ಇಡೀ ಕುಟಂಬದವರಿಗೆ ಮಟನ್ ಊಟ ಮಾಡಿದ ಮೇಲೆ ಏನಾಯ್ತು?
ಮಟನ್ ಎಲ್ಲಿಂದ ತಂದರು ಅಂತ ಪತ್ತೆ ಹಚ್ಚಲು ಮುಂದಾದ ಅಧಿಕಾರಿಗಳು
ಚಪಾತಿ, ಮಟನ್ ಮತ್ತು ತರಕಾರಿ ಊಟ ಮಾಡಿದ್ದವರಲ್ಲಿ ನಾಲ್ವರು ಸಾವು
ರಾತ್ರಿ ಮಟನ್ ಊಟ ಮಾಡಿದ ಇಡೀ ಕುಟುಂಬದಲ್ಲಿ ನಾಲ್ವರು ಸಾವನ್ನಪ್ಪಿರುವ ಘೋರ ದುರಂತ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ಮಟನ್ ಊಟ ಮಾಡಿದ ಬಳಿಕ ಮನೆಯಲ್ಲಿದ್ದ ನಾಲ್ವರು ನಿತ್ರಾಣಗೊಂಡಿದ್ದಾರೆ. ನಾಲ್ವರು ಸಾವನ್ನಪ್ಪಿದ್ರೆ ಗಂಭೀರ ಸ್ಥಿತಿಯಲ್ಲಿರುವ ಒಬ್ಬರನ್ನು ರಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ರಾತ್ರಿ ಮಟನ್ ಊಟ ಮಾಡಿ ಮಲಗಿದ್ದವರು ಏಳಲೇ ಇಲ್ಲ.. ಒಂದೇ ಮನೆಯಲ್ಲಿ ನಾಲ್ವರು ಸಾವು; ಆಗಿದ್ದೇನು?
ಕಲ್ಲೂರು ಗ್ರಾಮದ ಭೀಮಣ್ಣ ಕುಟುಂಬ ನಿನ್ನೆ ರಾತ್ರಿ ಮನೆಗೆ ಮಟನ್ ತಂದು ಅಡುಗೆ ಮಾಡಿದ್ದಾರೆ. ಮಟನ್ ಊಟ ಮಾಡಿದ ಮೇಲೆ ಮನೆಯವರಿಗೆ ನಿಶ್ಯಕ್ತಿ, ಅಸ್ವಸ್ಥರಾಗಿದ್ದಾರೆ. ವಾಂತಿ ಭೇದಿಯಿಂದ ಬಳಲಿದ ಇಡೀ ಕುಟುಂಬದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಭೀಮಣ್ಣ, ಈರಮ್ಮ, ಮಲ್ಲೇಶ್ ಹಾಗೂ ಪಾರ್ವತಿ ಮೃತ ದುರ್ದೈವಿಗಳು.
ಮನೆಗೆ ತಂದ ಮಟನ್ ಪತ್ತೆ ಹಚ್ಚಲು ಸೂಚನೆ
ಮಟನ್ ಊಟದಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರೋ ಈ ಘಟನೆ ಎಲ್ರೂ ಬೆಚ್ಚಿ ಬೀಳುವಂತೆ ಮಾಡಿದೆ. ರಿಮ್ಸ್ ಆಸ್ಪತ್ರೆಗೆ ರಾಯಚೂರು ಎಸ್.ಪಿ ಪುಟ್ಟಮಾದಯ್ಯ, ಡಿಹೆಚ್ಓ ಸುರೇಂದ್ರ ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಿಮ್ಸ್ ವೈದ್ಯ ಭಾಸ್ಕರ್ ಅವರು ಮಟನ್ ಊಟ ಮಾಡಿದ ಮನೆಯವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ಗೆ ಶಿಫ್ಟ್ ಮಾಡಲಾಗಿದೆ. ಆ ಮಟನ್ ಎಲ್ಲಿಂದ ತಂದಿದ್ದಾರೆ ಅಂತಾ ಪತ್ತೆ ಹಚ್ಚಲಾಗುತ್ತಿದೆ. ಫುಡ್ ಪಾಯ್ಸನ್ ಆಗಿರುವ ಶಂಕೆ ಇದೆ ಎಂದಿದ್ದಾರೆ.
ಇದನ್ನೂ ಓದಿ: ಗಲ್ಫ್ನಿಂದ ಓಡೋಡಿ ಬಂದ ಮಗನಿಗೆ ಸಿಕ್ಕಿದ್ದು ತಂದೆಯ ಮೃತದೇಹ.. ಅಮ್ಮ, ಹೆಂಡತಿ, ಮಗ ಎಲ್ಲರೂ ನಾಪತ್ತೆ
ದುರಂತಕ್ಕೆ ಡಿಸಿ ಹೇಳಿದ್ದೇನು?
ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ದಾರುಣ ಘಟನೆಯಲ್ಲಿ ಪ್ರಾಥಮಿಕವಾಗಿ ಆಹಾರದಲ್ಲಿ ಬಲವಾದ ವಿಷಕಾರಿ ಪದಾರ್ಥ ಇರೋದು ತಿಳಿದು ಬಂದಿದೆ. ಭೀಮಣ್ಣ ಮನೆಯವರು ಚಪಾತಿ, ಮಟನ್ ಮತ್ತು ತರಕಾರಿ ಊಟ ಮಾಡಿದ್ದರು. ವಿಷಾಹಾರ ಸೇವಿಸಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಭೀಮಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಳಿದ 4 ಕುಟುಂಬಸ್ಥರನ್ನು ರಿಮ್ಸ್ ಆಸ್ಪತ್ರೆಗೆ ತರಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಮೂವರು ಚಿಕಿತ್ಸೆ ನೀಡಿದರೂ ಬದುಕುಳಿದಿಲ್ಲ. ಆಸ್ಪತ್ರೆಗೆ ತರುವಾಗ ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಅದರಲ್ಲಿ ಮಲ್ಲಮ್ಮ ಎಂಬುವವರು ಕೋಮಾದಲ್ಲಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಈಗಾಗಲೇ ಭೀಮಣ್ಣ ಅವರ ಮನೆಯಲ್ಲಿ ಸೇವಿಸಿದ ಆಹಾರ ಪದಾರ್ಥಗಳ ಸ್ಯಾಂಪಲ್ ಪಡೆದು ಟೆಸ್ಟ್ಗೆ ಕಳುಹಿಸಲಾಗಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಡೀ ಕುಟಂಬದವರಿಗೆ ಮಟನ್ ಊಟ ಮಾಡಿದ ಮೇಲೆ ಏನಾಯ್ತು?
ಮಟನ್ ಎಲ್ಲಿಂದ ತಂದರು ಅಂತ ಪತ್ತೆ ಹಚ್ಚಲು ಮುಂದಾದ ಅಧಿಕಾರಿಗಳು
ಚಪಾತಿ, ಮಟನ್ ಮತ್ತು ತರಕಾರಿ ಊಟ ಮಾಡಿದ್ದವರಲ್ಲಿ ನಾಲ್ವರು ಸಾವು
ರಾತ್ರಿ ಮಟನ್ ಊಟ ಮಾಡಿದ ಇಡೀ ಕುಟುಂಬದಲ್ಲಿ ನಾಲ್ವರು ಸಾವನ್ನಪ್ಪಿರುವ ಘೋರ ದುರಂತ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ಮಟನ್ ಊಟ ಮಾಡಿದ ಬಳಿಕ ಮನೆಯಲ್ಲಿದ್ದ ನಾಲ್ವರು ನಿತ್ರಾಣಗೊಂಡಿದ್ದಾರೆ. ನಾಲ್ವರು ಸಾವನ್ನಪ್ಪಿದ್ರೆ ಗಂಭೀರ ಸ್ಥಿತಿಯಲ್ಲಿರುವ ಒಬ್ಬರನ್ನು ರಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ರಾತ್ರಿ ಮಟನ್ ಊಟ ಮಾಡಿ ಮಲಗಿದ್ದವರು ಏಳಲೇ ಇಲ್ಲ.. ಒಂದೇ ಮನೆಯಲ್ಲಿ ನಾಲ್ವರು ಸಾವು; ಆಗಿದ್ದೇನು?
ಕಲ್ಲೂರು ಗ್ರಾಮದ ಭೀಮಣ್ಣ ಕುಟುಂಬ ನಿನ್ನೆ ರಾತ್ರಿ ಮನೆಗೆ ಮಟನ್ ತಂದು ಅಡುಗೆ ಮಾಡಿದ್ದಾರೆ. ಮಟನ್ ಊಟ ಮಾಡಿದ ಮೇಲೆ ಮನೆಯವರಿಗೆ ನಿಶ್ಯಕ್ತಿ, ಅಸ್ವಸ್ಥರಾಗಿದ್ದಾರೆ. ವಾಂತಿ ಭೇದಿಯಿಂದ ಬಳಲಿದ ಇಡೀ ಕುಟುಂಬದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಭೀಮಣ್ಣ, ಈರಮ್ಮ, ಮಲ್ಲೇಶ್ ಹಾಗೂ ಪಾರ್ವತಿ ಮೃತ ದುರ್ದೈವಿಗಳು.
ಮನೆಗೆ ತಂದ ಮಟನ್ ಪತ್ತೆ ಹಚ್ಚಲು ಸೂಚನೆ
ಮಟನ್ ಊಟದಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರೋ ಈ ಘಟನೆ ಎಲ್ರೂ ಬೆಚ್ಚಿ ಬೀಳುವಂತೆ ಮಾಡಿದೆ. ರಿಮ್ಸ್ ಆಸ್ಪತ್ರೆಗೆ ರಾಯಚೂರು ಎಸ್.ಪಿ ಪುಟ್ಟಮಾದಯ್ಯ, ಡಿಹೆಚ್ಓ ಸುರೇಂದ್ರ ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಿಮ್ಸ್ ವೈದ್ಯ ಭಾಸ್ಕರ್ ಅವರು ಮಟನ್ ಊಟ ಮಾಡಿದ ಮನೆಯವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ಗೆ ಶಿಫ್ಟ್ ಮಾಡಲಾಗಿದೆ. ಆ ಮಟನ್ ಎಲ್ಲಿಂದ ತಂದಿದ್ದಾರೆ ಅಂತಾ ಪತ್ತೆ ಹಚ್ಚಲಾಗುತ್ತಿದೆ. ಫುಡ್ ಪಾಯ್ಸನ್ ಆಗಿರುವ ಶಂಕೆ ಇದೆ ಎಂದಿದ್ದಾರೆ.
ಇದನ್ನೂ ಓದಿ: ಗಲ್ಫ್ನಿಂದ ಓಡೋಡಿ ಬಂದ ಮಗನಿಗೆ ಸಿಕ್ಕಿದ್ದು ತಂದೆಯ ಮೃತದೇಹ.. ಅಮ್ಮ, ಹೆಂಡತಿ, ಮಗ ಎಲ್ಲರೂ ನಾಪತ್ತೆ
ದುರಂತಕ್ಕೆ ಡಿಸಿ ಹೇಳಿದ್ದೇನು?
ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ದಾರುಣ ಘಟನೆಯಲ್ಲಿ ಪ್ರಾಥಮಿಕವಾಗಿ ಆಹಾರದಲ್ಲಿ ಬಲವಾದ ವಿಷಕಾರಿ ಪದಾರ್ಥ ಇರೋದು ತಿಳಿದು ಬಂದಿದೆ. ಭೀಮಣ್ಣ ಮನೆಯವರು ಚಪಾತಿ, ಮಟನ್ ಮತ್ತು ತರಕಾರಿ ಊಟ ಮಾಡಿದ್ದರು. ವಿಷಾಹಾರ ಸೇವಿಸಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಭೀಮಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಳಿದ 4 ಕುಟುಂಬಸ್ಥರನ್ನು ರಿಮ್ಸ್ ಆಸ್ಪತ್ರೆಗೆ ತರಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಮೂವರು ಚಿಕಿತ್ಸೆ ನೀಡಿದರೂ ಬದುಕುಳಿದಿಲ್ಲ. ಆಸ್ಪತ್ರೆಗೆ ತರುವಾಗ ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಅದರಲ್ಲಿ ಮಲ್ಲಮ್ಮ ಎಂಬುವವರು ಕೋಮಾದಲ್ಲಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಈಗಾಗಲೇ ಭೀಮಣ್ಣ ಅವರ ಮನೆಯಲ್ಲಿ ಸೇವಿಸಿದ ಆಹಾರ ಪದಾರ್ಥಗಳ ಸ್ಯಾಂಪಲ್ ಪಡೆದು ಟೆಸ್ಟ್ಗೆ ಕಳುಹಿಸಲಾಗಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ