/newsfirstlive-kannada/media/post_attachments/wp-content/uploads/2024/05/MOZORAM.jpg)
ಮಿಜೋರಾಂನ ಐಜವಲ್ ಜಿಲ್ಲೆಯಲ್ಲಿ ಮಳೆಯಿಂದಾಗಿ ಭಾರೀ ದುರಂತ ಸಂಭವಿಸಿದ್ದು, 10 ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ನಾಪತ್ತೆ ಆಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಲ್ಲು ಕ್ವಾರಿ ಕುಸಿದು ಅನಾಹುತ ಸಂಭವಿಸಿದೆ. ನಿನ್ನೆ ಬೆಳಗ್ಗೆ 6 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ. Aizawl ಪಟ್ಟಣದ ಮೆಲ್ಟುಮ್ ಮತ್ತು ಹ್ಲುಮೆನ್ ಪ್ರದೇಶದ ಹೊರಹೊಲಯದಲ್ಲಿರುವ ಕ್ವಾರಿಯಲ್ಲಿ ದುರಂತ ನಡೆದಿದೆ.
ಇದನ್ನೂ ಓದಿ:ಈ 5 ಆಟಗಾರರು ಮಿಂಚಿದ್ರೆ ಟೀಂ ಇಂಡಿಯಾ T20 ವಿಶ್ವಕಪ್ ಚಾಂಪಿಯನ್ ಆಗೋದು ಪಕ್ಕಾ..!
ಕ್ವಾರೆಯ ಅವಶೇಷಗಳಡಿ ಕಾಣೆಯಾಗಿರುವ ಕಾರ್ಮಿಕರ ರಕ್ಷಣಾ ಕಾರ್ಯ ನಡೆಯುತ್ತಿದೆ. ರಕ್ಷಣಾ ಕೆಲಸಕ್ಕೆ ಮಳೆ ಅಡ್ಡಿಯಾಗಿದೆ. ಸೈಕ್ಲೋನ್ನಿಂದಾಗಿ ಮಿಜೋರಾಂನಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿಯೇ ಈ ದುರಂತ ಸಂಭವಿಸಿದೆ. ಜೊತೆಗೆ ಅಲ್ಲಿನ ರಾಷ್ಟ್ರೀಯ ಹೆದ್ದಾರಿ 6ರಲ್ಲಿ ಭೂ-ಕುಸಿತ ಸಂಭವಿಸಿದೆ. ಮಾತ್ರವಲ್ಲ, ಅನೇಕ ರಾಜ್ಯ ಹೆದ್ದಾರಿಗಳೂ ಬಂದ್ ಆಗಿವೆ. ಇದರಿಂದ ವಾಹನ ಸಂಚಾರವೂ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಕುಂಕುಮ ಕುತೂಹಲ..! ವಿಡಿಯೋ ಬಿಡುಗಡೆ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಬಗ್ಗೆ ಹೆಚ್ಚಿದ ಈ ಅನುಮಾನ..!
ಮಳೆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ ನೌಕರರಿಗೂ ರಜೆ ಘೋಷಿಸಲಾಗಿದೆ. ಅಗತ್ಯ ಕೆಲಸಗಳನ್ನು ಹೊರತುಪಡಿಸಿ ಮನೆಯಲ್ಲೇ ಇರುವಂತೆ ರಾಜ್ಯದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
10 people have died as a stone quarry collapsed on the outskirts of #Aizawl following incessant #rains. Police personnel are engaged in rescue operations. #Mizoram#landslide#stonequarrypic.twitter.com/AXhhsAYyFC
— Priyathosh Agnihamsa (@priyathosh6447) May 28, 2024
ಇದನ್ನೂ ಓದಿ:ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ