2011ರ ಏಕದಿನ ವಿಶ್ವಕಪ್ನಲ್ಲಿ ಟ್ರೋಫಿ ಜಯಸಿದ್ದ ಟೀಮ್ ಇಂಡಿಯಾ
ಈ ಅವಿಸ್ಮರಣೀಯ ಟೂರ್ನಿ ನಡೆದು 12 ವರ್ಷಗಳೇ ಉರುಳಿವೆ
ಸೆಲೆಕ್ಷನ್ ಮೀಟಿಂಗ್ನಲ್ಲಿ ರೋಹಿತ್ ಶರ್ಮಾ ಬಗ್ಗೆ ನಿರ್ಧಾರ ಏನಾಗಿತ್ತು?
2011ರ ಏಕದಿನ ವಿಶ್ವಕಪ್ನಲ್ಲಿ ಟ್ರೋಫಿ ಜಯಸಿದ ಟೀಮ್ ಇಂಡಿಯಾ, 28 ವರ್ಷಗಳ ಕೊರಗಿಗೆ ಬ್ರೇಕ್ ಹಾಕಿತ್ತು. ಈ ಅವಿಸ್ಮರಣೀಯ ಟೂರ್ನಿ ನಡೆದು 12 ವರ್ಷಗಳೇ ಉರುಳಿವೆ. ಇದೀಗ ತವರಿನಲ್ಲಿ ಮತ್ತೊಮ್ಮೆ ಏಕದಿನ ವಿಶ್ವಕಪ್ ಕಿರೀಟ ಗೆಲ್ಲಲು ಟೀಮ್ ಇಂಡಿಯಾ ಸಜ್ಜಾಗಿದೆ. ಆದ್ರೂ, ಆ ಸಂದರ್ಭದಲ್ಲಿ ಎದುರಾಗಿದ್ದ ಒಂದು ಪ್ರಶ್ನೆಗೆ ಇಂದಿಗೂ ಬಹುತೇಕ ಅಭಿಮಾನಿಗಳಿಗೆ ಉತ್ತರ ಸಿಕ್ಕಿಲ್ಲ.
2011ರ ಏಕದಿನ ವಿಶ್ವಕಪ್ಗೆ ಟೀಮ್ ಅನೌನ್ಸ್ ಆದಾಗ ಎಲ್ಲರಿಗೂ ಶಾಕ್ ಕಾದಿತ್ತು. ತಂಡದಿಂದ ರೋಹಿತ್ ಶರ್ಮಾಗೆ ಕೊಕ್ ಕೊಡಲಾಗಿತ್ತು. ಇದಾದ ಬಳಿಕ ಬಹಿರಂಗವಾಗಿ ರೋಹಿತ್ ಅಸಮಾಧಾನ ಹೊರ ಹಾಕಿದ್ರೆ, ಫ್ಯಾನ್ಸ್ ಅಚ್ಚರಿಗೊಂಡಿದ್ರು. ಇದೀಗ ಅಂದಿನ ಸೆಲೆಕ್ಷನ್ ಕಮಿಟಿ ಸದಸ್ಯ ರಾಜಾ ವೆಂಕಟರಾಮನ್, ಆಯ್ಕೆ ಹಿಂದಿನ ಕಾರಣವನ್ನ ರಿವೀಲ್ ಮಾಡಿದ್ದಾರೆ.
2011ರ ವಿಶ್ವಕಪ್ ಸೆಲೆಕ್ಷನ್ ಮೀಟಿಂಗ್ನಲ್ಲಿ ಟೀಮ್ ಇಂಡಿಯಾದ 15ನೇ ಆಟಗಾರನಾಗಿ ರೋಹಿತ್ ಶರ್ಮಾ ಆಯ್ಕೆಗೆ ಸೆಲೆಕ್ಷನ್ ಪ್ಯಾನಲ್ ಮುಂದಾಗಿತ್ತಂತೆ. ಕೋಚ್ ಗ್ಯಾರಿ ಕರ್ಸ್ಟನ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ರಂತೆ. ಆದ್ರೆ, ಅಂದಿನ ಕ್ಯಾಪ್ಟನ್ ಎಮ್.ಎಸ್ ಧೋನಿ, ರೋಹಿತ್ ಶರ್ಮಾ ಬದಲಿಗೆ ಫಿಯೂಷ್ ಚಾವ್ಲಾ ಬೇಕೆಂದು ಹೇಳಿದ್ರಂತೆ. ಆ ಬಳಿಕ ಕೋಚ್ ಕರ್ಸ್ಟನ್ ಕೂಡ U ಟರ್ನ್ ಹೊಡೆದ್ರಂತೆ. ಕೋಚ್ ಮತ್ತು ಕ್ಯಾಪ್ಟನ್ ಬೇಡಿಕೆಗೆ ಕಟ್ಟಿ ಬಿದ್ದ ಸೆಲೆಕ್ಷನ್ ಕಮಿಟಿ ರೋಹಿತ್ ಶರ್ಮಾರನ್ನ ಬಿಟ್ಟು ಪಿಯೂಶ್ ಚಾವ್ಲಾಗೆ ಮಣೆ ಹಾಕ್ತಂತೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
2011ರ ಏಕದಿನ ವಿಶ್ವಕಪ್ನಲ್ಲಿ ಟ್ರೋಫಿ ಜಯಸಿದ್ದ ಟೀಮ್ ಇಂಡಿಯಾ
ಈ ಅವಿಸ್ಮರಣೀಯ ಟೂರ್ನಿ ನಡೆದು 12 ವರ್ಷಗಳೇ ಉರುಳಿವೆ
ಸೆಲೆಕ್ಷನ್ ಮೀಟಿಂಗ್ನಲ್ಲಿ ರೋಹಿತ್ ಶರ್ಮಾ ಬಗ್ಗೆ ನಿರ್ಧಾರ ಏನಾಗಿತ್ತು?
2011ರ ಏಕದಿನ ವಿಶ್ವಕಪ್ನಲ್ಲಿ ಟ್ರೋಫಿ ಜಯಸಿದ ಟೀಮ್ ಇಂಡಿಯಾ, 28 ವರ್ಷಗಳ ಕೊರಗಿಗೆ ಬ್ರೇಕ್ ಹಾಕಿತ್ತು. ಈ ಅವಿಸ್ಮರಣೀಯ ಟೂರ್ನಿ ನಡೆದು 12 ವರ್ಷಗಳೇ ಉರುಳಿವೆ. ಇದೀಗ ತವರಿನಲ್ಲಿ ಮತ್ತೊಮ್ಮೆ ಏಕದಿನ ವಿಶ್ವಕಪ್ ಕಿರೀಟ ಗೆಲ್ಲಲು ಟೀಮ್ ಇಂಡಿಯಾ ಸಜ್ಜಾಗಿದೆ. ಆದ್ರೂ, ಆ ಸಂದರ್ಭದಲ್ಲಿ ಎದುರಾಗಿದ್ದ ಒಂದು ಪ್ರಶ್ನೆಗೆ ಇಂದಿಗೂ ಬಹುತೇಕ ಅಭಿಮಾನಿಗಳಿಗೆ ಉತ್ತರ ಸಿಕ್ಕಿಲ್ಲ.
2011ರ ಏಕದಿನ ವಿಶ್ವಕಪ್ಗೆ ಟೀಮ್ ಅನೌನ್ಸ್ ಆದಾಗ ಎಲ್ಲರಿಗೂ ಶಾಕ್ ಕಾದಿತ್ತು. ತಂಡದಿಂದ ರೋಹಿತ್ ಶರ್ಮಾಗೆ ಕೊಕ್ ಕೊಡಲಾಗಿತ್ತು. ಇದಾದ ಬಳಿಕ ಬಹಿರಂಗವಾಗಿ ರೋಹಿತ್ ಅಸಮಾಧಾನ ಹೊರ ಹಾಕಿದ್ರೆ, ಫ್ಯಾನ್ಸ್ ಅಚ್ಚರಿಗೊಂಡಿದ್ರು. ಇದೀಗ ಅಂದಿನ ಸೆಲೆಕ್ಷನ್ ಕಮಿಟಿ ಸದಸ್ಯ ರಾಜಾ ವೆಂಕಟರಾಮನ್, ಆಯ್ಕೆ ಹಿಂದಿನ ಕಾರಣವನ್ನ ರಿವೀಲ್ ಮಾಡಿದ್ದಾರೆ.
2011ರ ವಿಶ್ವಕಪ್ ಸೆಲೆಕ್ಷನ್ ಮೀಟಿಂಗ್ನಲ್ಲಿ ಟೀಮ್ ಇಂಡಿಯಾದ 15ನೇ ಆಟಗಾರನಾಗಿ ರೋಹಿತ್ ಶರ್ಮಾ ಆಯ್ಕೆಗೆ ಸೆಲೆಕ್ಷನ್ ಪ್ಯಾನಲ್ ಮುಂದಾಗಿತ್ತಂತೆ. ಕೋಚ್ ಗ್ಯಾರಿ ಕರ್ಸ್ಟನ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ರಂತೆ. ಆದ್ರೆ, ಅಂದಿನ ಕ್ಯಾಪ್ಟನ್ ಎಮ್.ಎಸ್ ಧೋನಿ, ರೋಹಿತ್ ಶರ್ಮಾ ಬದಲಿಗೆ ಫಿಯೂಷ್ ಚಾವ್ಲಾ ಬೇಕೆಂದು ಹೇಳಿದ್ರಂತೆ. ಆ ಬಳಿಕ ಕೋಚ್ ಕರ್ಸ್ಟನ್ ಕೂಡ U ಟರ್ನ್ ಹೊಡೆದ್ರಂತೆ. ಕೋಚ್ ಮತ್ತು ಕ್ಯಾಪ್ಟನ್ ಬೇಡಿಕೆಗೆ ಕಟ್ಟಿ ಬಿದ್ದ ಸೆಲೆಕ್ಷನ್ ಕಮಿಟಿ ರೋಹಿತ್ ಶರ್ಮಾರನ್ನ ಬಿಟ್ಟು ಪಿಯೂಶ್ ಚಾವ್ಲಾಗೆ ಮಣೆ ಹಾಕ್ತಂತೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ