ಸಾತ್ವಿಕ್ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
13 ವರ್ಷದ ಸಾತ್ವಿಕ್ ಓದಿಕೋ ಅಂದಿದ್ದಕ್ಕೆ ಮನೆ ಬಿಟ್ಟ ಬಾಲಕ
ಹನುಮಂತ, ಗಂಗಮ್ಮ ಅವರ ಪುತ್ರ ಸಾತ್ವಿಕ್ ನಾಪತ್ತೆ
ದಾವಣಗೆರೆ: ಚೆನ್ನಾಗಿ ಓದಿಕೋ ಅಂದಿದ್ದಕ್ಕೆ ಬಾಲಕನೊಬ್ಬ ಮನೆ ಬಿಟ್ಟು ಹೋಗಿರೋ ಘಟನೆ ನಗರದ ಎಸ್ಎಸ್ ಲೇಔಟ್ನಲ್ಲಿ ನಡೆದಿದೆ. ಸಾತ್ವಿಕ್ (13) ಮನೆ ಬಿಟ್ಟ ಹೋದ ಬಾಲಕ.
ಇದನ್ನು ಓದಿ: ದೂರು ಕೂಟ್ಟರೂ ಅತ್ಯಾ*ರಿ ಬಂಧನ ಇಲ್ಲ; ವಾಟರ್ ಟ್ಯಾಂಕ್ ಏರಿ ಕುಳಿತ ಸಂತ್ರಸ್ತ ದಲಿತ ಮಹಿಳೆ
ಹನುಮಂತ ಹಾಗೂ ಗಂಗಮ್ಮ ಎಂಬುವವರಿಗೆ ಸೇರಿದ ಪುತ್ರ. SSNPS ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಸಾತ್ವಿಕ್ಗೆ ಚೆನ್ನಾಗಿ ಓದಿಕೋ ಅಂತಾ ಪೋಷಕರು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಬಾಲಕ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಇನ್ನೂ ಈ ಘಟನೆ ನಡೆದು ಒಂದು ವಾರದ ಬಳಿಕ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಫೆಬ್ರವರಿ 6ಕ್ಕೆ ಬಾಲಕ ಮನೆ ಬಿಟ್ಟು ಓಡಿ ಹೋಗಿ ದಾವಣಗೆರೆ ರೈಲ್ವೆ ಸ್ಟೇಷನ್ಗೆ ತಲುಪಿದ್ದಾನೆ. ಬಳಿಕ ಟಿಕೆಟ್ ಪಡೆದು ಹುಬ್ಬಳ್ಳಿ ತಲುಪಿದ್ದಾನೆ. ಸಾತ್ವಿಕ್ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಮನೆ ಬಿಟ್ಟಿ ಹೋಗಿರೋ ಮಗನಿಗಾಗಿ ತಂದೆ ಹನುಮಂತ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಾತ್ವಿಕ್ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
13 ವರ್ಷದ ಸಾತ್ವಿಕ್ ಓದಿಕೋ ಅಂದಿದ್ದಕ್ಕೆ ಮನೆ ಬಿಟ್ಟ ಬಾಲಕ
ಹನುಮಂತ, ಗಂಗಮ್ಮ ಅವರ ಪುತ್ರ ಸಾತ್ವಿಕ್ ನಾಪತ್ತೆ
ದಾವಣಗೆರೆ: ಚೆನ್ನಾಗಿ ಓದಿಕೋ ಅಂದಿದ್ದಕ್ಕೆ ಬಾಲಕನೊಬ್ಬ ಮನೆ ಬಿಟ್ಟು ಹೋಗಿರೋ ಘಟನೆ ನಗರದ ಎಸ್ಎಸ್ ಲೇಔಟ್ನಲ್ಲಿ ನಡೆದಿದೆ. ಸಾತ್ವಿಕ್ (13) ಮನೆ ಬಿಟ್ಟ ಹೋದ ಬಾಲಕ.
ಇದನ್ನು ಓದಿ: ದೂರು ಕೂಟ್ಟರೂ ಅತ್ಯಾ*ರಿ ಬಂಧನ ಇಲ್ಲ; ವಾಟರ್ ಟ್ಯಾಂಕ್ ಏರಿ ಕುಳಿತ ಸಂತ್ರಸ್ತ ದಲಿತ ಮಹಿಳೆ
ಹನುಮಂತ ಹಾಗೂ ಗಂಗಮ್ಮ ಎಂಬುವವರಿಗೆ ಸೇರಿದ ಪುತ್ರ. SSNPS ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಸಾತ್ವಿಕ್ಗೆ ಚೆನ್ನಾಗಿ ಓದಿಕೋ ಅಂತಾ ಪೋಷಕರು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಬಾಲಕ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಇನ್ನೂ ಈ ಘಟನೆ ನಡೆದು ಒಂದು ವಾರದ ಬಳಿಕ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಫೆಬ್ರವರಿ 6ಕ್ಕೆ ಬಾಲಕ ಮನೆ ಬಿಟ್ಟು ಓಡಿ ಹೋಗಿ ದಾವಣಗೆರೆ ರೈಲ್ವೆ ಸ್ಟೇಷನ್ಗೆ ತಲುಪಿದ್ದಾನೆ. ಬಳಿಕ ಟಿಕೆಟ್ ಪಡೆದು ಹುಬ್ಬಳ್ಳಿ ತಲುಪಿದ್ದಾನೆ. ಸಾತ್ವಿಕ್ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಮನೆ ಬಿಟ್ಟಿ ಹೋಗಿರೋ ಮಗನಿಗಾಗಿ ತಂದೆ ಹನುಮಂತ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ