ಯಾರಾಗ್ತಾರೆ ಟೀಮ್ ಇಂಡಿಯಾದ ಹೊಸ T20 ಕ್ಯಾಪ್ಟನ್..?
ಟೀಮ್ ಮ್ಯಾನೇಜ್ಮೆಂಟ್ಗೆ ಕಬ್ಬಿಣದ ಕಡಲೆಯಾದ ಆಯ್ಕೆ
ಬಿಸಿಸಿಐ ಒಲವು ಭಾರತ ತಂಡದ ಯಾವ ಪ್ಲೇಯರ್ ಮೇಲಿದೆ?
ಚಾಂಪಿಯನ್ ಕಿರೀಟ ಗೆದ್ದ ರೋಹಿತ್ ಶರ್ಮಾ ಚುಟುಕು ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದಾರೆ. ಇದ್ರೊಂದಿಗೆ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು.? ಎಂಬ ಪ್ರಶ್ನೆ ಹುಟ್ಟಿದೆ. ಚಾಂಪಿಯನ್ ತಂಡದ ನಯಾ ಟಿ20 ಕ್ಯಾಪ್ಟನ್ ಆಗಲು ನಾಲ್ವರು ನಾ ಮುಂದು, ತಾ ಮುಂದು ಅಂತ ತುದಿಗಾಲಲ್ಲಿ ನಿಂತಿದ್ದಾರೆ. ಆಯ್ಕೆಯಂತೂ ಟೀಮ್ ಮ್ಯಾನೇಜ್ಮೆಂಟ್ಗೆ ಕಬ್ಬಿಣದ ಕಡಲೆಯಾಗಿದೆ. ರೋಹಿತ್ ಉತ್ತರಾಧಿಕಾರಿ ಪಟ್ಟಕ್ಕಾಗಿ ಯಾರ ನಡುವೆ ಫೈಟ್ ನಡೀತಿದೆ?. ಯಾರಿಗೆ ನೂತನ ಬಾಸ್ ಆಗುವ ಚಾನ್ಸ್ ಇದೆ?.
ಒಂದು ಪಟ್ಟಕ್ಕಾಗಿ ನಾಲ್ವರು ಸ್ಟಾರ್ ಆಟಗಾರರ ಹದ್ದಿನ ಕಣ್ಣು
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದು ಹೊಸ ಭಾಷ್ಯ ಬರಿದ್ದಾಯ್ತು. ಇದೇ ಖುಷಿಯಲ್ಲಿ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿ ಶಾಕ್ ಕೊಟ್ಟಿದ್ದು ಆಯ್ತು. ಇದೀಗ ಹಿಟ್ಮ್ಯಾನ್ ಉತ್ತರಾಧಿಕಾರಿ ಯಾರಾಗ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ಸಿ ಪಟ್ಟಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ನಾಲ್ವರು ಸ್ಟಾರ್ ಕ್ರಿಕೆಟಿಗರು ನಾಯಕರಾಗಲು ತುದಿಗಾಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ: ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..! ಗಾಬರಿಬಿದ್ದ ಜನ
ರೋಹಿತ್ ಉತ್ತರಾಧಿಕಾರಿ ರೇಸ್ನಲ್ಲಿ ಹಾರ್ದಿಕ್ ಮುಂಚೂಣಿ..!
ವಿಶ್ವಕಪ್ನಲ್ಲಿ ವೈಸ್ ಕ್ಯಾಪ್ಟನ್ ಆಗಿದ್ದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡದ ನೂತನ ಟಿ20 ಕ್ಯಾಪ್ಟನ್ ಆಗುವ ಸಾಧ್ಯತೆ ಹೆಚ್ಚಿದೆ. ಟಿ20ಯಲ್ಲಿ ತಂಡ ಮುನ್ನಡೆಸಿದ ಅನುಭವಿದೆ. ಜೊತೆಗೆ ಐಪಿಎಲ್ನಲ್ಲಿ ತಂಡದ ನಾಯಕರಾಗಿ ಸಕ್ಸಸ್ ಕಂಡಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲು ಟೀಮ್ ಇಂಡಿಯಾ ಒಲವು ತೋರಿದೆ ಎಂದು ವರದಿಯಾಗಿದೆ.
ರಿಷಬ್ ಪಂತ್ಗೆ ಬಂಪರ್ ಜಾಕ್ಪಾಟ್ ಹೊಡೆಯುತ್ತಾ..?
ಹಾರ್ದಿಕ್ ಜೊತೆ ವಿಕೆಟ್ ರಿಷಬ್ ಪಂತ್ ಹೆಸರು ಕ್ಯಾಪ್ಟನ್ಸಿ ರೇಸ್ನಲ್ಲಿ ಬಲವಾಗಿ ಕೇಳಿ ಬರ್ತಿದೆ. ಪಂತ್ಗೆ ಈಗಿನ್ನೂ 26 ವರ್ಷ. ಅವಕಾಶ ನೀಡಿದ್ರೆ 10 ವರ್ಷಗಳ ಸುದೀರ್ಘ ಕಾಲ ತಂಡವನ್ನ ಮುನ್ನಡೆಸಬಹುದು. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲೀಡ್ ಮಾಡಿದ ಅನುಭವ ಬೇರೆ ಇದೆ. ಇದರ ಜೊತೆ ದ್ರಾವಿಡ್ ಉತ್ತರಾಧಿಕಾರಿಯಾಗೋ ಗೌತಮ್ ಗಂಭೀರ್ ಹಾಗೂ ಪಂತ್ ಡೆಲ್ಲಿಯವರೇ. ಇಬ್ಬರ ನಡುವೆ ಭಾಂದವ್ಯ ಚೆನ್ನಾಗಿದ್ದು, ಇದು ತಂಡದ ಚುಕ್ಕಾಣಿ ಹಿಡಿಯಲು ನೆರವಾಗಲಿದೆ ಎಂದು ಹೇಳಲಾಗ್ತಿದೆ.
ಹಾರ್ದಿಕ್-ಪಂತ್ರನ್ನ ಓವರ್ಟೇಕ್ ಮಾಡ್ತಾರಾ ಸೂರ್ಯ..?
ಸೂರ್ಯಕುಮಾರ್ ಯಾದವ್ ಕೂಡ ಟಿ20 ನಾಯಕತ್ವದ ಮೇಲೆ ಕಣ್ಣಿಟ್ಟಿದ್ದಾರೆ. ಸೂರ್ಯ ಒಂದೆರೆಡು ಸರಣಿಗಳಲ್ಲಿ ಭಾರತ ತಂಡವನ್ನ ಮುನ್ನಡೆಸಿದ್ದು ಬಿಟ್ರೆ ಹೆಚ್ಚು ಅನುಭವವಿಲ್ಲ. ಆದ್ರೂ, ತಂಡವನ್ನ ಯಶಸ್ವಿಯಾಗಿ ಮುನ್ನಡೆಸುವ ಕೆಪಾಸಿಟಿ ಈ ಡೇಂಜರಸ್ ಬ್ಯಾಟರ್ಗಿದೆ. ಈ ಹಿಂದೆ ಆಸಿಸ್ ಎದುರಿನ ಸರಣಿ ಗೆಲ್ಲಿಸಿ ಅದನ್ನ ಪ್ರೂವ್ ಮಾಡಿದ್ದಾರೆ. ಹೀಗಾಗಿ ಸೂರ್ಯನಿಗೆ ಅದೃಷ್ಟದ ಬಾಗಿಲು ತೆರೆದ್ರು ಆಶ್ಚರ್ಯವಿಲ್ಲ.
ಇದನ್ನೂ ಓದಿ: ಡಾಲಿ ಧನಂಜಯ್- ಉಪ್ಪಿ ನಡುವೆ ಬಿಗ್ ವಾರ್.. ಕೆಂಪೇಗೌಡ ಟೈಟಲ್ ಸಿಕ್ಕಿದ್ದು ಯಾರಿಗೆ?
ಸ್ಟಾರ್ ವೇಗಿ ಬೂಮ್ರಾ ಟೀಮ್ ಇಂಡಿಯಾ ಚುಕ್ಕಾಣಿ ಹಿಡೀತಾರಾ..?
ಬರೀ ಬ್ಯಾಟ್ಸ್ಮನ್ಗಳಷ್ಟೇ ಅಲ್ಲದೇ ಸ್ಟಾರ್ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ಟೀಮ್ ಇಂಡಿಯಾ ಸಾರಥಿ ಆಗುವ ಕನಸು ಕಾಣ್ತಿದ್ದಾರೆ. ಸದ್ಯ ಇರೋರಲ್ಲಿ ಬೂಮ್ರಾನೆ ಹೆಚ್ಚು ಅನುಭವವುಳ್ಳ ಆಟಗಾರ. ಕಳೆದ ವರ್ಷ ಐರ್ಲೆಂಡ್ ವಿರುದ್ಧ ತಂಡ ಮುನ್ನಡೆಸಿದ್ದ ಬೂಮ್ರಾ ಸರಣಿ ಗೆಲ್ಲಿಸಿ ಸೈ ಅನ್ನಿಸಿಕೊಂಡಿದ್ರು. ಒಂದು ವೇಳೆ ಟೀಮ್ ಮ್ಯಾನೇಜ್ಮೆಂಟ್ಗೆ ಅನುಭವವೇ ಮಾನದಂಡವಾದ್ರೆ ಬೂಮ್ರಾಗೆ ಕ್ಯಾಪ್ಟನ್ಸಿ ಜಾಕ್ಪಾಟ್ ಹೊಡೆಯೋದು ಗ್ಯಾರಂಟಿ.
ಇದನ್ನೂ ಓದಿ: ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್
ರೋಹಿತ್ ಶರ್ಮಾ ಉತ್ತರಾಧಿಕಾರಿ ಆಗಲು ನಾಲ್ವರು ಪ್ಲೇಯರ್ಸ್ ನಡುವೆ ಜಂಗೀಕುಸ್ತಿ ಏರ್ಪಟ್ಟಿರೋಂತೂ ನಿಜ. ಆದ್ರೆ ಅಂತಿಮವಾಗಿ ಯಾರಿಗೆ ಪಟ್ಟ ದಕ್ಕುತ್ತೆ, ಟೀಮ್ ಮ್ಯಾನೇಜ್ಮೆಂಟ್ ಯಾರ ಮೇಲೆ ಒಲವು ತೋರುತ್ತೆ ಅನ್ನೋದಕ್ಕೆ ಶೀಘ್ರದಲ್ಲೆ ಆನ್ಸರ್ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಯಾರಾಗ್ತಾರೆ ಟೀಮ್ ಇಂಡಿಯಾದ ಹೊಸ T20 ಕ್ಯಾಪ್ಟನ್..?
ಟೀಮ್ ಮ್ಯಾನೇಜ್ಮೆಂಟ್ಗೆ ಕಬ್ಬಿಣದ ಕಡಲೆಯಾದ ಆಯ್ಕೆ
ಬಿಸಿಸಿಐ ಒಲವು ಭಾರತ ತಂಡದ ಯಾವ ಪ್ಲೇಯರ್ ಮೇಲಿದೆ?
ಚಾಂಪಿಯನ್ ಕಿರೀಟ ಗೆದ್ದ ರೋಹಿತ್ ಶರ್ಮಾ ಚುಟುಕು ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದಾರೆ. ಇದ್ರೊಂದಿಗೆ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು.? ಎಂಬ ಪ್ರಶ್ನೆ ಹುಟ್ಟಿದೆ. ಚಾಂಪಿಯನ್ ತಂಡದ ನಯಾ ಟಿ20 ಕ್ಯಾಪ್ಟನ್ ಆಗಲು ನಾಲ್ವರು ನಾ ಮುಂದು, ತಾ ಮುಂದು ಅಂತ ತುದಿಗಾಲಲ್ಲಿ ನಿಂತಿದ್ದಾರೆ. ಆಯ್ಕೆಯಂತೂ ಟೀಮ್ ಮ್ಯಾನೇಜ್ಮೆಂಟ್ಗೆ ಕಬ್ಬಿಣದ ಕಡಲೆಯಾಗಿದೆ. ರೋಹಿತ್ ಉತ್ತರಾಧಿಕಾರಿ ಪಟ್ಟಕ್ಕಾಗಿ ಯಾರ ನಡುವೆ ಫೈಟ್ ನಡೀತಿದೆ?. ಯಾರಿಗೆ ನೂತನ ಬಾಸ್ ಆಗುವ ಚಾನ್ಸ್ ಇದೆ?.
ಒಂದು ಪಟ್ಟಕ್ಕಾಗಿ ನಾಲ್ವರು ಸ್ಟಾರ್ ಆಟಗಾರರ ಹದ್ದಿನ ಕಣ್ಣು
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದು ಹೊಸ ಭಾಷ್ಯ ಬರಿದ್ದಾಯ್ತು. ಇದೇ ಖುಷಿಯಲ್ಲಿ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿ ಶಾಕ್ ಕೊಟ್ಟಿದ್ದು ಆಯ್ತು. ಇದೀಗ ಹಿಟ್ಮ್ಯಾನ್ ಉತ್ತರಾಧಿಕಾರಿ ಯಾರಾಗ್ತಾರೆ ಅನ್ನೋ ಚರ್ಚೆ ಜೋರಾಗಿದೆ. ಟೀಮ್ ಇಂಡಿಯಾದ ಟಿ20 ಕ್ಯಾಪ್ಟನ್ಸಿ ಪಟ್ಟಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ನಾಲ್ವರು ಸ್ಟಾರ್ ಕ್ರಿಕೆಟಿಗರು ನಾಯಕರಾಗಲು ತುದಿಗಾಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ: ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..! ಗಾಬರಿಬಿದ್ದ ಜನ
ರೋಹಿತ್ ಉತ್ತರಾಧಿಕಾರಿ ರೇಸ್ನಲ್ಲಿ ಹಾರ್ದಿಕ್ ಮುಂಚೂಣಿ..!
ವಿಶ್ವಕಪ್ನಲ್ಲಿ ವೈಸ್ ಕ್ಯಾಪ್ಟನ್ ಆಗಿದ್ದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡದ ನೂತನ ಟಿ20 ಕ್ಯಾಪ್ಟನ್ ಆಗುವ ಸಾಧ್ಯತೆ ಹೆಚ್ಚಿದೆ. ಟಿ20ಯಲ್ಲಿ ತಂಡ ಮುನ್ನಡೆಸಿದ ಅನುಭವಿದೆ. ಜೊತೆಗೆ ಐಪಿಎಲ್ನಲ್ಲಿ ತಂಡದ ನಾಯಕರಾಗಿ ಸಕ್ಸಸ್ ಕಂಡಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲು ಟೀಮ್ ಇಂಡಿಯಾ ಒಲವು ತೋರಿದೆ ಎಂದು ವರದಿಯಾಗಿದೆ.
ರಿಷಬ್ ಪಂತ್ಗೆ ಬಂಪರ್ ಜಾಕ್ಪಾಟ್ ಹೊಡೆಯುತ್ತಾ..?
ಹಾರ್ದಿಕ್ ಜೊತೆ ವಿಕೆಟ್ ರಿಷಬ್ ಪಂತ್ ಹೆಸರು ಕ್ಯಾಪ್ಟನ್ಸಿ ರೇಸ್ನಲ್ಲಿ ಬಲವಾಗಿ ಕೇಳಿ ಬರ್ತಿದೆ. ಪಂತ್ಗೆ ಈಗಿನ್ನೂ 26 ವರ್ಷ. ಅವಕಾಶ ನೀಡಿದ್ರೆ 10 ವರ್ಷಗಳ ಸುದೀರ್ಘ ಕಾಲ ತಂಡವನ್ನ ಮುನ್ನಡೆಸಬಹುದು. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲೀಡ್ ಮಾಡಿದ ಅನುಭವ ಬೇರೆ ಇದೆ. ಇದರ ಜೊತೆ ದ್ರಾವಿಡ್ ಉತ್ತರಾಧಿಕಾರಿಯಾಗೋ ಗೌತಮ್ ಗಂಭೀರ್ ಹಾಗೂ ಪಂತ್ ಡೆಲ್ಲಿಯವರೇ. ಇಬ್ಬರ ನಡುವೆ ಭಾಂದವ್ಯ ಚೆನ್ನಾಗಿದ್ದು, ಇದು ತಂಡದ ಚುಕ್ಕಾಣಿ ಹಿಡಿಯಲು ನೆರವಾಗಲಿದೆ ಎಂದು ಹೇಳಲಾಗ್ತಿದೆ.
ಹಾರ್ದಿಕ್-ಪಂತ್ರನ್ನ ಓವರ್ಟೇಕ್ ಮಾಡ್ತಾರಾ ಸೂರ್ಯ..?
ಸೂರ್ಯಕುಮಾರ್ ಯಾದವ್ ಕೂಡ ಟಿ20 ನಾಯಕತ್ವದ ಮೇಲೆ ಕಣ್ಣಿಟ್ಟಿದ್ದಾರೆ. ಸೂರ್ಯ ಒಂದೆರೆಡು ಸರಣಿಗಳಲ್ಲಿ ಭಾರತ ತಂಡವನ್ನ ಮುನ್ನಡೆಸಿದ್ದು ಬಿಟ್ರೆ ಹೆಚ್ಚು ಅನುಭವವಿಲ್ಲ. ಆದ್ರೂ, ತಂಡವನ್ನ ಯಶಸ್ವಿಯಾಗಿ ಮುನ್ನಡೆಸುವ ಕೆಪಾಸಿಟಿ ಈ ಡೇಂಜರಸ್ ಬ್ಯಾಟರ್ಗಿದೆ. ಈ ಹಿಂದೆ ಆಸಿಸ್ ಎದುರಿನ ಸರಣಿ ಗೆಲ್ಲಿಸಿ ಅದನ್ನ ಪ್ರೂವ್ ಮಾಡಿದ್ದಾರೆ. ಹೀಗಾಗಿ ಸೂರ್ಯನಿಗೆ ಅದೃಷ್ಟದ ಬಾಗಿಲು ತೆರೆದ್ರು ಆಶ್ಚರ್ಯವಿಲ್ಲ.
ಇದನ್ನೂ ಓದಿ: ಡಾಲಿ ಧನಂಜಯ್- ಉಪ್ಪಿ ನಡುವೆ ಬಿಗ್ ವಾರ್.. ಕೆಂಪೇಗೌಡ ಟೈಟಲ್ ಸಿಕ್ಕಿದ್ದು ಯಾರಿಗೆ?
ಸ್ಟಾರ್ ವೇಗಿ ಬೂಮ್ರಾ ಟೀಮ್ ಇಂಡಿಯಾ ಚುಕ್ಕಾಣಿ ಹಿಡೀತಾರಾ..?
ಬರೀ ಬ್ಯಾಟ್ಸ್ಮನ್ಗಳಷ್ಟೇ ಅಲ್ಲದೇ ಸ್ಟಾರ್ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ಟೀಮ್ ಇಂಡಿಯಾ ಸಾರಥಿ ಆಗುವ ಕನಸು ಕಾಣ್ತಿದ್ದಾರೆ. ಸದ್ಯ ಇರೋರಲ್ಲಿ ಬೂಮ್ರಾನೆ ಹೆಚ್ಚು ಅನುಭವವುಳ್ಳ ಆಟಗಾರ. ಕಳೆದ ವರ್ಷ ಐರ್ಲೆಂಡ್ ವಿರುದ್ಧ ತಂಡ ಮುನ್ನಡೆಸಿದ್ದ ಬೂಮ್ರಾ ಸರಣಿ ಗೆಲ್ಲಿಸಿ ಸೈ ಅನ್ನಿಸಿಕೊಂಡಿದ್ರು. ಒಂದು ವೇಳೆ ಟೀಮ್ ಮ್ಯಾನೇಜ್ಮೆಂಟ್ಗೆ ಅನುಭವವೇ ಮಾನದಂಡವಾದ್ರೆ ಬೂಮ್ರಾಗೆ ಕ್ಯಾಪ್ಟನ್ಸಿ ಜಾಕ್ಪಾಟ್ ಹೊಡೆಯೋದು ಗ್ಯಾರಂಟಿ.
ಇದನ್ನೂ ಓದಿ: ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್
ರೋಹಿತ್ ಶರ್ಮಾ ಉತ್ತರಾಧಿಕಾರಿ ಆಗಲು ನಾಲ್ವರು ಪ್ಲೇಯರ್ಸ್ ನಡುವೆ ಜಂಗೀಕುಸ್ತಿ ಏರ್ಪಟ್ಟಿರೋಂತೂ ನಿಜ. ಆದ್ರೆ ಅಂತಿಮವಾಗಿ ಯಾರಿಗೆ ಪಟ್ಟ ದಕ್ಕುತ್ತೆ, ಟೀಮ್ ಮ್ಯಾನೇಜ್ಮೆಂಟ್ ಯಾರ ಮೇಲೆ ಒಲವು ತೋರುತ್ತೆ ಅನ್ನೋದಕ್ಕೆ ಶೀಘ್ರದಲ್ಲೆ ಆನ್ಸರ್ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ