ಮನೆಯಿಂದ ಹೊರ ಹೋಗುವಾಗ ಎಚ್ಚರ, ಅಪಾಯವಿದೆ
ಮುಖ್ಯವಾದ ವ್ಯಕ್ತಿ ಅಥವಾ ಸ್ನೇಹಿತನ ವಿಚಾರದಲ್ಲಿ ಸಮಸ್ಯೆ
ನಿಮ್ಮ ಮಾತು ನಿಮಗೆ ಬಲ, ಕಿರಿಕಿರಿಯಿಂದ ಹೊರ ಬರುತ್ತೀರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9:00 ರಿಂದ 10:30ರವರೆಗೆ ಇರಲಿದೆ.
ಮೇಷ ರಾಶಿ
- ಹಲವಾರು ದಿನಗಳಿಂದ ಇದ್ದ ಸಮಸ್ಯೆ ದೂರವಾಗಬಹುದು
- ಮನೆಯ ಖರ್ಚು ವೆಚ್ಚದ ಬಗ್ಗೆ ಗಮನಿಸಿ
- ನಿಮ್ಮ ಕೈ ಕೆಳಗೆ ಕೆಲಸ ಮಾಡುವುದರಿಂದ ಹೆಚ್ಚಿನ ಅನುಕೂಲ
- ದಂಪತಿಗಳಲ್ಲಿ ಭಿನ್ನಾಭಿಪ್ರಾಯವಿದ್ದರೆ ಈ ದಿನ ದೂರವಾಗಲಿದೆ
- ಕೆಲಸ, ಕುಟುಂಬ ಎರಡು ಕಡೆ ಸಮತೋಲನ ಮಾಡಿಕೊಳ್ಳಿ
- ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗುವ ದಿನ
- ಮಹಾಲಕ್ಷ್ಮಿ ಅನುಗ್ರಹ ಪಡೆಯಿರಿ
ವೃಷಭ
- ನಿಮ್ಮ ಗುರಿಯ ಬಗ್ಗೆ ತಾತ್ಸರ ತೋರಬಹುದು
- ಹೊಟ್ಟೆ ನೋವಿನ ಸಮಸ್ಯೆಯಿಂದ ಸಮಯ ವ್ಯರ್ಥವಾಗಬಹುದು
- ನಿಮ್ಮ ಆಲೋಚನೆ ಜನರಿಗೆ ಅರ್ಥವಾಗುವುದಿಲ್ಲ
- ಬೇರೆಯವರ ಸಲಹೆಯನ್ನು ಅಂಧ ಶ್ರದ್ಧೆಯಿಂದ ನಂಬಬಾರದು
- ನಿಮ್ಮ ಕೆಲಸದ ಗುಣಮಟ್ಟ ತಗ್ಗಲು ಬಿಡಬೇಡಿ
- ವಿದ್ಯಾರ್ಥಿಗಳು ಎಚ್ಚರ, ಓದು ಬಿಟ್ಟು ಬೇರೆ ಕಡೆ ಗಮನ ಕೊಡುವುದರಿಂದ ತೊಂದರೆಯಾಗಬಹುದು
- ದುರ್ಗಾರಾಧನೆ ಮಾಡಿ
ಮಿಥುನ
- ಮಾನಸಿಕವಾಗಿ ಇಂದು ಸಂತೋಷವಿದೆ
- ಆಸ್ತಿಯ ವಿಚಾರವಾಗಿ ಸ್ವಲ್ಪ ಅನುಕೂಲತೆಗಳಿವೆ
- ನಿಮ್ಮ ಗುರಿ ತರುಪುವ ಬಗ್ಗೆ ಹೆಚ್ಚು ಗಮನಿಸುತ್ತೀರಿ
- ಕೆಲಸಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಿಂದ ತೃಪ್ತಿ
- ಸಕಾಲದಲ್ಲಿ ನಿಮ್ಮ ಕೆಲಸ ಪೂರ್ಣವಾಗಲಿದೆ
- ತಾಯಿಯವರಿಗೆ ಹಣ ಸಹಾಯ ಮಾಡಬೇಕಾಗಬಹುದು
- ಮೃತ್ಯುಂಜಯ ಜಪ ಮಾಡಿ
ಕಟಕ
- ಹೊಸ ಹೊಸ ವ್ಯವಹಾರ, ವಿಚಾರಗಳಲ್ಲಿ ಉತ್ಸಾಹ
- ಶುಭ ಕಾರ್ಯಗಳಿಗೆ ಕೆಲವು ಪದಾರ್ಥಗಳ ಖರೀದಿ
- ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ
- ಪ್ರೇಮಿಗಳಿಗೆ ಶುಭ, ಉತ್ತಮ ನಿರ್ಧಾರ ಮಾಡಿ
- ಹಣದ ಕೊರತೆ ಇಲ್ಲ
- ವೃತ್ತಿಯಲ್ಲಿ ಅಭಿವೃದ್ಧಿ, ಸಮಾಧಾನ
- ನದೀ ತೀರದಲ್ಲಿ ಕುಲದೇವತಾ ಪ್ರಾರ್ಥನೆ ಮಾಡಿ
ಸಿಂಹ
- ಇಂದು ಹೆಚ್ಚಿನ ಹೂಡಿಕೆ ಮಾಡಬಾರದು
- ನಿಮ್ಮ ಬುದ್ಧಿವಂತಿಕೆಯಿಂದ ಶತ್ರುಗಳಿಂದ ಜಯ
- ಧಾರ್ಮಿಕ ಚಿಂತನೆಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತವೆ
- ಬೌದ್ಧಿಕ ಮತ್ತು ತಾರ್ಕಿಕ ಸಾಮರ್ಥ್ಯ ಹೆಚ್ಚಾಗಲಿದೆ
- ಸಣ್ಣ ವ್ಯಾಪಾರಿಗಳಿಗೆ ನಷ್ಟ ಉಂಟಾಗಬಹುದು
- ಹಣ, ವ್ಯವಹಾರ ಸ್ಥಗಿತವಾಗುವ ಸಾಧ್ಯತೆಗಳಿರುತ್ತವೆ
- ಸುಬ್ರಹ್ಮಣ್ಯನ ಆರಾಧನೆ ಮಾಡಿ
ಕನ್ಯಾ
- ಬೇರೆಯವರ ಮೇಲೆ ಒತ್ತಡ ಹೇರಬೇಡಿ
- ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
- ಹಳೆಯ ತೊಂದರೆಗಳಿಂದಲೇ ನಿಮಗೆ ಇಂದು ತೊಂದರೆಯಾಗಬಹುದು
- ನಿಮ್ಮ ಕಠಿಣ ಪರಿಶ್ರಮದಿಂದ ಬೇರೆಯವರಿಗೆ ಸಂತೋಷ
- ಯಾರಿಗೆ ಅಹಂಕಾರವಿದೆ, ತಾಳ್ಮೆ ಇಲ್ಲವೋ ಅಂತವರ ಜೊತೆ ವರ್ತಿಸಬೇಡಿ
- ನೀವು ನೀವಾಗಿದ್ದರೆ ಅನುಕೂಲವಿದೆ
- ಸುದರ್ಶನ ಹೋಮ ಮಾಡಿಸಿ
ತುಲಾ
- ಮನೆಯಲ್ಲಿಯ ವಾತಾವರಣ ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ
- ವಿವಾಹ ಸಂಬಂಧಗಳಲ್ಲಿ ಅಪಸ್ವರ
- ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಮಾತು
- ದಾಖಲಾತಿ ವಿಚಾರ ಬಂದಾಗ ಸ್ವಲ್ಪ ವ್ಯತ್ಯಾಸ ಆತಂಕವಾಗಬಹುದು
- ಜೀವನದಲ್ಲಿ ಸಕಾರಾತ್ಮಕ ಭಾವನೆಯಿಂದ ಅನುಕೂಲವಿದೆ
- ವಿದೇಶದಲ್ಲಿ ಕೆಲಸ ಮಾಡುವವರಿಗೆ ನಷ್ಟ, ಬೇಸರ ಉಂಟಾಗಬಹುದು
- ಕಾರ್ತವೀರ್ಯಾರ್ಜುನ ಮಂತ್ರವನ್ನ 28 ಬಾರಿ ಜಪಿಸಿ
ವೃಶ್ಚಿಕ
- ಶೈಕ್ಷಣಿಕ ಕ್ಷೇತ್ರದಲ್ಲಿ ಸಮಸ್ಯೆಗಳಿದ್ದರೆ ನಿವಾರಣೆ
- ಬರವಣಿಗೆ, ಉನ್ನತ ಚಿಂತನೆಯಲ್ಲಿ ಕಾಲ ಕಳೆಬಹುದು
- ಚಿತ್ರಕಲಾಕಾರರಿಗೆ ಮಾನ್ಯತೆ ಹೆಚ್ಚಾಗಬಹುದು
- ನಿಮ್ಮ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಸಿಗಬಹುದು
- ಅರ್ಹ ವ್ಯಕ್ತಿಗಳ ಭೇಟಿ ಮಾರ್ಗದರ್ಶನದ ಅಗತ್ಯವಿದೆ
- ಶಾಂತವಾಗಿ ವರ್ತಿಸಿ ಶುಭವಿದೆ
- ರುದ್ರಾರಾಧನೇ ಹಾಗೂ ರುದ್ರಾಭಿಷೇಕ ಮಾಡಿಸಿ
ಧನುಸ್ಸು
- ಒಳ್ಳೆಯ ಆಲೋಚನೆಗಳಿಂದ ಮನಸ್ಸಿಗೆ ನೆಮ್ಮದಿ
- ನಿಮ್ಮ ದೂರದ ಸಂಬಂಧಿಕರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುತ್ತದೆ
- ಜೀವನದಲ್ಲಿ ಆಶಾಭಾವನೆ ಹುಟ್ಟಬಹುದು
- ಮಕ್ಕಳ ಜೊತೆಯಲ್ಲಿ ಉತ್ತಮ ಸಮಯ ಕಳೆಯಬಹುದು
- ಷೇರು ಮಾರುಕಟ್ಟೆ ಹೂಡಿಕೆಯಿಂದ ಲಾಭದ ಮಾಹಿತಿ ಸಿಗಬಹುದು
- ನಿಮ್ಮ ಕೈಯಲ್ಲಿ ನಿಮ್ಮದೇ ಎಂಬ ಮೂಲ ಹಣ ಇರುವುದಿಲ್ಲ
- ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ
- ಸದ್ಯಕ್ಕೆ ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡಿ
- ಮಾಧ್ಯಮಕ್ಕೆ ಸಂಬಂಧಿಸಿದವರು ಸವಾಲು ಎದುರಿಸಲು ಸಿದ್ಧರಾಗಿರಬೇಕು
- ಕುಟುಂಬ ಸದಸ್ಯರ ಮೇಲೆ ಕೋಪ, ಜಗಳ
- ಯಾರಿಗೂ ಸುಳ್ಳು ಹೊಗಳಿಕೆ ಬೇಡ
- ಬೇರೆಯವರ ಕಡೆಗೆ ಸರಿಯಾಗಿ ಸ್ಪಂದಿಸದೆ ನಿಷ್ಠೂರರಾಗಿ ತೊಂದರೆಯಾಗಬಹುದು
- ಶನಿ ಪ್ರಾರ್ಥನೆ ಹಾಗೂ ಜಪ ಮಾಡಿ
ಕುಂಭ
- ನಿಮ್ಮ ಸಾಮಾಜಿಕ ಸ್ಥಾನಮಾನ ಸುಧಾರಿಸುತ್ತದೆ
- ಹೊಸ ತಂತ್ರಜ್ಞಾನದಿಂದ ನೀವು ಆಕರ್ಷಿತರಾಗಬಹುದು
- ಹೊಸ ಒಪ್ಪಂದಗಳು ಯೋಜನೆಗಳು ನಿಮ್ಮ ಮುಂದೆ ಇರಬಹುದು
- ಇಂದು ಸಮಸ್ಯೆಯ ಮೂಲ ಗುರುತಿಸಲು ನಿಮಗೆ ಸುಲಭ
- ನಿಮ್ಮ ಪರಿಶ್ರಮ, ಪ್ರತಿಫಲ ಎರಡು ತೃಪ್ತಿ ಕೊಡುತ್ತದೆ
- ನಡೆದಾಡಲು ಈ ದಿನ ಸ್ವಲ್ಪ ಕಷ್ಟವಾಗಬಹುದು
- ಕುಲದೇವತಾ ಆರಾಧನೆ ಮಾಡಿ
ಮೀನ
- ನಿಮ್ಮ ಮಾತು ಅಭ್ಯಾಸಗಳಿಂದ ಸಂಬಂಧಿಕರಿಗೆ ಅವಮಾನ
- ನಿಮ್ಮ ನಿತ್ಯದ ಕೆಲಸಗಳಿಂದ ಆರೋಗ್ಯ ಹಿಡಿತದಲ್ಲಿರುತ್ತದೆ
- ಮನೆಯ ವಾತಾವರಣದಿಂದ ಕೋಪ ಬರುತ್ತದೆ
- ಕೆಲಸದ ಸ್ಥಳದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯಬಹುದು
- ಮನಸ್ಸಿನ ಭಾವನೆ ಏನೆಂದು ತಿಳಿಯಲು ಒದ್ದಾಟ ಮಾಡುತ್ತೀರಿ
- ಮನೋವೇಗಕ್ಕೆ ಸ್ಪಂದಿಸಲಾಗದ ನೀವು ಒಂಟಿ ಎಂದು ತಿಳಿಯುತ್ತೀರಿ
- ಕಾಲಭೈರವನನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ