುವರ್ಣ ಸೂಪರ್ ಸ್ಟಾರ್ ವೇದಿಕೆಯಲ್ಲಿ ಹೇಳಿ ಕಣ್ಣೀರಿಟ್ಟಿದ್ದಾರೆ ಸ್ವಾತಿ.
ಹೌದು, ಸ್ವಾತಿ ತಾವು ಡಿಗ್ರಿಯಲ್ಲಿರುವಾಗಿ ಕ್ಯೂಬರ್ಕಿಲೋಸಿಸ್ ಮೆನಾಜಿಟಿಸ್ ಅನ್ನೋ ಡೆಡ್ಲಿ ಡಿಸೀಸ್ಗೆ ತುತ್ತಾಗಿದ್ದರಂತೆ. ಈ ಕಾಯಿಲೆ ಬಂದ್ರೆ ಒಂದು ಕಿವುಡು ಅಥವಾ ಕುರುಡತನ ಬರೋದು ಪಕ್ಕವಂತೆ. ಇಂತಹ ಕಾಯಿಲೆ ಬಂದಾಗ ತಾವು ಪ್ರೀತಿ ಮಾಡ್ತಿದ್ದ ಅನೀಲ್ ಅವರ ಸಹಾಯದಿಂದ ಜೀವದ ಅವಘಡಗಳಿಂದ ಪಾರಾಗಿದ್ದಾರಂತೆ ಸ್ವಾತಿ. ತಮ್ಮ ಜೀವನದ ಕತ್ತಲೆಯ ಕ್ಷಣಗಳನ್ನ ನೆನೆದು ಕಣ್ಣೀರಿಟ್ಟಿದ್ದಾರೆ ಸ್ವಾತಿ. ಸದ್ಯ ಸ್ವಾತಿ ವೈಯಕ್ತಿಕ ಬದುಕಿನಲ್ಲಿ ಸುಖವಾಗಿದ್ದಾರೆ. ಈ ಮುದ್ದಾದ ಜೋಡಿಗೆ ಮಗಳಿದ್ದಾಳೆ. ಜೊತೆಗೆ ಸೀರಿಯಲ್ನಲ್ಲೂ ಬ್ಯುಸಿಯಾಗಿದ್ದಾರೆ. ಅನಿಲ್ ಅವರು ಕೂಡ ನಟ. ಸುವರ್ಣದಲ್ಲಿ ಬರ್ತಿದ್ದ ‘ಓ ಮುದ್ದು ಮನಸ್ಸೇ’ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದ ಸ್ವಾತಿಗೆ ಆಸರೆ ಆಗಿ ನಿಂತ ಅನಿಲ್ ಅವ್ರ ಪ್ರೀತಿ ನಿಜಕ್ಕೂ ಮಾದರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಮೃತವರ್ಷಿಣಿ ಸೀರಿಯಲ್ ಮೂಲಕ ಫ್ಯಾನ್ಸ್ ಗಳಿಸಿಕೊಂಡ ನಟಿ ಸ್ವಾತಿ
ತಮ್ಮ ಜೀವನದ ಕತ್ತಲೆಯ ಕ್ಷಣಗಳನ್ನ ನೆನೆದು ಗಳಗಳನೇ ಕಣ್ಣೀರಿಟ್ಟ ನಟಿ
ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸ್ವಾತಿಗೆ ಆಸರೆಯಾಗಿದ್ದು ಯಾರು?
ಅಮೃತವರ್ಷಿಣಿ ಸೀರಿಯಲ್ ಮೂಲಕ ನಟಿ ಸ್ವಾತಿ ಅವರು ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಸದ್ಯ ನಟಿ ಸ್ವಾತಿ ಕನ್ನಡ, ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರನ್ನ ಅಮೃತವರ್ಷಿಣಿ ವರ್ಷಾ ಅಂತಲೇ ಜನರು ಗುರುತಿಸುತ್ತಾರೆ. ಸದ್ಯ ಸ್ವಾತಿ ಅಮೃತಧಾರೆ ಸೀರಿಯಲ್ನಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನು ಓದಿ: ಮಾಡಿದ್ರೆ ರಾಜ್ಕುಮಾರ್ ಕುಟುಂಬದ ಜೊತೆ ಸಿನಿಮಾ ಮಾಡ್ಬೇಕು.. ದರ್ಶನ್ ಮಾತಿನ ಬಳಿಕ ಉಮಾಪತಿ ಹೀಗಂದಿದ್ದು ಯಾಕೆ?
ನಟಿ ಸ್ವಾತಿ ಪಕ್ಕದ್ಮನೆಯ ಹುಡುಗ ಅನಿಲ್ ಅವರನ್ನು ಇಷ್ಟಪಟ್ಟಿದ್ದರು. 9ನೇ ಕ್ಲಾಸ್ನಲ್ಲೇ ಅನಿಲ್ ಅವರು ಸ್ವಾತಿಗೆ ಪ್ರಪೋಸ್ ಕೂಡ ಮಾಡಿದ್ದರಂತೆ. ಆದ್ರೇ ಈ ವಿಚಾರ ಸ್ವಾತಿ ಮನೆಯಲ್ಲಿ ಒಪ್ಪಿಗೆ ಇರಲಿಲ್ವಂತೆ. ಪ್ರೀತಿ ವಿಷಯ ಒಂದು ಕಡೆ ಆದ್ರೇ, ಸ್ವಾತಿ ಅವರಿಗೆ ವಿಚಿತ್ರ ಕಾಯಿಲೆ ಶುರುವಾಗಿತ್ತಂತೆ. ನಟಿ ಬುದುಕಿ ಉಳಿದಿದ್ದೇ ಒಂದು ಪವಾಡವಂತೆ. ಈ ವಿಷ್ಯವನ್ನ ಸುವರ್ಣ ಸೂಪರ್ ಸ್ಟಾರ್ ವೇದಿಕೆಯಲ್ಲಿ ಹೇಳಿ ಕಣ್ಣೀರಿಟ್ಟಿದ್ದಾರೆ ಸ್ವಾತಿ.
ಹೌದು, ಸ್ವಾತಿ ತಾವು ಡಿಗ್ರಿಯಲ್ಲಿರುವಾಗಿ ಕ್ಯೂಬರ್ಕಿಲೋಸಿಸ್ ಮೆನಾಜಿಟಿಸ್ ಅನ್ನೋ ಡೆಡ್ಲಿ ಡಿಸೀಸ್ಗೆ ತುತ್ತಾಗಿದ್ದರಂತೆ. ಈ ಕಾಯಿಲೆ ಬಂದ್ರೆ ಒಂದು ಕಿವುಡು ಅಥವಾ ಕುರುಡತನ ಬರೋದು ಪಕ್ಕವಂತೆ. ಇಂತಹ ಕಾಯಿಲೆ ಬಂದಾಗ ತಾವು ಪ್ರೀತಿ ಮಾಡ್ತಿದ್ದ ಅನೀಲ್ ಅವರ ಸಹಾಯದಿಂದ ಜೀವದ ಅವಘಡಗಳಿಂದ ಪಾರಾಗಿದ್ದಾರಂತೆ ಸ್ವಾತಿ. ತಮ್ಮ ಜೀವನದ ಕತ್ತಲೆಯ ಕ್ಷಣಗಳನ್ನ ನೆನೆದು ಕಣ್ಣೀರಿಟ್ಟಿದ್ದಾರೆ ಸ್ವಾತಿ. ಸದ್ಯ ಸ್ವಾತಿ ವೈಯಕ್ತಿಕ ಬದುಕಿನಲ್ಲಿ ಸುಖವಾಗಿದ್ದಾರೆ. ಈ ಮುದ್ದಾದ ಜೋಡಿಗೆ ಮಗಳಿದ್ದಾಳೆ. ಜೊತೆಗೆ ಸೀರಿಯಲ್ನಲ್ಲೂ ಬ್ಯುಸಿಯಾಗಿದ್ದಾರೆ. ಅನಿಲ್ ಅವರು ಕೂಡ ನಟ. ಸುವರ್ಣದಲ್ಲಿ ಬರ್ತಿದ್ದ ‘ಓ ಮುದ್ದು ಮನಸ್ಸೇ’ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದ ಸ್ವಾತಿಗೆ ಆಸರೆ ಆಗಿ ನಿಂತ ಅನಿಲ್ ಅವ್ರ ಪ್ರೀತಿ ನಿಜಕ್ಕೂ ಮಾದರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ