ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿ ಆಗಿ ಮುನಿಯಪ್ಪ ಡಿಮ್ಯಾಂಡ್
ಸುಮಲತಾ ಅಂಬರೀಶ್ ಅವರನ್ನೂ ಭೇಟಿಯಾಗುವ ಮಾತಾಡಿದ HDK
ಅಳಿಯನಿಗೆ ಟಿಕೆಟ್ ಕೊಡಿಸುವಲ್ಲಿ ಮುನಿಯಪ್ಪ ಯಶಸ್ವಿಯಾದ್ರಾ?
ಮಂಡ್ಯ ಕಾಂಗ್ರೆಸ್ಗೆ ಪ್ರತಿಷ್ಠೆ.. ರಾಜ್ಯದಲ್ಲಿ ಘನತೆ ತಲೆ ಎತ್ತಲು ಮಂಡ್ಯ ಅನಿವಾರ್ಯ. ಜೆಡಿಎಸ್ಗೆ ಇದು ಅಸ್ತಿತ್ವದ ಪ್ರಶ್ನೆ. ಉಳಿವು-ಉಳಿವಿನ ಹೋರಾಟ.. ಈ ಹೋರಾಟ ಬೆನ್ನಟ್ಟಿದ ದಳಪತಿ, ಸ್ವತಃ ತಾವೇ ಅಖಾಡಕ್ಕೆ ಇಳಿಯುವ ಸುಳಿವು ನೀಡಿದ್ದಾರೆ. ವಿರೋಧಿಗಳನ್ನೆಲ್ಲಾ ಒಟ್ಟಾಗಿಸಿ ಚದುರಂಗ ಕಟ್ಟುತ್ತಿದ್ದಾರೆ. ಆಪರೇಷನ್ ಹಸ್ತಕ್ಕೆ ಹೆಜ್ಜೆ ಇಡ್ತಿದ್ದ ಕಾಂಗ್ರೆಸ್ಗೆ ರಾತ್ರೋರಾತ್ರಿ ಚೆಕ್ಮೇಟ್ ಇಟ್ಟಿದ್ದಾರೆ.
ಮಂಡ್ಯದಲ್ಲಿ ಆಪರೇಷನ್ಗೆ ರಿವರ್ಸ್ ಆಪರೇಷನ್!
ಮಂಡ್ಯ ಚುನಾವಣಾ ಅಖಾಡಕ್ಕೆ ಮಾಜಿ ಸಿಎಂ ಹೆಚ್ಡಿಕೆ, ಇಳಿಯೋದು ಬಹುತೇಕ ಫಿಕ್ಸ್ ಆಗಿದೆ.. ಹೀಗಾಗಿ ಮಂಡ್ಯ ಗೆಲ್ಲಲು ಪ್ರತಿಷ್ಠೆಗೆ ಬಿದ್ದ ಕುಮಾರಸ್ವಾಮಿ, ಹೊಸ ಶತ್ರುವನ್ನ ಮಟ್ಟಹಾಕಲು ಹಳೇ ಗೆಳೆಯನ ಮೊರೆ ಹೋಗಿ ಆಪರೇಷನ್ ಹಸ್ತಕ್ಕೆ ಚೆಕ್ಮೇಟ್ ಇಟ್ಟು ಮಂಡ್ಯದಲ್ಲಿ ಘೀಳಿಟ್ಟಿದ್ದಾರೆ. ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ್ನಾರಾಯಣ್ ಮಧ್ಯಸ್ಥಿಕೆಯಲ್ಲಿ ನಾರಾಯಣಗೌಡರನ್ನ ಹೆಚ್ಡಿಕೆ ಭೇಟಿ ಮಾಡಿದ್ದಾರೆ. ಬಳಿಕ ಮಾತ್ನಾಡಿದ ಕುಮಾರಸ್ವಾಮಿ, ಎರಡು ಪಕ್ಷದ ಮುಖಂಡರಲ್ಲಿ ವಿಶ್ವಾಸದ ವಾತಾವರಣ ನಿರ್ಮಾಣ ಆಗಬೇಕಿದೆ.
ಇದನ್ನೂ ಓದಿ: ಬಂಡೆದ್ದ ದಂಡಿನ ಜೊತೆ ಯಡಿಯೂರಪ್ಪ ಮೀಟಿಂಗ್.. ದಾವಣಗೆರೆ ಬಳಿಕ ಬೆಳಗಾವಿ ಕ್ಷೇತ್ರಕ್ಕೆ ಬಿಎಸ್ವೈ ಎಂಟ್ರಿ!
ಇದೊಂದು ಸೌಹಾರ್ದಯುತ ಭೇಟಿ ಅಂತ ಬಣ್ಣಿಸಿದ್ರು. ಇದೇ ವೇಳೆ, ಸುಮಲತಾ ಬೆಂಬಲ ಕೋರುವ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ಡಿಕೆ, ಎಲ್ಲರನ್ನೂ ಭೇಟಿ ಮಾಡುತ್ತೇನೆ. ವಿಶ್ವಾಸದ ಕೊರತೆಗಳನ್ನ ಸರಿ ಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.
AICC ಅಧ್ಯಕ್ಷ ಖರ್ಗೆ ಭೇಟಿಯಾಗಿ ಮುನಿಯಪ್ಪ ಡಿಮ್ಯಾಂಡ್
ಕೋಲಾರ ಕಾಳಗ ಕಾಂಗ್ರೆಸ್ನಲ್ಲಿ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ನೇರವಾಗಿ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಸಚಿವ ಮುನಿಯಪ್ಪ ತಮ್ಮ ಅಳಿಯನ ಪರ ಪಟ್ಟು ಹಿಡಿದ್ರು. ಟಿಕೆಟ್ ಕೊಟ್ರೆ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಖರ್ಗೆಗೆ ವಚನ ನೀಡಿದ್ದಾರೆ. ಫೈನಲೀ ಖರ್ಗೆ ಸಹ ಸಮ್ಮತಿ ನೀಡಿದ್ದಾರೆ ಅಂತ ಮೂಲಗಳಿಂದ ಗೊತ್ತಾಗಿದೆ. ಒಟ್ಟಾರೆ, ರಾಜ್ಯದಲ್ಲಿ ಅಧಿಸೂಚನೆಗೆ ಗಂಟೆಗಳ ಘಂಟೆ ಬಾರಿಸ್ತಿದೆ. ಆದ್ರೆ, ಟಿಕೆಟ್ ಫೈಟ್ ಮಾತ್ರ ಮುಗಿತಾನೆ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿ ಆಗಿ ಮುನಿಯಪ್ಪ ಡಿಮ್ಯಾಂಡ್
ಸುಮಲತಾ ಅಂಬರೀಶ್ ಅವರನ್ನೂ ಭೇಟಿಯಾಗುವ ಮಾತಾಡಿದ HDK
ಅಳಿಯನಿಗೆ ಟಿಕೆಟ್ ಕೊಡಿಸುವಲ್ಲಿ ಮುನಿಯಪ್ಪ ಯಶಸ್ವಿಯಾದ್ರಾ?
ಮಂಡ್ಯ ಕಾಂಗ್ರೆಸ್ಗೆ ಪ್ರತಿಷ್ಠೆ.. ರಾಜ್ಯದಲ್ಲಿ ಘನತೆ ತಲೆ ಎತ್ತಲು ಮಂಡ್ಯ ಅನಿವಾರ್ಯ. ಜೆಡಿಎಸ್ಗೆ ಇದು ಅಸ್ತಿತ್ವದ ಪ್ರಶ್ನೆ. ಉಳಿವು-ಉಳಿವಿನ ಹೋರಾಟ.. ಈ ಹೋರಾಟ ಬೆನ್ನಟ್ಟಿದ ದಳಪತಿ, ಸ್ವತಃ ತಾವೇ ಅಖಾಡಕ್ಕೆ ಇಳಿಯುವ ಸುಳಿವು ನೀಡಿದ್ದಾರೆ. ವಿರೋಧಿಗಳನ್ನೆಲ್ಲಾ ಒಟ್ಟಾಗಿಸಿ ಚದುರಂಗ ಕಟ್ಟುತ್ತಿದ್ದಾರೆ. ಆಪರೇಷನ್ ಹಸ್ತಕ್ಕೆ ಹೆಜ್ಜೆ ಇಡ್ತಿದ್ದ ಕಾಂಗ್ರೆಸ್ಗೆ ರಾತ್ರೋರಾತ್ರಿ ಚೆಕ್ಮೇಟ್ ಇಟ್ಟಿದ್ದಾರೆ.
ಮಂಡ್ಯದಲ್ಲಿ ಆಪರೇಷನ್ಗೆ ರಿವರ್ಸ್ ಆಪರೇಷನ್!
ಮಂಡ್ಯ ಚುನಾವಣಾ ಅಖಾಡಕ್ಕೆ ಮಾಜಿ ಸಿಎಂ ಹೆಚ್ಡಿಕೆ, ಇಳಿಯೋದು ಬಹುತೇಕ ಫಿಕ್ಸ್ ಆಗಿದೆ.. ಹೀಗಾಗಿ ಮಂಡ್ಯ ಗೆಲ್ಲಲು ಪ್ರತಿಷ್ಠೆಗೆ ಬಿದ್ದ ಕುಮಾರಸ್ವಾಮಿ, ಹೊಸ ಶತ್ರುವನ್ನ ಮಟ್ಟಹಾಕಲು ಹಳೇ ಗೆಳೆಯನ ಮೊರೆ ಹೋಗಿ ಆಪರೇಷನ್ ಹಸ್ತಕ್ಕೆ ಚೆಕ್ಮೇಟ್ ಇಟ್ಟು ಮಂಡ್ಯದಲ್ಲಿ ಘೀಳಿಟ್ಟಿದ್ದಾರೆ. ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ್ನಾರಾಯಣ್ ಮಧ್ಯಸ್ಥಿಕೆಯಲ್ಲಿ ನಾರಾಯಣಗೌಡರನ್ನ ಹೆಚ್ಡಿಕೆ ಭೇಟಿ ಮಾಡಿದ್ದಾರೆ. ಬಳಿಕ ಮಾತ್ನಾಡಿದ ಕುಮಾರಸ್ವಾಮಿ, ಎರಡು ಪಕ್ಷದ ಮುಖಂಡರಲ್ಲಿ ವಿಶ್ವಾಸದ ವಾತಾವರಣ ನಿರ್ಮಾಣ ಆಗಬೇಕಿದೆ.
ಇದನ್ನೂ ಓದಿ: ಬಂಡೆದ್ದ ದಂಡಿನ ಜೊತೆ ಯಡಿಯೂರಪ್ಪ ಮೀಟಿಂಗ್.. ದಾವಣಗೆರೆ ಬಳಿಕ ಬೆಳಗಾವಿ ಕ್ಷೇತ್ರಕ್ಕೆ ಬಿಎಸ್ವೈ ಎಂಟ್ರಿ!
ಇದೊಂದು ಸೌಹಾರ್ದಯುತ ಭೇಟಿ ಅಂತ ಬಣ್ಣಿಸಿದ್ರು. ಇದೇ ವೇಳೆ, ಸುಮಲತಾ ಬೆಂಬಲ ಕೋರುವ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್ಡಿಕೆ, ಎಲ್ಲರನ್ನೂ ಭೇಟಿ ಮಾಡುತ್ತೇನೆ. ವಿಶ್ವಾಸದ ಕೊರತೆಗಳನ್ನ ಸರಿ ಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ.
AICC ಅಧ್ಯಕ್ಷ ಖರ್ಗೆ ಭೇಟಿಯಾಗಿ ಮುನಿಯಪ್ಪ ಡಿಮ್ಯಾಂಡ್
ಕೋಲಾರ ಕಾಳಗ ಕಾಂಗ್ರೆಸ್ನಲ್ಲಿ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ನೇರವಾಗಿ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಸಚಿವ ಮುನಿಯಪ್ಪ ತಮ್ಮ ಅಳಿಯನ ಪರ ಪಟ್ಟು ಹಿಡಿದ್ರು. ಟಿಕೆಟ್ ಕೊಟ್ರೆ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಖರ್ಗೆಗೆ ವಚನ ನೀಡಿದ್ದಾರೆ. ಫೈನಲೀ ಖರ್ಗೆ ಸಹ ಸಮ್ಮತಿ ನೀಡಿದ್ದಾರೆ ಅಂತ ಮೂಲಗಳಿಂದ ಗೊತ್ತಾಗಿದೆ. ಒಟ್ಟಾರೆ, ರಾಜ್ಯದಲ್ಲಿ ಅಧಿಸೂಚನೆಗೆ ಗಂಟೆಗಳ ಘಂಟೆ ಬಾರಿಸ್ತಿದೆ. ಆದ್ರೆ, ಟಿಕೆಟ್ ಫೈಟ್ ಮಾತ್ರ ಮುಗಿತಾನೆ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ