ಕೆಲಸ ಬಿಟ್ಟು ಮನೆಯಲ್ಲಿ ಇದ್ದಿದ್ದಕ್ಕೆ, ನಮ್ಮ ಅಣ್ಣ ಕೆಲಸ ಕೊಡಿಸಿದ್ದನು
ನಾನು ಹೋಗುವುದರಲ್ಲಿ ಮನೆಯ ಒಳಗೆ ಅಳಿಯ ಮಾತ್ರ ಇದ್ದನು
ಅಳಿಯ ಏನೇನು ಮಾಡಿದ್ದನೆಂದು ಎಳೆ ಎಳೆಯಾಗಿ ಬಿಚ್ಚಿಟ್ಟ ಮಾವ
ಬೆಂಗಳೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಹೆಂಡತಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ತಂದೆ ಶ್ರೀನಿವಾಸಮೂರ್ತಿ ಮಾತನಾಡಿ.. ನನ್ನ ಮಗಳು ಮಾನಸ ಹಾಗೂ ದಿಲೀಪ್ಗೆ ಮದುವೆಯಾಗಿ 6 ವರ್ಷಗಳು ಕಳೆದಿವೆ. ಇವರಿಗೆ 5 ವರ್ಷದ ಹೆಣ್ಣು ಮಗು ಇದೆ. ಅಳಿಯ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ ನಮ್ಮ ಅಣ್ಣ ಅವನಿಗೆ ಕೆಲಸ ಕೊಡಿಸಿದ್ದ. ಎಲ್ಲಾ ಇದ್ದರು ಸಾಕಷ್ಟು ಸಾಲ ಮಾಡಿಕೊಂಡು ಮಹಿಳೆ ಒಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇದಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಕ್ರಮ ಸಂಬಂಧ ಇಟ್ಟುಕೊಂಡ ಮಹಿಳೆ ಹಣಕ್ಕಾಗಿ ಮಗಳನ್ನ ಕಾಡೋಕೆ ಶುರು ಮಾಡಿದಳು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಂಡನ ರಾಸಲೀಲೆ ಬಗ್ಗೆ ದೂರುತ್ತಲೇ ಪ್ರಾಣಬಿಟ್ಟ ಪತ್ನಿ.. ಅಮ್ಮನ ಕಳೆದುಕೊಂಡು ಬಡವಾದ 5 ವರ್ಷದ ಕಂದಮ್ಮ..
ಗಂಡ ಊರು ತುಂಬಾ ಸಾಲ ಮಾಡಿಕೊಂಡಿದ್ದ. ನಿಮ್ಮಪ್ಪನ ಹತ್ತಿರ ಹಣ ಇಸ್ಕೊಂಡು ಎಲ್ಲ ಸೆಟಲ್ ಮಾಡೋಣ ಎಂದು ಕಿರುಕುಳ ನೀಡುತಿದ್ದನಂತೆ. ಈ ಬಗ್ಗೆ ಮಗಳು ಮೊದಲೇ ನನ್ನ ಬಳಿ ಹೇಳಿದ್ದಳು. ಹೀಗಾಗಿಯೇ ನೀನು ಇಲ್ಲೇ ನಮ್ಮ ಮನೆಯಲ್ಲಿರು ಎಂದು ಹೇಳಿದ್ದೆ. ಆದರೆ ಮರ್ಯಾದೆಗೆ ಅಂಜಿ ಗಂಡ ಬಿಟ್ಟವಳು ಅಂತಾರೆಂದು ಏನೇ ಆದರೂ ಗಂಡನ ಮನೆಯಲ್ಲಿ ಇರುತ್ತೇನೆ ಎಂದಿದ್ದಳು ಅಂತಾ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಡಿವೈಡರ್ ದಾಟಿ ಬಸ್ಗೆ ಭೀಕರವಾಗಿ ಕಾರು ಡಿಕ್ಕಿ.. ಸ್ಥಳದಲ್ಲೇ ಸಾಫ್ಟ್ವೇರ್ ಉದ್ಯೋಗಿಗಳು ಸಾವು
ಹೀಗಾಗಿ ಗಂಡ- ಹೆಂಡತಿ ನಡುವೆ ಗಲಾಟೆ ಆಗುತ್ತಿತ್ತು. ಇದರಿಂದ ಬೇಸತ್ತು ಗಂಡನ ಮನೆಯಲ್ಲಿಯೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾನು ಹೋಗುವುದರ ಒಳಗೆ ಗಂಡ ಮನೆಯಲ್ಲಿದ್ದ, ಫ್ಯಾನ್ಗೆ ಮಗಳು ನೇತಾಡುತ್ತಿದ್ದಳು. ನಾನೇ ಮಗಳನ್ನು ಇಳಿಸಿ ಕೈ, ಕಾಲು ಉಜ್ಜಿ ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ ಅಷ್ಟೋತ್ತಿಗೆ ಮಗಳು ಸಾವನ್ನಪ್ಪಿದ್ದಳು ಎಂದು ತಂದೆ ಗಳ ಗಳ ಕಣ್ಣೀರು ಹಾಕಿದ್ದಾರೆ. ಬ್ಯಾಡರಹಳ್ಳಿಯ ಅಂದ್ರಹಳ್ಳಿ ನಿವಾಸದಲ್ಲಿ ಮಾನಸ ತನ್ನ ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೆಲಸ ಬಿಟ್ಟು ಮನೆಯಲ್ಲಿ ಇದ್ದಿದ್ದಕ್ಕೆ, ನಮ್ಮ ಅಣ್ಣ ಕೆಲಸ ಕೊಡಿಸಿದ್ದನು
ನಾನು ಹೋಗುವುದರಲ್ಲಿ ಮನೆಯ ಒಳಗೆ ಅಳಿಯ ಮಾತ್ರ ಇದ್ದನು
ಅಳಿಯ ಏನೇನು ಮಾಡಿದ್ದನೆಂದು ಎಳೆ ಎಳೆಯಾಗಿ ಬಿಚ್ಚಿಟ್ಟ ಮಾವ
ಬೆಂಗಳೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಹೆಂಡತಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ತಂದೆ ಶ್ರೀನಿವಾಸಮೂರ್ತಿ ಮಾತನಾಡಿ.. ನನ್ನ ಮಗಳು ಮಾನಸ ಹಾಗೂ ದಿಲೀಪ್ಗೆ ಮದುವೆಯಾಗಿ 6 ವರ್ಷಗಳು ಕಳೆದಿವೆ. ಇವರಿಗೆ 5 ವರ್ಷದ ಹೆಣ್ಣು ಮಗು ಇದೆ. ಅಳಿಯ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ ನಮ್ಮ ಅಣ್ಣ ಅವನಿಗೆ ಕೆಲಸ ಕೊಡಿಸಿದ್ದ. ಎಲ್ಲಾ ಇದ್ದರು ಸಾಕಷ್ಟು ಸಾಲ ಮಾಡಿಕೊಂಡು ಮಹಿಳೆ ಒಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇದಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಕ್ರಮ ಸಂಬಂಧ ಇಟ್ಟುಕೊಂಡ ಮಹಿಳೆ ಹಣಕ್ಕಾಗಿ ಮಗಳನ್ನ ಕಾಡೋಕೆ ಶುರು ಮಾಡಿದಳು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಂಡನ ರಾಸಲೀಲೆ ಬಗ್ಗೆ ದೂರುತ್ತಲೇ ಪ್ರಾಣಬಿಟ್ಟ ಪತ್ನಿ.. ಅಮ್ಮನ ಕಳೆದುಕೊಂಡು ಬಡವಾದ 5 ವರ್ಷದ ಕಂದಮ್ಮ..
ಗಂಡ ಊರು ತುಂಬಾ ಸಾಲ ಮಾಡಿಕೊಂಡಿದ್ದ. ನಿಮ್ಮಪ್ಪನ ಹತ್ತಿರ ಹಣ ಇಸ್ಕೊಂಡು ಎಲ್ಲ ಸೆಟಲ್ ಮಾಡೋಣ ಎಂದು ಕಿರುಕುಳ ನೀಡುತಿದ್ದನಂತೆ. ಈ ಬಗ್ಗೆ ಮಗಳು ಮೊದಲೇ ನನ್ನ ಬಳಿ ಹೇಳಿದ್ದಳು. ಹೀಗಾಗಿಯೇ ನೀನು ಇಲ್ಲೇ ನಮ್ಮ ಮನೆಯಲ್ಲಿರು ಎಂದು ಹೇಳಿದ್ದೆ. ಆದರೆ ಮರ್ಯಾದೆಗೆ ಅಂಜಿ ಗಂಡ ಬಿಟ್ಟವಳು ಅಂತಾರೆಂದು ಏನೇ ಆದರೂ ಗಂಡನ ಮನೆಯಲ್ಲಿ ಇರುತ್ತೇನೆ ಎಂದಿದ್ದಳು ಅಂತಾ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಡಿವೈಡರ್ ದಾಟಿ ಬಸ್ಗೆ ಭೀಕರವಾಗಿ ಕಾರು ಡಿಕ್ಕಿ.. ಸ್ಥಳದಲ್ಲೇ ಸಾಫ್ಟ್ವೇರ್ ಉದ್ಯೋಗಿಗಳು ಸಾವು
ಹೀಗಾಗಿ ಗಂಡ- ಹೆಂಡತಿ ನಡುವೆ ಗಲಾಟೆ ಆಗುತ್ತಿತ್ತು. ಇದರಿಂದ ಬೇಸತ್ತು ಗಂಡನ ಮನೆಯಲ್ಲಿಯೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾನು ಹೋಗುವುದರ ಒಳಗೆ ಗಂಡ ಮನೆಯಲ್ಲಿದ್ದ, ಫ್ಯಾನ್ಗೆ ಮಗಳು ನೇತಾಡುತ್ತಿದ್ದಳು. ನಾನೇ ಮಗಳನ್ನು ಇಳಿಸಿ ಕೈ, ಕಾಲು ಉಜ್ಜಿ ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ ಅಷ್ಟೋತ್ತಿಗೆ ಮಗಳು ಸಾವನ್ನಪ್ಪಿದ್ದಳು ಎಂದು ತಂದೆ ಗಳ ಗಳ ಕಣ್ಣೀರು ಹಾಕಿದ್ದಾರೆ. ಬ್ಯಾಡರಹಳ್ಳಿಯ ಅಂದ್ರಹಳ್ಳಿ ನಿವಾಸದಲ್ಲಿ ಮಾನಸ ತನ್ನ ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ