newsfirstkannada.com

ತಾಯಿ ಅಕ್ರಮ ಸಂಬಂಧಕ್ಕೆ ಮಗಳು ಬಲಿ.. ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ ಹಂತಕ!

Share :

Published May 9, 2024 at 5:58am

    ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿ ನಡೆದ ಘಟನೆ ಇದು

    ಆರು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ

    15 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ಬಾಬಿ

ಗಾಜಿಯಾಬಾದ್: ಆರು ತಿಂಗಳ ಹಿಂದೆಯಷ್ಟೇ ಮದುವೆಯಾದ ಯುವತಿ ತನ್ನ ತಾಯಿ ಮಾಜಿ ಪ್ರಿಯಕರನಿಂದಲೇ ಕೊಲೆಯಾಗಿದ್ದಾಳೆ. ಈ ಘಟನೆ ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿ ನಡೆದಿದೆ. ಜ್ಯೋತಿ (18) ಮೃತ ಯುವತಿ.

ಅಸಲಿಗೆ ಆಗಿದ್ದೇನು..?

ಆರು ತಿಂಗಳ ಹಿಂದೆಯಷ್ಟೇ ಜ್ಯೋತಿ ಮದುವೆ ಆಗಿತ್ತು. ಆದರೆ ಈ ಜ್ಯೋತಿ ತಾಯಿ ಚಂಪಾ ದೇವಿ ಬೇರೆ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ತಾಯಿ ಅಕ್ರಮ ಸಂಬಂಧದ ಬಗ್ಗೆ ಮಗಳಿಗೆ ಗೊತ್ತಿರಲಿಲ್ಲ. ಹೀಗೆ ತಾಯಿ ಕ್ಯಾನ್ಸರ್ ರೋಗಕ್ಕೆ ತುತ್ತಾದ ವಿಚಾರ ತಿಳಿಯುತ್ತಿದ್ದಂತೆ ಮಗಳು ಜ್ಯೋತಿ ಹಾಗೂ ಆಕೆಯ ಪತಿ ಲಲಿತೇಶ್ ಇಬ್ಬರು ಗಾಜಿಯಾಬಾದ್‌ನ ಇಂದಿರಾಪುರಂದ ನಿವಾಸಕ್ಕೆ ದೌಡಾಯಿಸಿದ್ದಾರೆ. ಆದರೆ ಮಗಳನ್ನು ಮನೆಗೆ ಬಂದಿರುವುದು ಗೊತ್ತಾಗುತ್ತಿದ್ದಂತೆ ಕೋಪಕೊಂಡ ಮಾಜಿ ಪ್ರಿಯಕರ ಬಾಬಿ ಎಂಬಾತ ಚಂಪಾ ದೇವಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಗಲಾಟೆ ನಿಲ್ಲಿಸಲು ಬಂದ ಜ್ಯೋತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಇನ್ನು, ಘಟನೆಯಲ್ಲಿ ಜ್ಯೋತಿ ಪತಿ ಲಲಿತೇಶ್​ ಗಂಭೀರವಾಗಿ ಗಾಯಗೊಂಡಿದ್ದರು. ಜ್ಯೋತಿಯನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಆಪ್ತನ ವಿರುದ್ಧ ದೇಶಾದ್ಯಂತ ಆಕ್ರೋಶ.. ಕೊನೆಗೂ ಸ್ಯಾಮ್ ಪಿತ್ರೋಡಾ ತಲೆದಂಡ; ಹೇಳಿದ್ದೇನು?

ಇನ್ನು ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಆರೋಪಿ ಬಾಬಿ ಕೇವಲ 15 ದಿನಗಳ ಹಿಂದೆ ಗೌತಮ್ ಬುದ್ಧನಗರ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆತ ಚಂಪಾ ದೇವಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆತ ಇಲ್ಲದ ಸಮಯದಲ್ಲಿ ಅಜಯ್ ಎಂಬಾತನ ಜೊತೆ ಚಂಪಾ ದೇವಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಹೀಗಾಗಿ ಕೋಪಗೊಂಡ ಬಾಬಿ ಆಕೆಯನ್ನು ಕೊಲ್ಲಲು ಹೋಗಿದ್ದಾ ಈ ರೀತಿಯ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿ ಅಕ್ರಮ ಸಂಬಂಧಕ್ಕೆ ಮಗಳು ಬಲಿ.. ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ ಹಂತಕ!

https://newsfirstlive.com/wp-content/uploads/2024/05/death45.jpg

    ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿ ನಡೆದ ಘಟನೆ ಇದು

    ಆರು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ

    15 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿ ಬಾಬಿ

ಗಾಜಿಯಾಬಾದ್: ಆರು ತಿಂಗಳ ಹಿಂದೆಯಷ್ಟೇ ಮದುವೆಯಾದ ಯುವತಿ ತನ್ನ ತಾಯಿ ಮಾಜಿ ಪ್ರಿಯಕರನಿಂದಲೇ ಕೊಲೆಯಾಗಿದ್ದಾಳೆ. ಈ ಘಟನೆ ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿ ನಡೆದಿದೆ. ಜ್ಯೋತಿ (18) ಮೃತ ಯುವತಿ.

ಅಸಲಿಗೆ ಆಗಿದ್ದೇನು..?

ಆರು ತಿಂಗಳ ಹಿಂದೆಯಷ್ಟೇ ಜ್ಯೋತಿ ಮದುವೆ ಆಗಿತ್ತು. ಆದರೆ ಈ ಜ್ಯೋತಿ ತಾಯಿ ಚಂಪಾ ದೇವಿ ಬೇರೆ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ತಾಯಿ ಅಕ್ರಮ ಸಂಬಂಧದ ಬಗ್ಗೆ ಮಗಳಿಗೆ ಗೊತ್ತಿರಲಿಲ್ಲ. ಹೀಗೆ ತಾಯಿ ಕ್ಯಾನ್ಸರ್ ರೋಗಕ್ಕೆ ತುತ್ತಾದ ವಿಚಾರ ತಿಳಿಯುತ್ತಿದ್ದಂತೆ ಮಗಳು ಜ್ಯೋತಿ ಹಾಗೂ ಆಕೆಯ ಪತಿ ಲಲಿತೇಶ್ ಇಬ್ಬರು ಗಾಜಿಯಾಬಾದ್‌ನ ಇಂದಿರಾಪುರಂದ ನಿವಾಸಕ್ಕೆ ದೌಡಾಯಿಸಿದ್ದಾರೆ. ಆದರೆ ಮಗಳನ್ನು ಮನೆಗೆ ಬಂದಿರುವುದು ಗೊತ್ತಾಗುತ್ತಿದ್ದಂತೆ ಕೋಪಕೊಂಡ ಮಾಜಿ ಪ್ರಿಯಕರ ಬಾಬಿ ಎಂಬಾತ ಚಂಪಾ ದೇವಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಗಲಾಟೆ ನಿಲ್ಲಿಸಲು ಬಂದ ಜ್ಯೋತಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಇನ್ನು, ಘಟನೆಯಲ್ಲಿ ಜ್ಯೋತಿ ಪತಿ ಲಲಿತೇಶ್​ ಗಂಭೀರವಾಗಿ ಗಾಯಗೊಂಡಿದ್ದರು. ಜ್ಯೋತಿಯನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಆಪ್ತನ ವಿರುದ್ಧ ದೇಶಾದ್ಯಂತ ಆಕ್ರೋಶ.. ಕೊನೆಗೂ ಸ್ಯಾಮ್ ಪಿತ್ರೋಡಾ ತಲೆದಂಡ; ಹೇಳಿದ್ದೇನು?

ಇನ್ನು ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಆರೋಪಿ ಬಾಬಿ ಕೇವಲ 15 ದಿನಗಳ ಹಿಂದೆ ಗೌತಮ್ ಬುದ್ಧನಗರ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆತ ಚಂಪಾ ದೇವಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆತ ಇಲ್ಲದ ಸಮಯದಲ್ಲಿ ಅಜಯ್ ಎಂಬಾತನ ಜೊತೆ ಚಂಪಾ ದೇವಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಹೀಗಾಗಿ ಕೋಪಗೊಂಡ ಬಾಬಿ ಆಕೆಯನ್ನು ಕೊಲ್ಲಲು ಹೋಗಿದ್ದಾ ಈ ರೀತಿಯ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More