ವರದಕ್ಷಿಣೆಗಾಗಿ ಪರಿಪರಿಯಾಗಿ ಪತಿ ಪೀಡಿಸಿರೋ ಆರೋಪ
ಪತಿಯ ಕಿರುಕುಳ ತಾಳಲಾರದೆ ಅಪ್ರಾಪ್ತೆ ನೇಣಿಗೆ ಶರಣು..!
ಕುಟುಂಬದ 5 ಸದಸ್ಯರ ಮೇಲೆ ಕೇಸ್, ಮೂವರ ಬಂಧನ
ಬೆಂಗಳೂರು : ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೆ ಹೆಂಡತಿ ನೇಣು ಬಿಗಿದುಕೊಂಡು ಅಸುನೀಗಿದ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ.
ಬಾಗಣ್ಣ ಎಂಬುವವನು ಕಳೆದ 8 ತಿಂಗಳ ಹಿಂದೆ 17 ವರ್ಷದ ಅಪ್ರಾಪ್ತೆಯನ್ನು ಮದುವೆಯಾಗಿದ್ದ. ಆಕೆಯನ್ನು ಮೊದಲು ದೈಹಿಕವಾಗಿ ಬಳಸಿಕೊಂಡು ನಂತರ ವರದಕ್ಷಿಣೆಗಾಗಿ ಕಿರುಕುಳ ನೀಡಲು ಆರಂಭಿಸಿದ ಎಂದು ಅಪ್ತಾಪ್ತೆ ತಾಯಿ ಸವಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದ ಐವರು ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಾಯುವ ಮುನ್ನ ಬ್ರಿಡ್ಜ್ ಮೇಲೆ ನಿಂತು ಪ್ರೇಮಿಗಳ ಕಿತ್ತಾಟ; ನದಿಗೆ ಹಾರಿದ್ದ ಇಬ್ಬರ ಮಧ್ಯೆ ನಡೆದದ್ದೇನು?
ಕೇಸ್ನಲ್ಲಿ ಅಪ್ರಾಪ್ತೆ ಪತಿ ಎನ್ನಲಾದ ಬಾಗಣ್ಣ, ಆತನ ತಂದೆ ಗುಂಡಣ್ಣ ಮತ್ತು ತಮ್ಮ ಮಲ್ಲು ಸೇರಿ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾಗಣ್ಣನ ತಾಯಿ ಇಸಾಬಾಯಿ ಹಾಗೂ ಅಕ್ಕ ಗುರುಬಾಯಿ ಸದ್ಯ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಆರಂಭವಾಗಿದೆ. 8 ತಿಂಗಳ ಹಿಂದೆ ಮೃತ ಬಾಲಕಿ ಹಾಗೂ ಬಾಗಣ್ಣರ ಮದುವೆ ಬಿಜಾಪುರದ ಸಿಂಧಗಿಯಲ್ಲಿ ನೇರವೇರಿತ್ತು. ಮದುವೆ ವೇಳೆ 20 ಗ್ರಾಂ ಚಿನ್ನಾಭರಣ ಹಾಗೂ 40 ಸಾವಿರ ರೂಪಾಯಿ ನಗದನ್ನು ವರದಕ್ಷಿಣೆ ರೂಪದಲ್ಲಿ ಬಾಗಣ್ಣ ಮತ್ತು ಕುಟುಂಬ ಪಡೆದಿತ್ತು ಎಂದು ತಿಳಿದು ಬಂದಿದೆ.
ಇತ್ತೀಚೆಗೆ 5 ಲಕ್ಷ ರೂಪಾಯಿ ಮತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರಂತೆ. ಈ ಕಿರುಕುಳ ತಾಳಲಾರದೆ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತೆಯನ್ನು ಮದುವೆಯಾಗಿರೋ ಆರೋಪದಡಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವರದಕ್ಷಿಣೆಗಾಗಿ ಪರಿಪರಿಯಾಗಿ ಪತಿ ಪೀಡಿಸಿರೋ ಆರೋಪ
ಪತಿಯ ಕಿರುಕುಳ ತಾಳಲಾರದೆ ಅಪ್ರಾಪ್ತೆ ನೇಣಿಗೆ ಶರಣು..!
ಕುಟುಂಬದ 5 ಸದಸ್ಯರ ಮೇಲೆ ಕೇಸ್, ಮೂವರ ಬಂಧನ
ಬೆಂಗಳೂರು : ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೆ ಹೆಂಡತಿ ನೇಣು ಬಿಗಿದುಕೊಂಡು ಅಸುನೀಗಿದ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ.
ಬಾಗಣ್ಣ ಎಂಬುವವನು ಕಳೆದ 8 ತಿಂಗಳ ಹಿಂದೆ 17 ವರ್ಷದ ಅಪ್ರಾಪ್ತೆಯನ್ನು ಮದುವೆಯಾಗಿದ್ದ. ಆಕೆಯನ್ನು ಮೊದಲು ದೈಹಿಕವಾಗಿ ಬಳಸಿಕೊಂಡು ನಂತರ ವರದಕ್ಷಿಣೆಗಾಗಿ ಕಿರುಕುಳ ನೀಡಲು ಆರಂಭಿಸಿದ ಎಂದು ಅಪ್ತಾಪ್ತೆ ತಾಯಿ ಸವಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದ ಐವರು ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಾಯುವ ಮುನ್ನ ಬ್ರಿಡ್ಜ್ ಮೇಲೆ ನಿಂತು ಪ್ರೇಮಿಗಳ ಕಿತ್ತಾಟ; ನದಿಗೆ ಹಾರಿದ್ದ ಇಬ್ಬರ ಮಧ್ಯೆ ನಡೆದದ್ದೇನು?
ಕೇಸ್ನಲ್ಲಿ ಅಪ್ರಾಪ್ತೆ ಪತಿ ಎನ್ನಲಾದ ಬಾಗಣ್ಣ, ಆತನ ತಂದೆ ಗುಂಡಣ್ಣ ಮತ್ತು ತಮ್ಮ ಮಲ್ಲು ಸೇರಿ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಾಗಣ್ಣನ ತಾಯಿ ಇಸಾಬಾಯಿ ಹಾಗೂ ಅಕ್ಕ ಗುರುಬಾಯಿ ಸದ್ಯ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಆರಂಭವಾಗಿದೆ. 8 ತಿಂಗಳ ಹಿಂದೆ ಮೃತ ಬಾಲಕಿ ಹಾಗೂ ಬಾಗಣ್ಣರ ಮದುವೆ ಬಿಜಾಪುರದ ಸಿಂಧಗಿಯಲ್ಲಿ ನೇರವೇರಿತ್ತು. ಮದುವೆ ವೇಳೆ 20 ಗ್ರಾಂ ಚಿನ್ನಾಭರಣ ಹಾಗೂ 40 ಸಾವಿರ ರೂಪಾಯಿ ನಗದನ್ನು ವರದಕ್ಷಿಣೆ ರೂಪದಲ್ಲಿ ಬಾಗಣ್ಣ ಮತ್ತು ಕುಟುಂಬ ಪಡೆದಿತ್ತು ಎಂದು ತಿಳಿದು ಬಂದಿದೆ.
ಇತ್ತೀಚೆಗೆ 5 ಲಕ್ಷ ರೂಪಾಯಿ ಮತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರಂತೆ. ಈ ಕಿರುಕುಳ ತಾಳಲಾರದೆ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತೆಯನ್ನು ಮದುವೆಯಾಗಿರೋ ಆರೋಪದಡಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ