/newsfirstlive-kannada/media/post_attachments/wp-content/uploads/2024/08/willson-Garden-Naga.jpg)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ರಾಜಾತಿಥ್ಯ ವಿಚಾರಕ್ಕೆ ಮತ್ತೆ ಹೆಡ್​ಲೈನ್ ಆಗ್ತಿದ್ದಾರೆ. ರೌಡಿ ಶೀಟರ್ಸ್​ ವಿಲ್ಸನ್ ಗಾರ್ಡನ್ ನಾಗ ಜೊತೆಗೆ ದರ್ಶನ್ ಇರುವ ಫೋಟೋ ವೈರಲ್ ಬೆನ್ನಲ್ಲೇ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಅಂದ್ಹಾಗೆ ಜೈಲಿನಲ್ಲಿ ದರ್ಶನ್ ಮತ್ತು ವಿಲ್ಸನ್​ ಗಾರ್ಡನ್ ನಾಗ ಕುಚಿಕುಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನ ಸೆಕ್ಯೂರಿಟಿ ಮೂರರಲ್ಲಿ ದರ್ಶನ್ ಇದ್ದಾರೆ. ಸೆಕ್ಯೂರಿಟಿ 1ರಲ್ಲಿರೋ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಇದ್ದಾನೆ. ವಿಸಿಟರ್ ಭೇಟಿಗೆ 3ನೇ ಬ್ಯಾರಕ್​ನಿಂದ ದರ್ಶನ್ ಹೊರ ಬರುತ್ತಿದ್ದರು. ವಿಸಿಟರ್​ಗಳನ್ನ ಭೇಟಿಯಾದ ಮೇಲೆ ದರ್ಶನ್ ನೇರವಾಗಿ ನಾಗನನ್ನ ಭೇಟಿಯಾಗುತ್ತಿದ್ದಾರೆ ಎನ್ನಲಾಗಿದೆ.
ಗಜ​-ನಾಗ ದೋಸ್ತಿ!
ವಿಲ್ಸನ್ ಗಾರ್ಡನ್ ನಾಗ ಇರುವ ಕಡೆ ದರ್ಶನ್, ಅಧಿಕಾರಿಗಳ ಕಣ್ತಪ್ಪಿಸಿ ದರ್ಶನ್ ಭೇಟಿಯಾಗುತ್ತಿದ್ದಾರೆ. ಅಧಿಕಾರಿಗಳು ಹೀಗೆ ಭೇಟಿ ಮಾಡಬಾರದು, ಇರಬಾರದು ಅಂತಾ ದರ್ಶನ್​​ಗೆ ಹೇಳಿದ್ದಾರೆ. ಅದಕ್ಕೆ ಒಂದೆರಡು ನಿಮಿಷ ತಡೀರಿ ಎಂದು ನಾಗ ಹೇಳ್ತಾನೆ. ಅಧಿಕಾರಿಗಳು ಹೇಳಿದ್ರೂ ದರ್ಶನ್ ತನ್ನ ಸೆಕ್ಯೂರಿಟಿಗೆ ಹೋಗ್ತಿರಲಿಲ್ಲ. ಆಗಾಗ ಹುಡುಗರಿಗೆ ಹೇಳಿ ದರ್ಶನ್​ನ್ನ ವಿಲ್ಸನ್ ಗಾರ್ಡನ್ ನಾಗ ಕರೆಸಿಕೊಳ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಜೈಲಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದ ದರ್ಶನ್.. ಇನ್ಮೇಲೆ ಏನೇನು ಆಗುತ್ತೆ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us