ಕೊರಮಂಗಲ ಪಿಜಿಯಲ್ಲಿ ನಡೆದ ಕೊಲೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ
ಆರೋಪಿ ಅಭಿಷೇಕ್ಗಾಗಿ ಪೊಲೀಸರಿಂದ ತೀವ್ರ ಹುಡುಕಾಟ
ಅಭಿಷೇಕ್, ಕೃತಿ ಕುಮಾರಿಯ ಪ್ರಿಯಕರ ಆಗಿರಲಿಲ್ಲ
ಬೆಂಗಳೂರು: ಕೊರಮಂಗಲ ಪಿಜಿಯಲ್ಲಿ ನಡೆದ ಕೃತಿ ಕುಮಾರಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸ್ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ನಿನ್ನೆಯಿಂದ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳಿಗೆ ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎನ್ನಲಾಗಿದೆ.
ಅಂದ್ಹಾಗೆ ಕೃತಿ ಕುಮಾರಿಯನ್ನ ಕೊಲೆ ಮಾಡಿದ ಆರೋಪಿ ಹೆಸರು ಅಭಿಷೇಕ. ಈತ ಭೋಪಾಲ್ ಮೂಲದವ. ಅಭಿಷೇಕ್ ಹಾಗೂ ಕೃತಿ ಕುಮಾರಿಯ ಸ್ನೇಹಿತೆ ಪರಸ್ಪರ ಪ್ರೀತಿಸುತ್ತಿದ್ದರು. ಕೃತಿ ಕುಮಾರಿ ಹಾಗೂ ಅಭಿಷೇಕ್ನ ಪ್ರಿಯತಮೆ ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಒಂದೇ ಪಿಜಿಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಆರಂಭದಲ್ಲೇ ಗಂಭೀರ್ ಬಿಗಿ ಹಿಡಿತ.. ಪಾಂಡ್ಯ, ಪಂತ್, ಸಂಜುಗೆ ಪ್ರಾಕ್ಟಿಸ್ ಸೆಷನ್ನಲ್ಲಿ ಕ್ಲಾಸ್..!
ಗೆಳತಿಯನ್ನು ಭೇಟಿ ಮಾಡಲು ಅಭಿಷೇಕ್ ಆ ಪಿಜಿ ಬಳಿ ಆಗಾಗ ಬರುತ್ತಿದ್ದ. ಇತ್ತೀಚೆಗೆ ಅಭಿಷೇಕ್ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಇತ್ತ ಅಭಿಷೇಕ್ ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ. ಪದೇ ಪದೆ ಭೋಪಾಲ್ನಿಂದ ಬೆಂಗಳೂರಿಗೆ ಬರುತ್ತಿದ್ದ. ಇಲ್ಲಿಗೆ ಬಂದು ಆಕೆಯ ಜೊತೆ ಸುತ್ತಾಡಿಕೊಂಡು ಹೋಗುತ್ತಿದ್ದ. ಹೀಗಾಗಿ ಅಭಿಷೇಕ್ಗೆ ಯಾವುದಾದರೂ ಕೆಲಸಕ್ಕೆ ಸೇರಿಕೋ ಎಂದು ಪ್ರೇಯಸಿ ಬುದ್ಧಿ ಮಾತು ಹೇಳುತ್ತಿದ್ದಳು.
ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದಾಗಿ ಅಭಿಷೇಕ್ ಹೇಳಿದ್ದನಂತೆ. ಆದರೆ ಅದು ಸಹ ಸುಳ್ಳು ಅನ್ನೋದು ಅಭಿಷೇಕ್ ಗೆಳತಿಗೆ ಗೊತ್ತಾಗಿತ್ತು. ನಂತರ ಗೆಳತಿ ಅಭಿಷೇಕ್ನನ್ನು ದೂರ ಮಾಡಲು ಶುರು ಮಾಡಿದ್ದಳು. ಅಷ್ಟಾದರೂ ಸುಮ್ಮನಿರದ ಅಭಿಷೇಕ, ಆಗಾಗ ಪಿಜಿ ಬಳಿ ಬಂದು ಗಲಾಟೆ ಮಾಡಿ ಹೋಗುತ್ತಿದ್ದ. ಇದನ್ನೆಲ್ಲ ತಿಳಿದಿದ್ದ ಕೃತಿ ಕುಮಾರಿ ತನ್ನ ಸ್ನೇಹಿತೆಯನ್ನ ಬೇರೊಂದು ಪಿಜಿಗೆ ಶಿಫ್ಟ್ ಮಾಡಿಸಿದ್ದಳಂತೆ.
ಇದನ್ನೂ ಓದಿ:‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್
ಅತ್ತ ಅಭಿಷೇಕ್ ಫೋನ್ ಮಾಡಿದ್ದರೂ ಆತನ ಪ್ರೇಯಸಿ…ಪಿಕ್ ಮಾಡಿರಲಿಲ್ಲ. ಹೀಗಾಗಿ ಮಂಗಳವಾರ ರಾತ್ರಿ 8 ಗಂಟೆ ಸಮಯದಲ್ಲಿ ಪಿಜಿ ಬಳಿ ಅಭಿಷೇಕ್ ಬಂದಿದ್ದ. ಮತ್ತೆ ಮಧ್ಯರಾತ್ರಿ ಪಿಜಿ ಬಳಿ ಬಂದಿದ್ದ. ಈ ವೇಳೆ ನೇರವಾಗಿ ಮೂರನೇ ಮಹಡಿಗೆ ತೆರಳಿ ಕೃತಿ ಕುಮಾರಿ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಆಕೆ ಬಾಗಿಲು ತೆಗೆಯುತ್ತಿದ್ದಂತೆ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ತನ್ನ ಪ್ರೇಯಸಿಯೇ ಎಂದು ಏಕಾಏಕಿ ಚಾಕುವಿನಿಂದ ಕೂಯ್ದಿರೋ ಶಂಕೆ ಇದೆ. ಸದ್ಯ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕಂಗನಾರ ಸಂಸದ ಸ್ಥಾನಕ್ಕೆ ಬಂತಾ ಕುತ್ತು..? ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೊರಮಂಗಲ ಪಿಜಿಯಲ್ಲಿ ನಡೆದ ಕೊಲೆ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ
ಆರೋಪಿ ಅಭಿಷೇಕ್ಗಾಗಿ ಪೊಲೀಸರಿಂದ ತೀವ್ರ ಹುಡುಕಾಟ
ಅಭಿಷೇಕ್, ಕೃತಿ ಕುಮಾರಿಯ ಪ್ರಿಯಕರ ಆಗಿರಲಿಲ್ಲ
ಬೆಂಗಳೂರು: ಕೊರಮಂಗಲ ಪಿಜಿಯಲ್ಲಿ ನಡೆದ ಕೃತಿ ಕುಮಾರಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸ್ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ನಿನ್ನೆಯಿಂದ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳಿಗೆ ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎನ್ನಲಾಗಿದೆ.
ಅಂದ್ಹಾಗೆ ಕೃತಿ ಕುಮಾರಿಯನ್ನ ಕೊಲೆ ಮಾಡಿದ ಆರೋಪಿ ಹೆಸರು ಅಭಿಷೇಕ. ಈತ ಭೋಪಾಲ್ ಮೂಲದವ. ಅಭಿಷೇಕ್ ಹಾಗೂ ಕೃತಿ ಕುಮಾರಿಯ ಸ್ನೇಹಿತೆ ಪರಸ್ಪರ ಪ್ರೀತಿಸುತ್ತಿದ್ದರು. ಕೃತಿ ಕುಮಾರಿ ಹಾಗೂ ಅಭಿಷೇಕ್ನ ಪ್ರಿಯತಮೆ ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಒಂದೇ ಪಿಜಿಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಆರಂಭದಲ್ಲೇ ಗಂಭೀರ್ ಬಿಗಿ ಹಿಡಿತ.. ಪಾಂಡ್ಯ, ಪಂತ್, ಸಂಜುಗೆ ಪ್ರಾಕ್ಟಿಸ್ ಸೆಷನ್ನಲ್ಲಿ ಕ್ಲಾಸ್..!
ಗೆಳತಿಯನ್ನು ಭೇಟಿ ಮಾಡಲು ಅಭಿಷೇಕ್ ಆ ಪಿಜಿ ಬಳಿ ಆಗಾಗ ಬರುತ್ತಿದ್ದ. ಇತ್ತೀಚೆಗೆ ಅಭಿಷೇಕ್ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಇತ್ತ ಅಭಿಷೇಕ್ ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ. ಪದೇ ಪದೆ ಭೋಪಾಲ್ನಿಂದ ಬೆಂಗಳೂರಿಗೆ ಬರುತ್ತಿದ್ದ. ಇಲ್ಲಿಗೆ ಬಂದು ಆಕೆಯ ಜೊತೆ ಸುತ್ತಾಡಿಕೊಂಡು ಹೋಗುತ್ತಿದ್ದ. ಹೀಗಾಗಿ ಅಭಿಷೇಕ್ಗೆ ಯಾವುದಾದರೂ ಕೆಲಸಕ್ಕೆ ಸೇರಿಕೋ ಎಂದು ಪ್ರೇಯಸಿ ಬುದ್ಧಿ ಮಾತು ಹೇಳುತ್ತಿದ್ದಳು.
ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದಾಗಿ ಅಭಿಷೇಕ್ ಹೇಳಿದ್ದನಂತೆ. ಆದರೆ ಅದು ಸಹ ಸುಳ್ಳು ಅನ್ನೋದು ಅಭಿಷೇಕ್ ಗೆಳತಿಗೆ ಗೊತ್ತಾಗಿತ್ತು. ನಂತರ ಗೆಳತಿ ಅಭಿಷೇಕ್ನನ್ನು ದೂರ ಮಾಡಲು ಶುರು ಮಾಡಿದ್ದಳು. ಅಷ್ಟಾದರೂ ಸುಮ್ಮನಿರದ ಅಭಿಷೇಕ, ಆಗಾಗ ಪಿಜಿ ಬಳಿ ಬಂದು ಗಲಾಟೆ ಮಾಡಿ ಹೋಗುತ್ತಿದ್ದ. ಇದನ್ನೆಲ್ಲ ತಿಳಿದಿದ್ದ ಕೃತಿ ಕುಮಾರಿ ತನ್ನ ಸ್ನೇಹಿತೆಯನ್ನ ಬೇರೊಂದು ಪಿಜಿಗೆ ಶಿಫ್ಟ್ ಮಾಡಿಸಿದ್ದಳಂತೆ.
ಇದನ್ನೂ ಓದಿ:‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್
ಅತ್ತ ಅಭಿಷೇಕ್ ಫೋನ್ ಮಾಡಿದ್ದರೂ ಆತನ ಪ್ರೇಯಸಿ…ಪಿಕ್ ಮಾಡಿರಲಿಲ್ಲ. ಹೀಗಾಗಿ ಮಂಗಳವಾರ ರಾತ್ರಿ 8 ಗಂಟೆ ಸಮಯದಲ್ಲಿ ಪಿಜಿ ಬಳಿ ಅಭಿಷೇಕ್ ಬಂದಿದ್ದ. ಮತ್ತೆ ಮಧ್ಯರಾತ್ರಿ ಪಿಜಿ ಬಳಿ ಬಂದಿದ್ದ. ಈ ವೇಳೆ ನೇರವಾಗಿ ಮೂರನೇ ಮಹಡಿಗೆ ತೆರಳಿ ಕೃತಿ ಕುಮಾರಿ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಆಕೆ ಬಾಗಿಲು ತೆಗೆಯುತ್ತಿದ್ದಂತೆ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ತನ್ನ ಪ್ರೇಯಸಿಯೇ ಎಂದು ಏಕಾಏಕಿ ಚಾಕುವಿನಿಂದ ಕೂಯ್ದಿರೋ ಶಂಕೆ ಇದೆ. ಸದ್ಯ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕಂಗನಾರ ಸಂಸದ ಸ್ಥಾನಕ್ಕೆ ಬಂತಾ ಕುತ್ತು..? ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ