ಹೊಸ ಅಧ್ಯಾಯ ಶುರು ಮಾಡಿರೋ ಆರ್ಸಿಬಿಗೆ ಹೊಸ ಟೆನ್ಷನ್
ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರೂ 40 ಕೋಟಿ ವೀರರು ಸೈಲೆಂಟ್
ಹೋಮ್ ಗ್ರೌಂಡ್ನಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ಘರ್ಜಿಸುತ್ತಾ.?
ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಸಜ್ಜಾಗಿದೆ. 2ನೇ ಪಂದ್ಯ ಗೆದ್ದ ಆತ್ಮವಿಶ್ವಾಸವಿದ್ರೂ, ತಂಡಕ್ಕೆ ಒಂದು ಆತಂಕ ಕಾಡ್ತಿದೆ. ಆ 40 ಕೋಟಿ ವೀರರು ತಂಡಕ್ಕೆ ಟೆನ್ಶನ್ ತಂದಿಟ್ಟಿದ್ದಾರೆ. 40 ಕೋಟಿ ಕುಬೇರರು ಯಾರು.? ಏನ್ ಮಾಡಿದ್ರು ಅಂತೀರಾ?.
ಹೋಮ್ಗ್ರೌಂಡ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಮಣಿಸಿದ ಆರ್ಸಿಬಿ ಪಾಳಯ ಇದೀಗ ಮತ್ತೊಂದು ಸಮರಕ್ಕೆ ಸಜ್ಜಾಗಿದೆ. ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ಎದುರು ಆರ್ಸಿಬಿ ಹೋಮ್ಗ್ರೌಂಡ್ನಲ್ಲಿ 2ನೇ ಪಂದ್ಯವನ್ನಾಡಲಿದೆ. ಗೆದ್ದು ಹೊಸ ಅಧ್ಯಾಯ ಶುರು ಮಾಡಿರೋ ಆರ್ಸಿಬಿಗೆ ಇದೀಗ ಹೊಸ ಟೆನ್ಷನ್ಗೆ ಶುರುವಾಗಿದೆ.
ಕಿಂಗ್ ಕೊಹ್ಲಿ- ಡಿಕೆ ಸಾಹೇಬ್ ಫಾರ್ಮ್ಗೆ ಬಂದಾಯ್ತು.!
ಕೊನೆಗೂ ಐಪಿಎಲ್ ರಾಜ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಂಡಿದ್ದಾರೆ. ಫಿನಿಶರ್ ದಿನೇಶ್ ಕಾರ್ತಿಕ್ ಬ್ಯಾಟ್ ಕೂಡ ಸದ್ದು ಮಾಡ್ತಿದೆ. ಇಷ್ಟಕ್ಕೆ ಆರ್ಸಿಬಿ ಫ್ಯಾನ್ಸ್ ಖುಷಿ ಪಡಬೇಕಿಲ್ಲ. ಯಾಕಂದ್ರೆ ಕೊಹ್ಲಿ-ಡಿಕೆ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರೂ 40 ಕೋಟಿ ವೀರರು ಸೈಲೆಂಟಾಗಿದ್ದಾರೆ. ಆ 40 ಕೋಟಿ ಕುಬೇರರು ಆರ್ಭಟಿಸೋದ್ಯಾವಾಗ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿದೆ.
ಮ್ಯಾಕ್ಸ್ವೆಲ್ ‘ಮ್ಯಾಕ್ಸಿಮಮ್’ ಆಟ ಆಡೋದ್ಯಾವಾಗ..?
ಗೇಮ್ ಚೇಂಜರ್ ಗ್ಲೆನ್ ಮ್ಯಾಕ್ಸ್ವೆಲ್ ನಿರಾಸೆ ಮೂಡಿಸಿದ್ದಾರೆ. ಆಡಿದ 2 ಪಂದ್ಯಗಳಲ್ಲಿ ಜಸ್ಟ್ 3 ರನ್ ಗಳಿಸಿ ಟೀಮ್ ಮ್ಯಾನೆಜ್ಮೆಂಟ್ ಟೆನ್ಷನ್ ಹೆಚ್ಚಿಸಿದ್ದಾರೆ. ಇದರ ಜೊತೆ ಬೌಲಿಂಗ್ನಲ್ಲಿ ಮೊನಚು ಕಳೆದುಕೊಂಡಿದ್ದು, ಇಂದಿನ ಪಂದ್ಯದಲ್ಲಿ ಮ್ಯಾಕ್ಸಿ ಮ್ಯಾಕ್ಸಿಮಮ್ ಆಟ ಆಡಲೇಬೇಕಿದೆ.
17.5 ಕೋಟಿ ಒಡೆಯ ಗ್ರೀನ್ರ ಅಸಲಿ ಖದರ್ ಮಾಯ..!
ಇನ್ನೂ ಮ್ಯಾಕ್ಸ್ವೆಲ್ ಜೊತೆ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ದುಡ್ಡಿಗೆ ತಕ್ಕಂತೆ ಆಟವಾಡ್ತಿಲ್ಲ. 17.5 ಕೋಟಿ ಕುಬೇರ ಆಡಿದ ಎರಡು ಪಂದ್ಯದಲ್ಲಿ ಬರೀ 21 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ 9.20 ಎಕಾನಮಿಯಲ್ಲಿ 2 ವಿಕೆಟ್ ಪಡೆದು ದುಬಾರಿಯಾಗಿದ್ದಾರೆ. ಗ್ರೀನ್ರ ಅಸಲಿ ಆಟವನ್ನ ಫ್ಯಾನ್ಸ್ ಎದುರು ನೋಡ್ತಿದ್ದಾರೆ.
ಇದನ್ನೂ ಓದಿ: ಗ್ಯಾಂಗ್ಸ್ಟಾರ್ ಆಗಿದ್ದ ಮುಖ್ತಾರ್ ಅನ್ಸಾರಿ ರಾಜಕಾರಣಿ ಆಗಿದ್ದೇಗೆ.. ಇದು ಹಾರ್ಟ್ ಅಟ್ಯಾಕ್, ಕೊಲೆನಾ?
ಟೆನ್ಷನ್ ತಂದೊಡ್ಡಿದ ಪಟಿದಾರ್ ಬ್ಯಾಡ್ಫಾರ್ಮ್.!
ಇನ್ನು ನಂಬಿಕೆ ಇಟ್ಟು ಆರ್ಸಿಬಿ ಫ್ರಾಂಚೈಸಿ ರಜತ್ ಪಟಿದಾರ್ರನ್ನ ರಿಟೇನ್ ಮಾಡಿಕೊಂಡಿತ್ತು. ಆದ್ರೆ ಮಧ್ಯಪ್ರದೇಶದ ಬ್ಯಾಟರ್ ನಂಬಿಕೆಗೆ ನ್ಯಾಯ ಒದಗಿಸ್ತಿಲ್ಲ. ಮೊದಲೆರಡು ಪಂದ್ಯಗಳಿಂದ ಜಸ್ಟ್ 18 ರನ್ ಗಳಿಸಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತ್ರಿಮೂರ್ತಿಗಳು ಸಿಡಿದೆದ್ರೆ ಎದುರಾಳಿ ಗುಹೆ ಸೇರೋದು ಪಕ್ಕಾ..!
ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಹಾಗೂ ರಜತ್ ಪಟೀದಾರ್ ಅಸಲಿ ಆಟ ಆಡುವಲ್ಲಿ ಸೋತಿದ್ದಾರೆ. ಇವರ ಕಮ್ಬ್ಯಾಕ್ ತಂಡಕ್ಕೆ ಅತ್ಯಗತ್ಯ. ಈಗಿನ್ನೂ ಎರಡು ಪಂದ್ಯ ಮುಗಿದಿದ್ದು, ತಪ್ಪನ್ನ ತಿದ್ದಿಕೊಳ್ಳುವತ್ತ ಮೂವರು ಗಮನ ಹರಿಸಬೇಕಿದೆ. ಹಾಗೊಂದು ವೇಳೆ ತ್ರಿಮೂರ್ತಿಗಳು ಇಂದು ಫಾರ್ಮ್ ಕಂಡುಕೊಂಡಿದ್ದೆ ಆದ್ರೆ ಆರ್ಸಿಬಿಯನ್ನ ಟಚ್ ಮಾಡೋದೆ ಕಷ್ಟ. ಬ್ಯಾಟಿಂಗ್ ವಿಭಾಗ ಫುಲ್ ಸ್ಟ್ರಾಂಗ್ ಆಗಲಿದ್ದು, ಕೆಕೆಆರ್ಗೆ ಸೋಲಿನ ದರ್ಶನ ಆಗೋದು ಪಕ್ಕಾ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಹೊಸ ಅಧ್ಯಾಯ ಶುರು ಮಾಡಿರೋ ಆರ್ಸಿಬಿಗೆ ಹೊಸ ಟೆನ್ಷನ್
ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರೂ 40 ಕೋಟಿ ವೀರರು ಸೈಲೆಂಟ್
ಹೋಮ್ ಗ್ರೌಂಡ್ನಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ಘರ್ಜಿಸುತ್ತಾ.?
ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಸಜ್ಜಾಗಿದೆ. 2ನೇ ಪಂದ್ಯ ಗೆದ್ದ ಆತ್ಮವಿಶ್ವಾಸವಿದ್ರೂ, ತಂಡಕ್ಕೆ ಒಂದು ಆತಂಕ ಕಾಡ್ತಿದೆ. ಆ 40 ಕೋಟಿ ವೀರರು ತಂಡಕ್ಕೆ ಟೆನ್ಶನ್ ತಂದಿಟ್ಟಿದ್ದಾರೆ. 40 ಕೋಟಿ ಕುಬೇರರು ಯಾರು.? ಏನ್ ಮಾಡಿದ್ರು ಅಂತೀರಾ?.
ಹೋಮ್ಗ್ರೌಂಡ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಮಣಿಸಿದ ಆರ್ಸಿಬಿ ಪಾಳಯ ಇದೀಗ ಮತ್ತೊಂದು ಸಮರಕ್ಕೆ ಸಜ್ಜಾಗಿದೆ. ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ಎದುರು ಆರ್ಸಿಬಿ ಹೋಮ್ಗ್ರೌಂಡ್ನಲ್ಲಿ 2ನೇ ಪಂದ್ಯವನ್ನಾಡಲಿದೆ. ಗೆದ್ದು ಹೊಸ ಅಧ್ಯಾಯ ಶುರು ಮಾಡಿರೋ ಆರ್ಸಿಬಿಗೆ ಇದೀಗ ಹೊಸ ಟೆನ್ಷನ್ಗೆ ಶುರುವಾಗಿದೆ.
ಕಿಂಗ್ ಕೊಹ್ಲಿ- ಡಿಕೆ ಸಾಹೇಬ್ ಫಾರ್ಮ್ಗೆ ಬಂದಾಯ್ತು.!
ಕೊನೆಗೂ ಐಪಿಎಲ್ ರಾಜ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಂಡಿದ್ದಾರೆ. ಫಿನಿಶರ್ ದಿನೇಶ್ ಕಾರ್ತಿಕ್ ಬ್ಯಾಟ್ ಕೂಡ ಸದ್ದು ಮಾಡ್ತಿದೆ. ಇಷ್ಟಕ್ಕೆ ಆರ್ಸಿಬಿ ಫ್ಯಾನ್ಸ್ ಖುಷಿ ಪಡಬೇಕಿಲ್ಲ. ಯಾಕಂದ್ರೆ ಕೊಹ್ಲಿ-ಡಿಕೆ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರೂ 40 ಕೋಟಿ ವೀರರು ಸೈಲೆಂಟಾಗಿದ್ದಾರೆ. ಆ 40 ಕೋಟಿ ಕುಬೇರರು ಆರ್ಭಟಿಸೋದ್ಯಾವಾಗ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿದೆ.
ಮ್ಯಾಕ್ಸ್ವೆಲ್ ‘ಮ್ಯಾಕ್ಸಿಮಮ್’ ಆಟ ಆಡೋದ್ಯಾವಾಗ..?
ಗೇಮ್ ಚೇಂಜರ್ ಗ್ಲೆನ್ ಮ್ಯಾಕ್ಸ್ವೆಲ್ ನಿರಾಸೆ ಮೂಡಿಸಿದ್ದಾರೆ. ಆಡಿದ 2 ಪಂದ್ಯಗಳಲ್ಲಿ ಜಸ್ಟ್ 3 ರನ್ ಗಳಿಸಿ ಟೀಮ್ ಮ್ಯಾನೆಜ್ಮೆಂಟ್ ಟೆನ್ಷನ್ ಹೆಚ್ಚಿಸಿದ್ದಾರೆ. ಇದರ ಜೊತೆ ಬೌಲಿಂಗ್ನಲ್ಲಿ ಮೊನಚು ಕಳೆದುಕೊಂಡಿದ್ದು, ಇಂದಿನ ಪಂದ್ಯದಲ್ಲಿ ಮ್ಯಾಕ್ಸಿ ಮ್ಯಾಕ್ಸಿಮಮ್ ಆಟ ಆಡಲೇಬೇಕಿದೆ.
17.5 ಕೋಟಿ ಒಡೆಯ ಗ್ರೀನ್ರ ಅಸಲಿ ಖದರ್ ಮಾಯ..!
ಇನ್ನೂ ಮ್ಯಾಕ್ಸ್ವೆಲ್ ಜೊತೆ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ದುಡ್ಡಿಗೆ ತಕ್ಕಂತೆ ಆಟವಾಡ್ತಿಲ್ಲ. 17.5 ಕೋಟಿ ಕುಬೇರ ಆಡಿದ ಎರಡು ಪಂದ್ಯದಲ್ಲಿ ಬರೀ 21 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ 9.20 ಎಕಾನಮಿಯಲ್ಲಿ 2 ವಿಕೆಟ್ ಪಡೆದು ದುಬಾರಿಯಾಗಿದ್ದಾರೆ. ಗ್ರೀನ್ರ ಅಸಲಿ ಆಟವನ್ನ ಫ್ಯಾನ್ಸ್ ಎದುರು ನೋಡ್ತಿದ್ದಾರೆ.
ಇದನ್ನೂ ಓದಿ: ಗ್ಯಾಂಗ್ಸ್ಟಾರ್ ಆಗಿದ್ದ ಮುಖ್ತಾರ್ ಅನ್ಸಾರಿ ರಾಜಕಾರಣಿ ಆಗಿದ್ದೇಗೆ.. ಇದು ಹಾರ್ಟ್ ಅಟ್ಯಾಕ್, ಕೊಲೆನಾ?
ಟೆನ್ಷನ್ ತಂದೊಡ್ಡಿದ ಪಟಿದಾರ್ ಬ್ಯಾಡ್ಫಾರ್ಮ್.!
ಇನ್ನು ನಂಬಿಕೆ ಇಟ್ಟು ಆರ್ಸಿಬಿ ಫ್ರಾಂಚೈಸಿ ರಜತ್ ಪಟಿದಾರ್ರನ್ನ ರಿಟೇನ್ ಮಾಡಿಕೊಂಡಿತ್ತು. ಆದ್ರೆ ಮಧ್ಯಪ್ರದೇಶದ ಬ್ಯಾಟರ್ ನಂಬಿಕೆಗೆ ನ್ಯಾಯ ಒದಗಿಸ್ತಿಲ್ಲ. ಮೊದಲೆರಡು ಪಂದ್ಯಗಳಿಂದ ಜಸ್ಟ್ 18 ರನ್ ಗಳಿಸಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತ್ರಿಮೂರ್ತಿಗಳು ಸಿಡಿದೆದ್ರೆ ಎದುರಾಳಿ ಗುಹೆ ಸೇರೋದು ಪಕ್ಕಾ..!
ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಹಾಗೂ ರಜತ್ ಪಟೀದಾರ್ ಅಸಲಿ ಆಟ ಆಡುವಲ್ಲಿ ಸೋತಿದ್ದಾರೆ. ಇವರ ಕಮ್ಬ್ಯಾಕ್ ತಂಡಕ್ಕೆ ಅತ್ಯಗತ್ಯ. ಈಗಿನ್ನೂ ಎರಡು ಪಂದ್ಯ ಮುಗಿದಿದ್ದು, ತಪ್ಪನ್ನ ತಿದ್ದಿಕೊಳ್ಳುವತ್ತ ಮೂವರು ಗಮನ ಹರಿಸಬೇಕಿದೆ. ಹಾಗೊಂದು ವೇಳೆ ತ್ರಿಮೂರ್ತಿಗಳು ಇಂದು ಫಾರ್ಮ್ ಕಂಡುಕೊಂಡಿದ್ದೆ ಆದ್ರೆ ಆರ್ಸಿಬಿಯನ್ನ ಟಚ್ ಮಾಡೋದೆ ಕಷ್ಟ. ಬ್ಯಾಟಿಂಗ್ ವಿಭಾಗ ಫುಲ್ ಸ್ಟ್ರಾಂಗ್ ಆಗಲಿದ್ದು, ಕೆಕೆಆರ್ಗೆ ಸೋಲಿನ ದರ್ಶನ ಆಗೋದು ಪಕ್ಕಾ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ