ನಮಾಜ್ ಮಾಡುವುದಾದ್ರೆ ನಾನ್ಯಾಕೆ ಪೂಜೆ ಮಾಡಬಾರದು ಎಂದ ಮಹಿಳೆ
ಹಿಂದೂ ಮಹಾಸಭಾದ ಮಹಿಳೆ ಮೀನು ರಾಥೋಡ್ ಭಾರೀ ಹೈಡ್ರಾಮಾ
ತಾಜ್ ಮಹಲ್ ಪ್ರವೇಶಿಸಿ ಪೂಜೆ ಮಾಡಬೇಕೆಂದು ಮಹಿಳೆ ಪ್ರಯತ್ನ
ತಾಜ್ ಮಹಲ್ ಪ್ರವೇಶಕ್ಕೆ ಯತ್ನಿಸಿ ಕನ್ವರ್ ಯಾತ್ರಿಯೊಬ್ಬರು ಗೊಂದಲಕ್ಕೆ ಕಾರಣವಾಗಿದ್ದಾರೆ. ಶಿವನು ನನ್ನ ಕನಸಲ್ಲಿ ಬಂದಿದ್ದ ಅಂತ ಹೇಳಿಕೊಂಡು ಪೂಜೆ ಮಾಡಲು ಪ್ರಯತ್ನಿಸಿದ್ದಾಳೆ. ಆದ್ರೆ ಪೊಲೀಸರು ಇದಕ್ಕೆ ತಡೆಯೊಡ್ಡಿದ ಕಾರಣ ವಾಗ್ವಾದಕ್ಕಿಳಿದಿದ್ದಾಳೆ.
ಇವರು ನಮಾಜ್ ಮಾಡಬಹುದು, ಆದ್ರೆ ನಮಗೆ ಪೂಜೆ ಮಾಡಲು ಬಿಡಲ್ಲ. ಅವರು ನಮಾಜ್ ಮಾಡುವುದಾದ್ರೆ ನಾನ್ಯಾಕೆ ಪೂಜೆ ಮಾಡಬಾರದು? ಅವರು ಬಿರಿಯಾನಿ ಹಂಚಬಹುದಾದ್ರೆ ನಾನು ಶಿವನಿಗೆ ಬಿಲ್ವಪತ್ರೆ ಅರ್ಪಿಸಬಾರದಾ? ಹೀಗೆ ಮಹಾದೇವನ ಮಹಿಳಾ ಭಕ್ತರೊಬ್ಬರು ಉತ್ತರಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಪ್ರವೇಶಿಸಿ ಪೂಜೆ ಮಾಡಲು ಜಿದ್ದು ಹಿಡಿದಿದ್ದಾರೆ. ಅಂದಾಗೆ ಈ ಮಹಿಳೆ ಹೆಸರು ಮೀನು ರಾಥೋಡ್.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್; ಹೊಸ ಪ್ರಾಜೆಕ್ಟ್ಗೆ ಕೈ ಹಾಕಿದ ಕೆಂಡಸಂಪಿಗೆ ಸುಮನಾ.. ಏನದು?
ಆಗ್ರಾದ ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷರು ಅಂತ ಹೇಳಿಕೊಂಡಿರುವ ಮೀನು ಭುಜದ ಮೇಲೆ ಕನ್ವರ್ ಹೊತ್ತು ನಿನ್ನೆ ಸೋಮವಾರದಂದು ಗಂಗಾಜಲ ಅರ್ಪಿಸಲು ತಾಜ್ ಮಹಲ್ಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಇಲ್ಲಿನ ಬಲಪಂಥಿಯ ಗುಂಪು ತಾಜ್ ಮಹಲ್ ಶಿವನ ತೇಜೋ ಮಹಾಲಯ ಎಂದು ಹೇಳಿಕೊಂಡಿದೆ. ಆದ್ರೂ ಪ್ರವೇಶಕ್ಕೆ ನಿರಾಕರಿಸಿದ ತಾಜ್ ಸುರಕ್ಷಾ ಪೊಲೀಸರ ಜೊತೆ ಮಹಿಳೆ ವಾಗ್ವಾದಕ್ಕಿಳಿದಿದ್ದಾರೆ. ಇನ್ನು, ಮಹಾದೇವನು ನನ್ನ ಕನಸಿನಲ್ಲಿ ಬಂದು ತಾಜ್ ಮಹಲ್ ಸ್ಮಾರಕಕ್ಕೆ ಗಂಗಾಜಲ ಅರ್ಪಿಸುವಂತೆ ಹೇಳಿದ್ದಾನೆ ಅಂತ ಮೀನು ಹೇಳಿದ್ದಾಳೆ.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ಸರ್ವಿಸ್ ಸ್ಟಾಫ್ಗೆ ಬಿತ್ತು ಗೂಸಾ: ಪ್ರಯಾಣಿಕನ ಸಿಟ್ಟಿಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಭಗವಾನ್ ಶಿವನು ನನ್ನ ಕನಸಿನಲ್ಲಿ ಬಂದು ಕರೆದಿದ್ದಾನೆ. ನಾನು ಇಲ್ಲಿಂದ ಪೂಜೆ ಸಲ್ಲಿಸಿಯೇ ತೆರಳುತ್ತೇನೆ. ಸೋರವ್ನಿಂದ ಬಂದಿದ್ದು ಕನ್ವರ್ ಅರ್ಪಿಸಿಯೇ ಹೋಗ್ತೇನೆ. ಪೊಲೀಸರು ಒಳಗೆ ಹೋಗಲು ಬಿಡ್ತಿಲ್ಲ. ಗೇಟ್ ಹಾಕಿದ್ದಾರೆ. ಇವರು ನಮಾಜ್ ಮಾಡಬಹುದು, ಆದ್ರೆ ನಮಗೆ ಪೂಜೆ ಮಾಡಲು ಬಿಡಲ್ಲ. ಅವರು ನಮಾಜ್ ಮಾಡುವುದಾದ್ರೆ ನಾನ್ಯಾಕೆ ಪೂಜೆ ಮಾಡಬಾರದು? ಅವರು ಬಿರಿಯಾನಿ ಹಂಚಬಹುದಾದ್ರೆ ನಾನು ಶಿವನಿಗೆ ಬಿಲ್ವಪತ್ರೆ ಅರ್ಪಿಸಬಾರದಾ? ಇವರು ನನ್ನನ್ನು ಒಳಗೆ ಯಾಕೆ ಬಿಡ್ತಿಲ್ಲ. ಎರಡು ದಿನಗಳಿಂದ ಪಾದಯಾತ್ರೆ ಮಾಡಿಕೊಂಡು ಬಂದಿದ್ದ್ದೇನೆ. ಆದ್ರೆ ಇವರು ಗೇಟ್ ಹಾಕಿ ತಡೆದಿದ್ದಾರೆ.
ಮೀನು ರಾಥೋಡ್, ಕನ್ವರ್ ಯಾತ್ರಿ
ಇನ್ನು, ತಾಜ್ ಮಹಲ್ಗೆ ಪ್ರವೇಶಿಸಲು ನಿರಾಕರಿಸಿದ ಬಳಿಕ ರಾಜೇಶ್ವರ ದೇವಸ್ಥಾನದಲ್ಲಿ ಗಂಗಾಜಲವನ್ನು ಮೀನು ರಾಥೋಡ್ ಅರ್ಪಿಸಿದ್ದಾರೆ. ಒಟ್ಟಾರೆ ತಾಜ್ ಮಹಲ್ ಪ್ರವೇಶಿಸಿ ಪೂಜೆ ಮಾಡಬೇಕೆಂದು ಮಹಿಳೆ ಪ್ರಯತ್ನಿಸುತ್ತಿದ್ದಂತೆ ಸ್ಥಳದಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು. ಆದ್ರೆ ಪೊಲೀಸರು ಆಕೆಯನ್ನು ತಡೆಗಟ್ಟಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಮಾಜ್ ಮಾಡುವುದಾದ್ರೆ ನಾನ್ಯಾಕೆ ಪೂಜೆ ಮಾಡಬಾರದು ಎಂದ ಮಹಿಳೆ
ಹಿಂದೂ ಮಹಾಸಭಾದ ಮಹಿಳೆ ಮೀನು ರಾಥೋಡ್ ಭಾರೀ ಹೈಡ್ರಾಮಾ
ತಾಜ್ ಮಹಲ್ ಪ್ರವೇಶಿಸಿ ಪೂಜೆ ಮಾಡಬೇಕೆಂದು ಮಹಿಳೆ ಪ್ರಯತ್ನ
ತಾಜ್ ಮಹಲ್ ಪ್ರವೇಶಕ್ಕೆ ಯತ್ನಿಸಿ ಕನ್ವರ್ ಯಾತ್ರಿಯೊಬ್ಬರು ಗೊಂದಲಕ್ಕೆ ಕಾರಣವಾಗಿದ್ದಾರೆ. ಶಿವನು ನನ್ನ ಕನಸಲ್ಲಿ ಬಂದಿದ್ದ ಅಂತ ಹೇಳಿಕೊಂಡು ಪೂಜೆ ಮಾಡಲು ಪ್ರಯತ್ನಿಸಿದ್ದಾಳೆ. ಆದ್ರೆ ಪೊಲೀಸರು ಇದಕ್ಕೆ ತಡೆಯೊಡ್ಡಿದ ಕಾರಣ ವಾಗ್ವಾದಕ್ಕಿಳಿದಿದ್ದಾಳೆ.
ಇವರು ನಮಾಜ್ ಮಾಡಬಹುದು, ಆದ್ರೆ ನಮಗೆ ಪೂಜೆ ಮಾಡಲು ಬಿಡಲ್ಲ. ಅವರು ನಮಾಜ್ ಮಾಡುವುದಾದ್ರೆ ನಾನ್ಯಾಕೆ ಪೂಜೆ ಮಾಡಬಾರದು? ಅವರು ಬಿರಿಯಾನಿ ಹಂಚಬಹುದಾದ್ರೆ ನಾನು ಶಿವನಿಗೆ ಬಿಲ್ವಪತ್ರೆ ಅರ್ಪಿಸಬಾರದಾ? ಹೀಗೆ ಮಹಾದೇವನ ಮಹಿಳಾ ಭಕ್ತರೊಬ್ಬರು ಉತ್ತರಪ್ರದೇಶದ ಆಗ್ರಾದಲ್ಲಿರುವ ತಾಜ್ ಮಹಲ್ ಪ್ರವೇಶಿಸಿ ಪೂಜೆ ಮಾಡಲು ಜಿದ್ದು ಹಿಡಿದಿದ್ದಾರೆ. ಅಂದಾಗೆ ಈ ಮಹಿಳೆ ಹೆಸರು ಮೀನು ರಾಥೋಡ್.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್; ಹೊಸ ಪ್ರಾಜೆಕ್ಟ್ಗೆ ಕೈ ಹಾಕಿದ ಕೆಂಡಸಂಪಿಗೆ ಸುಮನಾ.. ಏನದು?
ಆಗ್ರಾದ ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷರು ಅಂತ ಹೇಳಿಕೊಂಡಿರುವ ಮೀನು ಭುಜದ ಮೇಲೆ ಕನ್ವರ್ ಹೊತ್ತು ನಿನ್ನೆ ಸೋಮವಾರದಂದು ಗಂಗಾಜಲ ಅರ್ಪಿಸಲು ತಾಜ್ ಮಹಲ್ಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಇಲ್ಲಿನ ಬಲಪಂಥಿಯ ಗುಂಪು ತಾಜ್ ಮಹಲ್ ಶಿವನ ತೇಜೋ ಮಹಾಲಯ ಎಂದು ಹೇಳಿಕೊಂಡಿದೆ. ಆದ್ರೂ ಪ್ರವೇಶಕ್ಕೆ ನಿರಾಕರಿಸಿದ ತಾಜ್ ಸುರಕ್ಷಾ ಪೊಲೀಸರ ಜೊತೆ ಮಹಿಳೆ ವಾಗ್ವಾದಕ್ಕಿಳಿದಿದ್ದಾರೆ. ಇನ್ನು, ಮಹಾದೇವನು ನನ್ನ ಕನಸಿನಲ್ಲಿ ಬಂದು ತಾಜ್ ಮಹಲ್ ಸ್ಮಾರಕಕ್ಕೆ ಗಂಗಾಜಲ ಅರ್ಪಿಸುವಂತೆ ಹೇಳಿದ್ದಾನೆ ಅಂತ ಮೀನು ಹೇಳಿದ್ದಾಳೆ.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ಸರ್ವಿಸ್ ಸ್ಟಾಫ್ಗೆ ಬಿತ್ತು ಗೂಸಾ: ಪ್ರಯಾಣಿಕನ ಸಿಟ್ಟಿಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಭಗವಾನ್ ಶಿವನು ನನ್ನ ಕನಸಿನಲ್ಲಿ ಬಂದು ಕರೆದಿದ್ದಾನೆ. ನಾನು ಇಲ್ಲಿಂದ ಪೂಜೆ ಸಲ್ಲಿಸಿಯೇ ತೆರಳುತ್ತೇನೆ. ಸೋರವ್ನಿಂದ ಬಂದಿದ್ದು ಕನ್ವರ್ ಅರ್ಪಿಸಿಯೇ ಹೋಗ್ತೇನೆ. ಪೊಲೀಸರು ಒಳಗೆ ಹೋಗಲು ಬಿಡ್ತಿಲ್ಲ. ಗೇಟ್ ಹಾಕಿದ್ದಾರೆ. ಇವರು ನಮಾಜ್ ಮಾಡಬಹುದು, ಆದ್ರೆ ನಮಗೆ ಪೂಜೆ ಮಾಡಲು ಬಿಡಲ್ಲ. ಅವರು ನಮಾಜ್ ಮಾಡುವುದಾದ್ರೆ ನಾನ್ಯಾಕೆ ಪೂಜೆ ಮಾಡಬಾರದು? ಅವರು ಬಿರಿಯಾನಿ ಹಂಚಬಹುದಾದ್ರೆ ನಾನು ಶಿವನಿಗೆ ಬಿಲ್ವಪತ್ರೆ ಅರ್ಪಿಸಬಾರದಾ? ಇವರು ನನ್ನನ್ನು ಒಳಗೆ ಯಾಕೆ ಬಿಡ್ತಿಲ್ಲ. ಎರಡು ದಿನಗಳಿಂದ ಪಾದಯಾತ್ರೆ ಮಾಡಿಕೊಂಡು ಬಂದಿದ್ದ್ದೇನೆ. ಆದ್ರೆ ಇವರು ಗೇಟ್ ಹಾಕಿ ತಡೆದಿದ್ದಾರೆ.
ಮೀನು ರಾಥೋಡ್, ಕನ್ವರ್ ಯಾತ್ರಿ
ಇನ್ನು, ತಾಜ್ ಮಹಲ್ಗೆ ಪ್ರವೇಶಿಸಲು ನಿರಾಕರಿಸಿದ ಬಳಿಕ ರಾಜೇಶ್ವರ ದೇವಸ್ಥಾನದಲ್ಲಿ ಗಂಗಾಜಲವನ್ನು ಮೀನು ರಾಥೋಡ್ ಅರ್ಪಿಸಿದ್ದಾರೆ. ಒಟ್ಟಾರೆ ತಾಜ್ ಮಹಲ್ ಪ್ರವೇಶಿಸಿ ಪೂಜೆ ಮಾಡಬೇಕೆಂದು ಮಹಿಳೆ ಪ್ರಯತ್ನಿಸುತ್ತಿದ್ದಂತೆ ಸ್ಥಳದಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು. ಆದ್ರೆ ಪೊಲೀಸರು ಆಕೆಯನ್ನು ತಡೆಗಟ್ಟಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ