newsfirstkannada.com

RCB ಫ್ಯಾನ್ಸ್‌ಗೆ ಅರ್ಥ ಆಯ್ತಾ.. ರಿಷಬ್‌ ಶೆಟ್ಟಿ, ಶಿವಣ್ಣನ ಬಳಿಕ ಕಿಚ್ಚ ಸುದೀಪ್‌ ಎಂಟ್ರಿ; ಏನಂದ್ರು?

Share :

Published March 17, 2024 at 11:05am

Update March 17, 2024 at 11:07am

    ರಿಷಬ್ ಶೆಟ್ಟಿ, ಶಿವಣ್ಣ, ಅಶ್ವಿನಿ ಪುನೀತ್ ಕುಮಾರ್ ಬಳಿಕ ಸುದೀಪ್ ಸುಳಿವು

    RCB ಅನ್‌ಬಾಕ್ಸ್‌ ಸರ್‌ಪ್ರೈಸ್‌ಗೆ ಕಿಚ್ಚ ಸುದೀಪ್ ಖಡಕ್‌ ಎಂಟ್ರಿ

    ಒಂದು, ಎರಡು ಇಡ್ಲಿ ಓಕೆ ಮೂರನೇ ಇಡ್ಲಿ ಬೇಡ ಎಂದ ಸ್ಯಾಂಡಲ್‌ವುಡ್‌ ರನ್ನ

ಬೆಂಗಳೂರು: ಐಪಿಎಲ್‌ 17ನೇ ಸೀಸನ್‌ಗೆ ದಿನಗಣನೆ ಶುರುವಾಗಿದೆ. ಈ ಮೆಗಾ ಟೂರ್ನಿಗೂ ಮುಂಚೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಕಾದಿದೆ. ಅಭಿಮಾನಿಗಳ ಜೋಶ್ ಹೆಚ್ಚಿಸಿರುವ RCB ಈ ಬಾರಿ ಕ್ರೇಜ್‌ ಕೂಡ ಡಬಲ್ ಮಾಡುತ್ತಿದೆ.

ಈ ಸಲ ಕಪ್ ನಮ್ದೇ ಎಂದು ಪ್ರತಿ ಬಾರಿ ಕಾಯುತ್ತಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ಯಾನ್ಸ್‌ಗೆ RCB ಫ್ರಾಂಚೈಸಿ ಬಿಗ್ ಸರ್‌ಪ್ರೈಸ್ ನೀಡಲು ಮುಂದಾಗಿದೆ. ಇದೇ ಮಾರ್ಚ್​ 19 ರಂದು ಅನ್​ಬಾಕ್ಸ್ ಈವೆಂಟ್ ನಡೆಯಲಿದೆ. RCB ಹೆಸರು ಬದಲಾವಣೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಲಿದೆ.

ಇದನ್ನೂ ಓದಿ: ಇನ್ನೆಷ್ಟು ದಿನ ಈ ಸಲ ಕಪ್‌ ನಮ್ದೇ ಅನ್ನೋದು.. ಲಾಂಗ್ ಎತ್ತಿದ ಶಿವಣ್ಣ; RCB ಫ್ಯಾನ್ಸ್‌ಗೆ ಅರ್ಥ ಆಯ್ತಾ?

RCB ಅನ್‌ಬಾಕ್ಸ್‌ ಈವೆಂಟ್‌ಗೂ ಮುಂಚೆ RCB ಹೆಸರು ಬದಲಾವಣೆ ಬಗ್ಗೆ ಸಾಕಷ್ಟು ಸುಳಿವು ನೀಡಲಾಗುತ್ತಿದೆ. ಈಗಾಗಲೇ ರಿಷಬ್ ಶೆಟ್ಟಿ, ಶಿವರಾಜ್‌ಕುಮಾರ್, ಅಶ್ವಿನಿ ಪುನೀತ್ ಕುಮಾರ್ ಅವರ ಪ್ರೊಮೋ ರಿಲೀಸ್ ಆಗಿದೆ. ಇದೀಗ RCB ಅನ್‌ಬಾಕ್ಸ್‌ ಸರ್‌ಪ್ರೈಸ್‌ಗೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.

RCB ಸೋಷಿಯಲ್ ಮೀಡಿಯಾದಲ್ಲಿ ಲೇಟೆಸ್ಟ್ ಪ್ರೊಮೋ ಬಿಡುಗಡೆ ಮಾಡಿದೆ. ಆ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಒಂದು ಹೋಟೆಲ್‌ಗೆ ಭೇಟಿ ಕೊಟ್ಟಿದ್ದು ಮೂರು ಇಡ್ಲಿ ಆರ್ಡರ್‌ ಮಾಡುತ್ತಾರೆ. ಒಂದನೇ ಇಡ್ಲಿಯಲ್ಲಿ ರಾಯಲ್, ಎರಡನೇ ಇಡ್ಲಿಯಾಲ್ಲಿ ಚಾಲೆಂಜರ್ಸ್‌ ಇದೆ. ಒಂದು, ಎರಡು ಇಡ್ಲಿ ಕೊಟ್ಟಾಗ ಸೂಪರ್ ಎಂದಿರುವ ಸುದೀಪ್ ಮೂರನೇ ಇಡ್ಲಿ ನೋಡಿ ಬೇಡ ಅಂತ ಹೇಳಿದ್ದಾರೆ. ಕೊನೆಗೆ ಅರ್ಥ ಆಯ್ತಾ ಎಂದು ಪ್ರಶ್ನಿಸಿದ್ದಾರೆ.

ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಫ್ಯಾನ್ಸ್‌ಗೆ ಅರ್ಥ ಆಯ್ತಾ.. ರಿಷಬ್‌ ಶೆಟ್ಟಿ, ಶಿವಣ್ಣನ ಬಳಿಕ ಕಿಚ್ಚ ಸುದೀಪ್‌ ಎಂಟ್ರಿ; ಏನಂದ್ರು?

https://newsfirstlive.com/wp-content/uploads/2024/03/Kicha-Sudeep-1.jpg

    ರಿಷಬ್ ಶೆಟ್ಟಿ, ಶಿವಣ್ಣ, ಅಶ್ವಿನಿ ಪುನೀತ್ ಕುಮಾರ್ ಬಳಿಕ ಸುದೀಪ್ ಸುಳಿವು

    RCB ಅನ್‌ಬಾಕ್ಸ್‌ ಸರ್‌ಪ್ರೈಸ್‌ಗೆ ಕಿಚ್ಚ ಸುದೀಪ್ ಖಡಕ್‌ ಎಂಟ್ರಿ

    ಒಂದು, ಎರಡು ಇಡ್ಲಿ ಓಕೆ ಮೂರನೇ ಇಡ್ಲಿ ಬೇಡ ಎಂದ ಸ್ಯಾಂಡಲ್‌ವುಡ್‌ ರನ್ನ

ಬೆಂಗಳೂರು: ಐಪಿಎಲ್‌ 17ನೇ ಸೀಸನ್‌ಗೆ ದಿನಗಣನೆ ಶುರುವಾಗಿದೆ. ಈ ಮೆಗಾ ಟೂರ್ನಿಗೂ ಮುಂಚೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಕಾದಿದೆ. ಅಭಿಮಾನಿಗಳ ಜೋಶ್ ಹೆಚ್ಚಿಸಿರುವ RCB ಈ ಬಾರಿ ಕ್ರೇಜ್‌ ಕೂಡ ಡಬಲ್ ಮಾಡುತ್ತಿದೆ.

ಈ ಸಲ ಕಪ್ ನಮ್ದೇ ಎಂದು ಪ್ರತಿ ಬಾರಿ ಕಾಯುತ್ತಿದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ಯಾನ್ಸ್‌ಗೆ RCB ಫ್ರಾಂಚೈಸಿ ಬಿಗ್ ಸರ್‌ಪ್ರೈಸ್ ನೀಡಲು ಮುಂದಾಗಿದೆ. ಇದೇ ಮಾರ್ಚ್​ 19 ರಂದು ಅನ್​ಬಾಕ್ಸ್ ಈವೆಂಟ್ ನಡೆಯಲಿದೆ. RCB ಹೆಸರು ಬದಲಾವಣೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಲಿದೆ.

ಇದನ್ನೂ ಓದಿ: ಇನ್ನೆಷ್ಟು ದಿನ ಈ ಸಲ ಕಪ್‌ ನಮ್ದೇ ಅನ್ನೋದು.. ಲಾಂಗ್ ಎತ್ತಿದ ಶಿವಣ್ಣ; RCB ಫ್ಯಾನ್ಸ್‌ಗೆ ಅರ್ಥ ಆಯ್ತಾ?

RCB ಅನ್‌ಬಾಕ್ಸ್‌ ಈವೆಂಟ್‌ಗೂ ಮುಂಚೆ RCB ಹೆಸರು ಬದಲಾವಣೆ ಬಗ್ಗೆ ಸಾಕಷ್ಟು ಸುಳಿವು ನೀಡಲಾಗುತ್ತಿದೆ. ಈಗಾಗಲೇ ರಿಷಬ್ ಶೆಟ್ಟಿ, ಶಿವರಾಜ್‌ಕುಮಾರ್, ಅಶ್ವಿನಿ ಪುನೀತ್ ಕುಮಾರ್ ಅವರ ಪ್ರೊಮೋ ರಿಲೀಸ್ ಆಗಿದೆ. ಇದೀಗ RCB ಅನ್‌ಬಾಕ್ಸ್‌ ಸರ್‌ಪ್ರೈಸ್‌ಗೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.

RCB ಸೋಷಿಯಲ್ ಮೀಡಿಯಾದಲ್ಲಿ ಲೇಟೆಸ್ಟ್ ಪ್ರೊಮೋ ಬಿಡುಗಡೆ ಮಾಡಿದೆ. ಆ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಒಂದು ಹೋಟೆಲ್‌ಗೆ ಭೇಟಿ ಕೊಟ್ಟಿದ್ದು ಮೂರು ಇಡ್ಲಿ ಆರ್ಡರ್‌ ಮಾಡುತ್ತಾರೆ. ಒಂದನೇ ಇಡ್ಲಿಯಲ್ಲಿ ರಾಯಲ್, ಎರಡನೇ ಇಡ್ಲಿಯಾಲ್ಲಿ ಚಾಲೆಂಜರ್ಸ್‌ ಇದೆ. ಒಂದು, ಎರಡು ಇಡ್ಲಿ ಕೊಟ್ಟಾಗ ಸೂಪರ್ ಎಂದಿರುವ ಸುದೀಪ್ ಮೂರನೇ ಇಡ್ಲಿ ನೋಡಿ ಬೇಡ ಅಂತ ಹೇಳಿದ್ದಾರೆ. ಕೊನೆಗೆ ಅರ್ಥ ಆಯ್ತಾ ಎಂದು ಪ್ರಶ್ನಿಸಿದ್ದಾರೆ.

ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More