Ganesh Festival: ಪವಿತ್ರ ತುಳಸಿ ದಳವನ್ನು ಗಣೇಶನಿಗೆ ಅರ್ಪಿಸುವುದಿಲ್ಲ ಯಾಕೆ? ಪುರಾಣ ಹೇಳೋದೇನು?

author-image
Gopal Kulkarni
Updated On
Ganesh Festival: ಪವಿತ್ರ ತುಳಸಿ ದಳವನ್ನು ಗಣೇಶನಿಗೆ ಅರ್ಪಿಸುವುದಿಲ್ಲ ಯಾಕೆ? ಪುರಾಣ ಹೇಳೋದೇನು?
Advertisment
  • ಅಲಂಕಾರ ಪ್ರಿಯ ಗಣಪನಿಗೆ ಅರ್ಪಿಸುವುದಿಲ್ಲ ಪವಿತ್ರ ತುಳಸಿ ದಳ ಯಾಕೆ?
  • ಇದರ ಹಿಂದಿದೆ ಒಂದು ಪೌರಾಣಿಕ ಹಿನ್ನೆಲೆ, ಪುರಾಣ ಈ ಬಗ್ಗೆ ಹೇಳುವುದೇನು?
  • ತಪೋನಿರತ ಗಣಪನ ಬಳಿ ಬಂದ ತುಳಸಿ ಬೇಡಿದ್ದೇನು? ಕೊಟ್ಟು ಶಾಪ ಯಾವುದು?

ಗಣೇಶನ ಹಬ್ಬ ಅಂದ್ರೆನೇ ಸಂಭ್ರಮಕ್ಕೆ ಸಡಗರಕ್ಕೆ ಮತ್ತೊಂದು ಹೆಸರು. ಗಜಾನನ ಭೋಜನ ಪ್ರಿಯ, ಭಕ್ತಿ ಪ್ರಿಯ ಮಾತ್ರವಲ್ಲ ಸಿಂಗಾರ ಪ್ರಿಯನೂ ಹೌದು. ಹೀಗಾಗಿ ಭಕ್ತರು ಗಣೇಶ ಚತುರ್ಥಿ ಬಂದರೆ ಸಾಕು ನಾನಾ ಬಗೆಯ ಅಲಂಕಾರಕ್ಕೆ ನಿಂತು ಬಿಡುತ್ತಾರೆ. ಮನೆಯನ್ನ ತಳಿರು ತೋರಣಗಳಿಂದ ಸಿಂಗರಿಸಿ. ಗಣಪ ಕೂರುವ ಕೋಣೆಯನ್ನ ಹಾಗೂ ಗೂಡನ್ನ ವಿದ್ಯುತ್ ಅಲಂಕಾರದಿಂದ ಹಿಡಿದು ತಮಗೆ ತೃಪ್ತಿಯಾಗುಷ್ಟು ಅಲಂಕಾರದಿಂದ ಅಂದಗೊಳಿಸುತ್ತಾರೆ.

ಇದನ್ನೂ ಓದಿ:ಪ್ರೇಮಿಗಳಿಗೆ ಶುಭದಿನ, ಎರಡನೇ ಮತ್ತು ಮೂರನೇ ಮದುವೆ ಮಾಡಿಕೊಳ್ಳುವವರಿಗೆ ಶುಭವಿದೆ; ಇಂದಿನ ರಾಶಿ ಭವಿಷ್ಯ

ಗಣಪನ ಪೂಜೆಯೂ ಕೂಡ ಬಗೆಯ ಬಗೆಯ ಫಲಪುಷ್ಪಗಳನ್ನು ಅರ್ಪಿಸುವುದರಿಂದ ಶುರುವಾಗುತ್ತದೆ. ಗರಿಕೆ ಪ್ರಿಯ ಗಣಪ. ಹೀಗಾಗಿ 21 ಗರಿಕೆಗಳನ್ನು ಏರಿಸಿ. ನಾನಾ ಬಗೆಯ ಹೂವನ್ನು ಅರ್ಪಿಸಿ, 21 ನಮಸ್ಕಾರಗಳನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ ಭಕ್ತರು. ಹೀಗೆ ಅಲಂಕಾರ ಪ್ರಿಯ, ಭಕ್ತ ಪ್ರಿಯ ಸಿಂಗಾರ ಪ್ರಿಯರ ಮೂಷಿಕವಾಹನನಿಗೆ ಆ ಒಂದು ದಳವನ್ನು ಮಾತ್ರ ಏರಿಸುವುದಿಲ್ಲ. ಅದು ತುಳಸಿ ದಳ.

ತುಳಸಿ ದಳ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಗಿಡವೆಂದೇ ನಂಬುತ್ತಾರೆ. ತುಳಸಿ ಇಲ್ಲದ ಮನೆಯ ಮುಂಬಾಗಿಲು ನಮಗೆ ಭಾರತದಲ್ಲಿ ಸಿಗುವುದೇ ಅಪರೂಪ. ತುಳಸಿಯನ್ನು ಲಕ್ಷ್ಮೀಯ ಇನ್ನೊಂದು ಪ್ರತಿರೂಪ ಅಂತಲೇ ಕರೆಯುತ್ತಾರೆ. ಔಷಧಿ ಗುಣಗಳಿಂದ ಮಾತ್ರವಲ್ಲ. ಹಲವು ರೀತಿಯಲ್ಲಿ ತುಳಸಿ ನಮಗೆ ಪವಿತ್ರ ದಳ. ಸಂಧ್ಯಾವಂದನೆಯಿಂದ ಹಿಡಿದು, ನೈವೆದ್ಯದವರೆಗೂ ತುಳಸಿ ಪ್ರಾಮುಖ್ಯತೆಯನ್ನು ನಮ್ಮ ಪುರಾಣಗಳು ಕಟ್ಟಿಕೊಟ್ಟಿವೆ. ಆದ್ರೆ ಗಣೇಶನಿಗೆ ಮಾತ್ರ ಈ ತುಳಸಿ ದಳವನ್ನು ಏರಿಸುವಂತಿಲ್ಲ. ಅದಕ್ಕೆ ಕಾರಣ ತುಳಸಿ ಹಾಗೂ ಗಣಪ ಒಬ್ಬರಿಗೊಬ್ಬರು ಕೊಟ್ಟುಕೊಂಡಿರುವ ಶಾಪ.

publive-image

ಇದನ್ನೂ ಓದಿ: ಅಂದು ಶಿವ ಕತ್ತರಿಸಿದ ಗಣಪನ ಶಿರ ಈಗೆಲ್ಲಿದೆ? ಈ ಪ್ರದೇಶದಲ್ಲಿ ಕಾಣಬಹುದು ವಿನಾಯಕನ ಮೂಲ ತಲೆ!

ಪುರಾಣಗಳು ಹೇಳುವ ಪ್ರಕಾರ ತುಳಸಿ ಸದಾ ವಿಷ್ಣು ಪ್ರಿಯೆ ಅವನಿಗಾಗಿಯೇ ಹಂಬಲಿಸಿದವಳು. ಹರನಿಗಾಗಿ ಗಿರಿಜೆ ಹಂಬಲಿಸಿದಂತೆ, ತಪಸ್ಸು ಮಾಡಿದಂತೆ ಹರಿಗಾಗಿ ತುಳಸಿ ಹಂಬಲಿಸಿ, ತಪಿಸಿದವಳು. ಆದರೆ ಒಂದೇ ಒಂದು ಬಾರಿ ಮನದ ಸಮೋತಲನ ಕಳೆದುಕೊಂಡು ಗಣಪನ ಮೇಲೆ ಮೋಹ ಮೂಡುತ್ತದೆ ತುಳಸಿಗೆ. ತಪಸ್ಸಿನಲ್ಲಿ ನಿರತನಾಗಿದ್ದ ಗಣೇಶನನ್ನು ಕಂಡು ಮೋಹಪರವಶಳಾದ ತುಳಸಿ, ನಾನು ನಿನ್ನನ್ನು ಮದುವೆಯಾಗಬೇಕು, ನಾನು ನಿನಗೆ ಒಲಿದಿದ್ದೇನೆ. ನನ್ನ ಪ್ರೀತಿಯನ್ನು ನಿರಾಕರಿಸಬೇಡ ಆರ್ಯ ಎಂದು ಬೇಡುತ್ತಾಳೆ.

ಗಣೇಶ ಸದಾ ತಪಸ್ಸಿನಲ್ಲಿ ನಿರತನಾಗಿರುವ ಹರಪುತ್ರ ಆಕೆಯ ಪ್ರೇಮ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸುತ್ತಾನೆ. ದೇವಿ, ನಾನು ಸಂಸಾರವೆಂಬ ಸಾಗರದಿಂದ ಮುಕ್ತನಾಗಲು ಹಂಬಲಿಸಿದವನು. ಸದಾ ಜಪತಪಗಳೇ ನನ್ನ ಉತ್ಥಾನದ ಮಾರ್ಗ ಹೀಗಾಗಿ ನಿನ್ನನ್ನು ನಾನು ವರಿಸಲಾರೆ ಎಂದು ಬಿಡುತ್ತಾನೆ. ಇಡೀ ಅಸ್ತಿತ್ವವೇ ಕುಸಿದು ಬಿದ್ದಂತಾದ ತುಳಸಿ ಎಂಬ ಮಹಾಸೌಂದರ್ಯ ರಾಶಿಗೆ ಕಡುಗೋಪವುಕ್ಕಿ. ನನ್ನಂತ ಸಾಧ್ವಿಯ ಪ್ರೇಮವನ್ನು ನೀನು ನಿರಾಕರಿಸಿದ್ದೀಯಾ. ಯಾವ ಕಾರಣಕ್ಕಾಗಿ ನೀನು ನನ್ನ ಪವಿತ್ರ ಪ್ರೇಮವನ್ನು ತಿರಸ್ಕರಿಸಿದ್ದಿಯೋ ಅದು ಎಂದು ನಿನಗೆ ದಕ್ಕದೇ ಹೋಗಲಿ ಎಂದು ಶಪಿಸುತ್ತಾಳೆ.

publive-image
ತನ್ನ ತಪ್ಪೇ ಇಲ್ಲದೇ ವಿನಾಕಾರಣವಾಗಿ ಶಪಿಸಿದ ತುಳಸಿಯ ಮೇಲೆ ಸಿಡಿದ ವಕ್ರತುಂಡ, ಭದ್ರೆ, ನನ್ನ ತಪ್ಪಿಲ್ಲದೇ, ಯಾವ ದೋಷವೂ ಇಲ್ಲದೆ ನನ್ನನ್ನು ವಿನಾಕಾರಣವಾಗಿ ಶಪಿಸಿದ್ದೀಯ. ನನ್ನ ಶಾಪಕ್ಕೂ ನೀನೀಗ ಅರ್ಹಳು. ಕೇಳಿಸಿಕೋ ಯಾವ ಸೌಂದರ್ಯದ ರೂಪವತಿ ಅನ್ನೊ ಅಮಲಲ್ಲಿ ನೀನು ನನ್ನನ್ನು ಶಪಿಸಿದ್ದಿಯೋ. ಆ ಪರಮಸುಂದರಿಯಾದ ನಿನ್ನನ್ನ ರಾಕ್ಷಸನೊಬ್ಬ ಮದುವೆಯಾಗುವಂತಾಗಲಿ ಎಂದು ಗಣಪ ಶಾಪವನ್ನಿಡುತ್ತಾನೆ.

ಹಿಂದೆ ಮುಂದೆ ಯೋಚನೆ ಮಾಡದೇ ಶಾಪವಿಟ್ಟು ಮರಳಿ ಗಣಪನಿಂದ ಶಾಪ ಪಡೆದ ತುಳಸಿ ಒಂದೇ ಕ್ಷಣದಲ್ಲಿ ಕುಸಿದು ಗಣಪನ ಎದುರು ಮಂಡಿಯೂರಿ, ಗಣನಾಥ, ನನ್ನದು ತಪ್ಪಾಗಿದೆ. ದಯವಿಟ್ಟು ಈ ಶಾಪದಿಂದ ನನ್ನನ್ನು ವಿಮೋಚಿಸು ಎಂದು ಗೋಗರೆಯುತ್ತಾಳೆ. ತುಳಸಿಯ ಗೋಳು ಕಂಡು ಕರಗಿದ ಗಣೇಶ, ದೇವಿ ಕೊಟ್ಟ ಶಾಪವನ್ನು ಮರಳಿ ಪಡೆಯಲು ಆಗುವುದಿಲ್ಲ. ಆದರೆ ಅದರ ಪರಿಣಾಮವನ್ನು ಕಡಿಮೆ ಮಾಡುತ್ತೇನೆ. ಭವಿಷ್ಯದಲ್ಲಿ ನೀನು ಪರಮಪವಿತ್ರ ಸಸ್ಯವಾಗಿ ಇಡೀ ಭೂಲೋಕದಲ್ಲಿ ಪೂಜಿಸಲ್ಪಡುವೆ. ಎಲ್ಲ ಶುಭಕಾರ್ಯಗಳಲ್ಲಿಯೂ ನೀನು ಪೂಜಿಸಲ್ಪಡುವೆ. ಆದರೆ ನನ್ನ ಪೂಜೆಗೆ ಮಾತ್ರ ನೀನೆಂದೂ ಮೀಸಲಿರುವುದಿಲ್ಲ. ನನ್ನ ಪೂಜೆಯಲ್ಲಿ ನಿನ್ನನೆಂದೂ ಬಳಸುವುದಿಲ್ಲ. ಇದೇ ನಾನು ನಿನಗೆ ಕೊಡುತ್ತಿರುವ ವರ ಎಂದು ಹೇಳಿ ಆಕೆಯ ಮೇಲಿನ ಶಾಪದ ಪರಿಣಾಮವನ್ನು ಕಡಿಮೆ ಮಾಡುತ್ತಾನೆ ಗಣೇಶ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment