ಬೆಳ್ಳಂಬೆಳಗ್ಗೆ ಕುರಿ ಮೇಯಿಸಲು ಹೋಗುತ್ತಿದ್ದ ಕುರಿಗಾಯಿಗಳು
ಯಮರಾಯನಾಗಿ ರಸ್ತೆಯಲ್ಲಿ ಬಂದ ಟ್ರಕ್ಗೆ 25 ಕುರಿಗಳು ಬಲಿ
ನಾಲ್ವರು ಕುರಿಗಾಹಿಗಳಿಗೆ ಸೇರಿದ್ದ ಸಾವನ್ನಪ್ಪಿರುವ ಕುರಿಗಳು
ಯಾದಗಿರಿ: ಬೆಳಗಿನ ಜಾವ 5 ಗಂಟೆ ಸುಮಾರಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಕುರಿ ಮಂದೆ ಮೇಲೆ ಟ್ರಕ್ವೊಂದು ಹರಿದ ಪರಿಣಾಮ 25 ಕುರಿಗಳು ಸಾವನ್ನಪ್ಪಿರುವ ಘಟನೆ ನಗರದ ಹೊರ ಹೊಲಯದ ಚಿತ್ತಾಪುರ ರಸ್ತೆಯಲ್ಲಿ ನಡೆದಿದೆ.
ಇದನ್ನು ಓದಿ: ಇನ್ಸ್ಟಾದಲ್ಲಿ ಪರಿಚಯವಾದ ಬಾಯ್ಫ್ರೆಂಡ್.. ಮೋಸದ ಜಾಲಕ್ಕೆ ಬಿದ್ದು ಜೀವ ತೆಗೆದುಕೊಂಡ ಯುವತಿ
ಕುರಿಗಾಯಿಗಳು ಬೆಳಗಿನ ಜಾವದಲ್ಲಿ ಕುರಿಗಳನ್ನು ಮೇಯಿಸಲು ಹೋಗುತ್ತಿದ್ದರು. ಆಗ ವೇಗವಾಗಿ ಬಂದ ಟ್ರಕ್ ಕುರಿ ಮಂದೆ ಮೇಲೆ ಹರಿದಿದೆ. ಪರಿಣಾಮ 25 ಕುರಿಗಳು ಮೃತಪಟ್ಟಿವೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಟ್ರಕ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಜಿಲ್ಲೆಯ ಶಹಾಪುರ ತಾಲೂಕಿನ ನಾಗನಟಗಿ ಗ್ರಾಮದ ನಾಗಪ್ಪ, ಅಂಬಲಯ್ಯ, ಧರ್ಮರಾಜ ಹಾಗೂ ನಿಂಗಪ್ಪ ಎಂಬುವರಿಗೆ ಈ ಕುರಿಗಳು ಸೇರಿವೆ. ಈ ಸಂಬಂಧ ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಳ್ಳಂಬೆಳಗ್ಗೆ ಕುರಿ ಮೇಯಿಸಲು ಹೋಗುತ್ತಿದ್ದ ಕುರಿಗಾಯಿಗಳು
ಯಮರಾಯನಾಗಿ ರಸ್ತೆಯಲ್ಲಿ ಬಂದ ಟ್ರಕ್ಗೆ 25 ಕುರಿಗಳು ಬಲಿ
ನಾಲ್ವರು ಕುರಿಗಾಹಿಗಳಿಗೆ ಸೇರಿದ್ದ ಸಾವನ್ನಪ್ಪಿರುವ ಕುರಿಗಳು
ಯಾದಗಿರಿ: ಬೆಳಗಿನ ಜಾವ 5 ಗಂಟೆ ಸುಮಾರಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಕುರಿ ಮಂದೆ ಮೇಲೆ ಟ್ರಕ್ವೊಂದು ಹರಿದ ಪರಿಣಾಮ 25 ಕುರಿಗಳು ಸಾವನ್ನಪ್ಪಿರುವ ಘಟನೆ ನಗರದ ಹೊರ ಹೊಲಯದ ಚಿತ್ತಾಪುರ ರಸ್ತೆಯಲ್ಲಿ ನಡೆದಿದೆ.
ಇದನ್ನು ಓದಿ: ಇನ್ಸ್ಟಾದಲ್ಲಿ ಪರಿಚಯವಾದ ಬಾಯ್ಫ್ರೆಂಡ್.. ಮೋಸದ ಜಾಲಕ್ಕೆ ಬಿದ್ದು ಜೀವ ತೆಗೆದುಕೊಂಡ ಯುವತಿ
ಕುರಿಗಾಯಿಗಳು ಬೆಳಗಿನ ಜಾವದಲ್ಲಿ ಕುರಿಗಳನ್ನು ಮೇಯಿಸಲು ಹೋಗುತ್ತಿದ್ದರು. ಆಗ ವೇಗವಾಗಿ ಬಂದ ಟ್ರಕ್ ಕುರಿ ಮಂದೆ ಮೇಲೆ ಹರಿದಿದೆ. ಪರಿಣಾಮ 25 ಕುರಿಗಳು ಮೃತಪಟ್ಟಿವೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಟ್ರಕ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಜಿಲ್ಲೆಯ ಶಹಾಪುರ ತಾಲೂಕಿನ ನಾಗನಟಗಿ ಗ್ರಾಮದ ನಾಗಪ್ಪ, ಅಂಬಲಯ್ಯ, ಧರ್ಮರಾಜ ಹಾಗೂ ನಿಂಗಪ್ಪ ಎಂಬುವರಿಗೆ ಈ ಕುರಿಗಳು ಸೇರಿವೆ. ಈ ಸಂಬಂಧ ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ