ವೈದ್ಯರ ಸಲಹೆಯಂತೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದ ಮಹಿಳೆ ಸಾವು
5 ವರ್ಷದ ಮಗುವಿನ ತಾಯಿ, ಎರಡನೇ ಮಗುವಿನ ಆಸೆಯಲ್ಲಿದ್ದಳು
ಮೃತ ಮಹಿಳೆ ಕುಟುಂಬಸ್ಥರಿಂದ ಆಸ್ಪತ್ರೆ ವಿರುದ್ಧ ದೂರು ದಾಖಲು
ಬೆಂಗಳೂರು: ಐದು ವರ್ಷದ ಮಗುವಿನ ತಾಯಿ. ಎರಡನೇ ಮಗುವಿನ ಆಸೆಯಲ್ಲಿದ್ದಳು. ಆದರೆ ಗರ್ಭಕೋಶದಲ್ಲಿದ್ದ ಗುಳ್ಳೆ ಅಡ್ಡಿಯಾಗಿತ್ತು. ವೈದ್ಯರ ಸಲಹೆಯಂತೆ ಚಿಕಿತ್ಸೆಗೆಂದು ನಗರದ ಪ್ರತಿಷ್ಠಿತ ಆಸ್ಪತ್ರೆಗೆ ಹೋಗಿದ್ದಳು. ಆದ್ರೆ ಹೀಗೆ ಹೋದವಳು ವಾಪಸ್ಸಾಗಿದ್ದು ಮಾತ್ರ ಶವವಾಗಿ.
ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್.. ಭೀಕರ ಅಪಘಾತದಲ್ಲಿ ಮೂವರು ಕುಚಿಕು ಗೆಳೆಯರು ಸಾವು; ಆಗಿದ್ದೇನು?
ನನ್ನ ತಂಗಿಗೆ ಏನು ಸಮಸ್ಯೆ ಇರಲಿಲ್ಲ. ಆರಾಮಾಗೆ ನಡ್ಕೊಂಡ್ ಬಂದಳು. ಆದ್ರೆ ವಾಪಸ್ ಬರಲೇ ಇಲ್ಲ. ಇಂಥದೊಂದು ಗಂಭೀರ ಆರೋಪ ಮಾಡ್ತಿರೋದು ತಂಗಿಯನ್ನು ಕಳೆದುಕೊಂಡ ಅಣ್ಣ. ಸಾಲು ಸಾಲು ಆರೋಪ ಕೇಳಿ ಬರ್ತಿರೋದು ಯಶವಂತರಪುರದ ತುಳಸಿ ಜೈನ್ ಆಸ್ಪತ್ರೆಯ ಮೇಲೆ.
7 ವರ್ಷಗಳ ಹಿಂದೆ ಮದುವೆಯಾಗಿದ್ದ ದಿವ್ಯಾಗೆ 5 ವರ್ಷದ ಮಗು ಕೂಡ ಇದೆ. ಸದ್ಯ ಎರಡನೇ ಮಗುವಿಗಾಗಿ ಯೋಚಿಸಿದ್ದರು. ಈ ವೇಳೆ ವೈದ್ಯರ ಬಳಿ ಚೆಕ್ ಮಾಡಿಸಿದಾಗ ಗರ್ಭಕೋಶದಲ್ಲಿ ಗುಳ್ಳೆ ಇರೋದು ಪತ್ತೆಯಾಗಿತ್ತು. ಹೀಗಾಗಿ ಮುದ್ರಾ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ, ಆಚಾರ್ಯ ತುಳಸಿ ಜೈನ್ ಆಸ್ಪತ್ರೆಗೆ ದಿವ್ಯಾ ಬಂದಿದ್ದರು. ಆಪರೇಷನ್ ಮಾಡ್ಬೇಕಂತ ವೈದ್ಯರು ಹೇಳಿದ್ರು.
ಆಪರೇಷನ್ ಮುನ್ನ ಇಸಿಜಿ ಸೇರಿದಂತೆ ಎಲ್ಲಾ ಟೆಸ್ಟ್ನಲ್ಲೂ ನಾರ್ಮಲ್ ಅಂತಾನೆ ಬಂದಿತ್ತು. ಹೀಗಿದ್ರೂ ಚಿಕ್ಕ ಆಪರೇಷನ್ ಅಷ್ಟೇ ಅಂತ ಆಪರೇಷನ್ ಥಿಯೇಟರ್ಗೆ ಹೋದ ಕೆಲ ನಿಮಿಷದಲ್ಲಿಯೇ ಮೂಗಿನಲ್ಲಿ ರಕ್ತ, ಬಾಯಲ್ಲಿ ನೊರೆ ಬಂದು ಕೆಲವೇ ನಿಮಿಷದಲ್ಲಿ ದಿವ್ಯಾ ಮೃತಪಟ್ಟಿದ್ದಾರೆ. ಹೀಗಾಗಿ ದಿವ್ಯಾ ಕುಟುಂಬಸ್ಥರು ಕಾನೂನು ಸಮರ ಸಾರಿದ್ದಾರೆ. ಈ ಘಟನೆಯ ಬಗ್ಗೆ ತುಳಸಿ ಜೈನ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ.. ಕ್ಷಣದಲ್ಲೇ ಸಾವು; ವೈದ್ಯರ ವಿರುದ್ಧ ಆರೋಪ
ದಿವ್ಯಾರಿಗೆ ಹಿಸ್ಟರೊಸ್ಕೋಪಿಕ್ ಪಾಲಿಪೆಕ್ಟಮಿ ಆರೋಗ್ಯ ಸಮಸ್ಯೆ ಇತ್ತು. ನಿನ್ನೆ ಮಧ್ಯಾಹ್ನ ನಮ್ಮ ಆಸ್ಪತ್ರೆಗೆ ಬಂದಿದ್ದಾರೆ. ಆಪರೇಷನ್ ಮಾಡುವಾಗ ಬಿ.ಪಿ ಡೌನ್ಆಗಿದೆ. ನಂತರ ಕಾರ್ಡಿಯಾಕ್ ಅಟ್ಯಾಕ್ ಆಗಿದೆ. ಕೂಡಲೇ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸ ಮಾಡಿದೆವು. ಬಟ್ ಇದಾದ್ಮೇಲೆ ದಿವ್ಯಾ ಮೃತಪಟ್ಟಿದ್ದಾರೆ.
– ತುಳಸಿ ಜೈನ್ ಆಸ್ಪತ್ರೆ ವೈದ್ಯ
ಮೃತ ದಿವ್ಯಾ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದಾರೆ. ಅದೇನೆ ಇರಲಿ, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ದಿವ್ಯಾ ಇದ್ದ ಐದು ವರ್ಷದ ಪುಟ್ಟ ಕಂದಮ್ಮನನ್ನ ಹಾಗೂ ಕುಟುಂಬವನ್ನು ಅಗಲಿದ್ದು ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವೈದ್ಯರ ಸಲಹೆಯಂತೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದ ಮಹಿಳೆ ಸಾವು
5 ವರ್ಷದ ಮಗುವಿನ ತಾಯಿ, ಎರಡನೇ ಮಗುವಿನ ಆಸೆಯಲ್ಲಿದ್ದಳು
ಮೃತ ಮಹಿಳೆ ಕುಟುಂಬಸ್ಥರಿಂದ ಆಸ್ಪತ್ರೆ ವಿರುದ್ಧ ದೂರು ದಾಖಲು
ಬೆಂಗಳೂರು: ಐದು ವರ್ಷದ ಮಗುವಿನ ತಾಯಿ. ಎರಡನೇ ಮಗುವಿನ ಆಸೆಯಲ್ಲಿದ್ದಳು. ಆದರೆ ಗರ್ಭಕೋಶದಲ್ಲಿದ್ದ ಗುಳ್ಳೆ ಅಡ್ಡಿಯಾಗಿತ್ತು. ವೈದ್ಯರ ಸಲಹೆಯಂತೆ ಚಿಕಿತ್ಸೆಗೆಂದು ನಗರದ ಪ್ರತಿಷ್ಠಿತ ಆಸ್ಪತ್ರೆಗೆ ಹೋಗಿದ್ದಳು. ಆದ್ರೆ ಹೀಗೆ ಹೋದವಳು ವಾಪಸ್ಸಾಗಿದ್ದು ಮಾತ್ರ ಶವವಾಗಿ.
ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಡೆಡ್ಲಿ ಆ್ಯಕ್ಸಿಡೆಂಟ್.. ಭೀಕರ ಅಪಘಾತದಲ್ಲಿ ಮೂವರು ಕುಚಿಕು ಗೆಳೆಯರು ಸಾವು; ಆಗಿದ್ದೇನು?
ನನ್ನ ತಂಗಿಗೆ ಏನು ಸಮಸ್ಯೆ ಇರಲಿಲ್ಲ. ಆರಾಮಾಗೆ ನಡ್ಕೊಂಡ್ ಬಂದಳು. ಆದ್ರೆ ವಾಪಸ್ ಬರಲೇ ಇಲ್ಲ. ಇಂಥದೊಂದು ಗಂಭೀರ ಆರೋಪ ಮಾಡ್ತಿರೋದು ತಂಗಿಯನ್ನು ಕಳೆದುಕೊಂಡ ಅಣ್ಣ. ಸಾಲು ಸಾಲು ಆರೋಪ ಕೇಳಿ ಬರ್ತಿರೋದು ಯಶವಂತರಪುರದ ತುಳಸಿ ಜೈನ್ ಆಸ್ಪತ್ರೆಯ ಮೇಲೆ.
7 ವರ್ಷಗಳ ಹಿಂದೆ ಮದುವೆಯಾಗಿದ್ದ ದಿವ್ಯಾಗೆ 5 ವರ್ಷದ ಮಗು ಕೂಡ ಇದೆ. ಸದ್ಯ ಎರಡನೇ ಮಗುವಿಗಾಗಿ ಯೋಚಿಸಿದ್ದರು. ಈ ವೇಳೆ ವೈದ್ಯರ ಬಳಿ ಚೆಕ್ ಮಾಡಿಸಿದಾಗ ಗರ್ಭಕೋಶದಲ್ಲಿ ಗುಳ್ಳೆ ಇರೋದು ಪತ್ತೆಯಾಗಿತ್ತು. ಹೀಗಾಗಿ ಮುದ್ರಾ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ, ಆಚಾರ್ಯ ತುಳಸಿ ಜೈನ್ ಆಸ್ಪತ್ರೆಗೆ ದಿವ್ಯಾ ಬಂದಿದ್ದರು. ಆಪರೇಷನ್ ಮಾಡ್ಬೇಕಂತ ವೈದ್ಯರು ಹೇಳಿದ್ರು.
ಆಪರೇಷನ್ ಮುನ್ನ ಇಸಿಜಿ ಸೇರಿದಂತೆ ಎಲ್ಲಾ ಟೆಸ್ಟ್ನಲ್ಲೂ ನಾರ್ಮಲ್ ಅಂತಾನೆ ಬಂದಿತ್ತು. ಹೀಗಿದ್ರೂ ಚಿಕ್ಕ ಆಪರೇಷನ್ ಅಷ್ಟೇ ಅಂತ ಆಪರೇಷನ್ ಥಿಯೇಟರ್ಗೆ ಹೋದ ಕೆಲ ನಿಮಿಷದಲ್ಲಿಯೇ ಮೂಗಿನಲ್ಲಿ ರಕ್ತ, ಬಾಯಲ್ಲಿ ನೊರೆ ಬಂದು ಕೆಲವೇ ನಿಮಿಷದಲ್ಲಿ ದಿವ್ಯಾ ಮೃತಪಟ್ಟಿದ್ದಾರೆ. ಹೀಗಾಗಿ ದಿವ್ಯಾ ಕುಟುಂಬಸ್ಥರು ಕಾನೂನು ಸಮರ ಸಾರಿದ್ದಾರೆ. ಈ ಘಟನೆಯ ಬಗ್ಗೆ ತುಳಸಿ ಜೈನ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ.. ಕ್ಷಣದಲ್ಲೇ ಸಾವು; ವೈದ್ಯರ ವಿರುದ್ಧ ಆರೋಪ
ದಿವ್ಯಾರಿಗೆ ಹಿಸ್ಟರೊಸ್ಕೋಪಿಕ್ ಪಾಲಿಪೆಕ್ಟಮಿ ಆರೋಗ್ಯ ಸಮಸ್ಯೆ ಇತ್ತು. ನಿನ್ನೆ ಮಧ್ಯಾಹ್ನ ನಮ್ಮ ಆಸ್ಪತ್ರೆಗೆ ಬಂದಿದ್ದಾರೆ. ಆಪರೇಷನ್ ಮಾಡುವಾಗ ಬಿ.ಪಿ ಡೌನ್ಆಗಿದೆ. ನಂತರ ಕಾರ್ಡಿಯಾಕ್ ಅಟ್ಯಾಕ್ ಆಗಿದೆ. ಕೂಡಲೇ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸ ಮಾಡಿದೆವು. ಬಟ್ ಇದಾದ್ಮೇಲೆ ದಿವ್ಯಾ ಮೃತಪಟ್ಟಿದ್ದಾರೆ.
– ತುಳಸಿ ಜೈನ್ ಆಸ್ಪತ್ರೆ ವೈದ್ಯ
ಮೃತ ದಿವ್ಯಾ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದಾರೆ. ಅದೇನೆ ಇರಲಿ, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ದಿವ್ಯಾ ಇದ್ದ ಐದು ವರ್ಷದ ಪುಟ್ಟ ಕಂದಮ್ಮನನ್ನ ಹಾಗೂ ಕುಟುಂಬವನ್ನು ಅಗಲಿದ್ದು ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ