/newsfirstlive-kannada/media/post_attachments/wp-content/uploads/2024/08/willson-Garden-Naga.jpg)
ಬೆಂಗಳೂರು​: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಪೋಟೋಗಳು ವೈರಲ್ ಆದ ಹಿನ್ನಲೆ ವಿಲ್ಸನ್ ಗಾರ್ಡನ್ ನಾಗ ಕೆರಳಿ ಕೆಂಡವಾಗಿದ್ದಾನೆ ಎಂಬ ಸಂಗತಿಯೊಂದು ಹೊರಬಿದ್ದಿದೆ. ಫೋಟೋ ವೈರಲ್​ ಮಾಡಿದ್ದ ರೌಡಿ ವೇಲುಗೆ ರಾತ್ರಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.
ರೌಡಿ ವೇಲುಗೆ ಪೋಟೊ ವೈರಲ್ ಮಾಡಿರೋದು ನೀನೆ ಎಂದು ವಿಲ್ಸನ್ ಗಾರ್ಡನ್ ನಾಗ ಹೊಡೆದಿದ್ದಾನಂತೆ. ದರ್ಶನ್​ ಜೊತೆಗೆ ಕುಳಿತು ಹರಟೆ ಹೊಡೆಯುತ್ತಿರುವ ಫೋಟೋ ಮಾಧ್ಯಮದಲ್ಲಿ ಬಿತ್ತರವಾಗುತ್ತಿರುವ ಸುದ್ದಿ ತಿಳಿದು ಥಳಿಸಿದ್ದಾನಂತೆ.
/newsfirstlive-kannada/media/post_attachments/wp-content/uploads/2024/08/darshan-2.jpg)
ರೌಡಿ ವೇಲು ಸಿದ್ದಾಪುರ ಮಹೇಶನ ಕೊಲೆ ಕೇಸಲ್ಲಿ ಜೈಲು ಸೇರಿದ್ದನು. ದರ್ಶನ್​​, ನಾಗ, ಕುಳ್ಳ ಸೀನ ಮತ್ತು ಮ್ಯಾನೇಜರ್​ ನಾಗರಾಜು ಜೈಲಿನಲ್ಲಿ ಕುಳಿತು ಆರಾಮಾಗಿ ಹರಟೆ ಹೊಡೆಯುವ ದೃಶ್ಯವನ್ನು ಮೊಬೈಲ್​ನಲ್ಲಿ ಫೋಟೋ ಕ್ಲಿಕ್ಕಿಸಿದ್ದನು. ಈ ವೇಳೆ ದರ್ಶನ್​ ಕೈಯಲ್ಲಿ ಟೀ ಕಪ್​ ಮತ್ತು ಸಿಗರೇಟು ಕಾಣಿಸಿದೆ. ಇದೇ ಫೋಟೋ ಮಾಧ್ಯಮಗಳಿಗೆ ಸಿಕ್ಕಿದೆ.
ವೈರಲ್​ ಆದ ಫೋಟೋ ವಿಚಾರವಾಗಿ ವಿಲ್ಸನ್​​ ಗಾರ್ಡನ್​ ನಾಗ ಸೇರಿ ಹತ್ತು ಜನರಿಂದ ವೇಲು ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ನ್ಯೂಸ್ ಫಸ್ಟ್​ಗೆ ಈ ಕುರಿತು ಜೈಲಿನ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us